ಬೆಂಗಳೂರು; ಕಾಂಗ್ರೆಸ್ ಕಾರ್ಯಕ್ರಮಕ್ಕೆ ನಟರು ಯಾಕೆ ಬರಬೇಕು? ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಮುನಿರತ್ನ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಡಿಸಿಎಂ ಡಿ ಕೆ ಶಿವಕುಮಾರ್ ನಿನ್ನೆ ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂದಿದ್ದಾರೆ. ಸರ್ಕಾರದಿಂದ ಎಲ್ಲ ಸವಲತ್ತು ಕೊಡಬೇಕು ಸಿಗದಂತೆ ಮಾಡ್ತೇನೆ ಎಂದಿದ್ದಾರೆ. ಕನ್ನಡ ಚಿತ್ರರಂಗ ಅವರದ್ದಲ್ಲ, ಚಿತ್ರರಂಗಕ್ಕೆಒಂದು ಇತಿಹಾಸ ಇದೆ. ಇಷ್ಟು ಹಗುರವಾಗಿ ಟೈಟ್ ಮಾಡ್ತೇನೆ ಅಂದ್ರೆ, ನಿಮ್ಮ ಕಾಲೇಜಲ್ಲಿ ನಿಮ್ಮ ತೋಟದಲ್ಲಿ ಕೆಲಸ ಮಾಡುವವರು ತಪ್ಪು ಮಾಡಿದರೆ ಟೈಟ್ ಮಾಡಿ.ನೆಲ ಜಲ ಭಾಷೆಗೋಸ್ಕರ ಹೋರಾಟ ಮಾಡುವವರು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಫೋಟೋ ಯಾಕೆ ಇಟ್ಕೊಂಡು ಹೋರಾಟ ಮಾಡಿದಿರಿ? ನೀವು ಮೇಕೆದಾಟು ನಗಾರಿ ಹೊಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಲು ಕಾಂಗ್ರೆಸ್ ಬಾವುಟ ಇಟ್ಕೊಂಡು ಚಾಲನೆ ಕೊಟ್ಟಿದ್ದೀರಿ.ಕಾಂಗ್ರೆಸ್ ಕಾರ್ಯಕ್ರಮಕ್ಕೆ ನಟರು ಯಾಕೆ ಬರಬೇಕು?.ಕನ್ನಡದ ಬಾವುಟ ಇಟ್ಟುಕೊಂಡು ಹೋರಾಟ ಮಾಡಿದ್ರಾ?. ಅಧಿಕಾರಕ್ಕೋಸ್ಕರ ನೀವು ಪಾದಯಾತ್ರೆ ಮಾಡಿದ್ದು. ಅದಾದಮೇಲೆ ಮೇಲೆ ಸರ್ಕಾರ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸೋನಿಯಾ ರಾಹುಲ್ ಹೇಳಿದಂತೆ ತಮಿಳುನಾಡು ಕೇಳುತ್ತದೆ. ಕರ್ನಾಟಕಕ್ಕೆ ಅನುಕೂಲ ಆಗಲಿ ಅಂತ ತಮಿಳುನಾಡಿನ ಜೊತೆಗೆ ಕೂಡಿ ಪ್ರಧಾನಿಗೆ ಮನವಿ ಕೊಡಿ ಎಂದ ಅವರು ಕಾಂಗ್ರೆಸ್ ಬಾವುಟ ಹಿಡಿದುಕೊಂಡು ನಟ್ಟು ಬೋಲ್ಟು ಮಾತಾಡ್ತೀರಲ್ಲ ಇದನ್ನು ಬಿಡಿ. ನಾನು ನಿಮ್ಮ ಜೊತೆಗೆ ೨೦ ವರ್ಷದಿಂದ ಸ್ನೇಹಿತ.ನಾವಿಬ್ಬರೂ ಒಟ್ಟಿಗೆ ಬೆಳೆದವರು, ದೇವರು ಈ ಮಟ್ಟಕ್ಕೆ ಕೊಂಡೊಯ್ದ ಮೇಲೆ ಹೇಗೆ ಬಿಹೇವ್ ಮಾಡಬೇಕು. ಕರ್ನಾಟಕದ ಜನತೆ ನಿಮ್ಮ ನಡವಳಿಕೆ ಸರಿ ಮಾಡಿಕೊಳ್ಳಿ ಅಂತ ಹೇಳ್ತಿದ್ದಾರೆ.ದೇವೇಗೌಡರು ನಿಮ್ಮ ನಟ್ಟು ಬೋಲ್ಟ್ ಟೈಟ್ ಮಾಡಿದ್ರೆ ನೀವೆಲ್ಲಿ ಇರ್ತಾ ಇದ್ರಿ? ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡ್ರು ನಿಮ್ಮ ನಟ್ಟು ಬೋಲ್ಟು ಟೈಟ್ ಮಾಡಿಲ್ಲ ಅದಕ್ಕೆ ಇಷ್ಟು ಬೆಳೆದಿದ್ದೀರಿ. ಅದಕ್ಕೆ ರೇವಣ್ಣ ಮೇಲೊಂದು ಕೇಸ್, ಸೂರಜ್ ಮೇಲೊಂದು ಕೇಸ್. ನನ್ನ ರೇಪಿಸ್ಟ್ ರೇಪಿಸ್ಟ್ ಅಂತ ಕರೆದಿದ್ದೀರಿ ಡಿ ಕೆ ಸುರೇಶ್. ನಾನು ಅತ್ಯಾಚಾರ ಮಾಡಿಲ್ಲ ಅಂತ ಪ್ರಮಾಣ ಮಾಡ್ತೇನೆ. ನೀವೂ ಪ್ರಮಾಣ ಮಾಡಿ ಶತ್ರು ಸಂಹಾರ ಯಾಗ ಮಾಡುವ ಪ್ರತ್ಯಂಗಿರ ದೇವಸ್ಥಾನದಲ್ಲಿ ಪ್ರಮಾಣ ಮಾಡಿ.ಕುಸುಮಾ ಮತ್ತು ಹನುಮಂತರಾಯಪ್ಪ ಸುಳ್ಳು ಕೇಸ್ ಹಾಕಿಸಿಲ್ಲ ನನ್ನ ಮೇಲೆ ಎಂದು ಪ್ರಮಾಣ ಮಾಡಿ. ನಾನು ಮದುವೆಯಾಗಿ ೩೯ ವರ್ಷ ಆಯ್ತು.ನಿಮ್ಮ ದ್ವೇಷ ನನ್ನ ಮೇಲಿರಲಿ ಸುಳ್ಳು ಕೇಸ್ ಹಾಕಿಸಿದ್ದೀರಿ. ಭೂಮಂಡಲದ ಯಾವುದೇ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡ್ತೇನೆ ನಾನು ಅತ್ಯಾಚಾರ ಮಾಡಿಲ್ಲ ಎಂದು. ನಾನು ನಿಮ್ಮಣ್ಣ ೨೦ ನೇ ವರ್ಷದಿಂದ ಸ್ನೇಹಿತರು ಡಿಕೆ ಸುರೇಶ್ ಅವರೇ. ನಾವಿಬ್ಬರೂ ಸ್ನೇಹಿತರಾಗಿದ್ದಾಗ ಡಿಕೆ ಸುರೇಶ್ ಬೆಂಗಳೂರಿಗೇ ಬಂದಿರಲಿಲ್ಲ. ನನಗೆ ಜೈಲು ತೋರಿಸಿದ್ದು ಡಿಕೆ ಸಹೋದರರು, ಡಿಕೆಶಿಗೆ ದೇವರೇ ತಿಹಾರ್ ಜೈಲು ತೋರಿಸಿದ್ದಾನೆ ಎಂದರು.
ಇನ್ನು ಇದೇ ವೇಳೆ ಮೇಕೆದಾಟು ಪಾದಯಾತ್ರೆಯ ಫೋಟೋ ರಿಲೀಸ್ ಮಾಡಿದ್ದಾರೆ ಮುನಿರತ್ನ. ಕಾಂಗ್ರೆಸ್ ಬಾವುಟ ಕಾಂಗ್ರೆಸ್ ಶಾಲು ಹಾಕಿಕೊಂಡ ನಾಯಕರ ಫೋಟೋ ರಿಲೀಸ್ ಮಾಡಿದ್ದಾರೆ. ಇದೇ ವೇಳೆ ನೀವು ಅಧಿಕಾರಕ್ಕೆ ಮಾಡಿದ ಹೋರಾಟ ಅದು.ಅದಕ್ಕೆ ಚಿತ್ರರಂಗ ಸಾಥ್ ಕೊಡಬೇಕಾಗಿತ್ತಾ? ನೀವು ಮುಖ್ಯಮಂತ್ರಿ ಸ್ಥಾನ ಕೊಡದಿದ್ರೆ ಏಕನಾಥ್ ಶಿಂಧೆ ಆಗ್ತೇನೆ ಅಂತಾ ರಿವರ್ಸ್ ಸ್ಟ್ರಾಟಜಿ ಮಾಡ್ತಿದ್ದಾರೆ ಅಷ್ಟೇ. ಇವರು ಏಕವ್ಯಕ್ತಿ ಆಗ್ತಾರೆ ಹೊರತು, ಏಕನಾಥ್ ಶಿಂಧೆ ಆಗಲ್ಲ ಎಂದು ಅಮಿತ್ ಶಾ ಜೊತೆ ಕಾಣಿಸಿಕೊಂಡಿದ್ದಕ್ಕೆ ಮುನಿರತ್ನ ಕೌಂಟರ್ ಕೊಟ್ಟಿದ್ದಾರೆ.ನಾವು ಚುನಾವಣೆಗೆ ಬೇಕಾದರೆ ಹೋಗ್ತೇವೆ, ಆದ್ರೆ ಡಿಕೆಶಿ ಅವರನ್ನ ಕರೆದುಕೊಳ್ಳಲ್ಲ. ಡಿಕೆಶಿ ಯಿಂದ ನಮ್ಮ ಪಕ್ಷ ಬೆಳೆಸುವ ಅಗತ್ಯ ಇಲ್ಲ. ನಮ್ಮ ಪಕ್ಷದಲ್ಲೇ ಬಹಳಷ್ಟು ನಾಯಕರಿದ್ದಾರೆ ಎಂದಿದ್ದಾರೆ.