ಮನೆ Latest News ಪುತ್ರನನ್ನು ಗೆಲ್ಲಿಸಿಕೊಳ್ಳಲು ಕುಮಾರಸ್ವಾಮಿ ತಂತ್ರ; ಅಲ್ಪಸಂಖ್ಯಾತ ಮುಖಂಡರ ಜೊತೆ ಹೆಚ್ಡಿಕೆ ಚರ್ಚೆ

ಪುತ್ರನನ್ನು ಗೆಲ್ಲಿಸಿಕೊಳ್ಳಲು ಕುಮಾರಸ್ವಾಮಿ ತಂತ್ರ; ಅಲ್ಪಸಂಖ್ಯಾತ ಮುಖಂಡರ ಜೊತೆ ಹೆಚ್ಡಿಕೆ ಚರ್ಚೆ

0

ರಾಮನಗರ; ಪುತ್ರನನ್ನು ಗೆಲ್ಲಿಸಿಕೊಳ್ಳಲು ಕುಮಾರಸ್ವಾಮಿ ತಂತ್ರ ರೂಪಿಸಿದ್ದು ಅಲ್ಪಸಂಖ್ಯಾತ ಮುಖಂಡರ ಜೊತೆ ಹೆಚ್​ಡಿಕೆ ಚರ್ಚೆ ಮಾಡಿದ್ದಾರೆ. ಬಿಡದಿ ತೋಟದ‌ ಮನೆಯಲ್ಲಿ ಕುಮಾರಸ್ವಾಮಿ ಸಭೆ ಮಾಡಿದ್ದಾರೆ.

ಇಮ್ರಾನ್ ಪಾಷಾ ಸೇರಿ ಅಲ್ಪ ಸಂಖ್ಯಾತ ಮುಖಂಡರ ಜೊತೆ ಚರ್ಚೆ ಮಾಡಿದ್ದಾರೆ.ಸಭೆಯ ಮೂಲಕ ಅಲ್ಪಸಂಖ್ಯಾತ ಮತ ಸೆಳೆಯಲು ಹೆಚ್​ಡಿಕೆ ಯತ್ನ ಮಾಡಿದ್ದಾರೆ. ಚನ್ನಪಟ್ಟಣ ಟೌನ್​ನಲ್ಲೇ ಬೀಡುಬಿಟ್ಟು ಪ್ರಚಾರ ನಡೆಸಲು ಸೂಚನೆ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ಅಲ್ಪಸಂಖ್ಯಾತ ಮುಖಂಡರಿಗೆ ಸೂಚನೆ ಕೊಟ್ಟಿದ್ದಾರೆ. ಹೆಚ್ಚಿನ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್​ಗೆ ಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಇನ್ನು ಚನ್ನಪಟ್ಟಣದಲ್ಲಿ ಹೆಚ್ಡಿಕೆ, ಯದುವೀರ್ ಜಂಟಿ ಕ್ಯಾಂಪೇನ್ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್ಡಿಕೆ ಹೇಳಿಕೆ ನೀಡಿದ್ದು ಯದುವೀರ್ ಅವರಿಗೂ ಅಭಿಮಾನಿಗಳು ಇದ್ದಾರೆ.ಅವರಲ್ಲಿ ಮನವಿ ಮಾಡುವ ನಿಟ್ಟಿನಲ್ಲಿ ಸಮಯ ನಿಗದಿ ಮಾಡಿ ಬರ್ತಾ ಇದ್ದಾರೆ. ಅವರ ಜೊತೆಯಲ್ಲಿ 8- 10 ಹಳ್ಳಿಗಳಿಗೆ ಭೇಟಿ ಕೊಡ್ತಾ ಇದ್ದೀವಿ.ಮುಂದಿನ ನಾಲ್ಕು ದಿನ ಬಂದು ಪ್ರಚಾರ ಮಾಡ್ತಾರೆ. ಒಟ್ಟಾರೆ ಚುನಾವಣೆಯಲ್ಲಿ ನಿನ್ನೆಯಿಂದ ನೋಡ್ತಾ ಇದ್ದೀನಿ. ಯಾರು ಯಾರು ಏನ್ ಹೇಳಿಕೆ‌ ಕೊಡ್ತಾ ಇದ್ದಾರೆ.ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ. ನಿನ್ನೆ ದಿನ ಅವರ ಮಾತುಗಳು ಅದರಲ್ಲೂ ಹಿಂದೆ ನನ್ನ ಜೊತೆ ಇದ್ದವರ ಹೇಳಿಕೆಗಳಿಗಳು ಇದೆ ಅಲ್ವಾ.ಆ ಹೇಳಿಕೆಗಳು ನನ್ನ ಕೆರಳಿಸುವ ಹೇಳಿಕೆಗಳು.ಪಾಪ ಯಾರ್ ಯಾರ್ ವಿಷಯ‌ ತೆಗೆದಿದ್ದಾರೆ.ಈಗ ಚನ್ನಪಟ್ಟಣದಲ್ಲಿ 2010 ರಲ್ಲಿ ಉಪಚುನಾವಣೆ ಆಯ್ತು. ಈಗ ಚೇರ್ಲ್ಲಿ ಕೂತಿದ್ದಾರೆ ಅಲ್ವ ನನ್ನ ಬೈಕೊಂಡು. ಇದೇ ಅಶ್ವತ್ಥರನ್ನ ಅಭ್ಯರ್ಥಿ ಮಾಡಿ ಸಂಪೂರ್ಣ ಚುನಾವಣಾ ವೆಚ್ಚ ಕುಮಾರಸ್ವಾಮಿ ಮಾಡಿಲ್ವಾ ಎಂದು ಪ್ರಶ್ನಿಸಿದ್ದಾರೆ.

ರಾಮನಗರದಲ್ಲಿ  ನಾನು ಲೋಕಸಭೆಗೆ ಆಯ್ಕೆ ಆದಾಗ ಆ ವ್ಯಕ್ತಿ ಜಿಲ್ಲಾ ಪಂಚಾಯತಿ ಸೋತ ವ್ಯಕ್ತಿ. ವಿಧಾನಸಭೆ ಗೆಲ್ಲೋಕೆ ನನ್ನ ಪಾತ್ರ ಇಲ್ವ. ಬರಿ ದೇವೇಗೌಡರ ಕುಟುಂಬದವರು ನಾವು ರಾಜಕಾರಣ ಮಾಡಿದ್ದೀವಾ?.ಮಧುಗಿರಿಯಲ್ಲಿ ಅವತ್ತು ಅಭ್ಯರ್ಥಿ ಇಲ್ಲ ಅದಕ್ಕೆ ಅನಿತಾ ಕುಮಾರಸ್ವಾಮಿ ನಿಲ್ಲಿಸಿದ್ದೆ. ಚನ್ನಪಟ್ಟಣದಲ್ಲಿ ಅಭ್ಯರ್ಥಿ ಇಲ್ಲ ಅಂತ ಕಾರ್ಯಕರ್ತ ಒತ್ತಡಕ್ಕೆ ಅನಿತಾ ಕುಮಾರಸ್ವಾಮಿ ತಲೆ ಕೊಟ್ಟಿದ್ದೆ. ಇದು ಇವರ ಹೇಳಿಕೆ ಇದಿಯಲ್ಲ. ನಮ‌್ಮ ಜಯರಾಮ ಅವರು ಇವತ್ತು ನಮ್ಮ ಮುಂದೆ ಇಲ್ಲ.ಆ ಕುಟುಂಬ ಆ ಪರಿಸ್ಥಿತಿ ಗೆ ಬರೋಕೆ‌ ಕಾರಣ ಯಾರು ಅಂತ‌ ಚರ್ಚೆ ಮಾಡಲ್ಲ.ಸಿದ್ದರಾಜು ಕುಟುಂಬ ಬಗ್ಗೆ ಮಾತಾಡ್ತಾರೆ.ಎಂಎಲ್ಎ ಮಾಡಿದ‌‌ ಮೇಲೆ ಕ್ಷೇತ್ರ ಉಳಿಸಿಕೊಳ್ಳಬೇಕು ಅಲ್ವ. ಕ್ಷೇತ್ರ ಉಳಿಸಿಕೊಳ್ಳುವ ಶಕ್ತಿ ಇಲ್ಲ ಅಂದ್ರೆ ನಾನು ಏನ್ ಮಾಡ್ಲಿ.ಈ ರೀತಿಯ ಹೇಳಿಕೆ ಇದೀಯಲ್ಲ. ಚನ್ನಪಟ್ಟಣ ನನ್ನ ಅಭಿವೃದ್ಧಿ ಕೆಲಸ ಮಾಡಿಲ್ಲ ಅಂತ ಹೇಳ್ತಾರೆ ಅಲ್ವ.ಇದನ್ನ‌ ಜನ ತೀರ್ಮಾನ ಮಾಡ್ತಾರೆ ಎಲ್ಲಾ ಎಂದಿದ್ದಾರೆ.

ಇನ್ನು ಹೆಚ್‌ಡಿಡಿ ಆಂಬುಲೆನ್ಸ್ ಬಂದು ಪ್ರಚಾರ ಮಾಡ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆ‌ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಆಂಬುಲೆನ್ಸ್ನಲ್ಲಿ ದೇವೇಗೌಡರು ಬಂದು ಪ್ರಚಾರ ಮಾಡ್ತಾರೆ ಅಂತ ಹೇಳಿಕೆ ಇದೆ ಅಲ್ವಾ, ಅಶ್ವಥ್ ಕೊಟ್ಟಿದ್ದ ಹೇಳಿಕೆಯನ್ನ ಇವರು ಮರು ಹೇಳಿಕೆಯನ್ನ ಡಿಕೆ ಸುರೇಶ್ ಕೊಡ್ತಾ ಇದ್ದಾರೆ. ದೇವೇಗೌಡರ ಆರೋಗ್ಯವನ್ನ ಅಷ್ಟು  ಕೇವಲವಾಗಿ ಮಾತಾಡ್ತಾ ಇದ್ದಾರೆ. ಇದೇ ಅಶ್ವಥ್ ಪರ ಹಳ್ಳಿ ಹಳ್ಳಿಗೆ‌ ದೇವೇಗೌಡರು ಪ್ರಚಾರಕ್ಕೆ ಬಂದಿದ್ರು ಅಲ್ವಾ. ಆಗ ವ್ಯಾಮೋಹಕ್ಕೆ‌ ದೇವೇಗೌಡರು ಬಂದಿದ್ರಾ. ದೇವೇಗೌಡರ ಬರ್ತಾ ಇರೋದು ಅವರ ಮೊಮ್ಮಗನ ಪಟ್ಟಾಭಿಷೇಕಕ್ಕಾಗಿ ಹೇಳ್ತೀರಾ ಅಲ್ವ. ಅಶ್ವಥನ ಗೆಲ್ಲಿಸಬೇಕಾದರೆ ಅವತ್ತು ದೇವೇಗೌಡರು‌ ಹೋಗಿರಲಿಲ್ವ ಅಲ್ಲಿ. ಅವತ್ತು ಯಾರಿಗೋಸ್ಕರ ಹೋಗಿದ್ರು ದೇವೇಗೌಡರು ಅಲ್ಲಿಗೆ.ಈ ರೀತಿಯ ಸಣ್ಣತನದ ಮಾತುಗಳು ಇದೀಯಲ್ಲ. ಇದಕ್ಕೆ ಕಾಲವೇ ಉತ್ತರ ನೀಡುತ್ತೆ‌ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.