ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭೇಟಿಯಾಗಿದ್ದು ಸುಮಾರು ೨೦ ನಿಮಿಷ ಕಾಲ ಖರ್ಗೆ ಜೊತೆ ಡಿ ಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಸುಮಾರು ೨೦ ನಿಮಿಷ ಕಾಲ ಖರ್ಗೆ ಜೊತೆ ಡಿಕೆ ಶಿವಕುಮಾರ್ ಚರ್ಚೆ ಮಾಡಿದ್ದಾರೆ. ಬೆಳಗ್ಗೆ ೮ ಗಂಟೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಸಿಎಂ ಭೇಟಿಯಾಗಿದ್ದಾರೆ. ಖರ್ಗೆ-ಡಿಕೆ ಶಿವಕುಮಾರ್ ಭೇಟಿ ಕುತೂಹಲ ಕೆರಳಿಸಿದೆ.
ಇನ್ನು ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗುತ್ತಿಗೆದಾರರ ಭೇಟಿ ವಿಚಾರದ ಬಗ್ಗೆ ಮಾತನಾಡಿ ನಾವು ಪ್ರೆಯಾರಟಿ ಮೇಲೆ ನೋಡುತ್ತೇವೆ. ಬಿಜೆಪಿ ಸರ್ಕಾರ ಒಂದು ಕೋಟಿ ೨೦ ಲಕ್ಷ ಕೆಲಸ ನಡೀತಿದೆ.ನಾವು ಬಿಲ್ ಕೋಡೋಕೆ ಅವಕಾಶ ಇರೋದೇ ೬ ಸಾವಿರ ಕೋಟಿ ರೂಪಾಯಿ. ಕೇಂದ್ರದಿಂದ ೫೩೦೦ ಕೋಟಿ ಬರಬೇಕಿತ್ತು, ಆದ್ರೆ ಬಂದಿಲ್ಲ.ಸೀನಿಯಾರಟಿ, ಮತ್ತು ಸಣ್ಣ ಸಣ್ಣ ಬಿಲ್ ಕ್ಲಿಯರ್ ಮಾಡುತ್ತೇವೆ ಎಂದಿದ್ದೇವೆ.ಹಣ ಬಂದ್ಮೇಲೆ ಎಲ್ಲಾ ಹಣ ರಿಲೀಸ್ ಮಾಡುತ್ತೇನೆ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಜೊತೆ ಭೇಟಿ ವಿಚಾರದ ಬಗ್ಗೆ ಮಾತನಾಡಿ ನೋಡಿ.. ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡದೇ ಬಿಜೆಪಿ ಆಫೀಸ್ ಗೆ ಹೋಗಿ ಭೇಟಿ ಆಗಬೇಕಾ. ಎಐಸಿಸಿ ಅಧ್ಯಕ್ಷರಿಗೆ ಗೌರವ ಕೊಡದೇ ಇನ್ನ್ಯಾರಿಗೆ ಗೌರವ ಕೊಡಬೇಕು.ಇದು ನನ್ನ ಡೌಟೀ, ಪಕ್ಷದ ವಿಚಾರ ಅಷ್ಟೇ. ಹೊಸ ಕಚೇರಿ ಭೂಮಿ ಪೂಜೆ ಇದೆ.ಹೀಗಾಗಿ ಅವರನ್ನ ಆಹ್ವಾನ ನೀಡಬೇಕು, ಟೈಮ್ ಕೊಡಿ ಎಂದು ಕೇಳಿ ಕೊಂಡಿದ್ದೇವೆ.ಅದು ಬಿಟ್ಟರೇ ಬೇರೆ ಏನಿಲ್ಲ.ಅರ್ಥ ಏನಾದರೂ ಮಾಡಿಕೊಳ್ಳಲಿ, ಸಾವಿರ ಚರ್ಚೆ ಮಾಡಲೀ ಎಂದಿದ್ದಾರೆ.
ನಟ್ ಬೋಲ್ಟ್ ಹೇಳಿಕೆಗೆ ವ್ಯಾಪಾಕ ಆಕ್ರೋಶ ವಿಚಾರದ ಬಗ್ಗೆ ಮಾತನಾಡಿ ಟೀಕೆ ಮಾಡಲಿ ಎಂದೇ ನಾನು ಹೇಳಿರೋದು.ನಾನು ಎಷ್ಟು ಸಹಾಯ ಮಾಡಿದ್ದೇನೆ ಅನ್ನೋದು ನನಗೂ ಅವರಿಗೂ ಗೊತ್ತಿದೆ.ನಾನು ಅವರಿಗೆ ಹೇಳುತ್ತಿದ್ದೇನೆ, ನೆಲ ಜಲ ಭಾಷೆ ವಿಚಾರ ದಲ್ಲಿ ಎಲ್ಲೂ ಒಟ್ಟಿಗೆ ಇರಬೇಕು.ಚಿತ್ರೋತ್ಸವ ಮಾಡುತ್ತಿರೋದು ಅವರು ಬೆಳೆಯಲಿ ಅಂತ, ಆದ್ರೆ ಅವರೇ ಪ್ರಚಾರ ಮಾಡಬೇಕು, ನಾವು ಮಾಡೋದಕ್ಕೆ ಆಗುತ್ತಾ?. ನಾಗಭರಣ ಅವರಿಗೆ ಆಹ್ವಾನ ಮಾಡಿರದೇ ಇರಬಹುದು.ಪಾಪಾ.. ಯಾರ ಇಲಾಖೆಯದ್ದು ತಪ್ಪಿದೆಯೋ ಗೊತ್ತಿಲ್ಲ.ಅದು ಅವರ ಕಾರ್ಯಕ್ರಮ, ಟೀಕೆ ಮಾಡೋದು ಗೊತ್ತಿತ್ತು, ಟೀಕೆ ಮಾಡಿದ್ದು ಎಚ್ಚರಿಕೆಗೆ ಅಷ್ಟೇ ಬೇರೇನಿಲ್ಲ.ನಾವು ತಪ್ಪು ಮಾಡಿದ್ರೆ ನಾವು ಕರೆಕ್ಟ್ ಮಾಡಿಕೊಳ್ಳೋಣ, ಅವರದ್ದು ತಪ್ಪಿದ್ರೆ ಅವರು ಸರಿ ಮಾಡಿಕೊಳ್ಳಲಿ.ಅವರು ಪ್ರಮೋಟ್ ಮಾಡಿಕೊಳ್ಳಬೇಕು ಅಂದ್ರೆ ಸರ್ಕಾರನೂ ಬೇಕು, ಜನವೂ ಬೇಕು ಎಂದಿದ್ದಾರೆ.
ಸರ್ಕಾರಿ ಕಚೇರಿಗಳಿಗೆ ಟ್ಯಾಕ್ಸ್ ಪಾವತಿಸುವಂತೆ ಬಿಬಿಎಂಪಿ ನೋಟಿಸ್ ವಿಚಾರದ ಬಗ್ಗೆ ಮಾತನಾಡಿ ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟ್ ಮಾಡಿಕೊಳ್ಳಲೇಬೇಕು.ಅದು ಅವರ ಡ್ಯೂಟಿ.ಸರ್ಕಾರಿ ಅಧಿಕಾರಿಗಳ ಟ್ಯಾಕ್ಸ್ ತುಂಬಬೇಕು.ತೆರಿಗೆ ಕನೆಕ್ಟ್ ಮಾಡಲೇಬೇಕು, ಅದನ್ನ ಅವರು ಮಾಡುತ್ತಾರೆ ಎಂದಿದ್ದಾರೆ.