ಮನೆ Latest News ಭಯೋತ್ಪಾದಕರನ್ನು ಟಾರ್ಗೆಟ್ ಮಾಡಿ ಬಲಿ ತೆಗೆದುಕೊಳ್ಳುವ ಕೆಲಸ ನಮ್ಮ ಸೇನೆ ಮಾಡಿದೆ: ಬೆಂಗಳೂರಿನಲ್ಲಿ ವಿಧಾನ ಪರಿಷತ್...

ಭಯೋತ್ಪಾದಕರನ್ನು ಟಾರ್ಗೆಟ್ ಮಾಡಿ ಬಲಿ ತೆಗೆದುಕೊಳ್ಳುವ ಕೆಲಸ ನಮ್ಮ ಸೇನೆ ಮಾಡಿದೆ: ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

0

ಬೆಂಗಳೂರು; ಭಯೋತ್ಪಾದಕರನ್ನು ಟಾರ್ಗೆಟ್ ಮಾಡಿ ಬಲಿ ತೆಗೆದುಕೊಳ್ಳುವ ಕೆಲಸ ನಮ್ಮ ಸೇನೆ ಮಾಡಿದೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಪಾಕ್ ವಿರುದ್ಧ ದಾಳಿ ಕುರಿತು ಕೋಲಾರ ಶಾಸಕ ಕೊತ್ತನೂರು ಮಂಜುನಾಥ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು  ಭಯೋತ್ಪಾದಕರನ್ನು ಟಾರ್ಗೆಟ್ ಮಾಡಿ ಬಲಿ ತೆಗೆದುಕೊಳ್ಳುವ ಕೆಲಸ ನಮ್ಮ ಸೇನೆ ಮಾಡಿದೆ.ಯುದ್ಧ ಸಾಧ್ಯತೆಯ ಸನ್ನಿವೇಶ ಸೃಷ್ಟಿಯಾದಾಗ ಕಾಂಗ್ರೆಸ್ ನವರು ತಮ್ಮ ವಕ್ರಬುದ್ದಿ ಪ್ರದರ್ಶನ ಮಾಡಿದರು.ಇದೇ ರೀತಿ ಹೋದರೆ ಜನ ತಿರುಗಿ ಬೀಳುತ್ತಾರೆ ಅಂತಾ ಅರಿವಾಗಿ ಎಐಸಿಸಿ ಕೇಂದ್ರ ಸರ್ಕಾರದ ಪರ ತೀರ್ಮಾನ  ತೆಗೆದುಕೊಂಡ ಮೇಲೆ ಕರ್ನಾಟಕದ ಕಾಂಗ್ರೆಸ್ ನಾಯಕರು ಬಾಯಿ ಮುಚ್ಚಿಕೊಂಡರು.ಆದರೆ ಎಐಸಿಸಿ ಕರ್ನಾಟಕದ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಖಂಡಿಸಲಿಲ್ಲ.ಇಲ್ಲಿ ಅವರ ದ್ವಿಮುಖ ನೀತಿಯನ್ನು ಪ್ರದರ್ಶನ ಮಾಡಿದ್ದಾರೆ ಎಂದಿದ್ದಾರೆ.

ಅವರ ಎರಡನೇ ಹಂತದ ನಾಯಕರನ್ನು ಎತ್ತಿಕಟ್ಟಿ ಅವರ ಮನಸ್ಥಿತಿಯನ್ನು ಪ್ರದರ್ಶನ ಮಾಡಿದ್ದಾರೆ.ಕಾಂಗ್ರೆಸ್ ನವರು ಪಾಕಿಸ್ತಾನ ಯಾತ್ರೆ ಮಾಡಿ ಬೆತ್ತಲಾಗಿದ್ದೀರಲ್ಲ.ನಿಮ್ಮ ಹೊಲಸು ನಾಲಗೆಯನ್ನು ಯಾವುದಾದರೂ ಆಸ್ಪತ್ರೆಗೆ ಹೋಗಿ ತೊಳೆಸಿ.ಒಳ್ಳೆಯ ರಾಜಕಾರಣ ಮಾಡಲು ನಿಮಗೆ ಏನಾಗಿದೆ ರೋಗ?.ಕಾಂಗ್ರೆಸ್ ತನ್ನ ನಾಯಕರ ಹೇಳಿಕೆಗಳನ್ನು ಖಂಡಿಸುವುದಿಲ್ಲ. ಕಾಂಗ್ರೆಸ್ ತನ್ನ ವಕ್ರ ಬುದ್ದಿಯನ್ನು ಬಿಟ್ಟಿಲ್ಲ. ಪಾಕಿಸ್ತಾನದ ಪ್ರಶ್ನೆಗಳು ಕಾಂಗ್ರೆಸ್ ನವರ ಬಾಯಿಂದ ಬರುತ್ತಿವೆ. ಪಾಕಿಸ್ತಾನದ ಕೆಲವು ನಾಯಕರು ಇವರ ಸಂಪರ್ಕದಲ್ಲಿರಬಹುದಾ ಎಂಬ ಅನುಮಾನ ಮೂಡುತ್ತದೆ.ಪಾಕಿಸ್ತಾನದ ಪರ ಮಾತಾಡಿದರೆ ಇಲ್ಲಿರುವ ಮುಸಲ್ಮಾನರು ಕಾಂಗ್ರೆಸ್ ಪರ ನಿಲ್ಲಬಹುದು ಎಂದು ತಿಳಿದುಕೊಂಡಿರಬೇಕು ಎಂದರು.

ಕಾಂಗ್ರೆಸ್ ಭಾರತೀಯ ಮುಸಲ್ಮಾನರನ್ನು ಎಷ್ಟು ತಪ್ಪು ದಾರಿಗೆ ಎಳೆದರೂ ಅವರು ನಿಮ್ಮ ಮಾತು ಕೇಳಲ್ಲ. ಎಲ್ಲಾ ಮುಸಲ್ಮಾನರು ಭಯೋತ್ಪಾದಕರಲ್ಲ.ಆದರೆ ಸಿಕ್ಕಿಬಿದ್ದ ಎಲ್ಲಾ ಭಯೋತ್ಪಾದಕರೂ ಮುಸ್ಲಿಮರೇ. ಮುಸ್ಲಿಮರು ಕೂಡಾ ಈಗ ಭಯೋತ್ಪಾದಕರ ವಿರುದ್ಧ ಮಾತಾಡಲು ಆರಂಭಿಸಿದ್ದಾರೆ.ರಾಷ್ಟ್ರೀಯ ನೀತಿಗೆ ವಿರುದ್ಧವಾಗಿ ಕಾಂಗ್ರೆಸ್ ಇದೆ.ಮೋದಿ ನಡೆಯಲ್ಲಿ ಪ್ರತಿ ನಾಗರಿಕರಿಗೆ ವಿಶ್ವಾಸ ಇದೆ. ಕಾಂಗ್ರೆಸ್ ನೀತಿ ಕಾಂಗ್ರೆಸ್ ಅನ್ನೇ ನುಂಗುತ್ತದೆ ಎಂದು ತಿಳಿಸಿದ್ರು.

ಮೋದಿ ಸ್ವಯಂಘೋಷಿತ ವಿಶ್ವಗುರು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಅವರೇ ಇಟ್ಟುಕೊಂಡಿರುವ ಹೆಸರಲ್ಲ .ಅವರನ್ನು ಪ್ರೀತಿಸುವ ಜನರು ಕೊಟ್ಟಿರುವ ಹೆಸರು.ಇವರಿಗೆ ಏನಾದರೂ ನಾವು ಹೇಳಿದ್ದೇವಾ ವಿಶ್ವಗುರು ಎಂದು ಕರೆಯಿರಿ ಅಂತಾ?. ಕೆಲವು ಅಭಿಮಾನಿಗಳು ವಿಶ್ವಗುರು, ಹೃದಯ ಸಾಮ್ರಾಟ ಅಂತ ಕರೆಯುತ್ತಾರೆ.ಹಾಗಾದರೆ ಪ್ರಿಯಾಂಕ್ ಖರ್ಗೆಯನ್ನು ಏನಂತ ಕರೆಯಬೇಕು?. ಸೈಟ್ ಕಳ್ಳ ಅಂತ ಕರೆಯಬೇಕಾ? ಎಂದು ಪ್ರಶ್ನಿಸಿದ್ದಾರೆ.