ಮನೆ Latest News ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣ: ಹಣದಾಸೆಗಾಗಿ ಗೊತ್ತಿದ್ರೂ ಕಣ್ಮುಚ್ಚಿ ಕುಳಿತಿದ್ದ ಜೈಲಾಧಿಕಾರಿಗಳು

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣ: ಹಣದಾಸೆಗಾಗಿ ಗೊತ್ತಿದ್ರೂ ಕಣ್ಮುಚ್ಚಿ ಕುಳಿತಿದ್ದ ಜೈಲಾಧಿಕಾರಿಗಳು

0

ಬೆಂಗಳೂರು; ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣ ವಿಚಾರ ಬಯಲಾಗುತ್ತಿದ್ದಂತೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಮೂರು ಎಫ್ ಐಆರ್ ಗಳು ದಾಖಲಾಗಿದ್ದವು ಅದರಂತೆ ಪೊಲೀಸರು ತನಿಖೆ ನಡೆಸಿದ್ದಾರೆ. ಇದೀಗ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲಾಗಿದೆ.

ಹೌದು… ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ಆ ರೇಂಜಿಗೆ ರಾಜಾತಿಥ್ಯ ನೀಡುವಾಗ ಜೈಲಾಧಿಕಾರಿಗಳು ಏನ್ ಮಾಡುತ್ತಿದ್ರು ಅನ್ನೋ ಸಹಜ ಪ್ರಶ್ನೆ ಮೂಡಿತ್ತು. ಇದೀಗ ತನಿಖೆ ನಡೆಸಿದಾಗ ಅದೆಲ್ಲಾ ಬಯಲಾಗಿದೆ.ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯವನ್ನು ಜೈಲಾಧಿಕಾರಿಗಳ ಮುಂದೆ ನೀಡಲಾಗುತ್ತಿತ್ತಂತೆ. ಆದರೆ ಹಣದಾಸೆಗಾಗಿ ಜೈಲಾಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದರು ಅನ್ನೋದು ಗೊತ್ತಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈರಲ್ ಆದ ಫೋಟೋದಲ್ಲಿದ್ದ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಇವರನ್ನೆಲ್ಲಾ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಅವರೆಲ್ಲರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ.ಇನ್ನು ಈ ಬಗ್ಗೆ ಶೀಘ್ರದಲ್ಲೇ ಆಗ್ನೇಯ ಭಾಗದ ಡಿಸಿಪಿ ಸಾ.ರಾ. ಫಾತೀಮಾ ಅವರು ನಗರ ಪೊಲೀಸ್‌‍ ಆಯುಕ್ತ ದಯಾನಂದ ಅವರಿಗೆ ವರದಿಯನ್ನೂ ಸಲ್ಲಿಸಲಿದ್ದಾರೆ.

 

ಮೂವರಿಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ ದರ್ಶನ್ ಅವರನ್ನು ಭೇಟಿಯಾಗಿ ಚರ್ಚಿಸಿದ ವಕೀಲರು

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತುಮಕೂರು ಜೈಲಿನಲ್ಲಿ ಇದ್ದ ಮೂವರು ಆರೋಪಿಗೆ ಜಾಮೀನು ದೊರೆತಿದೆ. ಎ 15 ಕಾರ್ತಿಕ್ , ಎ16 ನಿಖಿಲ್ ನಾಯಕ್ ಹಾಗೂ ಎ 17 ಕೇಶವ ಮೂರ್ತಿಗೆ ಜಾಮೀನು ದೊರೆತಿದೆ.  ಎ 15 ಕಾರ್ತಿಕ್ , ಎ16 ನಿಖಿಲ್ ನಾಯಕ್ ಗೆ 57ನೇ ಸಿ ಸಿ ಹೆಚ್ ಕೋರ್ಟ್ ಜಾಮೀನು ನೀಡಿದರೆ ಎ 17 ಕೇಶವ ಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದೆ. ಇನ್ನು ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ ಪರವಾದ ವಕೀಲರು ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದರ್ಶನ್ ಅವರ ಪರವಾದ ವಕೀಲ ಸುನೀಲ್  ಅವರು ಸೆ.27ಕ್ಕೆ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಹಿನ್ನಲೆ‌ ಕಾನೂನು ಸಮರ ಸಂಬಂಧಿಸಿದಂತೆ ನಾವು ಅವರಿಗೆ ಚರ್ಚೆ ನಡೆಸಿದೆವು ಎಂದು ತಿಳಿಸಿದ್ದಾರೆ. ಸೆಷನ್ಸ್  ಕೋರ್ಟ್ ಗೆ ಬೆಲ್ ಅರ್ಜಿ ಸಲ್ಲಿಸಲಾಗಿದೆ .302 ಕೇಸ್ ಆಗಿರುವುದರಿಂದ ಸೆಷನ್ಸ್  ಕೋರ್ಟ್ ನಲ್ಲಿ ಬೇಲ್ ಸಿಕ್ಕಿಲ್ಲ ಅಂದ್ರೆ  ಮುಂದಿನ ದಿನಗಳಲ್ಲಿ ಹೆಚ್ಚುವರಿ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದರು.

ದರ್ಶನ್ ಅವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಜೈಲು ಸಿಬ್ಬಂದಿಗೆ ಮನವಿ ಮಾಡಿದ್ದೇವೆ. ಆರೋಪಿಗೆ ಬೆಡ್, ತಲೆ ದಿಂಬು, ಚಾಪೆ ಸೇರಿದಂತೆ ಮೂಲಭೂತ ಸೌಲಭ್ಯ ನೀಡುವಂತೆ ತಿಳಿಸಿದ್ದೇವೆ. ಜೈಲಿನ ನಿಯಮದ ಪ್ರಕಾರ ಯಾವುದೇ ಆರೋಪಿಗೆ  ಮೂಲಭೂತ ಸೌಕರ್ಯ ನೀಡಬೇಕು. ಆರೋಗ್ಯ ಸಮಸ್ಯೆಯ ಹಿನ್ನೆಲೆ‌ ಮೆಡಿಕಲ್ ಬೆಡ್ ನೀಡುವಂತೆ ಆರೋಪಿ ದರ್ಶನ್ ಬೇಡಿಕೆ ಇಟ್ಟಿದ್ದಾರೆ.ವೈದ್ಯಕೀಯ ತಪಾಸಣೆ ವರದಿಯನ್ನು ಜೈಲು ಅಧಿಕಾರಿಗಳಿಗೆ ನೀಡಲಾಗಿದೆ.ಈ ಕುರಿತು ವೈದ್ಯರ ಮಾಹಿತಿ ಪಡೆದು ನಿರ್ಧರಿಸಲಾಗುವುದು ಎಂದು ಜೈಲು ಸಿಬ್ಬಂದಿ ಭರವಸೆ ನೀಡಿದ್ದಾರೆ ಎಂದು ಲಾಯರ್ ತಿಳಿಸಿದ್ದಾರೆ.

ಇನ್ನು ಮೇಲಾಧಿಕಾರಿಗಳ ಜೊತೆ ಚರ್ಚಿಸಿ, ಕಾನೂನು ಚೌಕಟ್ಟು ಪರಿಶೀಲಿಸಿ ಮೂಲ ಸೌಕರ್ಯ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಈ ಕುರಿತು ಜೈಲು ಸೂಪಿರಿಡೆಂಟ್  ಆರ್.ಲತಾ ಅವರು ಭರವಸೆ ಕೊಟ್ಟಿದ್ದಾರೆ.ಒಂದು ವೇಳೆ ನೀಡದೇ ಇದ್ದರೆ  ಮಾನಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ದರ್ಶನ್ ಪರವಾದ ವಕೀಲ ಸುನೀಲ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.