ಬೆಂಗಳೂರು; ಪೂರ್ಣಾವಧಿ ಸಿಎಂ ಆಗಬೇಕು ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವನ್ನು ಸಮರ್ಥಿಸಿಕೊಂಡ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಿಎಂ ಹೇಳಿಕೆ ಯಾವುದಾದ್ರೂ ಅನುಮಾನ ಇದ್ಯಾ? ಅದು ಸರಿ ಇಲ್ಲ ಅಂತೀರಾ? ಸಾರ್ವಜನಿಕ ಜೀವನದಲ್ಲಿ ನಿವೃತ್ತಿ ಇರಲ್ಲ. ಇದೇನು ಸರ್ಕಾರಿ ಕೆಲಸವಾ ಇದು ಸಾರ್ವಜನಿಕ ಕೆಲಸ. ಜನರಿಗಾಗಿ ಕೆಲಸ ಮಾಡುವಾಗ ರಿಟೈರ್ಮೆಂಟ್ ಇರುತ್ತಾ. ಜನರಿಗೆ ರಾಜ್ಯಕ್ಕೆ ಒಳ್ಳೆಯದ ಮಾಡಲು,ಇದು ಯಾವುದೇ ದಾಖಲೆ ಮುರಿಯಲು ಅಲ್ಲ. ಇದರಲ್ಲಿ ಯಾವುದೇ ಡೌಟ್ ಇಲ್ಲ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ನಮ್ಮ ಅಧ್ಯಕ್ಷರು .ಅವರು ಏನು ಹೇಳಿದ್ದಾರೋ ಅದೇ ಅಂತಿಮ.ಅವರ ತೀರ್ಮಾನವೇ ಅಂತಿಮ.ಎಲ್ಲಾ ವಿಷಯಗಳನ್ನ ನಿರ್ಧಾರ ಮಾಡಬೇಕಾಗಿರೋದು ಎಐಸಿಸಿ ಎಂದಿದ್ದಾರೆ.
ಮುಖ್ಯಮಂತ್ರಿಗಳು ದೀರ್ಘಾವಧಿಯ ಸಿಎಂ ಆಗಲೆಂದು ನಾನು ಹಾರೈಸ್ತೇನೆ: ಗೃಹ ಸಚಿವ ಪರಮೇಶ್ವರ್ ಹೇಳಿಕೆ
ಬೆಂಗಳೂರು; ಮುಖ್ಯಮಂತ್ರಿಗಳು ದೀರ್ಘಾವಧಿಯ ಸಿಎಂ ಆಗಲೆಂದು ನಾನು ಹಾರೈಸ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಇದು ದೀರ್ಘಾವಧಿಯ ಸಿಎಂ ಎಂಬ ದಾಖಲೆ ಮಾಡುವ ಸಿದ್ದರಾಮಯ್ಯ ಅವರ ಇಚ್ಛೆ ವಿಚಾರದ ಬಗ್ಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ದೀರ್ಘಾವಧಿಯ ಸಿಎಂ ಆಗಲೆಂದು ನಾನು ಹಾರೈಸ್ತೇನೆ. ಸಿದ್ದರಾಮಯ್ಯ ದಾಖಲೆ ಮಾಡಲಿ ಅಂತ ನಾನೂ ಹಾರೈಸ್ತೇನೆ.ಅವರು ಈ ಐದು ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ಅದು ದಾಖಲೆ ಆಗಲಿದೆ. ಶಾಸಕರು ಸಿಎಲ್ಪಿ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ರು.ಆ ಸಂದರ್ಭದಲ್ಲಿ ನಮಗೆ ಹೈಕಮಾಂಡ್ ನವ್ರು ಎರಡೂವರೆ ವರ್ಷ ಅಧಿಕಾರ ಅಂತೇನೂ ಹೇಳಿರಲಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರ್ತಾರೆ ಅಂತಾನೇ ಭಾವಿಸಿದ್ದೇವೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸುಳಿವು ಕೊಟ್ಟ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಹೈಕಮಾಂಡ್ ತೀರ್ಮಾನ ಏನೇ ಇದ್ರೂ ನಾವು ಒಪ್ಕೋತೇವೆ.ಎಐಸಿಸಿ ಹೊಸ ಕಚೇರಿ ಉದ್ಘಾಟನೆ ವೇಳೆ ಅವ್ರು ಎಐಸಿಸಿ ಪುನಾರಚನೆ ಆಗಬೇಕು ಅಂದಿದ್ರು. ಆ ಅರ್ಥದಲ್ಲಿ ಅವರು ಹೇಳಿರಬಹುದು. ಕೆಲ ರಾಜ್ಯಗಳಲ್ಲಿ ನಮ್ಮ ಪಕ್ಷ ಸೋತಿದೆ, ಪಕ್ಷ ಸಂಘಟನೆ ದೃಷ್ಟಿಯಿಂದ ಖರ್ಗೆಯವರು ಹಾಗೆ ಹೇಳಿರಬಹುದು. ಹೈಕಮಾಂಡ್ ತೀರ್ಮಾನ ಏನಿರುತ್ತೋ ಗೊತ್ತಿಲ್ಲ. ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಅಶೋಕ್, ಛಲವಾದಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಧಿಕಾರಿಗಳ ವಿರುದ್ಧ ದೌರ್ಜನ್ಯ ಆಗಿದ್ರೆ ನಿರ್ದಿಷ್ಟವಾಗಿ ಹೇಳಲಿ.ಎಲ್ಲಿ ಯಾರಿಗೆ ದೌರ್ಜನ್ಯವಾಗಿದೆ ಅಂತ ಹೇಳಲಿ. ಅಶೋಕ್ ಅವ್ರು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ ಎಂದು ಅಸಮಾಧಾನ ಹೊರ ಹಾಕಿದ್ರು.
ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಮೊದಲು ಸುಗ್ರೀವಾಜ್ಞೆ ಕಳಿಸಿದಾಗ ರಾಜ್ಯಪಾಲರು ಕೆಲ ಪ್ರಶ್ನೆ ಕೇಳಿದ್ರು. ಸರ್ಕಾರ ರಾಜ್ಯಪಾಲರ ಪ್ರಶ್ನೆಗಳಿಗೆಲ್ಲ ಉತ್ತರ ಕಳಿಸಿತ್ತು. ಅದನ್ನೆಲ್ಲ ಪರಿಶೀಲಿಸಿ ರಾಜ್ಯಪಾಲರು ಒಪ್ಪಿಗೆ ಕೊಟ್ಟಿದ್ದಾರೆ. ತತಕ್ಷಣ ಅದು ಜಾರಿಗೆ ಬಂದಿದೆ. ಜನರಿಗೆ ಕಿರುಕುಳ ಕೊಡುವ, ಒತ್ತಾಯ ಮಾಡುವ, ಮನೆಗೆ ಬೀಗ ಹಾಕುವ ಪ್ರಕರಣಗಳು ನಡೀತಿದ್ವು . ಆತ್ಮಹತ್ಯೆ, ಊರು ಬಿಟ್ಟು ಹೋಗುವ ಘಟನೆಗಳು ನಡೀತಿದ್ವು. ಇದಕ್ಕೆಲ್ಲ ಕಡಿವಾಣ ಹಾಕಲು ಸುಗ್ರೀವಾಜ್ಞೆ ತಂದಿದ್ದೇವೆ, ರಾಜ್ಯಪಾಲರು ಕೆಲ ಸೂಚನೆಗಳನ್ನು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಉದಯಗಿರಿ ಗಲಭೆ ಪ್ರಕರಣದ ಬಗ್ಗೆ ಮಾತನಾಡಿದ ಅವರು ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ತಗೋತೇವೆ. ಈಗಾಗಲೇ ಹತ್ತು ಆರೋಪಿಗಳ ಬಂಧನ ಆಗಿದೆ. ಸಿಸಿಟಿವಿಯಲ್ಲಿ ಪರಿಶೀಲಿಸಿ ಕಲ್ಲು ಹೊಡೆದವರು ಯಾರು ಅಂತ ಪತ್ತೆ ಹಚ್ಚಿ ಬಂಧಿಸ್ತಾರೆ. ಕಾನೂನು ಪ್ರಕಾರ ತಗೋತೇವೆ ಎಂದರು.