ಮನೆ Latest News ಮಹಾರಾಷ್ಟ್ರ ಜಾರ್ಖಂಡ್‌ಲ್ಲಿ ಕೆಲಸ ಮಾಡಿದ್ದೇವೆ ಎರಡು ರಾಜ್ಯದಲ್ಲಿ ಬರ್ತೇವೆ; ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ಮಹಾರಾಷ್ಟ್ರ ಜಾರ್ಖಂಡ್‌ಲ್ಲಿ ಕೆಲಸ ಮಾಡಿದ್ದೇವೆ ಎರಡು ರಾಜ್ಯದಲ್ಲಿ ಬರ್ತೇವೆ; ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

0

ಬೆಂಗಳೂರು: ನಾಳೆ ಮಹಾರಾಷ್ಟ್ರ, ಜಾರ್ಖಂಡ್ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ನಮಗೆ ನಿರೀಕ್ಷೆ ಅಂತೂ ಇದೆ ಕೆಲಸ ಮಾಡಿದ್ದೇವೆ. ನಾಳೆ ಗೊತ್ತಾಗುತ್ತೆ, ಈಗಲೇ ಹೇಳಿದರೆ ಊಹಾಪೋಹ ಆಗಬಹುದು. ನಾವು ಬೆಟರ್ ಪರ್ಫಾರ್ಮೆನ್ಸ್ ಮಾಡಿದ್ದೇವೆ. ಸಾಕಷ್ಟು ಸಭೆಗಳನ್ನು ಮಾಡಿದ್ದೇವೆ.ವಲಯವಾರು ಹೋಗಿ ಕೆಲಸ ಮಾಡಿದ್ದೇವೆ. ಮಹಾರಾಷ್ಟ್ರ ಜಾರ್ಖಂಡ್‌ಲ್ಲಿ ಕೆಲಸ ಮಾಡಿದ್ದೇವೆ ಎರಡು ರಾಜ್ಯದಲ್ಲಿ ಬರ್ತೇವೆ. ರಾಜ್ಯದ ಸ್ಥಿತಿಯಂತೂ ನಿಮಗೇ ಗೊತ್ತಿದೆ ಎಂದ್ರು.

ಇನ್ನು  ಇದೇ ವೇಳೆ ಮಾತನಾಡಿದ ಅವರು ಅದಾನಿ ವಿರುದ್ಧ ವಿದೇಶದಲ್ಲೂ ಭ್ರಷ್ಟಾಚಾರದ ಬಗ್ಗೆ ಹೊರ ಬರುತ್ತಿದೆ. ನಾವೇನು ಹೇಳುತ್ತಿಲ್ಲವಲ್ಲ. ನಮ್ಮ ದೇಶದ ಆಸ್ತಿಯನ್ನು ಅವರಿಗೆ ಕೊಡ್ತಿದ್ದೇವೆ. ಪಬ್ಲಿಕ್ ಸೆಕ್ಟರ್, ಎನರ್ಜಿ ಸೆಕ್ಟರ್, ಏರ್ ಪೋರ್ಟ್ ನೆಲ್ಲಾ ಕೊಡ್ತಿದ್ದೇವೆ.ಸರ್ಕಾರಿ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ಸಾಲ ಕೊಡೋದು. ಬಿಜೆಪಿ ಪಕ್ಷಕ್ಕೆ ಸಹಾಯ ಪಡೆದುಕೊಳ್ತಿದ್ದಾರೆ. ನ್ಯಾಯ, ಸ್ವಚ್ಛ ಅಂತಾ ಹೇಳ್ಕೊತ್ತಾರೆ. ಆದರೆ ಇವರು ಮಾಡುತ್ತಿರುವುದು ಏನು ?.ಇದರಿಂದ ಭಾರತದ ಅಭಿವೃದ್ಧಿ ಆಗೋದಿಲ್ಲ. ಯಾರೋ ಒಬ್ಬರಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಅಭಿವೃದ್ಧಿ ಆಗುತ್ತಾ ?. ಬೇಕಾದ ವ್ಯಕ್ತಿಗೆ ಇಷ್ಟೊಂದು ಸಹಾಯ ಮಾಡಿದರೆ ಹೇಗೆ ?.ಯಾರೋ ಒಬ್ಬ ಉದ್ಯಮಿಗೆ ಅನುಕೂಲ ಮಾಡಿಕೊಡ್ತಿದಾರೆ.ಇದನ್ನೆಲ್ಲಾ ಪಾರ್ಲಿಮೆಂಟ್ ನಲ್ಲಿ ಪ್ರಸ್ತಾಪಿಸುತ್ತೇವೆ. ಅದಾನಿ ಇಂಡಿಯಾದಲ್ಲೇ ಇದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳವಬೇಕು.ಒಳ್ಳೆಯ ಪರ್ಫಾರ್ಮೆನ್ಸ್ ಮಾಡಿದ್ದೇವೆ. ಜಾರ್ಖಂಡ್ ನಲ್ಲಿ ಒಳ್ಳೆಯ ಫಲಿತಾಂಶ ಬರಲಿದೆ