ಮನೆ Latest News ಕರಗ ಉತ್ಸವದಲ್ಲಿ ಭಾಗಿಯಾದ ಡಿಸಿಎಂ ಡಿ ಕೆ ಶಿವಕುಮಾರ್

ಕರಗ ಉತ್ಸವದಲ್ಲಿ ಭಾಗಿಯಾದ ಡಿಸಿಎಂ ಡಿ ಕೆ ಶಿವಕುಮಾರ್

0

ಬೆಂಗಳೂರು: ಡಿಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು ಕರಗ ಉತ್ಸವದಲ್ಲಿ ಭಾಗಿಯಾಗಿದ್ದಾರೆ.

ಬಳಿಕ ಮಾತನಾಡಿದ ಅವರು ಬೆಂಗಳೂರು ಕರಗ ಭಾರತ ದೇಶದ ಐತಿಹಾಸಿಕ ಉತ್ಸವ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕರಗ ಉತ್ಸವದಲ್ಲಿ ಭಾಗಿಯಾಗಿದ್ದೆ. ಕರಗ ಬಾವಕೈತೆಯ ದೊಡ್ಡ ಸಂದೇಶವಾಗಿದೆ. ಕರಗ ದರ್ಗಾಕ್ಕೂ ಹೋಗುತ್ತೆ. ಯಾರೊ ಒಬ್ಬರು ಬಂದೂ ಸರ್ಕಾರ ಟೀಕೆ ಮಾಡೋದಲ್ಲ. ದೇವಸ್ಥಾನದ ಧರ್ಮದಲ್ಲಿ ರಾಜಕೀಯ ಮಾಡೋದು ನೀಚತನ. ಕರಗಕ್ಕೆ ಸರ್ಕಾರದಿಂದ ಅನುದಾನ ಕೊಡುವುದಕ್ಕೆ ಒಂದು ಪದ್ದತಿ ಇದೆ. ಕರಗಕ್ಕೆ ಅನುದಾನ ಕೊಡುವ ಬಗ್ಗೆ ಯಾರು ಆತಂಕಪಡಬೇಕಾಗಿಲ್ಲ. ಅದಕ್ಕಾಗಿ ಬಜೆಟ್ ನಲ್ಲೆ ಅನುದಾನ ಇಟ್ಟಿದ್ದೇವೆ. ಆಚರಣೆಯನ್ನ ಡಿಸಿ- ಎಸಿ ಪೊಲೀಸರು ಚೆನ್ನಾಗಿ ಮಾಡಿದ್ದಾರೆ. ರಾಮಲಿಂಗಾರೆಡ್ಡಿ ಅವರು ಸಮಸ್ಯೆ ಬಗೆಹರಿಸಿದ್ದಾರೆ. ದೇವಸ್ಥಾನದ ಸಮಿತಿ. ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ. ಪದ್ದತಿ ಉಳಿಸಿಕೊಂಡು ಬೆಂಗಳೂರಿನ ಗೌರವ ಹೆಚ್ಚಳ ಮಾಡಿದ್ದಾರೆ ಎಂದರು.

ಜಾತಿ ಜನ ಗಣತಿ ವರದಿಯ ಪ್ರತಿ ಬಂದಿದೆ. ಅವರ ಅವರ ಸಮಾಜ ಅವರು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ನಾವು ಯಾಕೆ ಟೀಕೆ ಮಾಡಬೇಕು. ಅವರ ಅವರ ಹಕ್ಕು. ಅವರು ಪ್ರತಿಪಾದನೆ ಮಾಡಲಿ. ಸಿಎಂ ಈಗಾಗಲೇ ಹೇಳಿದ್ದಾರೆ. ಸದನದಲ್ಲೆ ಚರ್ಚೆ ಮಾಡಲು ಅವಕಾಶ ಕೊಡ್ತೇವಿ ಅಂತಿದ್ದಾರೆ . ಒಕ್ಕಲಿಗ ಸಮುದಾಯಕ್ಕೆ 6ನೇ ಸ್ಥಾನ ವಿಚಾರದ ಬಗ್ಗೆ ಮಾತನಾಡಿ ನನಗೆ ಗೊತ್ತಿದೆ‌, ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೇನೆ.ಎಲ್ಲರಿಗೂ ನ್ಯಾಯ ಕೂಡಿಸಬೇಕಾಗಿರುವುದು ನನ್ನ ಡ್ಯೂಟಿ. ನನ್ನ ಧ್ವನಿ. ನನ್ನ ದೇಹ. ನನ್ನ ಪದ್ದತಿ. ನನ್ನ ಸಂಕಲ್ಪ ಇದೆ. ನಾನು ಎಲ್ಲವನ್ನೂ ಮಾಡ್ತೇನಿ. ನಾನು ಕೆಪಿಸಿಸಿ ಅದ್ಯಕ್ಷ ಆಗಿದ್ದೇನೆ ಎಂದರು.

ಮುನಿರತ್ನರಿಂದ ರಾಜ್ಯಪಾಲರಿಗೆ ದೂರು ವಿಚಾರದ ಬಗ್ಗೆ ಮಾತನಾಡಿ ವಿಧಾನಸೌಧಕ್ಕೆ ಪೊಲೀಸರು ಇನ್ನೂ ಸ್ಥಳ ಪರಿಶೀಲನೆ ಹೋಗಿಲ್ಲವಲ್ಲ. ಅದಕ್ಕೆ ಕೇಳ್ತಾ ಇದಾರೇನೋ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯಪಾಲರ ಭೇಟಿ ಮಾಡಿದ ಮುನಿರತ್ನ; ಬೆಂಗಳೂರಿನಲ್ಲಿ ಸುಮಾರು 2 ಸಾವಿರ ಕೋಟಿ ಹಗರಣ ಆರೋಪದ ಬಗ್ಗೆ ದೂರು

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ರಾಜ್ಯಭವನಗಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.ಈ ವೇಳೆ ಬೆಂಗಳೂರಿನಲ್ಲಿ ಸುಮಾರು 2 ಸಾವಿರ ಕೋಟಿ ಹಗರಣ ಆರೋಪದ ಬಗ್ಗೆ ದೂರು ಕೊಟ್ಟಿದ್ದಾರೆ. ದಾಖಲೆಗಳೊಂದಿಗೆ ರಾಜ್ಯಪಾಲರಿಗೆ ಶಾಸಕ ಮುನಿರತ್ನ ದೂರು ಕೊಟ್ಟಿದ್ದಾರೆ.

ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಶಾಸಕ ಮುನಿರತ್ನ ಮಾತನಾಡಿ ವರ್ಲ್ಡ್ ಬ್ಯಾಂಕ್ ಲೋನ್ ಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ಹಗರಣ ನಡೆದಿದೆ. ಕಳೆದ ಫೆಬ್ರವರಿಯಲ್ಲಿ ನಾನು ಇಡಿಗೆ ದೂರು ಕೊಟ್ಟಿದ್ದೆ. ಅದಾದ ನಂತರ ಡಿಕೆಶಿ, ಡಿಕೆಸು ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಮನೆಗೆ ಕರೀತಾರೆ. ರಾಜಾಕಾಲುವೆ ನಿರ್ಮಾಣದಲ್ಲಿ ಬಹುಕೋಟಿ ಹಗರಣ ಆಗಿದೆ ಅಂತ ಮುನಿರತ್ನ ಆರೋಪಿಸಿದ್ದಾರೆ.

ಸ್ಟಾರ್ ಚಂದ್ರುಗೆ ಮಹಾದೇವಪುರ ಟೆಂಡರ್, ಬ್ಯಾಟರಾಯನಪುರಕ್ಕೆ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪೆನಿ, ಯಲಹಂಕಕ್ಕೆ ಯಲ್ಲಯ್ಯ ಕನ್ಸ್‌ಟ್ರಕ್ಷನ್ ಕಂಪೆನಿಗೆ ಟೆಂಡರ್ ಕೊಡ್ತಾರೆ. ಅದೇ ರೀತಿ ರಾಜರಾಜೇಶ್ವರಿ ನಗರದ ಗುತ್ತಿಗೆ ಕೊಡ್ತಾರೆ. ಹಾಸನದ ಕಾಮಗಾರಿಗಳನ್ನು ಆಂಧ್ರದ ಬಿಎಸ್‌ಆರ್ ಕಂಪನಿಗೆ ಟೆಂಡರ್ ಕೊಡ್ತಾರೆ ಡಿಕೆಶಿ. ಏಪ್ರಿಲ್ 15ಕ್ಕೆ ಇವರೆಲ್ಲರಿಗೂ ಟೆಂಡರ್ ಕರೆದಿದ್ದಾರೆ. ಈ ಗುತ್ತಿಗೆದಾರರ ಕಂಪನಿಗಳಿಗೆ ಅನುಕೂಲ ಆಗುವಂತೆ ಟೆಂಡರ್ ನಿಯಮ ಬದಲಾಯಿಸಲಾಗಿದೆ.ಗುತ್ತಿಗೆದಾರರ ಜೊತೆ ಶಾಮೀಲಾಗಿ 2 ಸಾವಿರ ಕೋಟಿ ಅಕ್ರಮ ಮಾಡ್ತಿದ್ದಾರೆ. ವರ್ಲ್ಡ್ ಬ್ಯಾಂಕ್ ಲೋನ್ ನಲ್ಲಿ 400 ಕೋಟಿ ಕಮೀಷನ್ ಪಡೀತಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.