ಬೆಂಗಳೂರು; ಯಡಿಯೂರಪ್ಪ, ವಿಜಯೇಂದ್ರ ಸೇರಿ ನನ್ನ ತುಳಿದಿದ್ದಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನ ಬಳಿ ನೂತನ ಶಿವಾನುಭವ ಮಂಟಪ, ದಾಸೋಸ ನಿಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್ ಗಣಹೋಮ ವಾಸ್ತು ಹೋಮ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪತ್ನಿ ಶೈಲಜಾ ಹಾಗೂ ಇತರರು ಭಾಗಿಯಾಗಿದ್ದರು.ಶ್ರೀ ವೇದಮೂರ್ತಿ ಪಕ್ಕಿರಯ್ಯ ಶಾಸ್ತೀ ನೇತೃತ್ವದಲ್ಲಿ ಪೂಜೆ ನಡೆಯಿತು. ಪೂಜೆಯ ಬಳಿಕ ಪಕ್ಕೀರಯ್ಯ ಶಾಸ್ತ್ರಿ ಮಹಾ ಸಂಕಲ್ಪ, ರಾಜಕೀಯ ಶತ್ರುನಾಶ ಇಷ್ಟಾರ್ಥ ಸಿದ್ದಿ, ಲೋಕಕಲ್ಯಾಣ ಸಂಕಲ್ಪ ಮಾಡಿಸಿದ್ದಾರೆ.ಯತ್ನಾಳ್ ಪತ್ನಿ ಶೈಲಜಾ ಜೊತೆಗೂಡಿ ಸಂಕಲ್ಪ ಮಾಡಿಕೊಂಡಿದ್ದಾರೆ .
ಬಳಿಕ ಮಾತನಾಡಿದ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಯಡಿಯೂರಪ್ಪ, ವಿಜಯೇಂದ್ರ ಸೇರಿ ನನ್ನ ತುಳಿದಿದ್ದಾರೆ.ಮ್ಮ ವಂಶಪಾರಂಪರಿಕ ರಾಜಕೀಯಕ್ಕಾಗಿ ನನ್ನ ತುಳಿದಿದ್ದಾರೆ. ಯಡಿಯೂರಪ್ಪ, ಮಗನನ್ನ ಪಕ್ಷದಿಂದ ಹೊರಗಿಡುವಂತೆ ಹೈಕಮಾಂಡ್ ಗೆ ಯತ್ನಾಳ್ ಮನವಿ ಮಾಡಿದ್ದಾರೆ. ಹೈಕಮಾಂಡ್ ಕ್ರಮ ಕೈಗೊಳ್ಳದಿದ್ದರೆ ಜನರು ಬಿಜೆಪಿ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ವಿಜಯೇಂದ್ರನೇ ಮುಂದಿನ ಸಿಎಂ ಎಂದು ಹೈಕಮಾಂಡ್ ನಿರ್ಧಾರ ಮಾಡಿದರೆ, ಜನರು ಬೇರೆ ಗಟ್ಟಿ ನಿರ್ಧಾರ ಮಾಡುತ್ತಾರೆ. ಹಿಂದೂ, ಸನಾತನ ರಕ್ಷಣೆಗಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಮಯ ಬರುತ್ತದೆ. ಕರ್ನಾಟಕದಲ್ಲಿ ವಿಜಯೇಂದ್ರನನ್ನ ಯಾಕೆ ನಮ್ಮ ಮೇಲೆ ಹೇರುತ್ತಿದ್ದೀರಿ.ವಿಜಯೇಂದ್ರ ಒಬ್ಬ ಮಹಾ ಭ್ರಷ್ಟ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಮೇಲೆ ಗಂಭೀರ ಆರೋಪ ಇವೆ. ಯಡಿಯೂರಪ್ಪ ಕುಟುಂಬ ಹಗರಣ ಮಾಡಿದ ಕುಟುಂಬ.ಹಗರಣ ಮಾಡಿದ ಕುಟುಂಬವನ್ನ ಮುಂದುವರೆಸಿದರೆ ರಾಜ್ಯದ ಜನರು ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.ಇವತ್ತಿನಿಂದಲೇ ಜನ ಜಾಗೃತಿ ಶುರು ಮಾಡುತ್ತೇವೆ.ಜನರ ಅಭಿಪ್ರಾಯ ಸಂಗ್ರಹಣೆ ಮಾಡುತ್ತೇವೆ. ಜನರು ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಆಗಲ್ಲ ಎನ್ನುತ್ತಿದ್ದಾರೆ. ಹಿಂದೂ ಪರವಾದ ಪಕ್ಷ ಬೇಕು ಎನ್ನುತ್ತಿದ್ದಾರೆ.ಹಿಂದೆ ಯಡಿಯೂರಪ್ಪ ಆಡಳಿತದಲ್ಲಿ ಹಿಂದೂಗಳ ಹತ್ಯೆಯಾದರೆ ಎನ್ಕೌಂಟರ್ ಮಾಡೋ ಧೈರ್ಯವನ್ನ ಮಾಡಲಿಲ್ಲ. ಹಿಂದೂಗಳು ಸಹನೆ ಉಳ್ಳವರು ಎಂದಿದ್ದಾರೆ.
ಕಾಂಗ್ರೆಸ್ ಒಂದು ಮುಸ್ಲಿಂ ಪಕ್ಷ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ. ಅದರ ಬಗ್ಗೆ ಏನು ಹೇಳೋದಿಲ್ಲ.ಬಿಜೆಪಿ ಹಿಂದೂ ಪಕ್ಷ ಆಗದೇ ಹೋದರೆ, ರಾಜ್ಯದ ಹಿಂದೂಗಳು ಅನಿವಾರ್ಯವಾಗಿ ಐತಿಹಾಸಿಕ ನಿರ್ಧಾರ ಮಾಡುತ್ತಾರೆ.ಯಡಿಯೂರಪ್ಪ ಕುಟುಂಬಕ್ಕೆ ನಾಯಕತ್ವ ನೀಡಿದರೆ ಬಿಜೆಪಿ ರಾಜ್ಯದಲ್ಲಿ ಹೀನಾಯವಾಗಿ ಸೋಲುತ್ತದೆ. ಯಡಿಯೂರಪ್ಪ ಕುಟುಂಬ ಉತ್ತರ ಕರ್ನಾಟಕಕ್ಕೆ ಮಹಾಮೋಸ ಮಾಡಿದೆ.ಆಲಮಟ್ಟಿ ಡ್ಯಾಂ ವಿಚಾರದಲ್ಲಿ ವರ್ಷಕ್ಕೆ 25 ಸಾವಿರ ಕೋಟಿ ಕೊಡುವೆ ಎಂದು ಮೋಸ, ವಿಜಯಪುರ ನಗರಕ್ಕೆ ಬಂದಿದ್ದ 125 ಕೋಟಿ ವಾಪಸ್ ಪಡೆದು ಮೋಸ ಎಂದು ಆರೋಪಿಸಿದ್ದಾರೆ.
ಬಿಜೆಪಿ, ಮೋದಿ ವಿರುದ್ಧ ನನ್ನ ಹೋರಾಟ ಅಲ್ಲ, ವಿಜಯೇಂದ್ರ ಕುಟುಂಬದ ವಿರುದ್ಧ ಹೋರಾಟ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಭಯದಿಂದ ಹೊರಗೆ ಬರಬೇಕು. ಯಡಿಯೂರಪ್ಪ ಬಿಟ್ಟರೆ ಲಿಂಗಾಯತರು ಕೈ ಬಿಡುತ್ತಾರೆ ಎನ್ನುವ ಭಯ ಬಿಡಲಿ ಎಂದು ಹೈಕಮಾಂಡ್ ಗೆ ಯತ್ನಾಳ್ ಸಲಹೆ ನೀಡಿದ್ದಾರೆ.
ವಿಜಯೇಂದ್ರನನ್ನ ಮತ್ತೆ ರಾಜ್ಯಾಧ್ಯಕ್ಷ ಮಾಡಿದರೆ ನಾವು ಬೇರೆ ನಿರ್ಧಾರ ತೆಗೆದುಕೊಳ್ಳುತ್ತೇವೆ.ಉಚ್ಚಾಟನೆಯಾದ ಬಳಿಕವೂ ಹೈಕಮಾಂಡ್ ಗೆ ಯತ್ನಾಳ್ ಎಚ್ಚರಿಕೆ ಕೊಟ್ಟಿದ್ದಾರೆ. ಜನರಲ್ಲಿ ಜನಜಾಗೃತಿ ಮೂಡಿಸಬೇಕು.ಬೀದರ್ ನಿಂದ ಚಾಮರಾಜನಗರ, ಕರಾವಳಿಯಿಂದ ಕೋಲ್ಹಾರದ ವರೆಗೂ ಜಾಗೃತಿ ಮಾಡುತ್ತೇವೆ. ಹಿಂದೂ ಪಕ್ಷ ಕಟ್ಟುವಂತೆ ಜನರಿಂದ ಕರೆ ಬರುತ್ತಿವೆ. ಯಡಿಯೂರಪ್ಪ ಕುಟುಂಬ ವಿರೋಧ ಪಕ್ಷಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದೆ. ಹಿಂದೂಗಳ ರಕ್ಷಣೆ ಮಾಡೋದು ಯಾರು? ಓಟು ಹಾಕಿದ್ದು ಹಿಂದೂಗಳ ರಕ್ಷಣೆಗೆಂದು ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.