ಬೆಂಗಳೂರು; ದಕ್ಷ ಅಧಿಕಾರಿಯನ್ನು ಬಲಿಪಶು ಮಾಡಿದ್ದೀರಲ್ಲಾ? ಎಂದು ಬೆಂಗಳೂರು ಕಮಿಷನರ್ ಬಿ ದಯಾನಂದ್ ಅವರನ್ನು ಅಮಾನತು ಮಾಡಿದ್ದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿ ಸರ್ಕಾರ ಕಾರ್ಯಕ್ರಮ ಮಾಡಿಲ್ಲ.ಯಾರ ಅನುಮತಿಯೂ ತೆಗೆದುಕೊಂಡಿಲ್ಲ. ನಿಮ್ಮ ನಿಮ್ಮ ಮಕ್ಕಳಿಗಾಗಿ ಕಾರ್ಯಕ್ರಮ ಮಾಡಿದ್ದೀರಿ. ನಿಮ್ಮ ಹಾರಾಟಕ್ಕಾಗಿ 11 ಸಾವಾಯಿತು. ನೀವ್ಯಾಕೆ ನೈತಿಕ ಹೊಣೆ ಹೊತ್ತಿಲ್ಲ?. ಮ್ಯಾಚ್ ಆದ ದಿನ ರಾತ್ರಿಯೆಲ್ಲಾ ಅಭಿಮಾನಿಗಳು ಬೆಂಗಳೂರಿನಲ್ಲಿ ಇದ್ದರು. ರಾತ್ರಿ ಎಲ್ಲಾ ಪೊಲೀಸರು ಇಡೀ ನಗರದಲ್ಲಿ ಸುವ್ಯವಸ್ಥೆ ಕಾಪಾಡಿದ್ದರು. ಅವರಿಗೆ ಸರ್ಕಾರ ಮೆಚ್ಚುಗೆ ಸೂಚಿಸಬೇಕಿತ್ತು.ಆ ರಾತ್ರಿ ಯಾವುದೇ ಅವಘಡ ಆಗದೇ ಪೊಲೀಸರು ನಿಯಂತ್ರಣ ಮಾಡಿದ್ದಾರೆ. ಬೆಳಗ್ಗೆ ನೀವು ಎದ್ದು ಟ್ವೀಟ್ ಮಾಡಿ ಬನ್ನಿ ಸೆಲೆಬ್ರೇಷನ್ ಇದೆ ಅಂತ ಓಪನ್ ಆಹ್ವಾನ ಮಾಡುತ್ತೀರಿ. ಪೊಲೀಸ್ ಕಮಿಷನರ್ ಜೊತೆ ಮಾತಾಡಿದ್ರಾ?.ಇದು ಇಂಟಲಿಜೆನ್ಸ್ ಫೈಲ್ಯೂರ್ ಅಲ್ವಾ?.ಯಾಕೆ ಇಂಟೆಲಿಜೆನ್ಸ್ ಮುಖ್ಯಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ದಯಾನಂದ್ ಮೋಸ್ಟ್ ಫೈನೆಸ್ಟ್ ಅಧಿಕಾರಿ. ಮೈಸೂರಿನಲ್ಲಿ ದಸರಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹೋದ ಕಡೆ ಎಲ್ಲಾ ಪ್ರಾಮಾಣಿಕತೆ, ದಕ್ಷತೆ ತೋರಿಸಿದ್ದಾರೆ. ಅಂತಹ ಅಧಿಕಾರಿಯನ್ನು ಬಲಿಪಶು ಮಾಡಿದ್ದೀರಲ್ಲಾ? ಎಂದು ಬೇಸರ ಹೊರ ಹಾಕಿದ್ದಾರೆ. ಅವರ ಅವಧಿಯಲ್ಲಿ ಸಣ್ಣ ಲೋಪ ಆಗಿಲ್ಲ. ನಿಮ್ಮ ಎಲ್ಲಾ ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಸಿಕೊಟ್ಟಿದ್ದಾರೆ. ಆರ್ಸಿಬಿ ಒತ್ತಡಕ್ಕೆ ಸರ್ಕಾರ ಒಳಗಾಗಿದೆ. ಇಷ್ಟು ವರ್ಷ ಬೆಂಗಳೂರಿನಲ್ಲಿ ಮ್ಯಾಚ್ ಗಳು ನಡೆದಿವೆ. ದಕ್ಷತೆಯಿಂದ ನಿರ್ವಹಣೆ ಮಾಡಿಲ್ವಾ ಪೊಲೀಸರು?.ಒಬ್ಬ ಕಮಿಷನರ್ ಅಮಾನತು ಮಾಡುತ್ತೀರಾ ಅಂದರೆ ಇಲಾಖೆ ಆತ್ಮವಿಶ್ವಾಸ ಕುಂದಿಸಲ್ವಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಸರ್ಕಾರ ಪೊಲೀಸರನ್ನು ಎಲ್ಲಾ ರೀತಿಯಲ್ಲಿ ಸಂಕಷ್ಟಕ್ಕೆ ಸಿಕ್ಕಿಸಿದೆ.ಪೊಲೀಸರನ್ನು ಈ ಸರ್ಕಾರ ಟಾರ್ಗೆಟ್ ಮಾಡಿದೆ. ಸಿದ್ದರಾಮಯ್ಯ ನೈತಿಕತೆ ಹೊಣೆ ಹೊರಬೇಕು.ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಇದು. ಡಿ.ಕೆ. ಶಿವಕುಮಾರ್ ಅವರು ಅತ್ತಿದ್ದು ನೋಡಿದೆ. ಕುಮಾರಣ್ಣ ಅತ್ತರೆ ಅದು ನಾಟಕನಾ?. ಡಿ.ಕೆ. ಶಿವಕುಮಾರ್ ಅತ್ತರೆ ಅದು ಅಂತರಾಳದಿಂದ ಬಂದಿದ್ದಾ?. ಪೊಲೀಸರಿಗೆ ಕನಿಷ್ಠ ಮೆಚ್ಚುಗೆ ಕೊಟ್ಟಿಲ್ಲ. ಜನರ ಗಮನ ಬೇರೆ ಕಡೆ ಸೆಳೆಯಲು ಈ ನಾಟಕ. ಕರ್ನಾಟಕದಲ್ಲಿ ಗೃಹ ಸಚಿವರು ಇದ್ದಾರಾ ಎನ್ನುವುದೇ ಅನುಮಾನ. ಎಸ್ಕಾರ್ಟ್, ಪದವಿಗಾಗಿ ಅವರಿಗೆ ಗೃಹ ಸಚಿವ ಸ್ಥಾನ ಬೇಕಾಗಿದೆ.ಇವರು ದಕ್ಷ ಗೃಹ ಸಚಿವರಾ ಅಂತ ಜನಕ್ಕೆ ಅನುಮಾನ ಇದೆ ಎಂದು ಲೇವಡಿ ಮಾಡಿದ್ದಾರೆ.
ನಿನ್ನೆ ಕ್ಯಾಬಿನೆಟ್ ಸಭೆಯಲ್ಲಿ ಇಡೀ ಕರ್ನಾಟಕ ಆಘಾತ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ದಯಾನಂದ್, ಶೇಖರ್ ಸೇರಿ ಐವರನ್ನು ಅಮಾನತು ಮಾಡಿದ್ದಾರೆ. ಸಿಎಂ, ಡಿಸಿಎಂ ಅಥವಾ ಗೃಹ ಸಚಿವ ಅಥವಾ ಯಾವುದೇ ಸಚಿವರು ನೈತಿಕ ಹೊಣೆ ಹೊತ್ತಿಲ್ಲ. ಕಮಿಷನರ್ ಸೇರಿದಂತೆ ಪೊಲಿಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೀರಿ. ಗುಪ್ತದಳದ ವೈಫಲ್ಯ ಎಂದ್ರಲ್ಲಾ.ಹಾಗಿದ್ರೆ ಅಲ್ಲಿನ ಮುಖ್ಯಸ್ಥರನ್ನು ಯಾಕೆ ಬಿಟ್ರಿ?. ಕಾಂಗ್ರೆಸ್ ಶಾಸಕರ ಗಂಡ ಎಂಬ ಕಾರಣಕ್ಕಾ? ಎಂದು ಪ್ರಶ್ನಿಸಿದ್ದಾರೆ.