ಮನೆ Latest News ಕೊಪ್ಪಳ ಗವಿಮಠಕ್ಕೆ ಶಾಸಕ ಯತ್ನಾಳ್ ಭೇಟಿ; ಈ ವೇಳೆ ಮುಂದಿನ ಸಿಎಂ ಯತ್ನಾಳ್ ಅಂತ ಘೋಷಣೆ...

ಕೊಪ್ಪಳ ಗವಿಮಠಕ್ಕೆ ಶಾಸಕ ಯತ್ನಾಳ್ ಭೇಟಿ; ಈ ವೇಳೆ ಮುಂದಿನ ಸಿಎಂ ಯತ್ನಾಳ್ ಅಂತ ಘೋಷಣೆ ಕೂಗಿದ ಬೆಂಬಲಿಗರು

0

ಕೊಪ್ಪಳ ಗವಿಮಠಕ್ಕೆ ಶಾಸಕ ಯತ್ನಾಳ್ ಭೇಟಿ ನೀಡಿದರು. ಈ ವೇಳೆ ಮುಂದಿನ ಸಿಎಂ ಯತ್ನಾಳ್ ಅಂತಾ ಬೆಂಬಲಿಗರು ಘೋಷಣೆ ಕೂಗಿದ್ದಾರೆ.

ಬಳಿಕ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ರಮೇಶ ಜಾರಕಿಹೊಳಿ ಕುಮಾರ ಬಂಗಾರಪ್ಪ ನಿಮ್ಮ‌ ಜೊತೆ ಇರ್ತಾರಾ ಎಂಬ ಪ್ರಶ್ನೆಗೆ ಯತ್ನಾಳ್ ಗರಂ ಆಗಿದ್ದಾರೆ. ಹೊಸ ಪಕ್ಷ ಕಟ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಗೆ ಯಾವ ಜನ್ಮಕ್ಕೂ ಹೋಗಲ್ಲ ಅದು ಮುಸ್ಲಿಂರ ಪಕ್ಷ. ಬಿಜೆಪಿಯ ನಕಲಿ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ನಡಿತಾಯಿದೆ. ಬಿಜೆಪಿಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದವರು ಇದ್ದಾರೆ. ರೊನಾ ಸಮಯದಲ್ಲಿ ಎಷ್ಟೆಷ್ಟು ಬಿಲ್ ಹಾಕಿದ್ರು?. ಜಾರಕಿಹೊಳಿ ಕುಮಾರ ಬಂಗಾರಪ್ಪ  ಎಲ್ಲರೂ ನಮ್ಮೊಂದಿಗೆ ಇದ್ದಾರೆ ಎಂದರು.

ಇನ್ನು ಪ್ರಶ್ನೆ ಕೇಳಿದ ಮಾಧ್ಯಮದವರ ವಿರುದ್ಧ ಯತ್ನಾಳ್ ಗರಂ ಆಗಿದ್ದಾರೆ. ವಿಜಯೇಂದ್ರ ವಾಟ್ಸಪ್ ನಲ್ಲಿ ಕಳಿಸಿದ ಪ್ರಶ್ನೆ ಕೇಳಬೇಡಿ ಎಂದು ಯತ್ನಾಳ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮೇಲೆ ಯತ್ನಾಳ್ ಗರಂ ಆಗಿದ್ದಾರೆ. ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಯತ್ನಾಳ್ ಮುಂದಾಗಿದ್ದಾರೆ. ವಿಜಯೇಂದ್ರ ಕಡೆ ದುಡ್ಡು ತಿಂದು ಪ್ರಶ್ನೆ ಕೇಳುವ ಮಾಧ್ಯಮಗಳು ಗೆಟ್ ಔಟ್ ಎಂದು ಯತ್ನಾಳ್ ಹೇಳಿದ್ದಾರೆ.

ಯಡಿಯೂರಪ್ಪ ಹಾಗೂ ಅವನ ಮಗಂದು ಸಾಕಷ್ಟು ಹಗರಣ ಇದೆ. ಅವರು ಹಣ ಕೊಟ್ಟು ಕೆಲವರನ್ನು ಖರೀದಿ ಮಾಡಿರಬಹುದು. ನಾನು ಇಡಿ ರಾಜ್ಯ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹ ಮಾಡ್ತಿನಿ. ವೀರಶೈವ ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದ್ದೆ ಯಡಿಯೂರಪ್ಪ, ವಿಜಯೇಂದ್ರ. ಗಾಯತ ಆಪೀಸರ್ ನ ಕಳಸಿ ನಮ್ಮನ್ಮ ಅರೆಸ್ಟ್ ಮಾಡಿಸಲು ಕಳಿಸಿದ್ದ ವಿಜಯೇಂದ್ರ.ಇವತ್ತಿಗೆ ಆ ಆಪೀಸ್ ಅವರ ಚಮಚಾ ಆಗಿ ಕೆಲಸ ಮಾಡ್ತಿದ್ದಾನೆ ಎಂದಿದ್ದಾರೆ.

ಬಿಜೆಪಿ ಹಿಂದೂಗಳ ಪರವಾಗಿ ಇಲ್ಲ. ಕಾಂಗ್ರೆಸ್ ಜೊತೆ ಅಂಡ್ಜೆಸಮೆಂಟ್ ಇದೆ. ಯಡಿಯೂರಪ್ಪ ಮೇಲೆ ಪೋಕ್ಸೋ ಕೇಸ್ ಇದೆ. ರಾಜ್ಯ ಸರ್ಕಾರ ಸರಿಯಾಗಿ ವಾದ ಮಾಡಿದ್ರೆ ಯಡಿಯೂರಪ್ಪ ಇವತ್ತೇ ಜೈಲಿಗೆ ಹೋಗ್ತಾನೆ .ರಮೇಶ್ ಜಾರಕಿಹೊಳಿ ಸಿಡಿ ಕೇಸಲ್ಲಿ‌ ವಿಜಯೇಂದ್ರ ಕೈವಾಡವಿದೆ. ಜಾರಕಿಹೊಳಿ ಬಳಿಯಿದ್ದ ನೀರಾವರಿ ಇಲಾಖೆಯಲ್ಲಿ ದುಡ್ಡು ಹೊಡೆಯಲು ಆಗಲಿಲ್ಲ. ಹೀಗಾಗಿ ‌ಸಿಡಿ ಕೇಸಲ್ಲಿ ಜಾರಕಿಹೊಳಿ ರನ್ನು ಬಲಿಪಶು ಮಾಡಲಾಯಿತು.ವಿಜಯೇಂದ್ರ ಹಲ್ಕಾ ಕೆಲಸ ಮಾಡ್ತಾನೆ. ಅದನ್ನು ಡಿಲಿಟ್ ಮಾಡೋ ಅನೇಕ ಅಧಿಕಾರಿಗಳು ಇದ್ದಾರೆ ಎಂದಿದ್ದಾರೆ.