ಮನೆ Latest News ಎರಡೆರಡು ಕಡೆ ತನಿಖೆ ಆಗೋದು ಬೇಡ ಅಂತಾ ಒಂದು ಕಡೆ ಮಾಡಿದ್ದಾರೆ; ಸಿಐಡಿ ತನಿಖೆ ವಾಪಾಸ್...

ಎರಡೆರಡು ಕಡೆ ತನಿಖೆ ಆಗೋದು ಬೇಡ ಅಂತಾ ಒಂದು ಕಡೆ ಮಾಡಿದ್ದಾರೆ; ಸಿಐಡಿ ತನಿಖೆ ವಾಪಾಸ್ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಎರಡೆರಡು ಕಡೆ ತನಿಖೆ ಆಗೋದು ಬೇಡ ಅಂತಾ ಒಂದು ಕಡೆ ಮಾಡಿದ್ದಾರೆ ಎಂದು ಸಿಐಡಿ ತನಿಖೆ ವಾಪಾಸ್ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಚೀಪ್ ಮಿನಿಸ್ಟರ್ ಆಫೀಸ್ ಕಡೆಯಿಂದ ಡಿಪಿಆರ್ ಗೆ ಆದೇಶ ಮಾಡಿದ್ರು . ಎರಡೆರಡು ಕಡೆ ತನಿಖೆ ಆಗೋದು ಬೇಡ ಅಂತಾ ಒಂದು ಕಡೆ ಮಾಡಿದ್ದಾರೆ.ಆದೇಶ ಮಾಡೋಕು ಯಾರ ಒತ್ತಡ ಇಲ್ಲ, ತೆಗೆಯೋಕೆ ಯಾರ ಒತ್ತಡ ನು ಇಲ್ಲ. ಒಂದೇ ವಿಷಯಕ್ಕೆ ಎರಡೆರಡು ಕಡೆ ಬೇಡ ಅಂತಾ. ಇನ್ನು ಸಿಎಂ, ಗೃಹ ಸಚಿವರು ರನ್ಯಾ ರಾವ್ ಮದುವೆಯಲ್ಲಿ ಭಾಗಿಯಾದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ  ಗರಂ ಆದ ಪರಮೇಶ್ವರ್  ಹೇ ಸಾವಿರ ಜನರ ಮದುವೆ ಹೋಗ್ತೆವೆ ಅಂತಾ ಉತ್ತರಿಸದೇ ಹೊರಟಿದ್ದಾರೆ ಗೃಹ ಸಚಿವ ಪರಮೇಶ್ವರ್.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸುದ್ದಿ ಗೋಷ್ಠಿ

ಬೆಂಗಳೂರು; ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ವಿಧಾನಸೌಧದಲ್ಲಿ ಸುದ್ದಿ ಗೋಷ್ಠಿ ನಡೆಸಿದ್ರು. ಈ ವೇಳೆ ಶಾಸಕರಾದ ಜವರಾಯಿಗೌಡ,ಹರೀಶ್ ಗೌಡ,ಸ್ವರೂಪ್ ಪ್ರಕಾಶ್, ಕರೆಮ್ಮ ಉಪಸ್ಥಿತಿರಿದ್ದರು.

ಈ ವೇಳೆ ಮಾತನಾಡಿದ ಜೆಡಿಎಲ್ ಪಿ ನಾಯಕ ಸುರೇಶ್ ಬಾಬು ಗ್ಯಾರಂಟಿ ಯೋಜನೆಗೆ ಜನರ ತೆರಿಗೆ ಹಣವನ್ನ ಬಳಸಿಕೊಳ್ತಿದೆ. ಕೊನೆಯ ಕಾಂಗ್ರೆಸ್ ಸರ್ಕಾರ ಅನಿಸುತ್ತೆ. ಭಾಗ್ಯದ ಸಮಿತಿಗಳನ್ನ ಮಾಡಿ ಜಿಲ್ಲಾ ಮಟ್ಟದಲ್ಲಿ ಕ್ಯಾಬಿನೆಟ್ ರ್ಯಕಿಂಗ್ ನೀಡಿ ೪೦ ಸಾವಿರ ಸಂಬಳ ಕೊಡಲು ಮುಂದಾಗಿದೆ. ಇಡೀ ರಾಜ್ಯವನ್ನೆ ಕಾಂಗ್ರೆಸ್ ಕಚೇರಿಯನ್ನಾಗಿ ಮಾಡ್ತಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನ ಜನರು ಅರ್ಥ ಮಾಡಿಕೊಳ್ಳಬೇಕು. ಸಂಬಳ ವೆಚ್ಚ ವರ್ಷಕ್ಕೆ ೧೨ ಕೋಟಿ ವಿನಿಯೋಗ ಆಗುತ್ತೆ. ಇದು ಕಾಂಗ್ರೆಸ್ ಹಣವಲ್ಲಾ ಜನರ ತೆರಿಗೆ ಹಣ. ಆಶ್ರಯ, ಆಸ್ಪತ್ರೆ, ಸೇರಿದಂತೆ ಹಲವು ಸಮಿತಿಗಳಿಗೆ ಶಾಸಕರು ಅಧ್ಯಕ್ಷರಿರುತ್ತಾರೆ.ಶಾಸಕರನ್ನ ಅದ್ಯಕ್ಷರನ್ನಾಗಿ ಮಾಡಿ ಸಂಬಳ ಅವರಿಗೆ ಕೊಡಿ ಅಂದ್ರು ಕೇಳ್ತಿಲ್ಲಾ. ಇದನ್ನ ಕಾರ್ಯಕರ್ತರಿಗೆ ಕೊಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಮೊಂಡ ಚರ್ಮದವರು. ಮಾಜಿ ಶಾಸಕರ ಮಕ್ಕಳನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.ಕಚೇರಿಯನ್ನ ಮಾಡಿ ಅಧಿಕಾರಿಗಳ ಜೊತೆ ಸಭೆ ಮಾಡ್ತಾರೆ ಇದರಿಂದ ಅಧಿಕಾರ ದುರುಪಯೋಗ ಆಗುತ್ತೆ. ವಿಜಯನಗರದಲ್ಲಿ ಸ್ವಂತ ಕಾರಿಗೆ ಕರ್ನಾಟಕ ಸರ್ಕಾರ ಬೋರ್ಡ್ ಹಾಕಿಕೊಂಡು ಓಡಾಡ್ತಿದ್ದಾರೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸರ್ಕಾರದ ಹೆಸರು ದುರ್ಬಳಕೆ ಆರೋಪದ ಬಗ್ಗೆ ಮಾತನಾಡಿದ ಅವರು ಖಾಸಗಿ ಕಾರ್ ಗೆ ಕರ್ನಾಟಕ ಸರ್ಕಾರದ ಎಂದು ಬೋರ್ಡ್ ಹಾಕಿರುವ ಆರೋಪದ ಬಗ್ಗೆ ಮಾತನಾಡಿ ಕುರಿ ಶಿವಮೂರ್ತಿ ವಿಜಯನಗರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷನ ಫೋಟೋ ದಾಖಲೆ ಬಿಡುಗಡೆ ಮಾಡಿದ್ದಾರೆ. ರನ್ಯಾರಾವ್ ಹಲವಾರ ಸಾರಿ ದುಬೈ ಗೆ ಹೋಗಿ ಬಂದಿದ್ದಾರೆ. ಐಪಿಎಸ್ ರಾಮಚಂದ್ರ ರಾವ್ ಮಗಳು ಅಂತ ಕರೆದುಕೊಂಡು ಬರೋದಕ್ಕೆ ವ್ಯವಸ್ಥೆ ಮಾಡಿದ್ದಾರೆ.ಈ ಸರ್ಕಾರಕ್ಕೆ ಮಾನ ಮರ್ಯಾದಿ ಇಲ್ಲ. ನೀವು ಮಾಡಿಲ್ವಾ ಅಂತ ಬಿಜೆಪಿಯವರನ್ನ ಕೇಳ್ತಾರೆ. ಅವರು ಮಾಡಿದ್ಕೆ ಅವರನ್ನು ಮೂಲೆಲ್ಲಿ ಕೂರಿಸಿ ನಿಮಗೆ ಅಧಿಕಾರ ಕೊಟ್ಟಿದ್ದಾರೆ ಜನ. ಇಗ ತನಿಖಾ ಸಂಸ್ಥೆ ರಚನೆ ಮಾಡಿದ್ದಾರೆ. ಇದರ ಬಗ್ಗೆ ನಮಗೆ ಅನುಮಾನ ಇದೆ.ಸಿಬಿಐಗೆ ವಹಿಸಿ ಅನ್ನೋದು ನಮ್ಮ ಆಗ್ರಹ. ದುಬೈಗೆ ಚಿನ್ನ ತಗೊಂದು ಹೋಗಿಡು ನಿನ್ನ ಮೇಲೆ ಯಾವುದೆ ಅಪಾದನೆ ಇಲ್ಲಾ ಅಂತ ಮಾಡೊದಕ್ಕು ಹಿಂದುಮುಂದು ನೋಡಲ್ಲ ಎಂದಿದ್ದಾರೆ.

ರನ್ಯಾರಾವ್ ಪ್ರಕರಣ ನಡೆಯುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಡ್ರಗ್ಸ್ ಸಿಗುವಂತಾಗಿದೆ. ಇದು ಕಾನೂನಿನ ವೈಫಲ್ಯ. ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡ್ತಿಲ್ಲ. ಅಧಿಕಾರಿಗಳು ಸಮರ್ಥರಿದ್ದಾರೆ. ಆದರೆ ಅಧಿಕಾರಿಗಳನ್ನ ಕಪಿಮುಷ್ಟಿಯಲ್ಲಿ ಇಟ್ಟಿಕೊಂಡಿದ್ದಾರೆ ಎಂದರು.ಮೊದಲ ಬಾರಿಗೆ ಗೆದ್ದ  ಶಾಸಕರು ಊಟಕ್ಕೆ ಸೇರಿದ್ದ ವಿಚಾರದ ಬಗ್ಗೆ ಮಾತನಾಡಿ ಪಕ್ಷಾತೀತವಾಗಿ ಸೇರಿ ಊಟಕ್ಕೆ ಸೇರಿ ಚರ್ಚೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಸೇರಿದ್ರು ಸ್ನೇಹಿತರಾಗಿ ಚರ್ಚೆ ಮಾಡಿದ್ದಾರೆ. ಮುಂದೆ ಎಲ್ ಎಲ್ ಎ ಕ್ಲಬ್ ಮಾಡ್ತಿನಿ ಅಂತಿದ್ದಾರೆ.ನಮ್ಮ ಶಾಸಕರೆಲ್ಲಾ ಒಂದಾಗಿದ್ದಾರೆ, ಪ್ರಾಮಾಣಿಕವಾಗಿದ್ದಾರೆ. ಜಿಟಿ ದೇವೇಗೌಡರಿಗೆ ಸ್ವಲ್ಪ‌ ಮುನಿಸಿದೆ, ದೇವೇಗೌಡ್ರು ಇದನ್ನ ಸರಿ ಮಾಡ್ತಾರೆ ಎಂದಿದ್ದಾರೆ.