ಬೆಂಗಳೂರು; ಆಗಸ್ಟ್ , ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಕಾದಿದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಆಗಸ್ಟ್ , ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬದಲಾವಣೆ ಆಗಲಿದೆ ಎಂದಿದ್ದಾರೆ. ಸೆಪ್ಟೆಂಬರ್ ಕಳೆಯಲಿ ನೋಡುವಂತ್ರಿ. ರಾಜ್ಯ ರಾಜಕೀದಲ್ಲೇ ಬದಲಾವಣೆ ಗಾಳಿ ತಣ್ಣಗೆ ಬೀಸುತ್ತಿದೆ. ಸೆಪ್ಟೆಂಬರ್ ಕಳೀಲಿ ಎಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
2013 ರಲ್ಲಿ ಇದ್ದ ಹಾಗೆ ಸಿಎಂ ಈ ಬಾರಿ ಇಲ್ಲ ಅನ್ನೋ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಏನ್ ಮಾಡೋದು ಪವರ್ ಸೆಂಟರ್ ಗಳು ಜಾಸ್ತಿ ಆಗಿವೆ. 2013 ರಿಂದ 18 ರವರೆಗೆ ಒಂದೇ ಪವರ್ ಸೆಂಟರ್ ಇತ್ತು. ಈಗ ಒಂದು ಎರಡು ಮೂರು ಲೆಕ್ಕ ಎಷ್ಟಾದರು ಹಾಕಿಕೊಳ್ಳಿ. 2013 ರಲ್ಲಿ ಅವರಿಗೆ ಯಾವುದೇ ಒತ್ತಡ ಇರಲಿಲ್ಲ. ಪವರ್ ಸೆಂಟರ್ ಜಾಸ್ತಿ ಆದ ಹಾಗೆ ಜಂಜಾಟ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸಿಎಂ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡ್ತಿದ್ದಾರೆ. ದುಡ್ಡು ಇಲ್ಲದೆ ಇದ್ರೆ ಕೊಡೊಕೆ ಆಗುತ್ತಾ..? ಎಲ್ಲರು ಸುಮ್ಮನೆ ಹೇಳ್ತಿದ್ದಾರೆ ಇದ್ರು ಇರಬಹುದು. ಅವರ ಬೇಡಿಕೆಗೆ ತಕ್ಕಂತೆ ಅನುದಾನ ಸಿಕ್ಕಿಲ್ಲಾ ಎಂಬ ಶಾಸಕರಿಗೆ ಅಸಮಧಾನ ಇರಬಹುದು. ಗ್ಯಾರಂಟಿ ಯೋಜನೆಗಳನ್ನ ಕೊಟ್ಟಿರೋದ್ರಿಂದ ಆರ್ಥಿಕ ಹೊರೆ ಸರ್ಕಾರದ ಮೇಲಿದೆ. ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಯಾವುದೇ ತಾರತಮ್ಯ ಇಲ್ಲ. ಆಢಳಿತ ಪಕ್ಷ ವಿರೋಧ ಪಕ್ಷ ಅಂತಾ ಯಾವುದೇ ತಾರತಮ್ಯ ಇಲ್ಲ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಹಣಕಾಸನ್ನು ಒದಗಿಸ್ತಿದ್ದೇವೆ. ಒಬ್ಬರಿಗೆ ಹೆಚ್ಚಿಗೆ ನಿರೀಕ್ಷೆ ಇರಬಹುದು . ಅದಕ್ಕೆ ತಕ್ಕಂತೆ ಆಗದೆ ಇರಬಹುದು.ಏನು ಅಭಿವೃದ್ಧಿ ಅಗ್ತಿಲ್ಲಾ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.
ಸಚಿವರ ಮೇಲೆ ಶಾಸಕರ ಅಸಮಧಾನ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವ ಸಚಿವರು ಅನ್ನೋದನ್ನ ನಿರ್ದಿಷ್ಟವಾಗಿ ಹೇಳಲಿ. ನನ್ನ ಹೆಸರು ಹೇಳಿದ್ರಾ..? ನನ್ನ ಮೇಲೆ ಹೇಳಿದ್ರೆ ನಾನು ತಿದ್ದಿಕೊಳ್ಳಬಹುದು. ಮನುಷ್ಯನಲ್ಲಿ ಕೆಲವು ಲೋಪಗಳು ಇದ್ದೆ ಇರ್ತಾವೆ. ಅವುಗಳನ್ನ ತಿಳಿಸಿದ್ರೆ ತಿದ್ದಿಕೊಳ್ಳೊದಕ್ಕೆ ಅವಕಾಶ ಇರುತ್ತೆ. ಇಲ್ಲದಿದ್ರೆ ಎಲ್ಲಾ ಶಾಸಕರು, ಸಚಿವರು ಎಲ್ಲವು ಸರಿ ಇದೆ ಅಂತ ಸುಮ್ಮನೆ ಇರ್ತಾರೆ ಎಂದಿದ್ದಾರೆ.
ಬಿ ಆರ್ ಪಾಟೀಲ್ ಆಡಿಯೊ ವೈರಲ್ ವಿಚಾರದ ಬಗ್ಗೆ ಮಾತನಾಡಿದ ಅವರು ಬಿ ಆರ್ ಪಾಟೀಲ್ ಜಮೀರ್ ಪಿಎಸ್ ಸರ್ಫರಾಜ್ ಜೊತೆ ಮಾತನಾಡಿರುವ ನಿಮ್ಮ ಮಾದ್ಯಮಗಳಲ್ಲಿ ಪ್ರಸಾರ ಆಗಿದೆ. ಅವರಿಗೆ ಆಗಿರುವ ಅನುಭವ ಬೆಳವಣಿಗೆ ಬಗ್ಗೆ ಮಾತಾಡಿದ್ದಾರೆ. ಅವರು ಹೇಳಿರೋದ್ರಲ್ಲಿ ಸತ್ಯ ಇಲ್ಲಾ ಅಂತ ನಾನು ಹೇಳೊಕೆ ಹೊಗುವುದಿಲ್ಲ. ಅವರ ಅನುಭವದ ಆಧಾರದ ಮೇಲೆ ಅವರ ಮನಸ್ಸಿನ ಭಾವನೆಗಳನ್ನ ವ್ಯಕ್ತಪಡಿಸಿರುತ್ತಾರೆ. ಅದಕ್ಕೆ ನನ್ನ ಯಾವುದೇ ಪ್ರತಿಕ್ರಿಯೆ ಎಂದು ತಿಳಿಸಿದ್ದಾರೆ.
ಸರ್ಕಾರದ ವಿರುದ್ದ ಬಿಜೆಪಿ ಜೆಡಿಎಸ್ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಅವರು ಮೊದಲು ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಬೆಳೆಗ್ಗೆ ಎದ್ರೆ ಅವರ ಜಗಳ ನೋಡ್ತಿದ್ದೇವೆ. ಮೊದಲು ಅವರದ್ದು ಸರಿಪಡಿಸಿಕೊಳ್ಳಲಿ. ನಮ್ಮ ಬಗ್ಗೆ ಮಾತಾಡೋದಕ್ಕೆ ಅವರಿಗೆ ಯಾವ ನೈತಿಕತೆ ಇದೆ. ಇಲ್ಲಿ ನಮ್ಮಲ್ಲಿ ನೊಣ ಬಿದ್ದಿರಬಹುದು. ನೊಣದ ಬಗ್ಗೆ ಮತಾಡ್ತಾರೊ ಹೊರತು ಹೆಗ್ಗಣದ ಬಗ್ಗೆ ಮಾತಾಡೊಲ್ಲ ಎಂದು ಗರಂ ಆಗಿದ್ದಾರೆ.