ಮನೆ Latest News ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮೇಲೆ ಎಫ್ ಐ ಆರ್ ಪ್ರಕರಣ; ದ್ವೇಷ ,ಅಸೂಯೆಯಿಂದ...

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮೇಲೆ ಎಫ್ ಐ ಆರ್ ಪ್ರಕರಣ; ದ್ವೇಷ ,ಅಸೂಯೆಯಿಂದ ಕೇಸ್ ಹಾಕಲಾಗ್ತಿದೆ ಎಂದ ಜೆಡಿಎಸ್ ಎಂಎಲ್ಸಿ ತಿಪ್ಪೇಸ್ವಾಮಿ

0

ಬೆಂಗಳೂರು; ಉದ್ಯಮಿ ವಿಜಯ್ ಟಾಟಾ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮೇಲೆ 50 ಕೋಟಿ ಕೊಡುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಫ್ ಐ ಆರ್ ದಾಖಲಿಸಿದ್ದಾರೆ. ಈ ಬಗ್ಗೆ  ಜೆಡಿಎಸ್ ಎಂಎಲ್ಸಿ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿದ್ದುವಿಜಯ್ ಟಾಟಾ ಜೆಡಿಎಸ್ ನಲ್ಲಿ ಇಲ್ಲ. ಎರಡು ವರ್ಷದಿಂದ ಜೆಡಿಎಸ್ ಸದಸ್ಯತ್ವ ನವೀಕರಣ ಮಾಡಿಕೊಂಡಿಲ್ಲ ಎಂದಿದ್ದಾರೆ. ಅವರು ಪಕ್ಷದ ಯಾವುದೇ ಕಾರ್ಯ ಚಟುವಟಿಕೆಯಲ್ಲಿ ಇಲ್ಲ ಎಂದು ಜೆಡಿಎಸ್ ಎಂಎಲ್ಸಿ ತಿಪ್ಪೇಸ್ವಾಮಿ ಹೇಳಿದ್ದಾರೆ.

ವಿಜಯ್ ಟಾಟಾ ಪಕ್ಷದ ಹೆಸರನ್ನ ಅವರು ದುರುಪಯೋಗ ಮಾಡಿಕೊಳ್ತಿದ್ದಾರೆ.ಅವರ ವಿರುದ್ಧ ನಾವು ಕ್ರಮ ಜರುಗಿಸುತ್ತೇವೆ. ರಾಜ್ಯದಲ್ಲಿ ಯಾವುದೇ ದಾಖಲೆ‌ ಇಲ್ಲದೆ ಎಫ್ ಐ ಆರ್ ಹಾಕಲಾಗ್ತಿದೆ.ಶಾಸಕರು, ಸಚಿವರು, ಕೇಂದ್ರ ಸಚಿವರ ಮೇಲೂ ಕ್ಷುಲ್ಲಕ ಕಾರಣಕ್ಕೆ ಎಫ್ ಐ ಆರ್ ದಾಖಲಾಗ್ತಿದೆ ಎಂದು ಹೇಳಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ರಮೇಶ್ ಗೌಡ ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡುತ್ತೇನೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೂ ಪ್ರಮಾಣ ಮಾಡ್ತೇನೆ. ೨೦೨೧ ರಿಂದ ಇಲ್ಲಿ ವರೆಗೆ ನನಗೂ ವಿಜಯ್ ಟಾಟಾ ಗೂ ವ್ಯವಹಾರ ಇಲ್ಲ. ಇಂಥ ಮನೆ ಹಾಳು ಕೆಲಸ ಮಾಡಿಲ್ಲ. ಕಂಡೋರ ಮನೆಗೆ ಕಂಪೌಂಡ್ ಹಾಕಿಲ್ಲ ನಾನು.ನನ್ನ ಮೇಲೆ ಯಾವ ಕೇಸೂ ಇಲ್ಲ.ವಿಜಯ್ ಟಾಟಾ ಮನೆ ಪಕ್ಕದಲ್ಲೇ ಪೊಲೀಸ್ ಸ್ಟೇಷನ್ ಇದೆ. ೫೦ ಕೋಟಿ ಕೇಳಿದ್ರೆ ಅವತ್ತೇ ಯಾಕೆ ವಿಜಯ್ ಟಾಟಾ ಕಂಪ್ಲೆಂಟ್ ಕೊಡಲಿಲ್ಲ.ಇದಕ್ಕೆ ಮಾನ ಮರ್ಯಾದೆ ಇದೆಯಾ? ಸೂಜಿ ಮೊನೆಯಷ್ಟು ಸತ್ಯ ಇದೆಯಾ? ಎಂದು ಪ್ರಶ್ನಿಸಿದ್ದಾರೆ.