ಮನೆ Latest News ತಾವೇ ಅಧ್ಯಕ್ಷ ಸ್ಥಾನದಲ್ಲಿ‌ ಮುಂದುವರೆಯುವ ಬಗ್ಗೆ ಮತ್ತೆ ವಿಶ್ವಾಸ ವ್ಯಕ್ತಪಡಿಸಿದ ವಿಜಯೇಂದ್ರ

ತಾವೇ ಅಧ್ಯಕ್ಷ ಸ್ಥಾನದಲ್ಲಿ‌ ಮುಂದುವರೆಯುವ ಬಗ್ಗೆ ಮತ್ತೆ ವಿಶ್ವಾಸ ವ್ಯಕ್ತಪಡಿಸಿದ ವಿಜಯೇಂದ್ರ

0

ಬೆಂಗಳೂರು; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಾವೇ ಅಧ್ಯಕ್ಷ ಸ್ಥಾನದಲ್ಲಿ‌ ಮುಂದುವರೆಯುವ ಬಗ್ಗೆ ಮತ್ತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಯತ್ನಾಳ್ ತಂಡದಿಂದಲೂ ಬಂಡಾಯ ಸ್ಪರ್ಧೆಗೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ಯತ್ನಾಳ್-ರಮೇಶ್ ಜಾರಕಿಹೊಳಿ ಬಣಕ್ಕೆ ಕೌಂಟರ್ ಕೊಟ್ಟಿದ್ದಾರೆ. ನಮ್ಮದು ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ಪಕ್ಷ. ನನ್ನನ್ನು ಪಕ್ಷದ ಹಿರಿಯರು, ವರಿಷ್ಠರು ರಾಜ್ಯಾಧ್ಯಕ್ಷ ಆಗಿ ಮಾಡಿದ್ರು. ನಾನು ಆಗಿನಿಂದಲೂ ಸರ್ಕಾರದ ವಿರುದ್ಧ ಸತತ ಹೋರಾಟ ಮಾಡ್ತಿದ್ದೇನೆ. ನನ್ನ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡ್ತಿರುವ ಬಗ್ಗೆ ಕಾರ್ಯಕರ್ತರಲ್ಲಿ ಸಮಾಧಾನ ಇದೆ. ಆದರೆ ನಮ್ಮ ಪಕ್ಷದ ಕೆಲ ಹಿರಿಯ ಮುಖಂಡರು ಅಲ್ಲೊಂದು ಇಲ್ಲೊಂದು ಹೇಳಿಕೆ ಕೊಡ್ತಿದ್ದಾರೆ, ಇದನ್ನು ನಾನು ಇಲ್ಲ ಅಂತ ಹೇಳಲ್ಲ. ಮುಂದಿನ ರಾಜ್ಯಾಧ್ಯಕ್ಷ‌ ಚುನಾವಣೆಗೆ ಶಿವರಾಜ್ ಸಿಂಗ್ ಚೌಹಾಣ್ ಅವರೇ ಉಸ್ತುವಾರಿ ಆಗಿದ್ದಾರೆ. ಅತೀ ಶೀಘ್ರದಲ್ಲೇ ಯಾರನ್ನು ಅಧ್ಯಕ್ಷ ಮಾಡಬೇಕು ಅಂತ ಚೌಹಾಣ್ ಅವರು ಎಲ್ಲ ಹಿರಿಯರ ಜತೆ ಚರ್ಚಿಸಿ ಉತ್ತಮ ತೀರ್ಮಾನ ತಗೋತಾರೆ. ನನಗೆ ವಿಶ್ವಾಸ ಇದೆ, ನನ್ನ ಒಂದು ವರ್ಷದ ಪರಿಶ್ರಮದ ಪರಿಣಾಮ ನನ್ನನ್ನೇ ಮುಂದುವರೆಸ್ತಾರೆ ಅನ್ನುವ ವಿಶ್ವಾಸ ನನಗೆ ಸಂಪೂರ್ಣ ಇದೆ ಎಂದು ವಿಜಯೇಂದ್ರ ತಾವೇ ಅಧ್ಯಕ್ಷ ಸ್ಥಾನದಲ್ಲಿ‌ ಮುಂದುವರೆಯುವ ಬಗ್ಗೆ ಮತ್ತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು 14 ಸೈಟ್ ಪಡೆದುಕೊಂಡಿದ್ದಾರೆ.ಬಡವರ ಪಾಲಾಗಬೇಕಾದ ನಿವೇಶನಗಳು ದಲ್ಲಾಳಿಗಳ ಪಾಲಾಗಿದೆ.ಇದರಿಂದ ಸರ್ಕಾರಕ್ಕೆ ಮೂಡಾಗೆ ಸಾವಿರಾರು ಕೋಟಿ ನಷ್ಟವಾಗಿದೆ.ಸ್ನೇಹಮಹಿ ಕೃಷ್ಣಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಧ್ವನಿಯನ್ನ ಹತ್ತಿಕುವ ಕೆಲಸ ಕಾಂಗ್ರೆಸ್ ಮಾಡಿತು.ಅರೆಸ್ಟ್ ಮಾಡುವ ಹಂತದವರೆಗೂ ಸರ್ಕಾರ ಹೋಗಿತ್ತು. ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಆಗಿದೆ. ರಾಜ್ಯಪಾಲರು ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡ್ತು. ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಅಪರಾಧ ಅಂತ ಸಚಿವರು ಬಿಂಬಿಸಲು ಹೋದ್ರು. ಆದರೆ ಹೈಕೋರ್ಟ್ ಅನುಮತಿ ಸರಿ ಇದೆ ಹೇಳಿದೆ. ಸಿದ್ದರಾಮಯ್ಯನವರ ಬಗ್ಗೆ ದ್ವೇಷ ಇಲ್ಲ. ಅಪರಾಧ, ತಪ್ಪು ಆಗಿರುವ ವೇಳೆ ಈಗಾಗಲೇ ರಾಜೀನಾಮೆ ನೀಡಬೇಕಿತ್ತು. ಪ್ರಕರಣವನ್ನ ಸಿಬಿಐಗೆ ವಹಿಸಬೇಕಿತ್ತು, ರಾಜೀನಾಮೆ ನೀಡಬೇಕಿತ್ತು. ಮೈಸೂರಿನ ಮುಡಾ ಹಗರಣ, ಸೈಟ್ ಹಂಚಿಕೆಯಲ್ಲಿ ಹಗರಣ ಆಗಿದೆ.ಈಗಾಗಲೇ ಬಂಡತನವನ್ನ ಬಿಟ್ಟು, ಸಿಬಿಐ ತನಿಖೆಗೆ ವಹಿಸಬೇಕು. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದರು.

ಮುಂದಿನ ಕ್ಯಾಬಿನೆಟ್ ನಲ್ಲಿ ಜಾತಿಗಣತಿ ಮಂಡನೆ ಕುರಿತು ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಲ್ಲಿಯವರೆಗೂ ಅವರು ಮುಖ್ಯಮಂತ್ರಿ ಆಗಿರುತ್ತಾರಾ ನೋಡಬೇಕು. ಜಾತಿಗಣತಿ ಜಾರಿಯ ಹಿಂದೆ ಉದ್ದೇಶ ಇದ್ಯೊ ಅಥವಾ ದುರುದ್ದೇಶ ಇದ್ಯೊ ಗೊತ್ತಿಲ್ಲ. 10 ವರ್ಷಗಳ ಹಿಂದೆಯೇ ವರದಿ ಅವರ ಕೈ ಸೇರಿತ್ತು.ಅವತ್ತೇ ಯಾಕೆ ಜಾರಿಗೆ ತರಲಿಲ್ಲ?.10 ವರ್ಷ ಆದ್ಮೇಲೆ ಈಗ ಜಾರಿಗೆ ಮುಂದಾಗಿದ್ದಾರೆ. ಇದು ರಾಜಕೀಯ, ಚದುರಂಗದ ಆಟ.ರಾಜಕೀಯ ಬೆಳೆ ಬೆಯಿಸಿಕೊಳ್ಳೋಕೆ‌ ಸಿದ್ದರಾಮಯ್ಯ ಹೊರಟಿದ್ದಾರೆ. ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಮತ್ತೆ ಕೆಲವರು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆಯುತ್ತಿದ್ದಾರೆ ಎಂದರು.

ಬಿಜೆಪಿಯವರು ಅನುದಾನ ವಾಪಸ್ ಕೊಡಲಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟ್ಟ ಅವರು ರಾಜ್ಯ ಸರ್ಕಾರ, ಸಿದ್ದರಾಮಯ್ಯ ನಮಗೇನು ಉಪಕಾರ ಮಾಡ್ತಿದ್ದಾರಾ?. ಪ್ರಿಯಾಂಕ್ ಖರ್ಗೆ ನಮಗೇನು ಉಪಕಾರ ಮಾಡ್ತಿದ್ದಾರಾ?. ಸರ್ಕಾರ ಬಂದು ಎರಡು ವರ್ಷ ಆದರೂ ಅನುದಾನ ಇಲ್ಲ. ಶಾಸಕರು ಹತಾಷರಾಗಿದ್ದಾರೆ? ಎರಡು ವರ್ಷ ಆದರೂ ಅನುದಾನ ಕೊಟ್ಟಿಲ್ಲ ಇವ್ರು. ಇವರ ಯೋಗ್ಯತೆಗೆ ಯಾವ ರೀತಿ ಸರ್ಕಾರ ನಡೆಸ್ತಿದ್ದಾರೆ ಇವ್ರು?. ನಮಗೇನು ಅನುದಾನ ಕೊಟ್ಟು ಉಪಕಾರ ಮಾಡ್ತಿದ್ದಾರಾ?. ಕ್ಷೇತ್ರಗಳಿಗೆ ಹಣ ಕೊಡೋದು ಇವರ ಕರ್ತವ್ಯ, ಉಪಕಾರ ಅಲ್ಲ. ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲಿ ಎಂದರು.

ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ.ವಾಲ್ಮೀಕಿ ನಿಗಮದಲ್ಲಿ, ಮುಡಾದಲ್ಲಿ ಹಗರಣ ಆಗಿದೆ. ಕಿಯೋನಿಕ್ಸ್ ನಲ್ಲಿ ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಇನ್ನೊಂದು ಕಡೆ ಆತ್ಮಹತ್ಯೆಗಳು ನಡೀತಿವೆ. ಸಿದ್ದರಾಮಯ್ಯ ಪ್ರಾಮಾಣಿಕ ಆಗಿದ್ರೆ 2016 ರಲ್ಲೇ ವರದಿ ಕೈಸೇರಿದ್ದಾಗ ಆಗಲೇ ಜಾರಿ ಮಾಡಬೇಕಿತ್ತು. ಇಷ್ಟು ವರ್ಷ ಕಾರಣ‌ಗಳನ್ನು ಮುಂದೊಡ್ಡಿದ್ರು. ಇದು ರಾಜಕೀಯ ಷಢ್ಯಂತ್ರ, ಜಾತಿ ಜನಗಣತಿಯನ್ನು ರಾಜಕೀಯ ಚದುರಂಗ ಅನ್ಕೊಂಡಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಜನಗಣತಿ ಅಸ್ತ್ರ ಬಿಟ್ಟು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರೋದು ಅಕ್ಷಮ್ಯ ಅಪರಾಧ ಎಂದು ಇದೇ ವೇಳೆ ಹೇಳಿದರು.