ಮನೆ Latest News ಮೈಸೂರು ದಸರಾ ಮಹೋತ್ಸವಕ್ಕೆ ಪಟ್ಟದ ಆನೆಯಾಗಿ ಕಂಜನ್, ನಿಶಾನೆ ಆನೆಯಾಗಿ ಭೀಮಾ ಆಯ್ಕೆ

ಮೈಸೂರು ದಸರಾ ಮಹೋತ್ಸವಕ್ಕೆ ಪಟ್ಟದ ಆನೆಯಾಗಿ ಕಂಜನ್, ನಿಶಾನೆ ಆನೆಯಾಗಿ ಭೀಮಾ ಆಯ್ಕೆ

0

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಹಾಗಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಗಜಪಡೆ ಕೂಡ ಭರ್ಜರಿ ತಾಲೀಮಿನಲ್ಲಿ ನಿರತವಾಗಿದೆ. ಇನ್ನು ಈ ಬಾರಿಯ ಅರಮನೆಯ ಖಾಸಗಿ ದರ್ಬಾರ್ ಗಾಗಿ ಪಟ್ಟದ ಆನೆ, ನಿಶಾನೆ ಆನೆಯನ್ನು ಆಯ್ಕೆ ಮಾಡಲಾಗಿದೆ.

ಹೌದು.. ಈ ಬಾರಿಯ ದಸರಾ ಮಹೋತ್ಸವದ ಖಾಸಗಿ ದರ್ಬಾರ್ ಗಾಗಿ  ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಅವರು ಅರಮನೆಯಲ್ಲಿ ಅವರು ಖಾಸಗಿ ದರ್ಬಾರ್ ಗಾಗಿ ಪಟ್ಟದ ಆನೆ, ನಿಶಾನೆ ಆನೆಯನ್ನು ಆಯ್ಕೆ ಮಾಡಿದ್ದಾರೆ.

ಮೈಸೂರು ದಸರಾದ ಖಾಸಗಿ ದರ್ಬಾರ್ ಗೆ ಪಟ್ಟದ ಆನೆಯಾಗಿ ಕಂಜನ್ ಹಾಗೂ ನಿಶಾನೆ ಆನೆಯಾಗಿ ಭೀಮನನ್ನು ಆಯ್ಕೆ ಮಾಡಲಾಗಿದೆ ಎಂದು ಡಿಸಿಎಫ್ ಡಾ ಪ್ರಭುಗೌಡ ಹೇಳಿದ್ದಾರೆ.ಇನ್ನು ಖಾಸಗಿ ದರ್ಬಾರ್ ಗಾಗಿ  ನಿನ್ನೆ ಮಹಾರಾಣಿ ಪ್ರಮೋದ ದೇವಿ ಒಡೆಯರ್ ರವರು ಆನೆಗಳನ್ನ ವೀಕ್ಷಿಸಿದ್ರು. ಈ ವೇಳೆ ಅರಮನೆಯಲ್ಲಿನ ಖಾಸಗಿ ದರ್ಬಾರ್ ಗೆ ಎರಡು ಆನೆಗಳನ್ನ ಆಯ್ಕೆ ಮಾಡಿದ್ದಾರೆ ಎಂದರು.

ಇನ್ನು ಶ್ರೀರಂಗಪಟ್ಟಣದ ದಸರಾ ಆನೆ, ದಸರಾ ನಿಶಾನೆ ಆನೆ ಆಯ್ಕೆ ಬಾಕಿಯಿದೆ. ಈಗಾಗಲೇ ಎಲ್ಲಾ ಆನೆಗಳು ಭರ್ಜರಿಯಾಗಿ ತಾಲೀಮಿನಲ್ಲಿ ನಿರತವಾಗಿವೆ.ತಾಲೀಮಿನ ಬಳಿಕ ಆನೆಗಳಿಗೆ ಈಗ ಜವಬ್ದಾರಿ ನೀಡಲಾಗುತ್ತೆ.. ಇನ್ನೆರಡು ದಿನಗಳಲ್ಲಿ ಎಲ್ಲವೂ ಪಕ್ಕಾ ಆಗುತ್ತೆ ಅಂತಾ ಮೈಸೂರಿನಲ್ಲಿ ಡಿಸಿಎಫ್ ಡಾ.ಪ್ರಭುಗೌಡ ತಿಳಿಸಿದ್ದಾರೆ.

ಅಂದ್ಹಾಗೆ ಮೊನ್ನೆ ಶುಕ್ರವಾರ ರಾತ್ರಿ 8 ಗಂಟೆ ವೇಳೆ ಕಂಜನ್ ಹಾಗೂ ಧನಂಜಯ ಆನೆ ಮಧ್ಯೆ ಗಲಾಟೆಯಾಗಿ ಕಂಜನ್ ಆನೆಯನ್ನು ಧನಂಜಯ ಆನೆ ಅಟ್ಟಾಡಿಸಿ ಆತಂಕ ಸೃಷ್ಟಿಸಿದ್ದ. ನಡುರಸ್ತೆಯಲ್ಲಿ ಓಡಾಡಿದ ಆನೆಗಳನ್ನು ಕಂಡು ಮೈಸೂರಿಗರು ಬೆಚ್ಚಿ ಬಿದ್ದಿದ್ದರು.ಬಳಿಕ ಮಾವುತರು ಆನೆಗಳನ್ನು ನಿಯಂತ್ರಿಸಿ ಅನುಹಾತವನ್ನು ತಪ್ಪಿಸಿದ್ದರು.

ಮೈಸೂರಿಗೆ ಆಗಮಿಸಿದ ದಸರಾ ಗಜಪಡೆ: ಆನೆಗಳಿಗೆ ವಿಮೆ ಮಾಡಿಸಿದ ಅರಣ್ಯ ಇಲಾಖೆ‌

ಮೈಸೂರು; ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದೆ. ಈಗಾಗಲೇ 14 ಆನೆಗಳು ನಾಡಹಬ್ಬದಲ್ಲಿ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಮೈಸೂರಿಗೆ ಆಗಮಿಸಿವೆ. ಇನ್ನು ಮೈಸೂರಿಗೆ ಆಗಮಿಸಿದ ಆನೆಗಳ ಟೀಂಗೆ ಅರಣ್ಯ ಇಲಾಖೆ‌ ವಿಮೆ ಮಾಡಿಸಿವೆ.

ಇಂದು ಮೈಸೂರಿಗೆ ಆನೆಗಳ ಮೊದಲ ತಂಡ ಎಂಟ್ರಿಯಾಗಿದೆ. ಈ ಆನೆಗಳಿಗೆ ಅರಣ್ಯ ಇಲಾಖೆ ವಿಮೆ ಮಾಡಿದ್ದು, ಆನೆಗಳಿಗೆ 87 ಲಕ್ಷದ 50 ಸಾವಿರ ರೂಪಾಯಿ,  ಸಿಬ್ಬಂದಿಗೆ 1 ಕೋಟಿ, ಹಾಗೂ ಸಾರ್ವಜನಿಕರು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ 50 ಲಕ್ಷ ರೂಪಾಯಿಗಳನ್ನು ಅರಣ್ಯ ಇಲಾಖೆ ವಿಮೆ ಮಾಡಿಸಿದೆ.ಇದಕ್ಕಾಗಿ ವಿಮಾ ಕಂಪನಿಗೆ ಪ್ರೀಮಿಯಂ ಹಣ ಪಾವತಿ ಮಾಡಲಾಗಿದೆ.

ಇಂದಿನಿಂದ ಮತ್ತೆ ಗಜಪಡೆ ದಸರಾ ಮುಗಿಸಿ ಮತ್ತೆ ಕಾಡಿಗೆ ವಾಪಾಸ್ ತೆರಳುವವರೆಗೂ ಈ ವಿಮೆ ಚಾಲ್ತಿಯಲ್ಲಿರುತ್ತದೆ.ನಾಲ್ಕು ಮೀಸಲು ಆನೆಗಳನ್ನು ಸೇರಿ ಒಟ್ಟು 18 ಆನೆಗಳಿಗೆ 87 ಲಕ್ಷದ 50 ಸಾವಿರ ರೂಪಾಯಿ ವಿಮೆ ಮಾಡಲಾಗಿದೆ. ಇನ್ನು ಅರಣ್ಯಧಿಕಾರಿಗಳು, ಮಾವುತರು, ಕಾವಾಡಿಗಳಿಗೆ ತಲಾ 2 ಲಕ್ಷದಂತೆ 50 ಜನರಿಗೆ 1 ಕೋಟಿ ವಿಮೆ ಮಾಡಿಸಲಾಗಿದೆ.ಅದೇ ರೀತಿ ಸಾರ್ವಜನಿಕರು ಮತ್ತು ಆಸ್ತಿಪಾಸ್ತಿಗೆ 50 ಲಕ್ಷ ವಿಮೆ ಮಾಡಲಾಗಿದೆ. ಆನೆಗಳು ಮೈಸೂರು ದಸರಾದಲ್ಲಿ ಪಾಲ್ಗೊಳುವ ತನಕ  ತಾಲೀಮು ಅಥವ ಇನ್ನಿತರ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಥವ ಸಾರ್ವಜನಿಕ ಆಸ್ತಿಗೆ ತೊಂದರೆ ಮಾಡಿದರೆ ಎಂದು ಅದಕ್ಕಾಗಿ 50 ಲಕ್ಷದ ವರೆಗೆ ವಿಮೆ ಸೌಲಭ್ಯ ಮಾಡಲಾಗಿದೆ. ಅದರಂತೆ ಒಟ್ಟು ಒಟ್ಟು 2 ಕೋಟಿಯ 37 ಲಕ್ಷದಜ 50 ಸಾವಿರ ರೂಪಾಯಿ ವಿಮೆಯನ್ನು ಅರಣ್ಯ ಇಲಾಖೆ ಮಾಡಿದೆ.