ಬೆಳಗಾವಿ; ಯತ್ನಾಳ್ ಅವರನ್ನ ನಾಲಿಗೆ ಹರಿ ಬಿಡೋದಕ್ಕೆ ಅವರನ್ನು ಉಚ್ಚಾಟನೆ ಮಾಡಿದ್ರು ಎಂದು ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯತ್ನಾಳ್ ಅವರನ್ನ ನಾಲಿಗೆ ಹರಿ ಬಿಡೋದರ ಸಲುವಾಗಿ ಉಚ್ಚಾಟನೆ ಮಾಡಿದ್ರು.ಅವರು ನಮ್ಮ ಸಮಾಜದ ಹಿರಿಯರು ಅಂತಾ ನಮ್ಮ ಚೌಕಟ್ಟಿನಲ್ಲಿ ಇರ್ತೇವಿ.ಮಾತನಾಡುವ ರೀತಿ ನೋಡಿದ್ರೇ ಅವರ ನಾಲಿಗೆಗೆ ತಲೆಗೆ ಕನೆಕ್ಷನ್ ತಪ್ಪಿದೆ ಅನ್ಸುತ್ತೆ. ಯತ್ನಾಳ್ ಹೊಸ ಪಕ್ಷ ಕಟ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅವರಿಗೆ ಒಳ್ಳೆಯದಾಗಲಿ ಭಗವಂತನ ಆಶೀರ್ವಾದ ಇರಲಿ. ಆದ್ದಷ್ಟು ಬೇಗ ಹೊಸ ಪಕ್ಷ ಕಟ್ಟಿ ರಾಜ್ಯದಲ್ಲಿ ಸಂಘಟನೆ ಮಾಡಲಿ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ನಾಡಿನ ಸಮಸ್ತ ಜನರಿಗೆ ಹೊಸ ವರ್ಷ, ಈದ್ ಹಬ್ಬದ ಶುಭಾಶಯ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಬಳಿಕ ಮಾತನಾಡಿ ಉಡುಪಿಯಲ್ಲಿ ಲವ್ ಜಿಹಾದ್ ಪ್ರಕರಣ ದಾಖಲಿಸಿಲ್ಲ ಎಂಬ ವಿಚಾರ.ಕ್ಕೆ ರಿಯಾಕ್ಟ್ ಮಾಡಿದ್ರು. ಉಡುಪಿಯಲ್ಲಿ ಖಡಕ್ ಪೊಲೀಸ್ ಅಧಿಕಾರಿಯನ್ನ ನೇಮಕ ಮಾಡಿಕೊಳ್ಳಲಾಗಿದೆ.. ಉಡುಪಿಯಲ್ಲಿ ಕಾನೂನು ಸುವ್ಯವಸ್ಥೆ ಮೊದಲು ಹೇಗಿತು. ನಾನು ಉಸ್ತುವಾರಿಯಾದ ಮೇಲೆ ಈಗ ಹೇಗಿದೆ ಅನೋದನ್ನ ನೀವು ಮೊದಲು ಗಮನಿಸಬೇಕು.ನೂ ಪ್ರಕರಣ ಆಗಿದೆ, ಯಾವ ಕಾರಣಕ್ಕೆ ಲವ್ ಜಿಹಾದ್ ಅಂತಾ ಇದ್ದೀರಾ ತಿಳಿದುಕೊಂಡು ಮಾತನಾಡುವೆ ಎಂದಿದ್ದಾರೆ
ಹಾಲಿನ ದರ ಏರಿಕೆ ಬಗ್ಗೆ ಮಾತನಾಡಿ ಹಾಲಿನ ದರದ ಬಗ್ಗೆ ರೈತರ ಸಂತೋಷ ಸುದ್ದಿ ಕೊಟ್ಟಿದ್ದೇವೆ.ಜಾಸ್ತಿ ಮಾಡಿರೋ ನಾಲ್ಕು ರೂಪಾಯಿ ಹಣ ರೈತರ ಖಾತೆಗೆ ನೇರವಾಗಿ ಹೋಗುತ್ತೆ. ಈ ಮೂಲಕ ನಮ್ಮ ಸರ್ಕಾರ ರೈತರಪರವಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ಇಂಧನ ಇಲಾಖೆಯಲ್ಲಿ ಸ್ಮಾರ್ಟ್ ಸ್ಕ್ಯಾಮ್ ಆರೋಪ ವಿಚಾರದ ಬಗ್ಗೆ ಮಾತನಾಡಿ ಈ ಬಗ್ಗೆ ಜಾರ್ಜ್ ಅವರೇ ಮತನಾಡುತ್ತಾರೆ, ಅವರ ಪ್ರತಿಕ್ರಿಯೆ ತೆಗೆದುಕೊಳ್ಳೊದು ಒಳ್ಳೆಯದು.ಬಿಜೆಪಿಯವರು ಮಾತನಾಡಲು ಏನೂ ಕೆಲಸ ಇಲ್ಲ, ಸುಳ್ಳು ಆರೋಪ ಮಾಡುತ್ತಿದ್ದಾರೆ.ಯಾವ ಹಗರಣವೂ ಇಲ್ಲ, ಏನೂ ಇಲ್ಲ ಎಂದಿದ್ದಾರೆ. ಕಾನೂನು ರೀತಿಯಲ್ಲಿ ಟೆಂಡರ್ ಪ್ರಕ್ರಿಯೆ ಇದೆ, ವಿಧಾನಸಭೆಯಲ್ಲಿ ಜಾರ್ಜ್ ಸ್ಪಷ್ಟೀಕರಣ ಕೊಟ್ಟಿದ್ದಾರೆ ಎಂದ್ರು.
ಗೃಹ ಲಕ್ಷ್ಮೀ ಹಣ ಬರದೇ ಇರುವ ವಿಚಾರದ ಬಗ್ಗೆ ಮಾತನಾಡಿ ಈಗಾಗಲೇ ಒಂದು ತಿಂಗಳ ಹಣವನ್ನು ಟ್ರಜರಿಗೆ ಕಳುಹಿಸಲಾಗಿದೆ.ಯುಗಾದಿಗೆ ಈದ್ ಹಬ್ಬಕ್ಕೆ ಒಂದು ತಿಂಗಳ ಹಣ ಬಿಡುಗಡೆ ಆಗುತ್ತೆ ಎಂದ್ರು.
ಸಚಿವ ರಾಜಣ್ಣ ಹನಿ ಟ್ರ್ಯಾಪ್ ಕೇಸ್ ವಿಚಾರದ ಬಗ್ಗೆ ಮಾತನಾಡಿ ಅದರ ಬಗ್ಗೆ ನನಗೆ ಎನೂ ಗೊತ್ತಿಲ್ಲ ಆದ್ರೇ ಯಾವ ಹನಿಯೂ ಇಲ್ಲ ಯಾವ ಟ್ರ್ಯಾಪ್ ಇಲ್ಲ ಎಂದಿದ್ದಾರೆ.ಅವರು ಈಗಾಗಲೇ ಪರಮೇಶ್ವರ್ ಸರ್ ಗೆ ದೂರು ಕೊಟ್ಟಿದ್ದಾರೆ, ಸತ್ಯಾ ಸತ್ಯತೆ ಹೊರಗೆ ಬರುತ್ತೆ. ಸದನದಲ್ಲಿ ಮಾತಾಡಿದ್ದಾರೆ ಅಂದ್ರೇ ಜವಾಬ್ದಾರಿಯಿಂದ ಮಾತಾಡಿದ್ದಾರೆ.ಅದೇನೂ ಸತ್ಯ ಇದೆಯೋ ಹೊರಗೆ ಬರಲಿ ಆಮೇಲೆ ಮಾತಾಡ್ತೀನಿ ಎಂದಿದ್ದಾರೆ.
ಏಪ್ರಿಲ್ 13ರಂದು ಯತ್ನಾಳ್ ಪರ ಹೋರಾಟಕ್ಕೆ ಕೂಡಲಸಂಗಮ ಸ್ವಾಮೀಜಿ ಕರೆ ವಿಚಾರಕ್ಕೆ ಪ್ರತಿಕ್ರಿಯಿಸಿ ಶ್ರೀಗಳ ಸುದ್ಧಿಗೋಷ್ಠಿ ನಾನು ನೋಡಿದ್ದೇನೆ.ಸುಮಾರು ಎಂಬತ್ತರಷ್ಟು ಬಿಜೆಪಿಯವರು ಪಂಚಮಸಾಲಿ ಹೋರಾಟದಲ್ಲಿದ್ದಾರೆ ಎಂದ್ರೂ.ಆ ಹೇಳಿಕೆ ನೋಡಿ ನಮಗೂ ಬೇಜಾರು ಆಯ್ತು.ಶ್ರೀಗಳು ಈ ರೀತಿ ಮಾತನಾಡಬಾರದಿತ್ತು.ಇಡೀ ಪಂಚಮಸಾಲಿ ಸಮುದಾಯ ಯತ್ನಾಳ್ ಅವರಿಗೆ ಬರೆದು ಕೊಟ್ಟಿಲ್ಲ.ಹೋರಾಟ ಮಾಡುವುದು ಅವರ ವೈಯಕ್ತಿಕ ವಿಚಾರ.ಬೆಳಗಾವಿಯಲ್ಲಿನ ಹೋರಾಟಕ್ಕೆ ನಾನೇನೆ ಬೆಂಬಲ ಕೊಡಲಿ..ಸಮಾಜ ಬೇರೆ ಪಕ್ಷ ಬೇರೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.