ಮನೆ Latest News ನಾಳೆ ದೇವರ ನಾಡಿಗೆ ಭೇಟಿ ನೀಡಲಿರುವ ಪ್ರಧಾನಿ; ಭೀಕರ ಭೂಕುಸಿತದಿಂದ ಹಾನಿಗೊಳಗಾದ ವಯನಾಡಿನ ವಿವಿಧ ಪ್ರದೇಶಗಳಿಗೆ...

ನಾಳೆ ದೇವರ ನಾಡಿಗೆ ಭೇಟಿ ನೀಡಲಿರುವ ಪ್ರಧಾನಿ; ಭೀಕರ ಭೂಕುಸಿತದಿಂದ ಹಾನಿಗೊಳಗಾದ ವಯನಾಡಿನ ವಿವಿಧ ಪ್ರದೇಶಗಳಿಗೆ ನಮೋ ಭೇಟಿ

0

 

 

ಕೇರಳ; ಭೀಕರ ಭೂ ಕುಸಿತಕಕ್ಕೆ ದೇವರ ನಾಡು ಕೇರಳ ಅಕ್ಷರಶಃ ಮರಣದೂರಾಗಿ ಬದಲಾಗಿದೆ. ಭೀಕರ ಭೂಕುಸಿತಕ್ಕೆ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ವಯನಾಡು ಇದೀಗ ನರಕವಾಗಿ ಬದಲಾಗಿದೆ. ಅಲ್ಲಿನ ಪ್ರತಿಯೊಂದು ದೃಶ್ಯವನ್ನು ಕರುಳು ಹಿಂಡುತ್ತಿದೆ. ಸಾವಿರಾರು ಜನ ಮನೆ ತಮ್ಮವರು ಎಲ್ಲವನ್ನು ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

 

ಇದೀಗ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ವಯನಾಡಿಗೆ ಭೇಟಿ ನೀಡಲಿದ್ದಾರೆ. ಭೂಕುಸಿತದಿಂದ ಹಾನಿಗೆ ಒಳಗಾದ ವಿವಿಧ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ನಾಳೆ ಅಂದರೆ ಆಗಸ್ಟ್ 10 ರಂದು ವಿಶೇಷ ವಿಮಾನದಲ್ಲಿ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಪ್ರಧಾನಿ ನರೇಂದ್ರ ಮೋದಿ ಅವರು  ಭಾರತೀಯ ವಾಯು ಸೇನೆಯ  ಹೆಲಿಕಾಪ್ಟರ್ ಮೂಲಕ ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಗೆ ತೆರಳಲಿದ್ದಾರೆ.

 

ಭೀಕರ ಪ್ರವಾಹದಿಂದಾಗಿ ಹಾನಿಗೆ ಒಳಗಾಗಿರುವ ವಯನಾಡಿನ ಚೂರಲ್ಮಾಲ ಹಾಗೂ ಮುಂಡಕೈ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲದೇ ಜಸ್ಟ್ 16 ಗಂಟೆಗಳಲ್ಲಿ ಭಾರತೀಯ ಸೇನೆ ನಿರ್ಮಿಸಿರುವ ಬೈಲಿ ಸೇತುವೆ, ಅಲ್ಲಿರುವ ಪರಿಹಾರ ಶಿಬಿರ, ಆಸ್ಪತ್ರೆಯ ಬಳಿ ಪ್ರಧಾನಿ ನರೇಂದ್ರ ಮೋದಿ ಇಳಿಯಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಭೂ ಕುಸಿತದಿಂದ ಹಾನಿಗೆ ಒಳಗಾಗಿರುವ ಜಾಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆಯನ್ನೂ ನಡೆಸಲಿದ್ದಾರೆ.

ಇಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ದುರಂತದಿಂದ ಪಾರಾದವರು ಮತ್ತು ದುರಂತದಲ್ಲಿ ಗಾಯಗೊಂಡವರೊಂದಿಗೆ ಸಂವಾದ ಕೂಡ ನಡೆಸಲಿದ್ದಾರೆ.ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿದ್ದಾರೆ. ನಂತರ ಅವರು ಅದೇ ದಿನ ಸಂಜೆ 4 ಗಂಟೆಗೆ ಅವರು ನವದೆಹಲಿಗೆ ವಾಪಾಸ್  ತೆರಳಲಿದ್ದಾರೆ.ಇನ್ನು ಕೇರಳಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಯನಾಡ್ ವಿಪತ್ತು ಪ್ರತಿಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿರುವ ಕೇರಳ ಕ್ಯಾಬಿನೆಟ್ ಉಪಸಮಿತಿ ಮತ್ತು ಜಿಲ್ಲಾಡಳಿತವು ಸ್ವಾಗತಿಸಲಿದೆ.

ಇನ್ನು ಗುರುವಾರ ಅಡ್ವಾನ್ಸ್ ಸ್ಪೆಷಲ್ ಪ್ರೊಟೆಕ್ಷನ್ ತಂಡ ವಯನಾಡಿಗೆ ಭೇಟಿ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್  ಸುರಕ್ಷಿತವಾಗಿ  ಲ್ಯಾಂಡಿಂಗ್ ಆಗಲು ಬೇಕಾದ ಸುರಕ್ಷಿತ ಸ್ಥಳವನ್ನು ಗುರುತಿಸಿದೆ.ಅಲ್ಲದೇ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.

ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಸಾವು

ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಸಾವನ್ನಪ್ಪಿರೋದು ಇದೀಗ ಗೊತ್ತಾಗಿದೆ.ಇನ್ನು ಇದುವರೆಗೂ ಭೀಕರ ದುರಂತಕ್ಕೆ 400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನನೂ ಕೂಡ 200 ಕ್ಕೂ ಹೆಚ್ಚು ಮಂದಿಯ ಸುಳಿವು ಲಭ್ಯವಾಗಿಲ್ಲ. ಹೀಗಿರುವಾಗಲೇ ಇದೀಗ ಅತ್ಯಂತ ದುಃಖದ ವಿಚಾರವೊಂದು ಬಯಲಾಗಿದೆ. ವಯನಾಡು ದುರಂತದ ಬಗ್ಗೆ ಮೊತ್ತ ಮೊದಲ ಸಂದೇಶ ರವಾನಿಸಿದ ಮಹಿಳೆಯೇ ಭೀಕರ ದುರಂತದಲ್ಲಿ ಕೊನೆಯುಸಿರೆಳೆದಿರೋದು ಗೊತ್ತಾಗಿದೆ.

ನೀತು ಜೊಜೊ ಎಂಬ ಮಹಿಳೆ ವಯನಾಡ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರಂತ ನಡೆದ ದಿನ ಅಂದರೆ ಜುಲೈ 30ರಂದು ಚೂರಲ್ ಮಲ ಗ್ರಾಮದಲ್ಲಿ ಭೂಕುಸಿತ ಆರಂಭವಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಡಾ. ಮೂಪೆನ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೊಬ್ಬರಿಗೆ ಕರೆ ಮಾಡಿ ತಮ್ಮನ್ನು ರಕ್ಷಿಸಿ ಎಂದು ರಾತ್ರಿ 1-15ರ ಸುಮಾರಿಗೆ ಆಕೆ ಕೇಳಿಕೊಂಡಿದ್ದಾರೆ.

ಕೂಡಲೇ ಅವರು ರಕ್ಷಣಾ ತಂಡಗಳಿಗೆ ಅವರು ಮಾಹಿತಿ ನೀಡಿ ನೆರವಿಗಾಗಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ದುರಂತ ಅಂದರೆ ಅಷ್ಟರಲ್ಲಿ ಒಂದಷ್ಟು ಜೀವ ಉಳಿಸಲು ಸಹಕರಿಸಿದ ನೀತು ಜೊಜೊ ಅವರು ಉಸಿರು ಚೆಲ್ಲಿದ್ದರು. ತಾವು ಅಪಾಯದಲ್ಲಿದ್ದರು ನೀತು ಜೊಜೊ ಮನೆಯಲ್ಲಿದ್ದ ತನ್ನ ಪತಿ, ಅತ್ತೆ ಹಾಗೂ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.ಅಷ್ಟರಲ್ಲಿ ಮನೆ ಕುಸಿದು ಬಿದ್ದಿದೆ. ಚೂರಲ್ಮಾಲಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಹೋಗಿದ್ದರಿಂದ ರಕ್ಷಣಾ ಸಿಬ್ಬಂದಿಗೆ ನೀತು ಅವರ ಮನೆಯನ್ನು ಸಕಾಲದಲ್ಲಿ ತಲುಪಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ನೀತು ಸಾವನ್ನಪ್ಪಿದ್ದರು. ನೀತು ಅವರ ಸಮಯಪ್ರಜ್ಞೆಯಿಂದ  ಪತಿ ಜೊಜೊ, ಹಸುಗೂಸು ಹಾಗೂ ಅತ್ತೆ ಪಾರಾಗಿದ್ದಾರೆ. ಮೊನ್ನೆ ನೀತು ಮೃತದೇಹ ಪತ್ತೆಯಾಗಿದೆ. ಇನ್ನು ನೀತು ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಒಟ್ಟು ನಾಲ್ಕು ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಸಹಾಯಕ್ಕಾಗಿ ನೀತು ತಮ್ಮ ಸಹೋದ್ಯೋಗಿ ಬಳಿ ಮನವಿ ಮಾಡುತ್ತಿರುವ ಆಡಿಯೋ ಇದೀಗ ವೈರಲ್ ಆಗಿದೆ.