ಮನೆ Latest News ಸಿಎಂ ಪ್ರಾಸಿಕ್ಯೂಷನ್ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ; ಆದಿಚುಂಚನಗಿರಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ...

ಸಿಎಂ ಪ್ರಾಸಿಕ್ಯೂಷನ್ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ; ಆದಿಚುಂಚನಗಿರಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ.

0

ಮಂಡ್ಯ;  ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು  ಆದಿಚುಂಚನಗಿರಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ನನ್ನ ಯಾವುದೇ ತೀರ್ಮಾನ ಆಗದೇ ಇದ್ರು ನನ್ನ ಆರೋಪಿ ಮಾಡ್ತಾ ಇದ್ದಾರೆ.ನನ್ನ ಮೇಲಿನ ಆರೋಪ ಎಲ್ಲಾ ಮುಗಿಲಿ.ಅದೇಲ್ಲಾ ಮುಗಿದ ಮೇಲೆ ಮಾತಾಡ್ತೀನಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರು ಪಾದಯಾತ್ರೆಗೆ ನಾನು‌ ಹೋಗಿದ್ದೆ. ಪಾದಯಾತ್ರೆಯಲ್ಲಿ ನಾನು ಜನರನ್ನು ಜಾಗೃತರನ್ನಾಗಿ ಮಾಡುವ ಕೆಲಸ ಮಾಡಿದ್ದೇನೆ.ಇವರ ಬಗ್ಗೆ ನಾನೇನು ಮಾತಾಡಿಲ್ಲ.ನಾನು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿಲ್ಲ.ಇರುವ ಪರಿಸ್ಥಿತಿಯನ್ನು ಜನರಿಗೆ ಹೇಳಿದ್ದೇನೆ ಎಂದಿದ್ದಾರೆ.

ದೇಶದ ಕಾನೂನನಲ್ಲಿ ರಕ್ಷಣೆ ಕೊಡಲು ಸಂವಿಧಾನದಲ್ಲಿ ಅವಕಾಶ ಇದೆ.ಕಾನೂನು ಬಾಹಿರ ಚಟುವಟಿಕೆ ಮಾಡಿದ್ರೆ ಏನು ತೀರ್ಪು ಬೇಕು ಅದು ಕೊಡ್ತಾರೆ.ಕಾನೂನಿನ ಒಳಗೆ ಇದ್ದರೆ ಏನು ಬೇಕಾದ್ರು ಆಗಬಹುದು.ನಾನು ಸಿದ್ದರಾಮಯ್ಯ ಅವರಿಗೆ ಏನು ಹೇಳಲ್ಲ.ನನ್ನ ಅಭಿಪ್ರಾಯ ನಾನು ಹೇಳಲ್ಲ.ಕುಮಾರಸ್ವಾಮಿ ಏನೋ ಮಾಡಿದ್ದಾನೆ ಎಂದು ಹೇಳಿದ್ದಾರೆ.ನನ್ನ ನೈತಿಕತೆ ಏನು ಅನ್ನೊದು ಕ್ಲೀಯರ್ ಆಗಬೇಕು.ಗ್ರೇಟ್ ಪಾಲಿಟಿಷಿಯನ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ.ಅದೆಲ್ಲಾ ಕ್ಲಿಯರ್ ಆದ ಬಳಿಕ ಮಾತಾಡ್ತೀನಿ.ಸಿಎಂ ನೈತಿಕ ಹೊಣೆ ಹೊರಲಿಲ್ಲ ಅಂದ್ರೆ ನಾನು‌ ಹೇಳೊಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ನನ್ನ ಇಕ್ಕಟ್ಟಿಗೆ ಸಿಲುಕಿಸಲು ಹೋಗಿದ್ದಾರೆ.ನಾನು ಹೆದರುವವನಲ್ಲ.ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡೋನು ನಾನು.ನಾಲ್ಕೈದು ಮಂದಿ ಬಿಡಾಡಿ ಮಂತ್ರಿಗಳು ನನ್ನ ಮೇಲೆ ಆರೋಪ ಮಾಡಿದ್ದಾರೆ.ನನ್ನ ಮೇಲೆ ಷಡ್ಯಂತ್ರ ನಡೆಯುತ್ತಿರೋ ಬಗ್ಗೆ ಇನ್ನೂ ಅನುಮಾನ ಇದ್ಯಾ.ನಾನು ಇದನ್ನು ಷಡ್ಯಂತ್ರ ಅನ್ನಲ್ಲಾ, ಕುಮಾರಸ್ವಾಮಿ ಕೇಂದ್ರ ಸಚಿವನಾಗಿರೋದನ್ನು‌ ಸಹಿಸುತ್ತಿಲ್ಲ. ಜನರ ಮಧ್ಯ ಕಂದಕ ಸೃಷ್ಟಿ ಮಾಡಲು ಹೀಗೆ ಮಾಡ್ತಾ ಇದ್ದಾರೆ.ಯಾವ ಮಂತ್ರಿ ಬಿಡಾಡಿಗಳು ಏನು ಮಾಡೋಕೆ ಆಗಲ್ಲ.ಕಾಲ ಭೈರವೇಶ್ವರನ ಸನ್ನಿಧಿಯಲ್ಲಿ ಹೇಳುತ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಹೈಕೋರ್ಟ್ ತೀರ್ಪಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದೇನು?

ಬೆಂಗಳೂರು;  ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಾನು ಹಾಕಿದ್ದ ರೀಟ್ ಪಿಟಿಷನ್ ಮೇಲೆ ಹೈಕೋರ್ಟ್ ಆದೇಶ ನೀಡಿದೆ.ನಾನು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದೆ.ಅದರ ಮೇಲೆ‌ ವಾದ ಪ್ರತಿವಾದ ನಡೆದಿದೆ.ಈಗ ಆದೇಶ ಬಂದಿದೆ.ಆದ್ರೆ ಪೂರ್ಣ ತೀರ್ಪು ಓದೋಕೆ ಆಗಿಲ್ಲ. ನೋಡಿದ್ಮೇಲೆ ಪೂರ್ಣ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.

ರಾಜ್ಯಪಾಲರು ದೂರುದಾರರ ಮೇಲೆ ೧೭ಎ, ೨೧೮ ಬಿಎನ್ ಎಸ್ ಎಸ್ ಮತ್ತು ೧೯ ಪಿಸಿ ಆ್ಯಕ್ಟ್ ಅದರ ಮೇಲೆ ಸ್ಯಾಕ್ಷನ್ ಕೂಡಿ ಅಂತ ಕೇಳಿದ್ವಿ.ಆದ್ರೆ ನ್ಯಾಯಮೂರ್ತಿ ಗಳು ೨೧೮ ಬಿಎನ್ ಎಸ್ ಎಸ್ ಅದನ್ನ ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಗೆ ೨೧೮ ಬಿಎನ್ ಎಸ್ಎಸ್ ಪ್ರಕಾರ ಕೊಟ್ಟಿಲ್ಲ.ಆದ್ರೆ ೧೭ಎ ಪ್ರಕಾರ ತನಿಖೆಗೆ ಅನುಮತಿ ಕೊಟ್ಟಿದ್ದಾರೆ.ಇದರ ಮೇಲೆ ಯಾವ ರೀತಿ ಹೋರಾಟ ಮಾಡಬೇಕು ಅಂತ ಕಾನೂನು ತಜ್ಞರ ಜೊತೆ ಚರ್ವೆ ಮಾಡಿ ಮುಂದಿನ ಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ನಾನು, ಕೆಪಿಸಿಸಿ ಅಧ್ಯಕ್ಷರು ಸೇರಿ ಎಲ್ಲರು ಚರ್ಚೆ ಮಾಡುತ್ತೇವೆ.ಬಿಜೆಪಿ ಜೆಡಿಎಸ್ ನವರ ಸಂಚು ಒಳ ಸಂಚು, ರಾಜಭವನ ದುರ್ಬಳಕೆಗೆ ನಾವು ಹೆದರಲ್ಲ.ನಮ್ಮ ರಾಜ್ಯದ ಜನ ನಮ್ಮ ಪರ ಇದೆ.ಜನರ ಆಶೀರ್ವಾದ ನಮ್ಮ ಪರ ಇದೆ.ಡಿಸಿಎಂ ಡಿಕೆ ಆದಿಯಾಗಿ ಸಚಿವರು, ಶಾಸಕರು ಕಾರ್ಯಕರ್ತರು ಮತ್ತು ಹೈಕಮಾಂಡ್ ನನ್ನ ಜೊತೆ ಇದೆ.ಕಾನೂನು ಹೋರಾಟಕ್ಕೆ ಸಾಥ್ ಕೊಡುತ್ತಾರೆ ಎಂದು ಹೇಳಿದ್ದಾರೆ.

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಡೀ ದೇಶದಲ್ಲಿ ಸೇಡಿನ ರಾಜಕೀಯ ಮಾಡುತ್ತಿದೆ.ವಿರೋಧ ಪಕ್ಷಗಳು ಇರುವ ರಾಜ್ಯದಲ್ಲಿ ಸೇಡಿನ ರಾಜಕಾರಣ ಮಾಡುತ್ತಾರೆ.ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ನವರು ಸ್ವಂತ ಕಾಲದಲ್ಲಿ ಅಧಿಕಾರಕ್ಕೆ ಬಂದಿಲ್ಲ.ಅವರು ಅಧಿಕಾರಕ್ಕೆ ಬಂದಿರೋದು ಹಣಬಲ, ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ.ನಾವು ೧೩೬ ಗೆದ್ದಮೇಲೆ ಆಪರೇಷನ್ ಕಮಲ ಮಾಡೋಕೆ ಪ್ರಯತ್ನ ಮಾಡಿದರು.ದುಡ್ಡು ಕೊಟ್ಟು ಶಾಸಕರನ್ನ ಸೆಳೆಯೋಕೆ ಪ್ರಯತ್ನ ಮಾಡಿದರು.ಆದ್ರೆ ನಮ್ಮ ಶಾಸಕರು ಬಿಜೆಪಿಯವರು ಆಮಿಷಕ್ಕೆ ಒಳಗಾಗಲಿಲ್ಲ, ಸಫಲ ಆಗಿಲ್ಲ. ನಮ್ಮ ಕಾರ್ಯಕ್ರಮ ಗಳನ್ನ ವಿರೋಧ ಮಾಡುತ್ತಿದ್ದಾರೆ.ನಮ್ಮ ಗ್ಯಾರಂಟಿ ಯೋಜನೆ ವಿರೋಧಿಸುತ್ತಿದ್ದಾರೆ.ಎಲ್ಲಾ ಭಾಗ್ಯಗಳನ್ನ ವಿರೋಧ ಮಾಡುತ್ತಿದ್ದಾರೆ.ಸಾಮಾಜಿಕ ನ್ಯಾಯ ಹಾಗೂ ಬಡವರಿಗೆ ವಿರುದ್ದವಾಗಿವವರು.ಸರ್ಕಾರಕ್ಕೆ ಕಪ್ಪು ಮಸಿ ಬಳಿಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ.ಇನ್ನೂ ಹೈಕೋರ್ಟ್ ತೀರ್ಪಿನ್ನ ಓದೋಕೆ ಆಗಿಲ್ಲ.ಓದಿ ನಂತ್ರ ಮತ್ತಷ್ಟು ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.