ಮನೆ Latest News ಗುತ್ತಿಗೆಯಲ್ಲಿ ಮುಸಲ್ಮಾನರಿಗೆ 4% ಮೀಸಲಾತಿ ಕೊಟ್ಟಿದ್ದಕ್ಕೆ ಸದನದ ಒಳಗೆ, ಹೊರಗೂ ಹೋರಾಟ ಮಾಡ್ತೀವಿ;: ರಾಜ್ಯ ಬಿಜೆಪಿ...

ಗುತ್ತಿಗೆಯಲ್ಲಿ ಮುಸಲ್ಮಾನರಿಗೆ 4% ಮೀಸಲಾತಿ ಕೊಟ್ಟಿದ್ದಕ್ಕೆ ಸದನದ ಒಳಗೆ, ಹೊರಗೂ ಹೋರಾಟ ಮಾಡ್ತೀವಿ;: ರಾಜ್ಯ ಬಿಜೆಪಿ ಕಚೇರಿಯಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

0

ಬೆಂಗಳೂರು; ಗುತ್ತಿಗೆಯಲ್ಲಿ ಮುಸಲ್ಮಾನರಿಗೆ 4% ಮೀಸಲಾತಿ ಕೊಟ್ಟಿದ್ದಕ್ಕೆ ಸದನದ ಒಳಗೆ, ಹೊರಗೂ ಹೋರಾಟ ಮಾಡ್ತೀವಿ ಎಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಗುತ್ತಿಗೆಯಲ್ಲಿ ಮುಸಲ್ಮಾನರಿಗೆ 4% ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು ಈಗಾಗಲೇ ಮುಸ್ಲಿಂಮರಿಗೆ 4% ಮೀಸಲಾತಿ ಈ ಹಿಂದೆ ಇತ್ತು. ಧಾರ್ಮಿಕ ಮೀಸಲಾತಿ ಕೊಡೋಕೆ ಸಾಧ್ಯ ಇಲ್ಲ. ಆ ರೀತಿ‌ ಧಾರ್ಮಿಕ ಮೀಸಲಾತಿ ಕೊಟ್ಟರೆ ಸಂವಿಧಾನ ವಿರೋಧಿ ನಡೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಈ ಮೀಸಲಾತಿ ಹಿಂದೆ ಪಡೆಯಲಾಗಿತ್ತು.. ಕಾಂಗ್ರೆಸ್ ಬಂದ್ಮೇಲೆ ಧಾರ್ಮಿಕ ಮೀಸಲಾತಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಗುತ್ತಿಗೆಯಲ್ಲಿ 4% ಮೀಸಲಾತಿ ಕಾನೂನು ಬಾಹಿರ. ರಾಷ್ಟ್ರೀಯ ನಾಯಕರು ಇದಕ್ಕೆ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಸದನದ ಒಳಗೆ, ಹೊರಗೂ ಹೋರಾಟ ಮಾಡ್ತೀವಿ ಎಂದಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ವೋಟ್ ಬ್ಯಾಂಕಿಂಗ್ ಯಥಾಸ್ಥಿತಿಯಾಗಿ ಉಳಿಸಿಕೊಳ್ಳಲು ಹೊರಟಿದೆ. ಮುಸಲ್ಮಾರಿಂದಲೇ ದೇಶಕ್ಕೆ ಗಂಡಾಂತರ ಅಂತ ನಾನು ಹೇಳೊಲ್ಲ. ಆದರೆ ಮುಸ್ಲಿಂ ಮನಸ್ಥಿತಿ ಇರುವವರಿಂದ ದೇಶಕ್ಕೆ ಕಂಟಕ ಇದೆ. ಬಿಡದಿಯಲ್ಲಿ ದೇಶ ವಿರೋಧ ಬರಹ ಪತ್ತೆ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಇಂದು ಕಾನೂನು ಸುವ್ಯವಸ್ಥೆ ಕೆಟ್ಟಿದೆ. ತನ್ನದೇ ಆದ ಶಕ್ತಿ‌ ಕೆಲವರಿಗೆ ಬಂದಿದೆ. ಸರ್ಕಾರ ತನ್ನ ಕಾರ್ಯಕರ್ತರನ್ನ ಕಾಪಾಡಿಕೊಳ್ಳಬೇಕು.ಕಾರ್ಯಕರ್ತರ ಜೇಬು ತುಂಬಬೇಕು ಅಂತ ದೇಶ, ರಾಜ್ಯಕ್ಕಿಂತ ಕಾರ್ಯಕರ್ತರೇ ಹೆಚ್ಚು ಅಂತ ಹೊರಟಿದೆ ಎಂದರು.

ಒಳ ಮೀಸಲಾತಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಅವರು ಇದು ಬಹು ದಿನಗಳ ಹೋರಾಟ. ನಮ್ಮ ಸರ್ಕಾರ ಒಳ ಮೀಸಲಾತಿ ಘೋಷಣೆ ಮಾಡಿದೆ.ಕೇಂದ್ರಕ್ಕೆ ನಮ್ಮ‌ ಸರ್ಕಾರ ಶಿಫಾರಸ್ಸು ಮಾಡಿತ್ತು.ಈಗ ಸುಪ್ರೀಂ ಕೋರ್ಟ್ ಆದೇಶ ಆಗಿದೆ.ಬೇರೆ ರಾಜ್ಯಗಳಲ್ಲಿ ಒಳ ಮೀಸಲಾತಿ ಘೋಷಣೆ ಮಾಡಿದ್ದಾರೆ. ಕರ್ನಾಟಕದಲ್ಲಿ ಮಾಡೋಕೆ ಇವರಿಗೆ ಏನು ತೊಂದರೆ ಆಗಿದೆ?.ಬೀದಿ ಬೀದಿಯಲ್ಲಿ ರಂಪಾಟ ಶುರುವಾಗಿದೆ,.ಒಳ ಮೀಸಲಾತಿ ಆಗಲೇಬೇಕು.ಅನ್ಯಾಯ ಆದವರು ಹೋರಾಟ, ಬೇಡಿಕೆ ಇಡುವುದು ಸಹಜ ಎಂದಿದ್ದಾರೆ.

ಡಿಕೆ ಶಿವಕುಮಾರ್ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ಟಾಂಗ್ ಕೊಟ್ಟಿದ್ದು ಜೈನರನ್ನೆಲ್ಲಾ ನೆಪ‌ ಮಾಡಿಕೊಂಡಿದ್ದಾರೆ ಅವರು ಅಷ್ಟೇ. ಆದರೆ ಅವರ ಉದ್ದೇಶ ಕೇವಲ ಮುಸ್ಲಿಮರನ್ನು ಗಮನದಲ್ಲಿಟ್ಟುಕೊಂಡು ಮೀಸಲು ಕೊಡೋದಾಗಿದೆ. ತುಷ್ಟೀಕರಣ ಭಾಗವಾಗಿ ಇದು ನಡೀತಿದೆ.ನಮ್ಮ ಸರ್ಕಾರ ಬಂದಾಗ ಯಾರನ್ನು ಎಲ್ಲಿ ಇಡಬೇಕು ಇಡ್ತೇವೆ ಎಂದ್ರು.ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ.4% ಮೀಸಲಾತಿ ವಿಚಾರದ ಬಗ್ಗೆ ಮಾತನಾಡುತ್ತಾ  ನಿನ್ನೆ, ಮೊನ್ನೆ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸ್ತಿದೆ.ನಮಗೆ ಯಾರ ಹಂಗೂ ಬೇಕಿಲ್ಲ.1947ರಲ್ಲಿ ನಮಗೆ ಸ್ವಾತಂತ್ರ್ಯ ಬಂದಿದೆ, ದೇಶ ವಿಭಜನೆ ಮಾಡಲಾಗಿದೆ.ನೂರು ವರ್ಷಗಳ ಸಂಧರ್ಭದಲ್ಲಿ ಮುಸ್ಲಿಂ ರಾಷ್ಟ್ರ ಮಾಡ್ತೀವಿ ಅಂತ ಯಾರು ಹೇಳಿರೋದು.?.ಓಲೈಕೆ ರಾಜಕಾರಣ ಮಾಡಲು ಕಾಂಗ್ರೆಸ್ ಮುಂದಾಗಿದೆ.ಮುಸ್ಲಿಂ ಸಮುದಾಯದಿಂದ ದೇಶಕ್ಕೆ ಗಂಡಾಂತರ ಇಲ್ಲ. ಆದರೆ ಮುಸ್ಲಿಂ ಮನಸ್ಥಿತಿ ಇರೋ ಹಿಂದೂಗಳಿಂದ ದೇಶಕ್ಕೆ ಗಂಡಾಂತರವಾಗಿದೆ ಎಂದಿದ್ದಾರೆ.