ಮನೆ Latest News ದೆಹಲಿಯಲ್ಲಿ ಅವರ ಕೇಂದ್ರ ಕಚೇರಿಗೆ ಯಾಕೆ ಗಾಂಧಿ ಹೆಸರಿಟ್ಟಿಲ್ಲ?ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್...

ದೆಹಲಿಯಲ್ಲಿ ಅವರ ಕೇಂದ್ರ ಕಚೇರಿಗೆ ಯಾಕೆ ಗಾಂಧಿ ಹೆಸರಿಟ್ಟಿಲ್ಲ?ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

ಬೆಂಗಳೂರು; ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿ ಗಾಂಧಿ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಆದರೆ ದೆಹಲಿಯಲ್ಲಿ ಅವರ ಕೇಂದ್ರ ಕಚೇರಿಗೆ ಯಾಕೆ ಗಾಂಧಿ ಹೆಸರಿಟ್ಟಿಲ್ಲ? ಎಂದು ವಿಧಾನಸಭೆ ವಿಪಕ್ಷ ನಾಯಕ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಅದಕ್ಕೆ ಯಾಕೆ ಪಟೇಲ್ ಹೆಸರು ಇಟ್ಟಿಲ್ಲ?. ಇಲ್ಲಿ ಸಮಾವೇಶ ಮಾಡುತ್ತಿರುವವರು ನಕಲಿ ಗಾಂಧಿಗಳು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಭಾಗಿಯಾಗಿಲ್ಲ. ಹಿಂದೆ ನೂರಾರು ಕಾಂಗ್ರೆಸ್ ಆಗಿವೆ. ಇಲ್ಲಿ ನಕಲಿ ಗಾಂಧಿಗಳು ಇದ್ದಾರೆ, ಜಾತ್ರೆ ಮಾಡುತ್ತಿದ್ದಾರೆ. ೬೦% ಜಾತ್ರೆ ಇದು, ಜನ ಮರುಳಾಗಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಹಾಡುಹಗಲೇ ಬ್ಯಾಂಕ್ ಲೂಟಿ ಮಾಡುತ್ತಿದ್ದಾರೆ, ಗೋ ಹತ್ಯೆ ಆಗುತ್ತಿದೆ. ಇದರ ಕಡೆ ಗಮನ ಹರಿಸಿಲ್ಲ,  ಅಭಿವೃದ್ಧಿ ಕಾರ್ಯ ಬಿಟ್ಟಿದ್ದಾರೆ. ಅಭಿವೃದ್ಧಿ ಕಲ್ಲು ಇಟ್ಟಿಲ್ಲ ಎಂದು ಅವರದ್ದೇ ಶಾಸಕರು ಹೇಳುತ್ತಿದ್ದಾರೆ. ಇದೆಲ್ಲಾ‌ ಬಿಟ್ಟು ಯಾವ ರೀತಿ ಗಾಂಧಿ ಸರಳತೆ ಬಗ್ಗೆ ಮಾತಾಡುತ್ತಾರೆ?. ಕಟೌಟ್, ಫ್ಲೆಕ್ಸ್ ಬಿಟ್ಟು ಏನೂ ಇಲ್ಲ. ಯಾವುದೇ ರೀತಿಯ ಅರ್ಥ ಇಲ್ಲ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿಯನ್ನು ಚೆನ್ನಮ್ಮ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ‌ಕರ್ನಾಟಕದ ವೀರ ಮಹಿಳೆ. ವೀರ ಮಹಿಳೆಯನ್ನು ಪ್ರಿಯಾಂಕಾ ವಾದ್ರಾ ಅವರಿಗೆ ಹೋಲಿಕೆ ಮಾಡುವುದು ತಾರತಮ್ಯ ತೋರಿಸುತ್ತದೆ. ನಕಲಿ ಗಾಂಧಿಗಳಿಗೆ ಹೋಲಿಕೆ ಮಾಡುವುದು ತಪ್ಪು. ಇದಕ್ಕೆ ಅವರು ಕ್ಷಮಾಪಣೆ ಕೇಳಬೇಕು. ಇದಕ್ಕೆ ಯಾವುದಾದರೂ ದಾಖಲೆ ಇದ್ಯಾ?. ಕಿತ್ತೂರು ರಾಣಿ ಚೆನ್ನಮ್ಮ ಅವರಿಗೂ ನಿಮಗೂ ಏನ್ರೀ ಸಂಬಂಧ?. ಇದು ಚೆನ್ನಮ್ಮಗೆ ಅಪಮಾನ ಮಾಡಿದಂತಾಗುತ್ತದೆ. ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್ ದೂರು ವಿಚಾರದ ಬಗ್ಗೆ ಮಾತನಾಡಿ ಅಭಿವೃದ್ಧಿ ಕಾರ್ಯ ಕೇಳಿದರೆ ಬಿಜೆಪಿ ಕಾಲದ ಬಗ್ಗೆ ಹೇಳುತ್ತಾರೆ. ಹಾಗಾದರೆ ನೀವ್ಯಾಕೆ ಅಧಿಕಾರದಲ್ಲಿ ಇದ್ದೀರಿ?. ಬಿಜೆಪಿಯವರಿಗೆ ಯಾಕೆ ಹೋಲಿಕೆ ಮಾಡುತ್ತೀರಾ?. ಇವತ್ತು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟು ಹಣ ಹೂಡಿಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ ಎಂದಿದ್ದಾರೆ.

ಎಲ್ಲಾ ಸಚಿವರು ಗೃಹ ಇಲಾಖೆಯಲ್ಲಿ ಕೈಯಾಡಿಸುತ್ತಿದ್ದಾರೆ; ವಿಧಾನಸಬೆ ವಿಪಕ್ಷ ನಾಯಕ  ಆರ್ ಅಶೋಕ್ ಆರೋಪ

ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ಮಾಸುವ ಮುನ್ನವೇ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕೂಡ ಗರ್ಭಿಣಿ ಹಸುವನ್ನು ಭೀಕರವಾಗಿ ಕೊಲ್ಲಲಾಗಿದೆ. ಇದು ಕರ್ನಾಟಕದಲ್ಲಿ ಗೋವುಗಳಿಗೆ ರಕ್ಷಣೆ ಇಲ್ಲ ಅನ್ನೋದನ್ನು ಸಾಬೀತು ಪಡಿಸಿವೆ. ಸರ್ಕಾರ ಕಿವುಡ ಸರ್ಕಾರ. ರಾಜ್ಯ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ ಕೂಡ ಈ  ಸರ್ಕಾರ ಸಮಾವೇಶ ಬೇರೆ ಮಾಡ್ತಿದೆ. ಗಾಂಧಿ ನೆನಪುಗಳು ಎಂದು ಸಮಾವೇಶ ಮಾಡುತ್ತಿದೆ. ಇದು ಡೂಪ್ಲಿಕೇಟ್ ಗಾಂಧಿ. ನಮಗೆ ಸ್ವಾತ್ರಂತ್ಯ ತಂದು ಕೊಟ್ಟವರು ನಿಜವಾದ ಗಾಂಧಿ. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ  ಗಾಂಧಿ ಇವರೆಲ್ಲಾ  ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ? ಇವರೆಲ್ಲಾ ಡೂಪ್ಲಿಕೇಟ್ ಗಾಂಧಿಗಳು ಎಂದು ಲೇವಡಿ ಮಾಡಿದ ಅವರು, ರಾಜ್ಯದಲ್ಲಿ ಗೃಹ ಸಚಿವರು ಯಾರು ಅನ್ನೋದೇ ಗೊತ್ತಾಗುತ್ತಿಲ್ಲ. ಎಲ್ಲಾ ಸಚಿವರು ಗೃಹ ಇಲಾಖೆಯಲ್ಲಿ ಕೈಯಾಡಿಸುತ್ತಿದ್ದಾರೆ. ಭ್ರಷ್ಟಾಚಾರ , ಲಂಚಾವತಾರ ಮಿತಿ ಮೀರಿದೆ. 60% ಶೇಕಡಾ ಕಮಿಷನ್ ಕೊಟ್ಟರೆ ಮಾತ್ರ ಈ ಸರ್ಕಾರದಲ್ಲಿ ಫೈಲ್ ಮೂವ್ ಆಗುತ್ತದೆ ಇಲ್ಲದಿದ್ದರೆ ಏನೂ ಆಗಲ್ಲ ಎಂದಿದ್ದಾರೆ.

ವಿಜಯಪುರಲ್ಲಿ ಕಾರ್ಮಿಕರನ್ನು ನಡಡು ರಸ್ತೆಯಲ್ಲಿಯೇ ಥಳಿಸುತ್ತಿರುವ ಹೃದಯವಿದ್ರಾವಕ ಘಟನೆಯನ್ನು ಮಾಧ್ಯಮದಲ್ಲಿ ನೋಡಿದೆ. ಬೀದಿಯಲ್ಲೇ ನಿಂತು ರಾಜಾರೋಷವಾಗಿ ಹೊಡಿಯುತ್ತಿದ್ದಾರೆ ಎಂದರೆ ರಾಜ್ಯದಲ್ಲಿರುವ ದರೋಡೆಕೋರರಿಗೆ, ರೌಡಿಗಳಿಗೆ ಪೊಲೀಸರ ಬಗ್ಗೆ ಏನು ಸಂದೇಶ ಹೋಗುತ್ತಿದೆ? ರಾಜ್ಯದಲ್ಲಿ ಕಾನೂನೂ ಸುವ್ಯವಸ್ಥೆ ಸರಿಯಿಲ್ಲ ಅನ್ನೋದಕ್ಕೆ ಇದು ಉದಾಹರಣೆ. ಹಗಲೇ ಬ್ಯಾಂಕ್ ದರೋಡೆ ನಡೆಯುತ್ತಿದೆ. ಇಷ್ಟೆಲ್ಲಾ ಆದ್ರೂ ಇದನ್ನೆಲ್ಲಾ ನೋಡಿ ರಾಜ್ಯ ಸರ್ಕಾರ ಸುಮ್ಮನೆ ಕೂತಿದೆ. ಇದೊಂದು ಕುಂಭಕರ್ಣ ಸರ್ಕಾರ. 20 ತಿಂಗಳಲ್ಲಿ 20 ಹಗರಣಗಳು ನಡೆದಿವೆ. ಕರ್ನಾಟಕದ ಇತಿಹಾಸದಲ್ಲಿ ಇದು ಕೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಬಿಜೆಪಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಗೆ ಬರುವ ವಿಚಾರದ ಬಗ್ಗೆ ಮಾತನಾಡಿದ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾಂಗ್ರೆಸ್ ಪಾರ್ಟಿಯಿಂದ 60 ಜನ ಬಿಜೆಪಿಗೆ ಬರಲು ರೆಡಿ ಇದ್ದಾರೆ ಎಂದು ಹೇಳಿದ್ದಾರೆ. ಅನುದಾನ ಕೊಡ್ತಿಲ್ಲ ಅವರ ಪಾರ್ಟಿಯಲ್ಲೇ ಮೊನ್ನೆ ಸಿಎಂ ಸಚಿವ ಸಂಪುಟ ಸಭೆಯಲ್ಲಿ ಗಲಾಟೆಯಾಗಿದೆ. ಅನುದಾನ ಇಲ್ಲ ಎಂದು ಅವರ ಪಾರ್ಟಿಯಲ್ಲಿ ಶಾಸಕರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ. ಅನೇಕ ಶಾಸಕರು ಅನುದಾನ ಇಲ್ಲದೇ ನಾವು ಇಲ್ಲಿ ಯಾಕೆ ಶಾಸಕರಾಗಿ ಇರಬೇಕು ಆತ್ಮಹತ್ಯೆ ಮಾಡಿಕೊಳ್ಳುವುದು ಮೇಲು ಎಂದು ಹೇಳಿದ್ದಾರೆ. ಅವರ ಪಕ್ಷದಲ್ಲಿ ಎರಡು ವರ್ಷಗಳ ಹಿಂದೆ 15 ಶಾಸಕರು ನಮ್ಮ ಪಕ್ಷಕ್ಕೆ ಬಂದಿದ್ದರು. ಈಗಲೂ ಅದೇ ಪರಿಸ್ಥಿತಿಯಿದೆ. ಮೊದಲು ಅವರ ಪಕ್ಷದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಬಳಿಕ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದು ಆರ್ ಅಶೋಕ ಅವರು ಹೇಳಿದ್ದಾರೆ.