ಬೆಂಗಳೂರು; ಇಡೀ ದೇಶದಲ್ಲಿ ತೆರಿಗೆ ಪಾವತಿಯಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದಾರೆ.
ಇಡೀ ದೇಶದಲ್ಲಿ ತೆರಿಗೆ ಪಾವತಿಯಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಹಲವು ವರ್ಷಗಳಿಂದ ಹೇಳ್ತಿದಾರೋದು ತೆರಿಗೆಗೆ ಸೂಕ್ತ ಮರು ಪಾವತಿ ಮಾಡಿ ಎಂದು.ಉತ್ತರ ಪ್ರದೇಶ 100 ರೂಪಾಯಿ ತೆರಿಗೆ ಪಾವತಿ ಮಾಡಿ 300 ರೂಪಾಯಿ ಪಡೆಯುತ್ತಿದೆ.ಮಧ್ಯ ಪ್ರದೇಶ ನೂರು ರೂಪಾಯಿ ತೆರಿಗೆ ಪಾವತಿ ಮಾಡಿ 290 ರೂಪಾಯಿ ಪಡೆಯುತ್ತಿದೆ .ಬಿಹಾರ ನೂರು ರೂಪಾಯಿ ತೆರಿಗೆ ಪಾವತಿ ಮಾಡಿ 918 ರೂಪಾಯಿ ಪಡೆಯುತ್ತಿದೆ.ರಾಜ್ಯಕ್ಕೆ13 ರೂಪಾಯಿ ಅಷ್ಟೇ ಸಿಕ್ತಿದೆ .ನಾಲ್ಕೂವರೆ ಲಕ್ಷ ರೂಪಾಯಿ ಐಟಿ ಹಣ ಕೂಡ ಕರ್ನಾಟಕಕ್ಕೆ ಬರ್ತಿಲ್ಲ.ತೆರಿಗೆ ತಾರತಮ್ಯ ನಿವಾರಣೆಯಿಂದ ಮೂಲಸೌಕರ್ಯ, ಉದ್ಯೋಗಕ್ಕೂ ಅನುಕೂಲ ಆಗಲಿದೆ ಎಂದಿದ್ದಾರೆ.
ಹಣಕಾಸು ಆಯೋಗಕ್ಕೂ ರಾಜ್ಯದ ತೆರಿಗೆ ತಾರತಮ್ಯದ ಬಗ್ಗೆ ಮನವಿ ಮಾಡಿದ್ದೇವೆ.ಮೋದಿಯವರಿಂದ ಆಗ್ತಿರೋ ಅನ್ಯಾಯದ ಬಗ್ಗೆ ಮಾತನಾಡಲು ಬಿಜೆಪಿ ಸಂಸದರ ಬಾಯಿಗೆ ಹೊಲಿಗೆ ಬಿದ್ದಿದ್ಯಾ?ನಿರ್ಮಲ ಸೀತಾರಾಮ ಕೂಡ ಮಾತಾಡ್ತಿಲ್ಲ ಅವರಿಗೂ ವೈಜ್ಞಾನಿಕವಾಗಿ ಮಾಡಿ ಎಂದು ಹೇಳ್ತೇವೆ.ತಮ್ಮ ವೈಯಕ್ತಿಕ ಸಿಟ್ಚುನ್ನ ಕನ್ನಡಿಗರ ಮೇಲೆ ತೀರಿಸಿಕೊಳ್ಳಬೇಡಿ.ತೆರಿಗೆ ವಿಚಾರದ ಬಗ್ಗೆ ನಮ್ಮ ಹೋರಾಟ ಮುಂದುವರಿಸ್ತೇವೆ.ಕನ್ನಡಿಗರ ಪರವಾಗಿ ಸಂಸದರು ಧ್ವನಿ ಎತ್ತುತ್ತಿಲ್ಲ.ದಕ್ಷಿಣ ಭಾರತ ಆರ್ಥಿಕ ಕೊಡುಗೆಯಲ್ಲಿ ನಾವು ಮುಂದಿದ್ದೇನೆ.ಇಂತಹ ರಾಜ್ಯಗಳ ಪೋಷಣೆ ರಾಷ್ಟ್ರಕ್ಕೆ ಲಾಭ.ರಾಜ್ಯದ ಮೇಲೆ ತೆರಿಗೆ ಮೂಲಕ ಕೇಂದ್ರ ಸರ್ಕಾರ ದ್ವೇಷ ತೀರಿಸಿಕೊಳ್ತಿದ್ದಾರೆ ಎಂದಿದ್ದಾರೆ.
ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ; ಕೇಂದ್ರಕ್ಕೆ ಎಚ್ಚರಿಕೆ ಕೊಟ್ಟ ಡಿ ಕೆ ಸುರೇಶ್
ಬೆಂಗಳೂರು; ತೆರಿಗೆ ತಾರತಮ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿ ಕೆ ಸುರೇಶ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.ಕಳೆದ ಬಾರಿಯೇ ಈ ವಿಷಯ ಪ್ರಸ್ತಾಪ ಮಾಡಿದ್ದೆ.ರಾಜ್ಯ ಹಾಗೂ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಅಂತ.ನಿನ್ನೆ ಕೇಂದ್ರ ಸರ್ಕಾರ ತೆರಿಗೆ ಹಣ ಬಿಡುಗಡೆ ಮಾಡಿದೆ.ದಕ್ಷಿಣ ಭಾರತಕ್ಕೆ ೨೮೧೫೨ ಕೋಟಿ ರೂಪಾಯಿ ನೀಡಿದ್ದಾರೆ.ಉತ್ತರ ಪ್ರದೇಶಕ್ಕೆ ಮಾತ್ರ ೩೨ ಸಾವಿರ ಕೋಟಿ ಕೊಟ್ಟಿದ್ದಾರೆ.ಪದೆ ಪದೆ ಕೆಣಕುವ ಪ್ರಯತ್ನ ನಡೀತಾ ಇದೆ.ದುಃಖದಿಂದ ಈ ಮಾತು ಹೇಳಬೇಕಿದೆ.ರಾಜ್ಯದ ಅಭಿವೃದ್ಧಿಗೆ ಅನ್ಯಾಯವಾಗುತ್ತಿದೆ.ದಕ್ಷಿಣ ಭಾರತದ ರಾಜ್ಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು.ಬಿಜೆಪಿಯ ೧೯ ಸಂಸದರು ಇದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಇದೆ.ಆದ್ರೆ ಸಂಸದರು ಧ್ವನಿ ಎತ್ತುತ್ತಿಲ್ಲ.ನಾನು ಒತ್ತಾಯ ಮಾಡುತ್ತೇನೆ.ನಿಮ್ಮ ನೀತಿ ಬದಲಾವಣೆ ಮಾಡಿ.ರಾಜ್ಯಕ್ಕೆ,ದಕ್ಷಿಣ ಭಾರಯಕ್ಕೆ ಹೆಚ್ಚಿನ ತೆರಿಗೆ ನೀಡಿ ಎಂದು ಡಿ ಕೆ ಸುರೇಶ್ ಮನವಿ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಪ್ರತ್ಯೇಕ ದಕ್ಷಿಣ ಭಾರತ ನನ್ನ ಕೂಗಲ್ಲ.ತಮಿಳುನಾಡಿನಲ್ಲಿ ಬಹಳ ಹಿಂದೆಯೆ ಇತ್ತು. ಈಗ ಮತ್ತೆ ಅನ್ಯಾಯ ಮಾಡಿ ಕೂಗು ಏಳಿಸಬೇಡಿ.ನಾವು ಭಾರತಾಂಬೆಯ ಮಕ್ಕಳು.ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಡಿ ಕೆ ಸುರೇಶ್ ಎಚ್ಚರಿಕೆ ಕೊಟ್ಟಿದ್ದಾರೆ.