ಮನೆ Latest News ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವಾಗ ಬೇಕಾದರೂ ಆಗಬಹುದು; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ...

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವಾಗ ಬೇಕಾದರೂ ಆಗಬಹುದು; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ

0

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವಾಗ ಬೇಕಾದರೂ ಆಗಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಫೆ. 20 ರೊಳಗೆ ಆಗಬಹುದು ಎಂಬ ಸೂಚನೆಗಳು ಬರುತ್ತಿವೆ. ಕೆಲವರು ಹೇಳಿಕೆಗಳನ್ನು ನೀಡಿರುವುದನ್ನು ಗಮನಿಸಿದ್ದೇನೆ.ಕಾರಣಾಂತರಗಳಿಂದ ನಾನು ಅವಕ್ಕೆಲ್ಲಾ ಪ್ರತಿಕ್ರಿಯೆ ಕೊಡಲು ಹೋಗಿಲ್ಲ. ನನಗೆ ಅನುಭವ ಇಲ್ಲ ಎಂದು ಶ್ರಿರಾಮುಲು ಹೇಳಿದ್ದಾರೆ. ರಾಜ್ಯಾಧ್ಯಕ್ಷನಾಗಿ ನನಗೆ ಅವರಷ್ಟು ಅನುಭವ ಇಲ್ಲದಿರಬಹುದು. ಆದರೆ ಕಾರ್ಯಕರ್ತನಾಗಿ ನನಗೆ ಅನುಭವ ಇದೆ. ನಾನು ರಾಜ್ಯಾಧ್ಯಕ್ಷನಾಗಿ ರಾಜ್ಯ ಪ್ರವಾಸದ ವೇಳೆ ಕಾರ್ಯಕರ್ತರು ಪ್ರೀತಿಯಿಂದ ವಿಜಯಣ್ಣ ಎಂದು ಕರೆಯುತ್ತಾರೆ. ಕಾರ್ಯಕರ್ತರಿಗೆ ನನ್ನ ಬಗ್ಗೆ ಪ್ರೀತಿ, ಸಂತೋಷ, ತೃಪ್ತಿ ಇದೆ. ಕೆಲವು ನಾಯಕರು ಅವರದ್ದೇ ಆದ ಹೇಳಿಕೆ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ತಪ್ಪು ಅಂತಾ ಹೇಳಲು ಹೋಗಲ್ಲ. ಕೆಲವು ಬಾರಿ ರಾಷ್ಟ್ರೀಯ ‌ನಾಯಕರು ನಾಯಕರ ಮಾತು ಕೇಳಿಯೇ ತೀರ್ಮಾ‌ನ ಮಾಡಬೇಕು ಅಂತಾ ಇಲ್ಲ. ಕಾರ್ಯಕರ್ತರ ಮಾತು ಕೇಳಿಯೂ ತೀರ್ಮಾನ ಮಾಡಬಹುದು. ವಿಜಯೇಂದ್ರ‌ ಬಗ್ಗೆ ಏನೇ ಮಾತಾಡಲಿ, ತೊಂದರೆ ಇಲ್ಲ ಎಂದಿದ್ದಾರೆ.

ಇನ್ನು ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡಲಾಗುತ್ತಿದೆ, ಅವಮಾನ ಮಾಡಲಾಗುತ್ತಿದೆ. ಅದನ್ನು ನೋಡಿಕೊಂಡು ಕುಳಿತುಕೊಳ್ಳುವುದು ಕೂಡಾ ಅಪರಾಧ. ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಆಗುತ್ತಿದೆ. ಹಿರಿಯರಿಗೆ ಅಪಮಾನ ಮಾಡುವ ರೀತಿಯಲ್ಲಿ ನಾನು ಯಾವತ್ತೂ ನಡೆದುಕೊಂಡಿಲ್ಲ. ನನ್ನ ಕೆಲಸದ ಬಗ್ಗೆ ಹಿರಿಯರಿಗೆ ಎಷ್ಟು ತೃಪ್ತಿ ಇದೆಯೋ ಗೊತ್ತಿಲ್ಲ, ಆದರೆ  ಕಾರ್ಯಕರ್ತರಿಗೆ ತೃಪ್ತಿ ಇದೆ. ಶಿಕಾರಿಪುರದಲ್ಲಿ ಮದುವೆ ಮನೆಗೆ ಹೋಗಿದ್ದಾಗ ಏನಾದರೂ ಮಾಡಿ ಪಕ್ಷದ ಗಲಾಟೆ ನಿಲ್ಲಿಸಿ ಎಂದು ಮಹಿಳೆಯರು ಮನವಿ ಮಾಡಿದರು. ಯಡಿಯೂರಪ್ಪನವರ ತೇಜೋವಧೆ ಮಾಡುತ್ತಿರುವವರನ್ನು ತಡೆಯುವ ಕೆಲಸವನ್ನು ಹಿರಿಯರು ಮಾಡಲಿ. ಅವರ ಬಗ್ಗೆ ಹಿರಿಯರು ವರಿಷ್ಠರ ಗಮನಕ್ಕೆ ತರಲಿ. ಒಂದು ವರ್ಷದಿಂದ ಯಡಿಯೂರಪ್ಪನವರ ತೇಜೋವಧೆ, ಅವಮಾನ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಹೈಕಮಾಂಡ್ ಬೆಂಬಲ, ಸಂತೋಷ್ ಬೆಂಬಲ ಇದೆ ಎಂಬುದೆಲ್ಲಾ ಸತ್ಯಕ್ಕೆ ದೂರ.ಇದಕ್ಕೆ ಹೈಕಮಾಂಡ್ ನಾಯಕರ ಯಾವುದೇ ಬೆಂಬಲ ಇಲ್ಲ ಎಂದರು.

ಭಿನ್ನಮತ ಶಮನಕ್ಕೆ ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕೆಂಬ ಬೊಮ್ಮಾಯಿ‌ ಆಗ್ರಹದ ಬಗ್ಗೆ ಮಾತನಾಡಿದ ಅವರು ತಟಸ್ಥ ಬಣವನ್ನೂ ನಾನು ನೋಡಿದ್ದೇನೆ. ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕು ಅಂತಾದರೆ ಮೊದಲು ಯಡಿಯೂರಪ್ಪನವರನ್ನು ಬೈಯುವುದನ್ನು ಮೊದಲು ನಿಲ್ಲಿಸಬೇಕು. ಅದನ್ನು ಅವರು ಮಾಡಬೇಕು.ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡುವುದನ್ನು ನೋಡಿಕೊಂಡು ನೀವು ಸುಮ್ಮನೆ ಇರುತ್ತೀರಿ ಅಂತಾದರೆ?. ರಾಜ್ಯಾಧ್ಯಕ್ಷನಾಗಿ ಏನು ಮಾಡಬೇಕು ಎಂಬ ಅರಿವು ನನಗೆ ಇದೆ.ಹೊಂದಾಣಿಕೆ ರಾಜಕೀಯ ಅಂತಾದರೆ ಮೈಸೂರು ಪಾದಯಾತ್ರೆ ನಡೆಯುತ್ತಿತ್ತಾ?. ಈ ರೀತಿ ಹೇಳಿಕೆಯಿಂದ ಕಾರ್ಯಕರ್ತರಿಗೆ ಅವಮಾನ ಮಾಡಲಾಗುತ್ತಿದೆ. ವಿಜಯೇಂದ್ರಗೆ ಅಪಮಾನ ಮಾಡಲಿ, ಆದರೆ ಕಾರ್ಯಕರ್ತರಿಗೆ ಅಪಮಾನ ಮಾಡುವುದು ಬೇಡ. ಗೊಂದಲಕ್ಕೆ ತೆರೆ ಎಳೆಯಬೇಕು. ವಿಜಯೇಂದ್ರ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬ ಆಪಾದನೆ ಸರಿಯಲ್ಲ. ಮೊದಲ ಬಾರಿಗೆ ಶಾಸಕನಾಗಿ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇನೆ. ಯಾವುದೋ ಎರಡು ಹೋರಾಟಕ್ಕೆ ಗೈರಾದರೆ ಅದು ಹೊಂದಾಣಿಕೆ ರಾಜಕೀಯ ಅಲ್ಲ. ಯತ್ನಾಳ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಬಳಿಕ ಅದಕ್ಕೆಲ್ಲಾ ಒಂದೊಂದಾಗಿ ಉತ್ತರ ಕೊಡುತ್ತೇನೆ. ಈಗ ಮಾತಾಡಲು ಹೋದರೆ ನನಗೂ ಅವರಿಗೂ ವ್ಯತ್ಯಾಸ ಇಲ್ಲ ಎಂದಿದ್ದಾರೆ.