ಮನೆ Latest News ಕುಮಾರಸ್ವಾಮಿ ಮೇಲೆ ಜಮೀನು ಒತ್ತುವರಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡಿದ್ದಾರೆ; ಶಾಸಕ ಎ ಮಂಜು ಹೇಳಿಕೆ

ಕುಮಾರಸ್ವಾಮಿ ಮೇಲೆ ಜಮೀನು ಒತ್ತುವರಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡಿದ್ದಾರೆ; ಶಾಸಕ ಎ ಮಂಜು ಹೇಳಿಕೆ

0

 

ಬೆಂಗಳೂರು: ಕುಮಾರಸ್ವಾಮಿ ಮೇಲೆ ಜಮೀನು ಒತ್ತುವರಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ.

ಇದು ‌ಒಳ್ಳೆಯದು ಅಲ್ಲ. ಸೆಲೆಬ್ರಿಟಿ ಗಳ ಜಾಗ ಒತ್ತುವರಿ‌ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಒತ್ತುವರಿ ಮಾಡಬೇಕಿದ್ರೆ ಸಿಎಂ ಆಗಿದ್ದಾಗಲೇ‌ ಮಾಡಿಕೊಳ್ಳಬೇಕಿತ್ತು. ಆದ್ರೆ ಅವರು ಹಾಗೇ‌ ಮಾಡಲಿಲ್ಲ. ಇವತ್ತು ಈ ಸರ್ಕಾರ ದ್ವೇಷದ ರಾಜಕಾರಣ ಬಿಡಬೇಕು. ಆದ್ರೆ ಬೇರೆಯಾದರೂ ಮಾಡಿದ್ರೆ ಕ್ರಮ‌ ತೆಗೆದುಕೊಳ್ಳಬೇಕು. ಆದ್ರೆ ಎಲ್ಲರ ಮನೆಯ ದೋಸೆಯೂ ತೂತೇ. ಎಲ್ಲರೂ ಪಾಲುದಾರಿಕೆ ಆಗಿದ್ದಾರೆ. ಇದಕ್ಕೆ ಕೋರ್ಟ್ ಆದೇಶ ಬೇಕಾಗಿಲ್ಲ. ಸರ್ಕಾರಕ್ಕೆ ಯಾವಾಗ ಬೇಕಾದರೂ ಅಳತೆ ಮಾಡಬಹುದು. ಅದನ್ನ ಬಿಟ್ಟು ಬೇರೆ ಲಾಭ ತೆಗೆದುಕೊಳ್ಳುತ್ತೇನೆ ಅಂದ್ರೆ ತಪ್ಪು ಎಂದಿದ್ದಾರೆ.

ಸೆಲೆಬ್ರಿಟಿ ಗಳು ಯಾರಾದರೂ ಆಗಿರಬಹುದು. ಎಲ್ಲರ‌ ಮೇಲೂ ಕ್ರಮ ಆಗಬೇಕಿದೆ. ಆದ್ರೆ ವೈಯಕ್ತಿಕವಾಗಿ ದ್ವೇಷ ಮಾಡಬಾರದು. ಇದೊಂದಕ್ಕೆ ಮಾತ್ರ ಎಸ್ ಐಟಿ ಯಾಕೆ ಬೇಕು. ಕುಮಾರಸ್ವಾಮಿ ಅವರೇ ಹೇಳಿದ್ದಾರೆ, ತಪ್ಪು ಆಗಿದ್ರೆ ಆಗಬೇಕು ಎಂದಿದ್ದಾರೆ. ಯಾರು ಭಯ ಬಿದ್ದಿಲ್ಲ, ಯಾರೂ ಹೇಳಿದ್ದಾರೆ. ಡಿಕೆಗೂ , ಕುಮಾರಸ್ವಾಮಿ ಗೂ ಒಂದೇ ಕಾನೂನು ಎಂದಿದ್ದಾರೆ.

ಸಚಿವರಿಗೆ ಹನಿಟ್ರ್ಯಾಪ್ ಯತ್ನ‌ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರು ಹೆಸರು ಹೇಳದೇ ಪ್ರಭಾವಿ ಅಂದ್ರೆ ಯಾರು?. ನೀವು ಹೆಸರು ಹೇಳಬೇಕು ಅಲ್ಲವೇ. ಯಾರು ಮಾಡಿಸಿದ್ದಾರೆ ಅಂದರೆ ಉತ್ತರ ನೀಡುತ್ತೇವೆ. ಯಾರೂ ಮಾಡಿದರೂ ತಪ್ಪು ಎಂದಿದ್ದಾರೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರ ನಿರಾಕರಣೆ ಮಾಡಿದ್ದು ಒಳ್ಳೆಯ ಸುದ್ದಿ: ವಿಧಾನಸೌಧದಲ್ಲಿ ಶಾಸಕ ಡಾ.ಸಿ. ಎನ್ ಅಶ್ವಥ್ ನಾರಾಯಣ್ ಹೇಳಿಕೆ

ಬೆಂಗಳೂರು; ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರ ನಿರಾಕರಣೆ ಮಾಡಿದ್ದು ಒಳ್ಳೆಯ ಸುದ್ದಿ ಎಂದು ವಿಧಾನಸೌಧದಲ್ಲಿ ಶಾಸಕ ಡಾ.ಸಿ. ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರ ನಿರಾಕರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಮಾಡಬೇಕೆಂಬ ಪ್ರಸ್ತಾಪ ತಿರಸ್ಕಾರ ಆಗಿದೆ. ಅದನ್ನ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರೋದು ಒಳ್ಳೆಯ ಸುದ್ದಿ.ರಾಮನಗರ ಜಿಲ್ಲೆಯಾಗಿ ಉಳಿಯಬೇಕು. ರಿಯಲ್ ಎಸ್ಟೇಟ್ ಹೆಸರಲ್ಲಿ ಮಾರಾಟ ಮಾಡಬೇಕು ಅನ್ನೋದು ದುರುದ್ದೇಶ. ಮೂಲಭುತ ಸೌಕರ್ಯ ಆದ್ಯತೆ ನೀಡದೆ ಹೆಸರು ಬದಲಾಯಿಸಿ . ವ್ಯಾಪಾರ ದೃಷ್ಟಿಯಿಂದ ಹೆಸರು ಬದಲಾವಣೆ ಮಾಡೋದಕ್ಕೆ ಹೊರಟಿದೆ.ಇದು ರಾಮನಗರ ಜಿಲ್ಲೆಗೆ ಮಾಡಿದ ಅವಮಾನ ಎಂದಿದ್ದಾರೆ.

ಇದೇ ವೇಳೆ ಶೋಷಿತ/ಅಹಿಂದ ವರ್ಗಕ್ಕೆ ಮೀಸಲಾತಿ ಹೆಚ್ಚಳ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿಕೆ ವಿಚಾರದ ಬಗ್ಗೆ  ಮಾತನಾಡಿದ ಅವರು ಸರ್ಕಾರ ನಿಶ್ಚಯ ಮಾಡಲಿ, ಏನ್ ಮಾಡುತ್ತೆ ನೋಡೋಣ. ಗುತ್ತಿಗೆಯಲ್ಲಿ ಎಸ್ ಸಿ ಎಸ್ ಟಿ ಮೀಸಲಾತಿ ತರಲಾಯ್ತು. ಧರ್ಮಾಧಾರಿತ ಮೀಸಲಾತಿ ಕೊಡಬೇಕು ಅಂತ ಸರ್ಕಾರ ಹೊರಟಿದೆ. ಹಿಂದುಳಿದ ವರ್ಗದ ಮೀಸಲಾತಿಯಲ್ಲಿ ಸೇರಿಸಿದೆ. ಇದು ಹಿಂದುಳಿದ ವರ್ಗಕ್ಕೆ ಮಾಡಿದ ಅವಮಾನ. 4 ಮಂದಿಯಿಂದ ಜೀವಭಯ ಇದೆ ಎಂದು ಶಾಸಕ ಮುನಿರತ್ನ ಆರೋಪದ ಬಗ್ಗೆ ಮಾತನಾಡಿ  ಎಲ್ಲಾ ಶಾಸಕರಿಗೆ ಗನ್ ಮ್ಯಾನ್ ಕೊಟ್ಟಿದ್ದಾರೆ. ಮುನಿರತ್ನ ಅವರಿಗೆ ಯಾಕೆ ಕೊಟ್ಟಿಲ್ಲ?.ಅವರಿಗೂ ಗನ್ ಮ್ಯಾನ್ ಕೊಡಲಿ. ಗೃಹಲಕ್ಷ್ಮಿ ವಿರೋಧಿಸಿದವರಿಗೆ ಶಾಪ ತಟ್ಟುತ್ತೆ ಎಂಬ ಶಾಸಕ ರಂಗನಾಥ್ ಹೇಳಿಕೆ‌ಗೆ ಪ್ರತಿಕ್ರಿಯಿಸಿ ಗೃಹಲಕ್ಷ್ಮಿಯನ್ನ ಯಾರು ವಿರೋಧಿಸಿಲ್ಲ, ಎಲ್ಲರಿಗೂ ಕೊಡಿ. ಆದರೆ ತಿಂಗಳು ತಿಂಗಳು ಸರಿಯಾಗಿ ಕೊಡಲಿ. ಅದು ಸಂಬಳನಾ ಕೊಡೊದಕ್ಕೆ ಅಂದಿರೋದು ಆಡಳಿತ ಪಕ್ಷದ ಸಚಿವರು, ಶಾಸಕರು. ಅದು ಅವರ ಜೇಬಿನಿಂದ ಕೊಡ್ತಿದ್ದೀರಾ.ತಿಂಗಳು ತಿಂಗಳು ಕೊಟ್ಟು, ಅವರ ಅಕೌಂಟ್ ಗೆ ಹೋಗೊ ಹಾಗೆ ಮಾಡಿ. ಚುನಾವಣೆ ಮೊದಲು ಕೊಟ್ಟು ಓಟ್ ಹಾಕಿಸಿಕೊಳ್ಳೋದು ಅಲ್ಲ ಎಂದಿದ್ದಾರೆ.