ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಬಿಜೆಪಿ ಸಮನ್ವಯ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಡಿ ವಿ ಸದಾನಂದ ಗೌಡ, ಅರವಿಂದ ಬೆಲ್ಲದ್, ಗೋವಿಂದ ಕಾರಜೋಳ, ಶ್ರೀರಾಮುಲು, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎನ್ ರವಿಕುಮಾರ್ ಭಾಗಿಯಾಗಿದ್ದರು.
ಬಿಜೆಪಿ ಜೆಡಿಎಸ್ ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈವರಾಜ್ಯದ ಜನ ಬಹಳ ನಿರೀಕ್ಷೆ ಇಟ್ಟಿದ್ರು. ಜನರ ನೀರೀಕ್ಷೆ ಹುಸಿಯಾಗಿದೆ.ಭ್ರಷ್ಟಾಚಾರ ರಹಿತ ಆಡಳಿತ ಕೊಡ್ತೀವಿ ಅಂತ ಹೇಳಿದ್ರು.ಇಂದು ರಾಜ್ಯದಲ್ಲಿ ಭೂ ಹಗರಣ, ಭ್ರಷ್ಟಾಚಾರ ನಡೆದಿದೆ.ಎಸ್ಟಿ ನಿಗಮ ಹಣ ದುರುಪಯೋಗ ಆಗಿದೆ.ನಮ್ಮ ಅಧ್ಯಕ್ಷ ವಿಜಯೇಂದ್ರ ಅವರು ಮತ್ತು ಶಾಸಕರು ಸದನದಲ್ಲಿ ಗಟ್ಟಿ ಧ್ವನಿ ಇಂದ ವಾಲ್ಮೀಕಿ ಹಗರಣದ ಬಗ್ಗೆ ಚರ್ಚೆ ಮಾಡಿದ್ದಾರೆ.ಸಿಎಂ ಹೇಳಿಕೆ ಬಗ್ಗೆ ಎದುರಿಸೋ ಕೆಲಸ ಸದನದ ಒಳಗೆ, ಹೊರಗೆ ಮಾಡಿದ್ದಾರೆ.ಕುಮಾರಸ್ವಾಮಿ, ವಿಜಯೇಂದ್ರ, ಪ್ರಹ್ಲಾದ್ ಜೋಶಿ, ಯಡಿಯೂರಪ್ಪ, ಅಶೋಕ್ ಸೇರಿದಂತೆ ಪ್ರಮುಖರು ಸೇರಿ ಸಭೆ ಮಾಡ್ತಿದ್ದಾರೆ.ಚರ್ಚೆಯಲ್ಲಿ ವಿಜಯೇಂದ್ರ ಒಂದು ಸಂಕಲ್ಪ ಮಾಡಿದ್ದಾರೆ.ಪಾದಯಾತ್ರೆ ಮಾಡಲು ತೀರ್ಮಾನ ಮಾಡಿದ್ದಾರೆ.ಕುಮಾರಸ್ವಾಮಿ ಅವರು ಅವರ ಕೋರ್ ಕಮಿಟಿ ಸಭೆ ಮಾಡಿದ್ದಾರೆ.ಬೆಂಗಳೂರಿನಿಂದ, ಮೈಸೂರು ವರೆಗೂ ಪಾದಯಾತ್ರೆ ಮಾಡಲು ನಿರ್ಧಾರ ಮಾಡಲಾಗಿದೆ.ಪಾದಯಾತ್ರೆ ಮೈಸೂರಿಗೆ ತಲುಪಬೇಕಿದೆ ಎಂದರು.
ಸಭೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮುಂದಿನ ಶನಿವಾರ ಪಾದಯಾತ್ರೆ ಆರಂಭ ಎಂದು ಪಾದಯಾತ್ರೆ ದಿನಾಂಕ ಘೋಷಣೆ ಮಾಡಿದ್ರು. ಆಗಸ್ಟ್ ಮೂರರಂದು ಪಾದಯಾತ್ರೆ ಆರಂಭವಾಗಿ ಮೈಸೂರಿನಲ್ಲಿ ಆ 10 ರಂದು ಪಾದಯಾತ್ರೆ ಸಮಾರೋಪ ಸಮಾರಂಭ ನಡೆಯಲಿದೆ ಎಂದ್ರು. ಬಿಜೆಪಿ ಜೆಡಿಎಸ್ ನಾಯಕರು ಎಲ್ಲರು ಸೇರಿ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳು ವಾಲ್ಮಿಕಿ ಹಗರಣ, ಮೂಡ ಹಗರಣ ಪರಿಶಿಷ್ಟ ಜಾತಿ ಪಂಗಡದ ಹಣವನ್ನ ವರ್ಗಾವಣೆ ಮಾಡಿರೋದು ಎಲ್ಲಾ ವಿಚಾರಗಳನ್ನಿಟ್ಟುಕೊಂಡು ಮುಂದಿನ ಶನಿವಾರ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತೇವೆ.ಕನಿಷ್ಟ ೭ ದಿನಗಳು ಬೇಕಾಗುತ್ತದೆ.೧೦ ರಂದು ಶನಿವಾರ ಸಮಾರೋಪ ಸಮಾರಂಭಕ್ಕೆ ಕೇಂದ್ರದ ರಾಷ್ಟ್ರೀಯ ನಾಯಕರು ಬರ್ತಿದ್ದಾರೆ ಎಂದರು.
ಇದೇ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕಾಗಿದೆ.ಬಿಜೆಪಿ ಜೆಡಿಎಸ್ ಹೋರಾಟಕ್ಕೆ ಹತ್ತಾರು ಸಾವಿರ ಜನ ಬರುತ್ತಾರೆ. ಸಿಎಂ ರಾಜೀನಾಮೆ ಕೊಡುವವರೆಗೆ ವಿರಮಿಸಲ್ಲ.ಸಿಎಂ ಗೆ ಗೌರವ ಇದ್ರೆ ತಕ್ಷಣ ರಾಜೀನಾಮೆ ಕೊಡಲಿ ಎಂದರು. ಪ್ರಹ್ಲಾದ್ ಜೋಶಿ ಹೇಳಿಕೆ
ಒಂದೂವರೆವರ್ಷದಲ್ಲಿ ಇಷ್ಟೊಂದು ಮಾತನಾಡಿ ಸಿಎಂ ಸಿದ್ದರಾಮಯ್ಯ 100% ಭ್ರಷ್ಟಾಚಾರದ ಸಿಎಂ . ಕಾನೂನು ಹೋರಾಟ ಮುಂದುವರೆಸುತ್ತೇವೆ.ಭ್ರಷ್ಟಾಚಾರದ ಜನಕ ಕಾಂಗ್ರೆಸ್ .ಕಾಂಗ್ರೆಸ್ ಹೈಕಮಾಂಡ್ ಪಾತ್ರ ಕೂಡ ಇದರಲ್ಲಿದೆ.ಜನಜಾಗೃತಿಗಾಗಿ ಈ ಹೋರಾಟ .ಮೋದಿ ಸರ್ಕಾರದ ಭ್ರಷ್ಟಾಚಾರ ರಹಿತ ಆಡಳಿತ ಮಾಡ್ತಿದೆ.ಕಾಂಗ್ರೆಸ್ ಭ್ರಷ್ಟಾಚಾರದ ಫಲಾನುಭವಿಗಳನ್ನ ಮುಚ್ಚಿಡಲು ನೀತಿ ಆಯೋಗದ ಸಭೆಗೂ ಗೈರಾಗಿದೆ.ಕಾಂಗ್ರೆಸ್ ಸಭೆಗೆ ಗೈರಾಗಿರೋದು ರಾಜ್ಯಕ್ಕೂ ನಷ್ಟವಾಗಿದೆ.ಸಿಎಂ ಮೊದಲು ರಾಜೀನಾಮೆ ನೀಡಬೇಕು ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ ಜೆಡಿಎಸ್ ಬಿಜೆಪಿ ಪಕ್ಷದ ಶಾಸಕರು, ನಾಯಕರು ಸಭೆಯಲ್ಲಿ ಭಾಗವಹಿಸಿದ್ರು. ರಾಜ್ಯದಲ್ಲಿ ಜನತೆ ಮುಂದೆ ಹಲವಾರು ರೀತಿಯ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ೧೫ ತಿಂಗಳಲ್ಲಿ ಮೊದಲನೆ ದಿನದಂದೆ ಭ್ರಷ್ಟಾಚಾರ ಶುರುವಾಗಿತ್ತು.ಅಧಿಕಾರಿಗಳು ಮಾತಾಡ್ತಿದ್ದಾರೆ ರಾಜ್ಯ ಸರ್ಕಾರ ಹೇಗೆ ನಡೆಯುತ್ತಿದೆ ಅಂತಾ ಪ್ರಾಯೋಜಿತ ಹೇಳಿಕೆ ಕೊಡುವ ಪರಿಸ್ಥಿತಿ ಬಂದಿದೆ.ಆಢಳಿತ ಅನುಭವ ಹೊಂದಿರುವ ಸಿಎಂ ಸದನದಲ್ಲಿ ಉತ್ತರ ಕೊಡದೆ ಪಲಾಯನ ಮಾಡಿದ್ದಾರೆ.ದಾಖಲೆಗಳ ಸಮೇತ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಲೂಟಿ ಹೊಡೆದಿದ್ದಾರೆ.ಅದರ ನಾಯಕತ್ವ ಅವರೆ ವಹಿಸಿದ್ದಾರೆ.ಎಸ್ ಐ ಟಿ ರಚನೆ ಮಾಡಿ ಹಲವರ ರಕ್ಷಣೆ ಮಾಡೋದಕ್ಕೆ ಪ್ರಯತ್ನ ಮಾಡಿದ್ದಾರೆ.ಯಾರೋ ಬರೆದುಕೊಟ್ಟ ದಾಖಲೆಯನ್ನ ಓದಿದ್ದಾರೆ ಸಿಎಂ.ಸಿಎಂ ಅವರ ಪತ್ನಿ ೧೫ ಸೀಟು ತೆಗೆದುಕೊಂಡಿರೊದಕ್ಕೆ ತಕರಾರಿಲ್ಲಾ.ಕಾನೂನನ್ನ ಮೀರದೆ ಆಸ್ತಿ ಗಳಿಕೆ ಮಾಡೋದಕ್ಕೆ ಸಂವಿಧಾನದಲ್ಲಿ ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ.ಹಿಂದುಳಿದ ನಾಯಕನ ಮೇಲೆ ಅಪಪ್ರಚಾರ ಮಾಡ್ತಿದ್ದಾರೆ ಅಂತ ಸಿಎಂ ಹೇಳ್ತಾರೆ.ಆ ಭೂಮಿ ಯಾರದ್ದು ಅದು ಅನ್ನೋದು ಪ್ರಶ್ನೆ.೯೮ ರಲ್ಲಿ ಅಂತಿಮ ಅನುಸೂಚನೆಯಾಗಿದೆ. ೩.೨೪ ಲಕ್ಷ ಹಣ ಸಂದಾಯವಾಗಿದೆ ಕೋರ್ಟ್ ನಲ್ಲಿ ಆ ವ್ಯಕ್ತಿಗೆ ನಿಂಗ ಅನ್ನೋರಿಂದ ಖರೀದಿ ಮಾಡಿದ್ದಿರಾ ಅಂತಾ ಹೇಳ್ತಿರಾ.ಅದು ದೇವರಾಜುದ ಅಲ್ಲಾ ಸರ್ಕಾರಿ ಭೂಮಿ ಅದು.ಸರ್ಕಾರದಿಂದ ಫೈನಲ್ ನೋಟಿಫಿಕೇಷನ್ ಆಗಿದೆ ಎಂದರು.