ಮನೆ Latest News ಶಿಸ್ತು ಸಮಿತಿಗೆ ಉತ್ತರಿಸಲು 6 ಪುಟಗಳ ಉತ್ತರ ಸಿದ್ಧ ಮಾಡಿದ್ದೇನೆ; ಶಿಸ್ತು ಸಮಿತಿ‌ ಮುಂದೆ‌ ಹಾಜರಾಗುವ...

ಶಿಸ್ತು ಸಮಿತಿಗೆ ಉತ್ತರಿಸಲು 6 ಪುಟಗಳ ಉತ್ತರ ಸಿದ್ಧ ಮಾಡಿದ್ದೇನೆ; ಶಿಸ್ತು ಸಮಿತಿ‌ ಮುಂದೆ‌ ಹಾಜರಾಗುವ ಮುನ್ನ ಯತ್ನಾಳ್ ಹೇಳಿಕೆ

0

 

ನವದೆಹಲಿ: ಶಿಸ್ತು ಸಮಿತಿಗೆ ಉತ್ತರಿಸಲು 6 ಪುಟಗಳ ಉತ್ತರ ಸಿದ್ಧ ಮಾಡಿದ್ದೇನೆ ಎಂದು ಶಿಸ್ತು ಸಮಿತಿ‌ ಮುಂದೆ‌ ವಿಚಾರಣೆಗೆ ಹಾಜರಾಗುವ ಮುನ್ನ ಯತ್ನಾಳ್ ಹೇಳಿಕೆ ನೀಡಿದರು.

ರಾಜ್ಯಕ್ಕೆ ಬಂದು ವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದ್ದೇನೆ. ಆರು ಪೇಜ್ ಉತ್ತರ ತಯಾರು ಮಾಡಿದ್ದೇನೆ. ಅದನ್ನು ನೀಡುತ್ತೇನೆ, ಜೊತೆಗೆ ವಿವರಣೆ ಕೊಡುತ್ತೇನೆ. ಪಕ್ಷದಲ್ಲಿ ತಟಸ್ಥ ನಿಲುವು ಹೊಂದಿರುವ ನಾಯಕರು ಇದ್ದಾರೆ. ಅವರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ. ಅವರು ಬಹಿರಂಗವಾಗಿ ಮಾತನಾಡುತ್ತಿಲ್ಲ. ಭ್ರಷ್ಟಾಚಾರ ಕುಟುಂಬದ ಕಪಿಮುಷ್ಠಿಯಿಂದ ಹೊರ ಬರಬೇಕು ಎನ್ನುವ ಭಾವನೆ ಎಲ್ಲರಲ್ಲಿ ಇದೆ. ಯಾವ ಕಡೆಗೂ ವಾಲದ ರಾಷ್ಟ್ರೀಯ ನಾಯಕರನ್ನು ಕಳುಹಿಸಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಬೇಕು. ವಿಜಯೇಂದ್ರ ಅವರು ಟೀಂ ಮಾಡಿಕೊಂಡು ನಿಷ್ಠಾವಂತ ಕಾರ್ಯಕರ್ತರನ್ನು ಹೇಗೆ ತುಳಿಯುವ ಕೆಲಸ ಮಾಡಿದ್ದಾರೆ. ಹೊಂದಾಣಿಕೆ ರಾಜಕೀಯ, ಕುಟುಂಬ ರಾಜಕೀಯ, ಹಿಂದುತ್ವದಲ್ಲಿ ಹೇಗೆ ರಾಜೀ ಆಗಿದೆ ಎಲ್ಲವನ್ನು ಪತ್ರದಲ್ಲಿ ಬರೆದಿದ್ದೇನೆ. ನಿಷ್ಠಾವಂತ ನಾಯಕರನ್ನು ಬೆಂಗಳೂರಿಗೆ ಕಳುಹಿಸಿದರೆ ಉಳಿದ ದಾಖಲೆ ಕೊಡುತ್ತೇನೆ ಎಂದು ಹೇಳುತ್ತೇನೆ ಎಂದರು.

ನಿನ್ನೆ ನಡೆದ ಸಂಸದರ ಸಭೆಯಲ್ಲಿ ಯಾರು ನನ್ನ ವಿರುದ್ಧ ಮಾತನಾಡಿಲ್ಲ. ನನ್ನ ಉಚ್ಚಾಟನೆ ಮಾಡಿ ಎಂದು ಯಾರು ಹೇಳಿಲ್ಲ. ಎಲ್ಲರೂ ಪಕ್ಷದ ಪರವಾಗಿ ಮಾತನಾಡಿದ್ದಾರೆ. ನಾನು ಯಾರ ವಿರುದ್ಧವೂ ಮಾತನಾಡಿಲ್ಲ. ಕೇವಲ ಬಿಎಸ್‌ವೈ ಕುಟುಂಬದ ವಿರುದ್ಧದ ಮಾತನಾಡಿದ್ದೇನೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದೆ ಎಂದರು.

ವಿಜಯೇಂದ್ರ ಅವರಿಂದ ವಕ್ಫ್ ಜನಾಂದೋಲನ ಬಗ್ಗೆ ಮಾತನಾಡಿದ ಅವರು ಪಾಪಾ ಅವರು ಹೋಗಿ ಜನರ ಕಷ್ಟ ನೋಡಲಿ. ರೈತರು ಜನರ ಕಷ್ಟವನ್ನು ಅರಿಯುವ ಕೆಲಸ ಮಾಡಲಿ. ನಾವು ಈಗಾಗಲೇ ದಾಖಲೆ ನೀಡಿದ್ದೇವೆ. ನಾವು ಹೊಂದಾಣಿಕೆ ಮಾಡಿಕೊಳ್ಳದೆ ಕೆಲಸ ಮಾಡಿದ್ದೇವೆ. ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ನೀಡಿದ್ದೇವೆ ಎಂದ ಅವರು  ಹೈಕಮಾಂಡ್ ನಾಯಕರು ಮಧ್ಯಪ್ರದೇಶ ಮಾಡಿದ್ದಾರೆ. ಕಾರ್ಯಕರ್ತರ ಭಾವನೆ ಅರಿತು ನಿರ್ಧಾರ ತೆಗೆದುಕೊಳ್ಳಬೇಕು. ನಾವು ಪಕ್ಷ ಬಿಡುವ ಮೂರ್ಖತನದ ಕೆಲಸ ಮಾಡಲ್ಲ. ನಾವು ಅಷ್ಟು ದಡ್ಡರೂ ಅಲ್ಲ. ನಾವು ರಾಷ್ಟ್ರೀಯ ಸಿದ್ಧಾಂತ ಹೊಂದಿದ್ದವರು, ಹಿಂದುತ್ವದ ಪರ. ನಮಗೆ ಬಿಜೆಪಿ ಆಶಾ ಕಿರಣ. ನಾವು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ. ಹೊಸ ಪಕ್ಷ ಕಟ್ಟಿ ಸೋತು ಸುಣ್ಣವಾದರ ಬಗ್ಗೆ ಯೋಚಿಸಬೇಕಿದೆ. ನಮ್ಮ ವಿಶ್ವಾಸ ಪಕ್ಷದ ಮೇಲಿದೆ, ಮೋದಿ ಮೇಲಿದೆ. ಅಮಿತ್ ಶಾ ಮತ್ತು ನಡ್ಡಾರನ್ನ ಭೇಟಿಯಾಗಿಲ್ಲ ಎಂದರು.