ಬೆಂಗಳೂರು: ದೇಶದಲ್ಲಿ ಎಲ್ಲದಕ್ಕೂ ಒಂದೊಂದು ಕಾಲ ಬರುತ್ತದೆ ಎಂದು ಬಿಜೆಪಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರಲ್ಲಿ ಇಂದು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ದೇಶದಲ್ಲಿ ಎಲ್ಲದಕ್ಕೂ ಒಂದೊಂದು ಕಾಲ ಬರುತ್ತದೆ.ದೇಶದಲ್ಲಿ ಜನರು ಎನ್ಡಿಎ ಗೆ 12 ವರ್ಷ ಅವಕಾಶ ಕೊಟ್ಟಿದ್ರು. ಇವಾಗ ಜನರು ದೇಶದಲ್ಲಿ ಬದಲಾವಣೆ ಬಯಸಿದ್ದಾರೆ.ರಾಜ್ಯದಿಂದ ನಮ್ಮ ಕಾರ್ಯಕ್ರಮಗಳು ಆರಂಭ ಆಗಿವೆ. ನಾವು ಕೊಟ್ಟ ಕಾರ್ಯಕ್ರಮ ಗಳನ್ನು ಜನರು ಒಪ್ಪಿಕೊಂಡಿದ್ದಾರೆ.ಮುಂದೆ ಮಹಾರಾಷ್ಟ್ರ ಚುನಾವಣೆ ಕೂಡ ಬರ್ತಿದೆ. ಜನರ ಭಾವನೆಯೇ ಇದು ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಮುಂದೆ ನಾನು ಇದನ್ನು ಮುಂದಿನ ರಾಜ್ಯಗಳ ಚುನಾವಣೆಗೆ ದಿಕ್ಸೂಚಿ ಅಂತಾ ಹೇಳ್ತಿಲ್ಲ. ದೇಶದಲ್ಲಿ ಈಗ ಬದಲಾವಣೆಯ ಬೆಳಕು ಆವರಿಸುತ್ತದೆ.ಇದೇ ಬದಲಾವಣೆಯೇ ಬೆಳಕು.ಹಾಗೆಯೇ ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆ ಎಂದಿದ್ದಾರೆ.
ಫಲಿತಾಂಶ ಏನೇ ಬಂದರೂ ಜನರನ್ನು ದೂರುವುದು ಮಾಡಲ್ಲ;ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ.
ಬೆಂಗಳೂರು; ಕಾಶ್ಮೀರ ಮತ್ತು ಹರಿಯಾಣ ಚುನಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ಫಲಿತಾಂಶ ಏನೇ ಬಂದರೂ ಜನರನ್ನು ದೂರುವುದು ಮಾಡಲ್ಲ.ಫಲಿತಾಂಶ ಕಾಂಗ್ರೆಸ್ ನವರ ಪರವಾಗಿ ಬಂದರೆ ಜನರನ್ನು ಹೊಗಳುವುದು, ವಿರುದ್ದವಾಗಿ ಬಂದ್ರೆ ತೆಗಳುತ್ತಾರೆ. ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಹಭಾಗಿತ್ವ ವ್ಯಕ್ತವಾಗಿದೆ. 68% ಜನ ಮತ ಹಾಕಿದ್ದಾರೆ.ಕಾಶ್ಮೀರ ಕಣಿವೆ ಮತ್ತು ಜಮ್ಮುವಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಿ ನಾವು ಭಾರತೀಯರ ಪರವಾಗಿ ಅಂತ ತೋರಿಸಿದ್ದಾರೆ ಎಂದಿದ್ದಾರೆ.
ಇದು ಭಾರತ ಮತ್ತು ಪ್ರಜಾಪ್ರಭುತ್ವದ ವಿಜಯ. ಹರಿಯಾಣದಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವತ್ತ ಬಿಜೆಪಿ ಕಾಲಿಟ್ಟಿದೆ. ನಮ್ಮ ಪಕ್ಷದ ಮೇಲೆ ಆರೋಪ ಮಾಡುವ ಕೆಲಸ ಆಯಿತು. ಹಗರಣದಲ್ಲಿ ಮುಳುಗುವ ಕೆಲಸವನ್ನು ಬಿಜೆಪಿ ಅಲ್ಲಿ ಮಾಡಿಲ್ಲ. ಹಾಗಾಗಿ ಗೆಲುವು ದೊರೆತಿದೆ ಎಂದು ಸಿಟಿ ರವಿ ಹೇಳಿದ್ದಾರೆ.