ಬೆಂಗಳೂರು; ಅಂಬೇಡ್ಕರ್ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಿದ್ದರು. ಸಚಿವ ದಿನೇಶ್ ಗುಂಡೂರಾವ್, ಶರಣಪ್ರಕಾಶ್ ಪಾಟೀಲ್, ಸಂಸದ ರಾಧಾಕೃಷ್ಣ, ಶಾಸಕ ಎ ಸಿ ಶ್ರೀನಿವಾಸ್ ಅವರು ಕೂಡ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಕಾಲೇಜ್ ಬಗ್ಗೆ ಪಬ್ಲಿಕ್ ಮಾಡಿದ್ರೆ ಜಾತಿ ಮುಂದೆ ಬರುತ್ತವೆ. ಬಾಬಾಸಾಹೇಬರನ್ನ ಇನ್ನೂ ಜನ ಒಪ್ಪಿಕೊಳ್ತಿಲ್ಲ. ಸಂವಿಧಾನ ಸಬ್ಮಿಟ್ ಮಾಡಿದ್ದ ಅಂಬೇಡ್ಕರ್. ಕರ್ನಾಟಕ ಪ್ರೊಗೆಸ್ಸೀವ್ ಸ್ಟೇಟ್ ಇನ್ ಇಂಡಿಯಾ. ಅತ್ಯುತ್ತಮ ಎಜುಕೇಟೆಡ್ ಗಳ ರಾಜ್ಯ ಎಂದರು.
ಕಾಲೇಜು ಪ್ರಾರಂಭವಾಗಿ ೩೦ ವರ್ಷಕ್ಕೆ ಇಲ್ಲಿಗೆ ಬಂದೆ. ಅಲ್ಲಿಯವರೆಗೆ ಇಲ್ಲಿಗೆ ಕಾಲಿಟ್ಟಿರಲಿಲ್ಲ. ದೇವೇಗೌಡರು ಕಾಲೇಜು ಬಗ್ಗೆ ಪ್ರಶ್ನೆ ಎತ್ತಿದ್ರು. ಸಮುದಾಯಕ್ಕೆ ಎರಡು ಕಾಲೇಜು ಪಡೆದ್ರಿ ಅಂತ. ಆಗ ನಾನು ಮೆಂಬರ್ ಶಿಪ್ ಗೆ ರಿಸೈನ್ ಮಾಡ್ದೆ. ಆಗಿನಿಂದ ಕಾಲೇಜಿಗೆ ಕಾಲಿಡಲಿಲ್ಲ. ೩೦ವರ್ಷದ ನಂತರ ಇಲ್ಲಿಗೆ ಕಾಲಿಟ್ಟಿದ್ದೇನೆ. ಮೆಡಿಕಲ್ ಕಾಲೇಜು ಬಹಳಷ್ಟು ಬೆಳೆದಿದೆ. ಇದನ್ನ ನೋಡಿ ಖುಷಿಯಾಗ್ತಿದೆ. ಮೂರ್ನಾಲ್ಕು ಕಾಲೇಜುಗಳಲ್ಲಿ ದೊಡ್ಡ ಹೆಸರಿದೆ. ಬಹಳಷ್ಟು ಬಡವರಿಗೆ ಅನುಕೂಲ ಆಗ್ತಿದೆ. ಕಾಲೇಜು ಮೇಲೆ ಬಂದಿದ್ದಕ್ಕೆ ಅಭಿನಂದಿಸ್ತೇನೆ. ಮತ್ತಷ್ಟು ಡೆವಲಪ್ ಮಾಡಬೇಕು. ಇಲ್ಲವಾದರೆ ಕಾಲೇಜಿಗೆ ಕಾಲಿಡಲ್ಲ. ಮೆಡಿಕಲ್ ಕಾಲೇಜು ಬ್ಯುಸಿನೆಸ್ ಅಲ್ಲ ಎಂದರು.
ಇದು ಬಡವರಿಗಾಗಿ ಇರುವ ಕಾಲೇಜು. ಇದನ್ನ ಉಳಿಸಿ ಬೆಳೆಸುವ ಕೆಲಸ ಆಗಬೇಕು. ಇನಫಿಶಿಯೆಂಟ್ ಜನರನ್ನ ಇಲ್ಲಿ ತುಂಬಬೇಡಿ. ನೂರಾರು ಮಕ್ಕಳು ದಡ್ಡರಾಗುತ್ತಾರೆ ಎಂಗು ಆಸ್ಪತ್ರೆ ನಿರ್ದೇಶಕರಿಗೆ ಖರ್ಗೆ ಎಚ್ಚರಿಕೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು ಪಹಲ್ಗಾಮ್ ದಾಳಿ ನಂತರ ಸರ್ವ ಪಕ್ಷಗಳ ಸಭೆ ಕರೆಯಲು ಒತ್ತಾಯ ಮಾಡಿದ್ವಿ. ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಿತು. ಆದ್ರೆ ಕೇಂದ್ರ ಸರ್ಕಾರ ಕರೆದ ಸರ್ವ ಪಕ್ಷಗಳ ಸಭೆಗೆ ಪ್ರಧಾನಿ ಮೋದಿಯವರೇ ಬರಲಿಲ್ಲ. ದೆಹಲಿಯಲ್ಲಿ ಇದ್ರು ಸಭೆ ನಡೆಸದೇ ಬಿಹಾರ್ ಚುನಾವಣಾ ಪ್ರಚಾರಕ್ಕೆ ತೆರಳಿದ್ರು. ಮೋದಿಯವರೇ ಇತಂಹ ಸ್ಥಿತಿಯಲ್ಲಿ ಸಭೆ ನಡೆಸದಿದ್ದರೇ ಹೇಗೆ. ಸರ್ವ ಪಕ್ಷಗಳ ಸಭೆ ನಂತರ ಅವರೇ ಭದ್ರತಾ ವೈಪಲ್ಯ ಅಂತಾ ಒಪ್ಪಿಕೊಂಡಿದ್ದಾರೆ. ದೇಶದ ವಿಚಾರ ಬಂದಾಗ ನಾವೂ ಎಲ್ಲ ನೆರವು- ಸಹಾಯ ನೀಡಲು ಸಿದ್ದರಿದ್ದೇವೆ ಎಂದರು.
ಯುದ್ಧ ಅನಿವಾರ್ಯತೆ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾನು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಬೇಕೇ . ಅಥವಾ ಎಐಸಿಸಿ ಅಧ್ಯಕ್ಷನಾಗಿ ಮಾತನಾಡಬೇಕೆ? ಎಂದು ಗರಂ ಆಗಿದ್ದಾರೆ. ಪೆಹಲ್ಗಾವ್ ದಾಳಿ ವಿಚಾರವಾಗಿ ಪ್ರಧಾನ ಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆದಿದ್ದರು. ನಾವು ಎಲ್ಲರೂ ಹೋಗಿದ್ದೆವು,ಎಲ್ಲರೂ ಭಾಗಿಯಾಗಿದ್ದೆವು. ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರುಗಳು ಕೂಡ ಇದ್ದರು. ಸರ್ಕಾರ ಒಂದು ಸಭೆಯನ್ನ ಕರೆದ ನಂತರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಹಾಜರಿರಬೇಕಿತ್ತು . ಅವರ ಹಾಜರಾತಿ ಇರಲಿಲ್ಲ. ಈ ನಡೆ ಸರಿಯಲ್ಲ ,ಇಂತಹ ಘಟನೆ ನಡೆದಿದೆ . ಸುಮಾರು 26 ಜನರು ಮೃತಪಟ್ಟಿದ್ದಾರೆ . ಅನೇಕ ಜನರು ಗಾಯಾಳುಗಳಾಗಿದ್ದಾರೆ . ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿ ಇಲ್ಲ . ಚುನಾವಣಾ ಭಾಷಣ ಮಾಡಲು ಬಿಹಾರಕ್ಕೆ ಹೋಗಿದ್ದೀರಿ . ದೆಹಲಿಯಲ್ಲಿ ಬರಲು ಆಗುವುದಿಲ್ಲ . ಅವರು ಸೀರಿಯಸ್ ಇಲ್ಲ ಅಂತ ಅರ್ಥ . ಅವರು ಇಂಗ್ಲಿಷ್ ಹಾಗು ಹಿಂದಿಯಲ್ಲಿ ಬೇರೆ ಕಡೆ ಭಾಷಣ ಮಾಡುವ ಬದಲು ಇಲ್ಲಿ ಬಂದು ಸಮಜಾಯಿಷಿ ಹೇಳಬೇಕಿತ್ತು . ಏನೇನು ಘಟನೆ ನಡೆಯಿತು . ಯಾಕೆ ನಡೆಯಿತು . ಯಾರು ಹೊಣೆ ಹೊತ್ತಿದ್ದಾರೆ. ಸೆಕ್ಯೂರಿಟಿ ಲ್ಯಾಪ್ಸ್ ಆಗಿದೆಯೇ, ಇಂಟೆಲಿಜೆನ್ಸ್ ಲ್ಯಾಪ್ಸ್ ಆಗಿದೆಯೇ, ಐಬಿ ಲ್ಯಾಪ್ಸ್ ಆಗಿದೆಯೇ, ಇನ್ಫಾರ್ಮರ್ಸ್ ಲ್ಯಾಪ್ಸ್ ಆಗಿದೆಯೇ, ಪೊಲೀಸರ ಲ್ಯಾಪ್ಸ್ ಆಗಿದೆಯೇ?.ಯಾರದ್ದು ಅನ್ನೋದು ನಮಗೆ ತಿಳಿಸಬೇಕು. ಆದರೆ ಅವರು ಬರಲೇ ಇಲ್ಲ . ಅದಕ್ಕೆ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಿತು ಎಂದರು.
ಸ್ವತಃ ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ ಇದು ಸೆಕ್ಯೂರಿಟಿ ಲ್ಯಾಪ್ಸ್ ಅಂತ. ಆ ಕಾರಣಕ್ಕಾಗಿ ಕರೆದಿದ್ದೇವೆ ಅಂತ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಅವರಿಗೆ ನಾವು ಹೇಳಿದ್ದೇವೆ . ಇದನ್ನ ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು . ಎಲ್ಲವನ್ನೂ ವ್ಯವಸ್ಥೆ ಮಾಡಬೇಕಿತ್ತು. ನೀವು ವ್ಯವಸ್ಥೆ ಮಾಡದೆ ಇರುವುದರಿಂದಲೇ ಈ ಸ್ಥಿತಿಗೆ ಬಂದಿರೋದು . ಆಗ ಇನ್ಮುಂದೆ ಈ ರೀತಿ ಆಗೋದಿಲ್ಲ ಅಂತ ಅಮಿತ್ ಶಾ ತಿಳಿಸಿದ್ದಾರೆ. ಮೂರು ಹಂತಗಳ ಸೆಕ್ಯೂರಿಟಿ ಇದ್ದರೂ ಕೂಡ ಇಷ್ಟು ಜನರಿಗೆ ರಕ್ಷಣೆ ಕೊಡಲು ಆಗಲಿಲ್ಲ . ಏನೇ ಆದರೂ ಕೂಡ ದೇಶದ ದೃಷ್ಟಿಯಿಂದ ದೇಶದ ಒಗ್ಗಟ್ಟಿನ ದೃಷ್ಟಿಯಿಂದ ನಾವೆಲ್ಲರೂ ಕೂಡ ಒಂದಾಗಿ ರಕ್ಷಣೆ ಮಾಡೋಣ ಅಂತ ತಿಳಿಸಿದ್ದೇವೆ . ಸರ್ಕಾರದ ನಿರ್ಣಯಕ್ಕೆ ನಾವು ಕೂಡ ಬೆಂಬಲ ಸೂಚಿಸುತ್ತೇವೆ ಅಂತ ತಿಳಿಸಿದ್ದೇವೆ ಎಂದರು.