ಬೆಂಗಳೂರು; 48 ಮಂದಿಯ ಹನಿಟ್ರ್ಯಾಪ್ ಪೆನ್ ಡ್ರೈವ್, ಸಿಡಿ ಇದೆ ಎಂದು ವಿಧಾನಸೌಧದಲ್ಲಿ ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿ ನೀಡಿದ್ದಾರೆ.
ಕರ್ನಾಟಕ ಸಿಡಿ, ಪೆನ್ ಡ್ರೈವ್ ಕಾರ್ಖಾನೆ ಆಗಿದೆ. ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ಮಾಡಲಾಗಿದೆ ಎಂದು ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ತುಮಕೂರು ಭಾಗದ ಸಚಿವ ಎಂದು ಹೇಳುತ್ತಿದ್ದಾರೆ. ತುಮಕೂರು ಭಾಗದ ಸಚಿವರು ಅಂದ್ರೆ ಅದು ನಾನು ಮತ್ತು ಪರಮೇಶ್ವರ್ ಇಬ್ಬರೇ ಇರುವುದು.ಈ ಕಡೆ ಹಾಗೂ ಆ ಕಡೆ ಎರಡೂ ಕಡೆ ಇದ್ದಾರೆ . 48 ಜನರ ಪೆನ್ ಡ್ರೈವ್ ಇದೆ . ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಕಷ್ಟ ಆಗಿದೆ. ನಾನು ಲಿಖಿತ ದೂರು ಕೊಡುತ್ತೇನೆ. ಗೃಹ ಮಂತ್ರಿಗಳು ವಿಶೇಷ ತನಿಖೆ ನಡೆಸಬೇಕು. ನನ್ನ ಬಳಿ ಇರುವ ದಾಖಲೆ ಕೊಡುತ್ತೇನೆ.ಆ ಸಿಡಿ ಪ್ರೊಡ್ಯೂಸರ್ ಯಾರು ಅಂತ ಗೊತ್ತಾಗಬೇಕು ಎಂದು ಸದನದಲ್ಲಿ ಸಚಿವ ರಾಜಣ್ಣ ಹೇಳಿದ್ದಾರೆ.
ಸದನದಲ್ಲಿ ಸಚಿವ ಕೆ.ಎನ್. ರಾಜಣ್ಣ ಹನಿ ಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದ ಬಳಿಕ ಅತ್ಯಾಚಾರ ಪ್ರಕರಣದ ಬಗ್ಗೆ ಶಾಸಕ ಮುನಿರತ್ನ ಪ್ರಸ್ತಾಪಿಸಿದ್ದಾರೆ.ದೇವರ ಫೋಟೋ ತೋರಿಸಿ ಭಾವುಕರಾಗಿ ಮುನಿರತ್ನ ಮಾತಾಡಿದ್ದಾರೆ. ಮುನಿರತ್ನ ಮಾತಾಡುವ ವೇಳೆ ಮುನಿರತ್ನ ವಿರುದ್ಧ ಕಾಂಗ್ರೆಸ್ ಶಾಸಕರು ಮುಗಿಬಿದ್ದಿದ್ದಾರೆ.ನನ್ನ ಮೇಲೆ ರೇಪ್ ಕೇಸ್ ಹಾಕಿ ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ .ನಾನು ಮಾಡಿರೋ ತಪ್ಪೇನು ಎಂದು ಕಣ್ಣೀರು ಹಾಕುವ ರೀತಿಯಲ್ಲಿ ಮುನಿರತ್ನ ಮಾತನಾಡಿದ್ದಾರೆ.
ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ರೇಪ್ ಮಾಡಿದ್ದೀನೆ ಅಂತ ಆರೋಪ ಮಾಡಿದ್ದಾರೆ. ನನ್ನ ಮೊಮ್ಮಕ್ಕಳು 15 ವರ್ಷ ಇದ್ದಾರೆ. ರೇವಣ್ಣನ ಮನೆ ಹಾಳು ಮಾಡಿದರು. ರಮೇಶ್ ಜಾರಕಿಹೊಳಿ ಮನೆ ಹಾಳು ಮಾಡಿದರು. ಈಗ ನನ್ನ ಮನೆ ಹಾಳು ಮಾಡಿದ್ದಾರೆ. ಮುಂದೆ ಬೇರೆ ಶಾಸಕರ ಮನೆ ಹಾಳು ಮಾಡಬಾರದು.ರಾಜ್ಯ ಸಿಡಿ ಹಾಗೂ ಪೆನ್ ಡ್ರೈವ್ ಫ್ಯಾಕ್ಟರಿ ಆಗಿದೆ. ನಿಮ್ಮ ಕಡೆ ಒಬ್ಬರಿದ್ದಾರೆ, ನೀವು ಹೆಸರು ಹೇಳಿದರೆ ನಾನು ಯಾರು ಅಂತ ಹೇಳುತ್ತೇನೆ. ಒಟ್ಟು ೪೮ ಜನರ ಸಿಡಿ ಇದೆ. ಎಲ್ಲಾ ಪಕ್ಷದ ನಾಯಕರ ಸಿಡಿ ಇವೆ. ರಾಷ್ಟ್ರ ಮಟ್ಟದ ನಾಯಕರ ಸಿಡಿ ಕೂಡ ಇವೆ. ನಾನು ಕೇಂದ್ರ ಗೃಹ ಸಚಿವರಿಗೆ ದೂರು ಕೊಡುತ್ತೇನೆ. ಇದರಲ್ಲಿ ಯಾರೆಲ್ಲಾ ಇದ್ದಾರೆ. ಇದರ ಪ್ರೊಡ್ಯೂಸರ್ ಯಾರು. ಎಲ್ಲಾ ತನಿಖೆ ಮೂಲಕ ಹೊರಗೆ ಬರಬೇಕು. ಇದೊಂದು ಪಿಡುಗು, ಸಾರ್ವಜನಿಕವಾಗಿ ಬಹಿರಂಗವಾಗಬೇಕು. ನನ್ನ ಮೇಲೆ ಕೂಡ ಅಟೆಂಪ್ಟ್ ಮಾಡಿದ ಬಗ್ಗೆ ಪುರಾವೆ ಇವೆ.ಎಲ್ಲವನ್ನೂ ಸೇರಿ ನಾನು ದೂರು ನೀಡುತ್ತೇನೆ ಎಂದಿದ್ದಾರೆ.
ನನಗೆ ಆಗಿರೋ ಅನ್ಯಾಯ ವನ್ನ ಡಿಕೆ ಶಿವಕುಮಾರ್ ಅವರು ದಯಾನಂದ್ ಅವರಿಗೆ ಮಾತಾಡಿ ರೇಪ್ ಕೇಸ್ ಹಾಕಿಸ್ತಾರೆ. ಡಿವೈಎಸ್ಪಿ ಧರ್ಮೇಂದ್ರ ಅವರಿಗೆ ಹೇಳ್ತಾರೆ. ಕೋವಿಡ್ ವೇಳೆ ನಾನು ಮಹಿಳೆಗೆ ಭೇಟಿ ಮಾಡಿದ್ದೆ ಎಂದು ಹೇಳ್ತಾರೆ. ರೇಪ್ ಕೇಸ್ ಹಾಕಬಾರದು ಅಂತ ಅಂದ್ರೆ ರಾಜೀನಾಮೆ ಕೊಡಬೇಕು ಎಂದು ಬೆದರಿಕೆ ಹಾಕ್ತಾರೆ. ನಾನು ಸದನದಲ್ಲಿ ಇದನ್ನೆ ಹೇಳಿದ್ದೀನಿ. ಇದಕ್ಕೆ ಕಾರಣ ಡಿಕೆ ಮತ್ತು ಡಿಕೆ ಸುರೇಶ್ ಅವರೇ..ಪಾರ್ಲಿಮೆಂಟ್ ಎಲೆಕ್ಷನ್ ಆದ್ಮೇಲೆ ಆರ್ ಆರ್ ನಗರದಲ್ಕಿ ಲೀಡ್ ಬಂದ್ಮೇಲೆ ನನ್ನ ಮೇಲೆ ಈ ರೀತಿ ಮಾಡೋಕೆ ಶುರು ಮಾಡಿದ್ದಾರೆ.ಮಾನಸಿಕ ವಾಗಿ ಒತ್ತಡ ತಂದಿದ್ದಾರೆ, ಗನ್ ಮ್ಯಾನ್ ಗಾಗಿ ಸುಪ್ರೀಂ ಕೋರ್ಟ್ ವರೆಗೂ ಹೋಗಿದ್ದೀನಿ ಎಂದಿದ್ದಾರೆ.
ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಈ ರೀತಿ ಮಾಡ್ತಿದ್ದಾರೆ.ಹಿಂದೆ ನಾನು, ರಮೇಶ್ ಜಾರಕಿಹೊಳಿ ಈಗ ರಾಜಣ್ಣಗೆ ಮಾಡಿದ್ದಾರೆ. ಹೋಮ್ ಮಿನಿಸ್ಟರ್ ಈಗ ತನಿಖೆಗೆ ಆದೇಶಿಸುತ್ತೇನೆ ಎಂದಿದ್ದರೆ.ಡಿಕೆಗೆ ಕಿವಿಮಾತು ಹೇಳುತ್ತೇನೆ, ನಿಮಗೂ ಕುಟುಂಬ ಇದೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಕಣ್ಣೀರು ಹಾಕ್ತಾರೆ. ಸಿಎಂ ಆಗೋಕೆ ಹೊರಟಿದ್ದೀರಿ, ನಿಮಗೆ ಶೋಭೆ ತರಲ್ಲ. ನನ್ನ ಮೇಲೆ ರೇಪ್ ಸುಳ್ಳು ಕೇಸ್ ಹಾಕಿದ್ದಾರೆ. ಸುಳ್ಳು ಕೇಸ್ ಹಾಕಿದ್ರೆ ಹುಳ ಬಿದ್ದು ಸಾಯ್ತೀರಿ. ಇನ್ಮುಂದೆಯಾದರೂ ಬುದ್ದಿ ಕಲೀರಿ, ಹನಿಟ್ರ್ಯಾಪ್ ಮಾಡೋದು ಬಿಡಿ. ಹನಿಟ್ರ್ಯಾಪ್ ಟೀಮ್ ಯಾರು ಅಂತ ಗೊತ್ತಿದೆ. ನಾನು ರಾಜಕೀಯ ಕೊಟ್ಟು ಬಿಜೆಪಿಗೆ ಹೋದಾಗಲೇ ಪ್ರಯತ್ನ ಪಟ್ಟಿದ್ದೀರಿ. ಐದು ವರ್ಷ ಆದ್ನೇಲೆ ರೇಪ್ಕೇಸ್ ಕೊಡ್ತಾರಾ?.ಬಹಳ ಹತ್ತಿರದಲ್ಲೇ ಜೀವನ ಮಾಡಿದ್ದವರು. ನಿಮ್ಮ ಹತ್ತಿರ ಏನೂ ಇಲ್ದೇ ಇರೋವಾಗ್ಲೇ ನಿಮ್ಮ ಜೊತೆ ಇದ್ದವನು. ಮಾನವರಾಗಿ ಮನುಷತ್ವ ಇಟ್ಕೊಂಡು ಕೆಲಸ ಮಾಡಿ ಎಂದಿದ್ದಾರೆ.
ಪರಮೇಶ್ವರ್ ಹಿಂದೆ ಸೋತಿದರು. ನೀವು ಆಗ ಒಂದು ಮಾತು ಹೇಳಿದರಿ. ಸೋತವನು ಸತ್ತ ಅಂತ ನೀವೇ ಹೇಳಿದ್ದೀರಿ. ಈಗ ನಿಮ್ಕ ತನ್ಮ ಸೋತಿದ್ದಾರೆ, ಆಗ ಹೇಳಿದ್ದ ಮಾತು, ಈಗ ಹೊಡೆತ ಬಿದ್ದಿದೆ. ಯಾವ ಪೂಜೆ ಮಾಡಿದರೂ ಪ್ರಯೋಜನ ಇಲ್ಲ. ಯಾರ್ಯಾರೋ ಹತ್ತಿರ ಹೋಗಿ ಪೂಜೆ ಸಲ್ಲಿಸಿದ್ರೆ ನಡೀತದಾ?. ಇಬ್ಬರು ಬಗ್ಗೆ ಅಪಪ್ರಚಾರ ಮಾಡೋಕೆ ೧೯ ಕೋಟಿ ಕೊಟ್ಟಿದ್ದೀರ.ಇನ್ಮುಂದೆ ವ್ಯಕ್ತಿಯನ್ನ ತೇಜೋವಧೆ ಮಾಡೋದು ಬೀಡಿ.ಡಿಕೆ ಶಿವಕುಮಾರ್ ಹನಿಟ್ರ್ಯಾಪ್ ಟೀಮ್ ಇದು.ಜಾರಕಿಹೊಳಿ ಕೇಸ್ ನಲ್ಲಿ ಟೀಮ್ ಸಿಕ್ಕಿತ್ತು ಅಲ್ಲವೇ, ಅವರ್ಯಾರು ಅಂತ ಕೇಳಿ. ರಾತ್ರಿ ೨ ಗಂಟೆ ಗೆ ಹನಿಟ್ರ್ಯಾಪ್ ಟೀಮ್ ಮೀಟಿಂಗ್ ಆಗಿತ್ತು ಎಂದ್ರು.