ಮನೆ ರಾಜಕೀಯ/ರಾಜ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ – ಸಿಎಂ ಬದಲಾವಣೆ

ರಾಜ್ಯ ರಾಜಕೀಯದಲ್ಲಿ ಸಂಚಲನ – ಸಿಎಂ ಬದಲಾವಣೆ

0

ಬಂಧುಗಳೇ ನಮಸ್ಕಾರ. ಸದ್ಯ ಇಡೀ ದೇಶ ಲೋಕಸಭಾ ಚುನಾವಣೆ ಫಲಿತಾಂಶಕ್ಕಾಗಿ ಕಾಯ್ತಿದೆ. ಇದ್ರ ನಡುವೆ ಕರ್ನಾಟಕದಲ್ಲಿ ಬಹುದೊಡ್ಡ ರಾಜಕೀಯ ಸಂಚಲನ ಉಂಟಾಗುವ ಲಕ್ಷಣ ಕಾಣಿಸ್ತಿದೆ. ಮೂರು ಪಕ್ಷದಲ್ಲೂ ಫಲಿತಾಂಶದ ಬೆನ್ನಲ್ಲೆ ಬಹುದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ. ಆಡಳಿತ ಪಕ್ಷ ಕಾಂಗ್ರೆಸ್​ ನಲ್ಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಿಎಂ ಬದಲಾವಣೆ, ಸಚಿವ ಸಂಪುಟ ಪುನರ್​ ರಚನೆಯಂತಹ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುಡ್​ ಬೈ ಹೇಳಿ, ಈ ಹಿಂದೆ ಹೈಕಮಾಂಡ್​ ಮಟ್ಟದಲ್ಲಿ ಆದ ಒಪ್ಪಂದದಂತೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಸಿದ್ದರಾಮಯ್ಯ ಸುಲಭವಾಗಿ ಖುರ್ಚಿ ಬಿಟ್ಟುಕೊಡುವ ಸಾದ್ಯತೆ ತೀರಾ ಕಡಿಮೆ.

ಅದ್ರ ನಡುವೆ ಡಾ.ಜಿ ಪರಮೇಶ್ವರ್​ ಸೇರಿದಂತೆ ಒಂದಷಷ್ಟು ನಾಯಕರು ದಲಿತ ಸಿಎಂ ಅಸ್ತ್ರ ಪ್ರಯೋಗಿಸಲು ಮುಂದಾಗ್ತಿದ್ದಾರೆ. ಇದ್ರಿಂದ ಇಬ್ಬರ ಜಗಳ ಮೂರನೇಯವ್ರಿಗೆ ಲಾಭ ಎನ್ನುವಂತೆ, ಡಿಕೆಶಿ, ಸಿದ್ದರಾಮಯ್ಯ ಪೈಪೋಟಿ ನಡುವೆ ಡಾ.ಜಿ ಪರಮೇಶ್ವರ್​ ಗೆ ಸಿಎಂ ಸ್ಥಾನ ಒಲಿದರೂ ಅಚ್ಚರಿ ಇಲ್ಲ. ಹೀಗಾಗಿ ಒಂದಷ್ಟು ದಿನ ಖುರ್ಚಿ ಬಡಿದಾಟದ ಕಾದಾಟಕ್ಕೆ ರಾಜ್ಯದ ಜನ ಸಾಕ್ಷಿಯಾಗ್ಬೇಕಾಗುತ್ತೆ. ಈ ಖುರ್ಚು ಬಡಿದಾಟ ಪಕ್ಷವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸೋದರಲ್ಲಿ ಯಾವುದೆ ಅನುಮಾನ ಇಲ್ಲ. ಇತ್ತ ಕೆಪಿಸಿಸಿ ಅಧ್ಯಕ್ಷ ಸ್ಥಾನ ಲಿಂಗಾಯತ ಸಮುದಾಯಕ್ಕೆ ಒಲಿಯಬಹುದು ಆದ್ರೆ ಕೆಪಿಸಿಸಿ ಅಧ್ಯಕ್ಷ ಖುರ್ಚಿ ಹಿಡಿಯಲು ಲಿಂಗಾಯತ ಸಮುದಾಯದ ನಾಯಕರೇ ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಕೊನೆಗೆ ಈ ಸ್ಥಾನ ಪಕ್ಷದ ವಿರುದ್ಧವೇ ಆಗಾಗ ಗುಡುಗುವ ಸತೀಶ್ ಜಾರಕಿಹೊಳಿಗೆ ಒಲಿಯಬಹುದು. ಇದು ಕಾಂಗ್ರೆಸ್ ಕಥೆಯಾದ್ರೆ ಇತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ. ಕಾಂಗ್ರೆಸ್ ಲೋಕಸಭಾ ಚುನಾವಣೆಲಿ ಎರಡಂಕಿ ದಾಟಿದ್ರೆ, ವಿಜಯೇಂದ್ರ ಸ್ಥಾನಕ್ಕೆ ಬೇರೊಬ್ಬರು ಬರಬಹುದು. ಈಗಾಗಲೇ ಪಕ್ಷದ ಸಾಕಷ್ಟು ಹಿರಿಯ ನಾಯಕರು, ಪ್ರತ್ಯಕ್ಷವಾಗಿ ಜೊತೆಗೆ ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.

ಕೊನೆಗೆ ಯತ್ನಾಳ್​ ಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಸಾಧ್ಯತೆಯೂ ಇದೆ. ಇನ್ನೊಂದೆಡೆ ಜೆಡಿಎಸ್​ ಪಕ್ಷಕ್ಕಂತೂ ಪ್ರಜ್ವಲ್ ಕೊಟ್ಟಿರುವ ಏಟಿಗೆ ಸುಧಾರಿಸಿಕೊಳ್ಳೋಕೆ ಇನ್ನೆಷ್ಟು ದಿನ ಬೇಕೊ ಗೊತ್ತಿಲ್ಲ. ಇತ್ತ ಬಿಜೆಪಿ ಜೊತೆ ಮೈತ್ರಿ ಜೊತೆಜೊತೆಗೆ ಜಾತ್ಯಾತೀತ ಸಿದ್ಧಾಂತಕ್ಕೂ ಪಕ್ಷ ಎಳ್ಳುನೀರು ಬಿಟ್ಟಿತ್ತು. ಹೀಗಾಗಿ ಅತ್ತ ಆ ಸಿದ್ಧಾಂತವೂ ಇಲ್ಲದೆ ಇತ್ತ ಈ ಸಿದ್ಧಾಂತವೂ ಇಲ್ಲದೆ ಇಕ್ಕಟ್ಟಿಗೆ ಸಿಲುಕಿದೆ ಪಕ್ಷ. ಒಟ್ಟಾರೆ ಲೋಕಸಭಾ ಚುನಾವಣೆ ಆಗ್ತಿದ್ದ ಹಾಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡೋದಂತು ಖಚಿತ.