ಮನೆ Latest News ಸುದ್ದಿಗೋಷ್ಟಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ

ಸುದ್ದಿಗೋಷ್ಟಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ

0

 

ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು,ಶಾಸಕರಾದ ಸ್ವರೂಪ್ ,ಹೆಚ್ ಕೆ ಮಂಜುನಾಥ್ ಸೇರಿ ಮಾಜಿ ಶಾಸಕರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಅವರು ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಆಡಳಿತಕ್ಕೆ ಬಂದಾಗಿನಿಂದ ಎರಡು ಇನ್ನು ಪೂರೈಸಿಲ್ಲ. ಎರಡು ವರ್ಷಗಳಿಂದ ಹಂತ ಹಂತವಾಗಿ ನಾಡಿನ ಸಾಮಾನ್ಯ ಜನರ ಮೇಲೆ ದರ ಏರಿಕೆ ಮಾಡುವ ಮೂಲಕ ಸಂಕಷ್ಟಕ್ಕೆ ದೂಡಿದೆ. ಆ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳ ಆಗ್ತಾ ಇದೆ. ಒಂದು ರಾಜಕೀಯ ಪಕ್ಷವಾಗಿ ಜೆಡಿಎಸ್ ತಮ್ಮ ಕರ್ತವ್ಯವನ್ನು,ಜವಾಬ್ದಾರಿಯನ್ನ ಜೆಡಿಎಸ್ ಮಾಡ್ತಾ ಇದೆ. ಆ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಬೆಳಗ್ಗೆಯಿಂದ ಸಾಕಪ್ಪ ಸಾಕು ಅಂತ ಅಭಿಯಾನ ಪ್ರಾರಂಭ ಮಾಡಿದ್ದೇವೆ. ಭ್ರಷ್ಟಾಚಾರದ ಬಗ್ಗೆ ಹೋಗ್ತಾ ಹೋಗ್ತಾ ಮಾತನಾಡುತ್ತೇನೆ. ಸಿಎಂ ಆರ್ಥಿಕ ಸಲಹೆಗಾರರು ಅವ್ರ ಹೇಳಿಕೆ ಗಮನಿಸಿದ್ದೇನೆ. ಅವರಿಗೆ ನಾನು ಅಭಿನಂದನೆಗಳು ಸಲ್ಲಿಸುತ್ತೇನೆ.  ಸರ್ಕಾರ ಅಂಗವಾಗಿ ಅದರಲ್ಲೂ ಆರ್ಥಿಕ ಸಲಹೆಗಾರರು ಹೇಳಿರೋದು. ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ನಂಬರ್ ಒಂದನೇ ಸ್ಥಾನದಲ್ಲಿ ಇದೆ ಅಂತ ಹೇಳಿದ್ದಾರೆ ಎಂದ್ರು.

ಗ್ಯಾರಂಟಿಗಳಿಂದ ಅಭಿವೃದ್ಧಿ ಕುಠಿತವಾಗಿದೆ ಅಂತ‌ಸ ಬಸವರಾಯರೆಡ್ಡಿಯವರು ಹೇಳಿದ್ದರು. ಸಚಿವರ ಹೇಳಿಕೆ,ಶಾಸಕರ ಮಿತ್ರರ ಹೇಳಿಕೆಗಳು. ನಾವು ಈ ವೆಬ್ ಸೈಟ್ ನಲ್ಲಿ ದಾಖಲಿಸಿದ್ದೇವೆ. ಕಳೆದ ಎರಡು ವರ್ಷಗಳ ಹೇಳಿಕೆಗಳನ್ನ ಇದ್ದಾವೆ. ಆಡಳಿರ ಪಕ್ಷದ ಸಚಿವರು,ಶಾಸಕರ ಹೇಳಿಕೆಯನ್ನ ಕಾಣಬಹುದು. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಎಂಬ ಅಭಿಯಾನ ಒಂದು ದಿನದ್ದು ಅಲ್ಲ. ರಾಜ್ಯ ಸರ್ಕಾ ಸ್ವಪಕ್ಷ ಸಚಿವರನ್ನ ಹನಿಟ್ರ್ಯಾಪ್ ಮಾಡಿದ್ದಾರೆ. ಹೈಕಮಾಂಡ್ ನ ಮನಿ ಟ್ರ್ಯಾಪ್ ಮಾಡಿದ್ದಾರೆ. ರಾಜ್ಯದ ಜನರನ್ನ ಯಾವ ರೀತಿ ತೆರಿಗೆ ಟ್ರ್ಯಾಪ್ ಮಾಡಿದ್ದಾರೆ ನೋಡಬಹುದು. ೧೪೦ ಸ್ಥಾನಗಳ ತಲುಪಲು ನಾನಾ ಕಾರಣಗಳಿವೆ ಎಂದು ತಿಳಿಸಿದ್ರು.

ಐದು ಗ್ಯಾರಂಟಿ ಘೋಷಣೆ ಮಾಡಿರುವ ಸರ್ಕಾರ ಅನುಷ್ಠಾನ ಬಗ್ಗೆ ಮಾತಾಡಿದ್ರು. ಅವ್ರು ಕೊಟ್ಟ ಮಾತಿನಂತೆ ನಡೆದುಕೊಂಡ್ರಾ ಎಂದು ನಾನು ಸರ್ಕಾರಕ್ಕೆ ಪ್ರಶ್ನೆ ಇಟ್ಟಿದ್ವಿ. ರೈತರಿಗೆ ಶಕ್ತಿ ತುಂಬಿಸಬೇಕು,ಅವರಿಗೆ ಬೆನ್ನೆಲುಬು ಆಗಿ ನಿಲ್ಲಬೇಕು ಅಂತ ಮೋದಿ ಅವ್ರು. ೨೦೧೯ ರಲ್ಲಿ ಪ್ರತಿಯೊಬ್ಬ ರೈತರ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಿದ್ರು. ಅವ್ರು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ೨೦೧೯ ರಿಂದ ಇಲ್ಲಿಯವರೆಗೆ ಯಾವುದೇ ಮಾತು ತಪ್ಪದೆ ಉಳಿಸಿಕೊಂಡಿದ್ದಾರೆ. ಅದರೆ ಇಲ್ಲಿ ಗ್ಯಾರಂಟಿಗಳು ಉಪಚುನಾವಣೆ ಸಾಕ್ಷಿ. ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ಮತ ಚಲಾವಣೆ ೪೮ ಗಂಟೆ ಮುನ್ನ ಹಣ ಬಿಡುಗಡೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಫಲಾನುಭವಿಗಳ ಸಭೆ‌ ಕರೆದು ನಮ್ಮ ರಾಮನಗರದ‌ ಶಾಸಕರು ಧಮ್ಕಿ ಹಾಕಿದ್ರು. ಸಂಸದರಿಗೆ ಮತ ಹಾಕಿಲ್ಲ ಅಂತ ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ರು. ಇದು ಒಂದು ದಿನ ಹೋರಾಟ ಅಲ್ಲ,ವಾರದ ಹೋರಾಟ ಅಲ್ಲ.ಆ ಹಿನ್ನೆಲೆಯಲ್ಲಿ ಈ ವೆಬ್ ಸೈಟ್ ಲಾಂಜ್ ಮಾಡಿದ್ದೇವೆ. ಪ್ರತಿಯೊಬ್ಬ ಕನ್ನಡಿಗನಿಗೆ ಮನವಿ ಮಾಡ್ತೀನಿ. ಪ್ರತಿಯೊಬ್ಬ ಕನ್ನಡಿಗನು ಹೋರಾಟಕ್ಕೆ ಸೇರಬೇಕು ಅಂತ ಮನವಿ ಮಾಡ್ತೀವಿ ಎಂದು ತಿಳಿಸಿದ್ರು.

ಬೆಲೆ ಏರಿಕೆಯಿಂದ ಜನರಿಗೆ ತೊಂದರೆ ಆಗಿದೆ ಅದನ್ನ ದಾಖಲಿಸಲಾಗಿದೆ.ಬಸ್ ದರ,ವಿದ್ಯುತ್ ದರ ಏರಿಕೆಯಾಗಿದೆ. ೩೬% ವಿದ್ಯುತ್ ದರ ಏರಿಕೆ ಆಗಿದೆ.ಹಾಲು ಪ್ರತಿಲೀಟರ್ ೯ ರೂಪಾಯಿ ಜಾಸ್ತಿ ಮಾಡಿದ್ದೀರಾ. ಬಸ್ ಟಿಕೆಟ್  18% ದರ ಏರಿಕೆ ಮಾಡಿದ್ದೀರಾ. ಮೆಟ್ರೋ ೪೬% ದರ ಏರಿಕೆ ಮಾಡಿದ್ದೀರಾ. ಆಸ್ಪತ್ರೆಯಲ್ಲಿ ಒಪಿಡಿ ಎಂಟ್ರಿ ದರ ಹೆಚ್ಚಳ ಮಾಡಿದ್ದೀರಾ. ಜನರ ಬದುಕಲು ಉತ್ತಮ ವಾತವರಣ ನಿರ್ಮಾಣ ಮಾಡಿಲ್ಲ. ಬಹುಶಃ ಒಂದು ದರ ಏರಿಕೆ ಮಾಡಿಲ್ಲ. ನಾವು ಉಸಿರಾಡುವ ಗಾಳಿಗೆ ಬೆಲೆ ಹಾಕಿಲ್ಲ ಇದು ನಮ್ಮ ಪುಣ್ಯ. ಬಸವರಾಯರೆಡ್ಡಿ ಅವ್ರು ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ. ಇದೇ ರೀತಿ ಮುಂದೆ ನಡೆದುಕೊಂಡು ಹೋದ್ರೆ. ಇಂದಿರಾಗಾಂಧಿ ಕಾಲದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ರು. ಮುಂದೊಂದು ದಿನ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತೆ .ಆರ್ಥಿಕ ಸಂಕಷ್ಟ ಸುನಾಮಿ ರೀತಿ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಸಮಯ ದೂರಾ ಇಲ್ಲ ಅನಿಸುತ್ತೆ. ನಮ್ಮ ರಾಜ್ಯದ ಎಲ್ಲಿಗೆ ಹೋಗ್ತಾ ಇದೆ ಎಂದ್ರು.

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಕ್ಯಾಬಿನೆಟ್ ಸಚಿವರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಜನರಿಗೆ ತೆರಿಗೆ ಟ್ರ್ಯಾಪ್ ಮಾಡಿದ್ದಾರೆ. ಪ್ರಭಾವಿ ಸಚಿವರು ಸದನದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ೧೬ ನೇ ಬಜೆಟ್ ಮಂಡಿಸಿರುವ ಸಿದ್ರಾಮಣ್ಣ ಅವ್ರು ಎರಡು ವರ್ಷಗಳಲ್ಲಿ ೨.೨೫ ಕೋಟಿ ಸಾಲ ಮಾಡಿದ್ದಾರೆ. ಸಾಲ ತೆಗೆದುಕೊಂಡಿರೋದು ತಪ್ಪು ಅಂತ ನಾನು ಹೇಳಿಲ್ಲ. ಐತಿಹಾಸಿಕ ಬಜೆಟ್ ಮಂಡಿದ್ದೇವೆ ಅಂತ ಅವ್ರ ಪಕ್ಷದವರು ಬೆನ್ನು ತಟ್ಟಿಕೊಂಡ್ರಿ . ಸಾಲ ಮಾಡಿ ರಾಜ್ಯದ ಜನತೆ ಮೇಲೆ ಎಷ್ಟು ಹೊರೆ ಹಾಕಿದ್ದೀರಾ. ಆ ಸಾಲದ ಹಣದಿಂದ ಎನಾದ್ರು ಮೂಲಸೌಕರ್ಯ ಅಭಿವೃದ್ಧಿ ಗೆ ಬಳಸಿಕೊಳ್ಳಿದ್ದೀರಾ. ಸಾಲವನ್ನು ಅಭಿವೃದ್ಧಿ ದೃಷ್ಟಿಯಿಂದ ಮಾಡಿದ್ದೀರಾ.ಅಥವಾ ನೀವು ಸುಳ್ಳು,ಡೊಳ್ಳು ಯೋಜನೆಗಳಿಗೆ ಕೊಟ್ಟಿದ್ದೀರಾ ಇದನ್ನ ಮೊದಲು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ರು.