ಬೆಂಗಳೂರು; ರಾಜ್ಯದಲ್ಲಿ ಕೇಳೋರು ಮಾಡೋರು ಯಾರು ಇಲ್ಲ ಎಂದು ಬಸ್ ಟಿಕೆಟ್ ಬೆಲೆ ಏರಿಕೆ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.
ಬಸ್ ದರ ಏರಿಕೆ ಬಗ್ಗೆ ಮಾತನಾಡಿದ ಅವರು ನಾನು ಈಗಿನ ಬೆಳವಣಿಗೆಗಳು ಅಚ್ಚರಿ ತರುವ ಬೆಳವಣಿಗೆಗಳು ಅಲ್ಲ. ಬಹುಶಃ ಸಾರ್ವಜನಿಕರು ಸಹ ಎರಡು ಮೂರು ದಿನಗಳಲ್ಲಿ ಮರೆಯುತ್ತಾರೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸ್ತಾರೆ. ಮೂರನೇ ದಿನ ಇದಕ್ಕೆ ಹೊಂದಾಣಿಕೆ ಆಗ್ತಾರೆ. ಯಾಕೆಂದರೆ ನಾನು ಹಲವಾರು ಸಂದರ್ಭದಲ್ಲಿ ನೋಡಿದ್ದೇನೆ. ಇದೇ ಸರ್ಕಾರ ಡಿಸೇಲ್, ಪೆಟ್ರೋಲ್ 3.5 ವರೆ ರೂಪಾಯಿ ಸೆಸ್ ಹಾಕಿದ್ರು.ಆಗ ಪ್ರತಿಭಟನೆ ಮಾಡಿದ್ರಾ?. ಅದಕ್ಕೆ ಹೊಂದಾಣಿಕೆ ಅದ್ರು,ಸ್ಟ್ಯಾಂಪ್ ಡ್ಯೂಟಿ ,ಗೈಡ್ ಲೆನ್ಸ್ ವ್ಯಾಲ್ಯೂ,ಮದ್ಯದ ದರ, ನೀರಿನ ದರ ಹೆಚ್ಚಳ,ಹಾಲಿನ ದರ ಏನಾಗಬಹುದು. ಇದಕ್ಕೆ ಎಲ್ಲ ಹೊಸ ವರ್ಷದಲ್ಲಿ ನಾಡಿನ ಜನತೆ ತಯಾರಾಗಿ ಅಂತ. ಸರ್ಕಾರ ಈಗಾಗಲೇ ಸಂದೇಶ ಕೊಡ್ತಾ ಇದೆ ಎಂದಿದ್ದಾರೆ.
ಇಲ್ಲಿ ನಾನು ಟೀಕೆ ಮಾಡಲ್ಲ. ಟೀಕೆ ಮಾಡಿ ಏನು ಮಾಡೋದು. ರಾಜ್ಯದಲ್ಲಿ ಕೇಳೋರು ಮಾಡೋರು ಯಾರು ಇಲ್ಲ. ಸರ್ಕಾರ ಇದೆ ಅಂತ ನಿಮಗೆ ಅನಿಸುತ್ತಾ. ಜನರ ಕಷ್ಟ ಸುಖ ಯಾರು ಕೇಳ್ತಾರೆ,ಅವಶ್ಯಕತೆ ಇಲ್ಲ. ನಾನು ಅವಶ್ಯಕತೆ ,ಅನಿವಾರ್ಯ ಇದ್ದಾಗ ಬೆಲೆ ಹೆಚ್ಚಿಸಿ. ಅನಿವಾರ್ಯ ಪರಿಸ್ಥಿತಿ ಇದ್ದಾಗ ಹಿಂದಿನ ಹಲವಾರು ಸರ್ಕಾರಗಳು ಬೆಲೆ ಏರಿಕೆ,ಕಡಿಮೆ ಮಾಡಿರೋದು ನಡೆದಿರುವ ಪ್ರಕ್ರಿಯೆ ಇದೆ. ಅದರೆ ಇವರು ಇವರ ಮೇಲೆ ಎಳೆದುಕೊಂಡಿರೋದು ಇದು. ಕೆಇಬಿ ಏನ್ ಆಗುತ್ತೆ ನೋಡೋಣ.ಪವರ್ ಸೆಕ್ಷರ್ ಏನಾಗುತ್ತೆ ನೋಡೋಣ. ಯುವನಿಧಿ ಅದು ಎಷ್ಟು ಜನಕ್ಕೆ ಕೋಡ್ತಾರೆ ಗೊತ್ತಿಲ್ಲ. ಸರ್ಕಾರ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಜನರಿಗೆ ತಿಳುವಳಿಕೆ ಮೂಡದಿದ್ದರೆ ಯಾರು ಏನ್ ಮಾಡೋಕೆ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.
ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಾ ಇದ್ದಾರೆ ಅದರಲ್ಲಿ ಡೌಟ್ ಇಲ್ಲ. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ನಡೆಯುತ್ತಿರೋದು ಅಲ್ಲವೇ. ಬಹಳ ವಿಷಯ ಇದೆ,ಸ್ವಲ್ಪ ಇನ್ನು ವಾರ ೧೦ ದಿನ ಕಳೆಯಲಿ. ಸಂಕ್ರಾಂತಿ ಆಗಲಿ,ಅಮೇಲೆ ನಾನು ಎಲ್ಲ ರಾಜ್ಯದಲ್ಲಿ ನಡೆಯುತ್ತಿರುವ ಆಡಳಿತ. ಎಲ್ಲಾದರ ಬಗ್ಗೆ, ಕಾನೂನು ವ್ಯವಸ್ಥೆ ಏನ್ ಆಗಿದೆ.ಎಲ್ಲಿಗೆ ಬಂದಿದ್ದೀರಿ? ಈಗ ಚಿನ್ನ- ಬೆಳ್ಳಿದು ಬೇರೆ ನಡೆಯುತ್ತಿದೆ. ನಿಖಿಲ್,ಕುಮಾರಸ್ವಾಮಿ ಪರಿಚಯ ಅಂತ ಹೇಳಿ ಹೋಗ್ತಾ ಇದೆ.ನಿನ್ನೆ ಮೊನ್ನೆಯಿಂದ ಬರ್ತಾ ಇದೆ.ಯಾವಾಗ ನಿಖಿಲ್,ಅನಿತಾ ಕುಮಾರಸ್ವಾಮಿನ ಭೇಟಿ ಮಾಡಿದ್ರು ಅವರು?.ಈ ಸರ್ಕಾರದಲ್ಲಿ ಎಷ್ಟರ ಮಟ್ಟಿಗೆ ತನಿಖೆ ನಡೆಯುತ್ತಿದೆ. ನಾನು ಟಿವಿಗಳಲ್ಲಿ ಬಂದ ಮೇಲೆ ಮಾಹಿತಿ ತರಿಸಿಕೊಂಡೆ. ಏನಿದೆ ಇದರ ಹಿನ್ನೆಲೆ ಅಂತ ಮಾಹಿತಿ ತರಿಸಿಕೊಂಡೆ. ಯಾವ ಇಸವಿಯಲ್ಲಿ ನಡೆದಿರುವ ಘಟನೆ? ಅವರ ವ್ಯವಹಾರಗಳು.2016 ರಲ್ಲಿ ೫೦ ಲಕ್ಷ ೧೦೦ ಗ್ರಾಂ ಚಿನ್ನ ಅಂತ ತೋರಿಸ್ತಾ ಇದ್ದೀರಾ ಅಲ್ವ. ಆಗ ನಡೆದಿರುವ ಘಟನೆ ಅಂತೆ .ನಿಖಿಲ್,ಅನಿತಾ ಕುಮಾರಸ್ವಾಮಿ ಹೆಸರು ಎಳೆದಿದ್ದಾರೆ ಅಂತ ಹೇಳಿ ದಾಖಲೆ ತರಿಸಿದ್ದೇನೆ. ಇದು ಸರ್ಕಾರ ಇದೆ ಅಲ್ವ. ಯಾರನ್ನ ಯಾವಾಗ ಏನ್ ಬೇಕಾದ್ರು ಮಾಡ್ತಾರೆ. ಈ ಸರ್ಕಾರದಲ್ಲಿ ಅಧಿಕಾರಿ ವರ್ಗವನ್ನ ನಾನು ಎಲ್ಲ ಅಧಿಕಾರಿಗಳ ಬಗ್ಗೆ ಹೇಳಲ್ಲ. ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ.ಇದು ೨೦೧೬ ರ ಪ್ರಕರಣ ಈಗ ದೂರು ಕೊಟ್ಟಿದ್ದಾರೆ.೨೦೧೮ ರಲ್ಲಿ ಸಿಎಂ ಇದ್ದೆ ಅಲ್ವ. ೨೦೧೬ ರಲ್ಲಿ ದೋಖಾ ಆಗಿದ್ರೆ, ನನಗೆ ದೂರು ಕೊಡಬಹುದಿತ್ತು ಅಲ್ವ. ಇವತ್ತು ನಾನು ಗಮನಿಸಿದ್ದೇನೆ. ಪಾಪ ನಿಖಿಲ್,ಅನಿತಾ ಕುಮಾರಸ್ವಾಮಿಗೆ ಅವರ ಮುಖನೇ ನೋಡಿಲ್ಲ. ಈಗ ಪರಿಚಯ ಅಂತ ಬರ್ತಾ ಇದೆ. ಇದರ ಹಿಂದೆ ಯಾರು ಇದ್ದಾರೆ. ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹೆಸರು ಯಾಕೆ ತಂದ್ರಿ. ಇದು ಒಂದು ಸರ್ಕಾರ ಅಂತ ಕರಿತೀರಾ ಎಂದು ಹೆಚ್ಡಿಕೆ ಕಿಡಿಕಾರಿದ್ದಾರೆ.