ಬೆಂಗಳೂರು; 40% ಕಮೀಷನ್ ಆರೋಪ ಸುಳ್ಳು ಎಂಬ ವರದಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಆಗ ಅವರ ವಿರುದ್ದ ಆರೋಪ ಬಂದಿತ್ತು. ಕೆಂಪಣ್ಣ ಅವರು ಪ್ರಧಾನಿ ಅವರಿಗೆ ದೂರು ಕೊಟ್ಠಿದ್ದರು. ಅದೇ ಕಾರಣಕ್ಕೆ ಜನರ ಹಿತ ಕಾಪಾಡುವ ದೃಷ್ಟಿಯಿಂದ ಹೋರಾಟ ಮಾಡಿದ್ದು. ಆದ್ರೆ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಬರೀ 40% ಪರ್ಸೆಂಟ್ ಯಿಂದ ಮಾತ್ರ ಸರ್ಕಾರ ಬಂದಿದ್ದು ಅನ್ನೋದು ಸುಳ್ಳು ಎಂದಿದ್ದಾರೆ.
ಕೆಂಪಣ್ಣ ಅವರು ಆಗ ಸರ್ಕಾರದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ ಎಂದು ದೂರಿದ್ದರು. ಹಣ ತೆಗೆದುಕೊಳ್ಳುತ್ತಾರೆ ಎಂದು ಪ್ರಧಾನಿಗೆ ದೂರು ನೀಡಿದ್ದರು. ಇದಕ್ಕಾಗಿ ಜನರ ಹಿತದೃಷ್ಟಿಯಿಂದ ಪ್ರಶ್ನೆ ಮಾಡಿದ್ವಿ. ಆದ್ರೆ ಯಾವ ಆಧಾರದ ಮೇಲೆ ಸುಳ್ಳು ಎಂದಿದ್ದಾರೆ ಗೊತ್ತಿಲ್ಲ. ಆದ್ರೆ ನಾವು ಜನರಿಗೆ ಗ್ಯಾರಂಟಿ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದೆವು. ಆದ್ರೆ 40% ಆರೋಪದಿಂದ ಮಾತ್ರ ಸರ್ಕಾರ ಬಂದಿದ್ದು ಅನ್ನೋದು ಸುಳ್ಳು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.