ಬೆಂಗಳೂರು: ಕಮಿಷನ್ ಕೋಡೋದೇ ಬೇಡ, ಲಂಚ ಕೋಡೋದು ಅಪರಾಧಿ ಜೊತೆ ತೆಗೆದುಕೊಳ್ಳೋದು ಅಪರಾಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ನಿಯೋಗ ಭೇಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಏಪ್ರಿಲ್ ನಲ್ಲಿ ಕೊಡೋಣ ಎಂದು ಹೇಳಿದ್ದೆ. ಅವರು ಹೇಳಿದ ರೀತಿ ಆಗಲ್ಲ. 3೦ ಸಾವಿರ ಕೋಟಿ ಹಣ ಬಾಕಿ ಇದೆ, ಅದನ್ನು ಕೊಡಿ ಎಂದು ಕೇಳಿದ್ದಾರೆ.ಆದ್ರೆ ಅದು ಆಗದಿರೋ ಕೆಲಸ.ಏಪ್ರಿಲ್ ನಂತ್ರ ಕೋಡೋಣ ಎಂದಿದ್ದೇನೆ ಎಂದು ತಿಳಿಸಿದ್ರು.
ಕಮಿಷನ್ ಇದೆ ಎಂಬ ನಿಯೋಗದ ಆರೋಪದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಭೇಟಿ ಆದ್ರೆ ಭೇಟಿ ಆಗಲಿ, ಯಾರು ಯಾರನ್ನಾದರೂ ಭೇಟಿ ಆಗಲೀ. ಬಾಕಿ ಉಳಿದುಕೊಂಡಿದ್ದು ಯಾರಿಂದ?. ಬಜೆಟ್ ನಲ್ಲಿ ಹಣ ಇಡದೇ ಟೆಂಡರ್ ಕರಿದ್ದಾರೆ.. ಹೀಗಾಗಿ ನಾವು ಹೊಣೆನಾ ಅದಕ್ಕೆ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಕೊಡಬೇಕು ಅಲ್ಲ.ಕಮಿಷನ್ ಕೋಡೋದೇ ಬೇಡ, ಲಂಚ ಕೋಡೋದು ಅಪರಾಧಿ ಜೊತೆ ತೆಗೆದುಕೊಳ್ಳೋದು ಅಪರಾಧ. ಕಮಿಷನ್ ನಾನೂ ತೆಗೆದುಕೊಂಡಿಲ್ಲ. ನಾನು ಯಾರಿಗೂ ಹಣ ಕೇಳಿಲ್ಲ ಎಂದಿದ್ದಾರೆ.
ಇನ್ನು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಹೇಳಿಕೆ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಾನು ಮತ್ತೆ ಹೇಳುತ್ತೇನೆ.ಇದು ಹೈಕಮಾಂಡ್ ತೀರ್ಮಾನ. ಇದು ಮೊಯ್ಲಿ ಹೇಳಿದ್ದು, ಹೈಕಮಾಂಡ್ ತೀರ್ಮಾನ ಇಷ್ಟೇ. ಐ ವಿಲ್ ಗೋ ಬೈ ದಿ ಹೈಕಮಾಂಡ್ ಡೈರೆಕ್ಷನ್. ಜಂಟಿ ಬ್ಯುಸಿನೆಸ್ ಕಮಿಟಿ ಸಭೆ ಇತ್ತು. ಎಲ್ಲಾ ವಿರೋಧ ಪಕ್ಷ ದವರು ಇದ್ದರು. ಮೂರು ಪಕ್ಷದವರು ಇದ್ದಾರೆ.ಮೂರು ದಿನ ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ಮಾಡಬೇಕು. ಶಿರಾ ಶಾಸಕ ಜಯಚಂದ್ರ ಅವರು ರಾಜ್ಯಪಾಲರ ಭಾಷಣದ ಮೇಲೆ ಸೂಚನೆ ಮಾಡ್ತಾರೆ.ಆ ಮೇಲೆ ನಯನಾ ಮೊಟಮ್ಮ ಅವರು ಅನುಮೋದನೆ ಮಾಡ್ತಾರೆ . ಮೂರು ದಿನ ಚರ್ಚೆ ನಡೆಯುತ್ತದೆ.ನಂತ್ರ ಸೋಮವಾರ ರಾಜ್ಯಪಾಲರ ಭಾಷಣದ ಮೇಲೆ ನಾನು ಉತ್ತರ ಕೊಡುತ್ತೇನೆ. ೭ ರಂದು ನಾನು ಬಜೆಟ್ ಮಂಡಿಸುತ್ತೇನೆ .ನಾಲ್ಕು ದಿನ ಚರ್ಚೆ ಆಗುತ್ತದೆ. ೧೮ ನೇ ತಾರೀಖಿನವರಿಗೂ ಚರ್ಚೆ ಆಗುತ್ತದೆ.೧೯ ಮತ್ತು ೨೦ ರಂದು ನಾನು ಉತ್ತರ ನೀಡುತ್ತೇನೆ ಎಂದಿದ್ದಾರೆ.
ಬಜೆಟ್ ಮೇಲೆ ಜನ ನಿರೀಕ್ಷೆ ಹೆಚ್ಚಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬಜೆಟ್ ಮಂಡಿಸಿದ್ಮೇಲೆ ನೋಡಿ.ಇದೊಂದು ಸಿಕ್ರೇಟ್ ಡಾಕ್ಯೂಮೆಂಟ್ .ಅಲ್ಲಿವರೆಗೂ ಇದನ್ನ ಡಿಸ್ಕ್ಲೋಸ್ ಮಾಡೋದಕ್ಕೆ ಆಗಲ್ಲ ಎಂದಿದ್ದಾರೆ,