ಮನೆ Latest News ಯತ್ನಾಳ್ ಮಾಧ್ಯಮ ಸೃಷ್ಟಿಸಿದ ಹುಲಿ, ಅವರು ಗ್ರೌಂಡ್ ನಲ್ಲಿ ಇಲಿ; ಮಾಜಿ ಶಾಸಕ ಎ ಎಸ್...

ಯತ್ನಾಳ್ ಮಾಧ್ಯಮ ಸೃಷ್ಟಿಸಿದ ಹುಲಿ, ಅವರು ಗ್ರೌಂಡ್ ನಲ್ಲಿ ಇಲಿ; ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿಕೆ

0

ಬೆಂಗಳೂರು: ಯತ್ನಾಳ್ ಮಾಧ್ಯಮ ಸೃಷ್ಟಿಸಿದ ಹುಲಿ, ಅವರು ಗ್ರೌಂಡ್ ನಲ್ಲಿ ಇಲಿ ಎಂದು ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿದ್ದಾರೆ

ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರದ ಬಗ್ಗೆ ಮಾತನಾಡಿದ ಅವರು ಯತ್ನಾಳ್ ಮಾಧ್ಯಮ ಸೃಷ್ಟಿಸಿದ ಹುಲಿ. ಅವರು ಗ್ರೌಂಡ್ ನಲ್ಲಿ ಇಲಿ. ವಿಜಯಪುರದಲ್ಲಿ ಏನಾಗಿದೆ ಅಂತ ಗಮನಿಸಿದ್ರೆ ಉಚ್ಚಾಟನೆ ಬಗ್ಗೆ ಗೊತ್ತಾಗುತ್ತೆ. ಅವರ ಉಚ್ಚಾಟಣೆ ಬಳಿಕ ಯಾರೂ ಅವರ ಪರ ಪ್ರತಿಭಟನೆ ಮಾಡಲಿಲ್ಲ.ಒಂದಿಬ್ಬರು ಮಾತ್ರ ರಾಜೀನಾಮೆ ಕೊಟ್ಟಿದ್ದು. ಹಿಂದು ಹುಲಿ ಹಿಂದು ಹುಲಿ ಅಂತ ನೀವೇ ಹೇಳಿರೋದು. ಅವರು ಇಲಿನಾ ಹುಲಿನಾ ಗೊತ್ತಿಲ್ಲ. ಸ್ವಂತ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಲೀಡ್ ಕೊಟ್ಟ ವ್ಯಕ್ತಿ. ಹೀಗಿರುವಾಗ ಅವರು ಹೊಸ ಪಕ್ಷ ಕಟ್ತರಾ ಅಂತ .ಹಿಂದುತ್ವದ ಆಧಾರದ ಮೇಲೆ ಪಕ್ಷ ಕಟ್ಟುವ ಕೆಲಸ ಮಾಡಿದ್ದೇವೆ. ಹೊಸ ವರ್ಷದ ದಿನ ಈ ಸಂಕಲ್ಪ ಸಾಕಾರ ಮಾಡ್ತೀವಿ ಎಂದರು.

ಮುಂಬರುವ ಚುನಾವಣೆಯಲ್ಲಿ ಬಹುತಮ ಪಡೆದೇ ಪಡೆಯುತ್ತೇವೆ. ಶಿಶುಪಾಲ ಯಾವ ರೀತಿ ಶ್ರೀಕೃಷ್ಣನನ್ನ ಚುಚ್ಚಿ ಮಾತಾಡ್ತಾನೆ. ಬಳಿಕ ಅವನ ಸಾವು ಹೇಗಾಯ್ತು ಗೊತ್ತಿದೆ. ಇಲ್ಲಿ ಯತ್ನಾಳ್ ಶಿಶುಪಾಲನ ರೀತಿ ಮಾತಾಡ್ತಾ ಇದ್ದರು. ಅವರಿಗೆ ಈಗ ಶಿಕ್ಷೆ ಸಿಕ್ಕಿದೆ. ಹಿಂದೆಯೂ ಇದೇ ರೀತಿ ದುರಹಂಕಾರದ ರೀತಿ ಮಾತನಾಡಿದ್ದರು. ಅಂದು ಯಡಿಯೂರಪ್ಪ ಅಲೆಯಿಂದ ೨೦೦೮ ರಲ್ಲಿ ನನ್ನ ವಿರುದ್ಧ ಸೋತರು. ಹಿಂದೆ ನಮ್ಮ ಜಿಲ್ಲೆಯಲ್ಲಿ ಏಳು ಜನ ಸೋತ್ವಿ ಅವರು ಒಬ್ರು ಗೆದ್ದರು. ಒಂದು ಸಭೆಗೆ ಮೂರು ಗಂಟೆ ಕಾಯ್ಸಿದ್ರು. ಅಂದೇ ಸಂಕಲ್ಪ ಮಾಡಿದ್ವಿ ಇಲ್ಲಿ ಇವರೊಬ್ರೇ ಶಾಸಕ ಅಲ್ಲ ಮುಂದೆ ನಾವು ಲೀಡ್ ಕೊಡಬೇಕು ಅಂತ. ಅದೇ ರೀತಿ ನಾವು ಲೀಡ್ ಕೊಟ್ವಿ. ಅವರು ಬಿಲ ಸೇರಿರುವ ಇಲಿ ಅಷ್ಟೆ. ಮುಂದೆ ವಿಜಯಪುರದಲ್ಲಿ ಕಾರ್ಯಕರ್ತರ ಸಮಾವೇಶ ಮಾಡಬೇಕಾಗಿದೆ ಎಂದರು.

ಯಡಿಯೂರಪ್ಪ ಇವರಿಗೆ ಮರು ಹುಟ್ಟು ಕೊಟ್ಟವರು. ಜೀವನ ಪರ್ಯಂತ ಯಡಿಯೂರಪ್ಪನವರಿಗೆ ಇವರು ಋಣಿ ಆಗಿರಬೇಕು. ಯಾರ ಬಗ್ಗೆ ಮಾತಾಡಿಲ್ಲ ಇವರು ಎಲ್ಲರ ಬಗ್ಗೆಯೂ ಮಾತನಾಡಿದ್ದಾರೆ. ಯಡಿಯೂರಪ್ಪ ಅವರಗೆ ಮಾತನಾಡಿದ್ದೇ ಇವರಿಗೆ ಶಾಪ. ಯಾವ ರೀತಿ ಶಿಶುಪಾಲನ ವಧೆ ಆಯ್ತೋ ಅದೇ ರೀತಿ ಶಿಕ್ಷೆ ಆಗುತ್ತದೆ ಎಂದರು.

ಒಂದು ಪಕ್ಷ ಆದರೂ ಕಟ್ಟಲಿ, 4 ಪಕ್ಷ ಕಟ್ಟಿದರೂ ನಡೆಯುತ್ತದೆ; ಬೆಂಗಳೂರಿನಲ್ಲಿ ಮಾಜಿ ಸಚಿವ ರಾಜೂ ಗೌಡ ಹೇಳಿಕೆ

ಬೆಂಗಳೂರು; ಒಂದು ಪಕ್ಷ ಆದರೂ ಕಟ್ಟಲಿ, 4 ಪಕ್ಷ ಕಟ್ಟಿದರೂ ನಡೆಯುತ್ತದೆ  ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಾಜೂ ಗೌಡ ಹೇಳಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರದ ಬಗ್ಗೆ ಮಾತನಾಡಿದ ಅವರು  ಯತ್ನಾಳ್ ಈಗ ಸ್ವತಂತ್ರರು. ಅವರು ಏನೇ ಮಾಡಿದರೂ ನಡೆಯುತ್ತದೆ. ಇಷ್ಟು ದಿನ ಪಕ್ಷದಲ್ಲಿ, ಪಕ್ಷದ ಚೌಕಟ್ಟಿನಲ್ಲಿ ಇದ್ದರು‌. ಒಂದು ಪಕ್ಷ ಆದರೂ ಕಟ್ಟಲಿ, 4 ಪಕ್ಷ ಕಟ್ಟಿದರೂ ನಡೆಯುತ್ತದೆ. ಅದರ ಬಗ್ಗೆ ನಾವೇನೂ ಹೆಚ್ಚು ಹೇಳಲು ಹೋಗಲ್ಲ. ಕೆಲವು ಹಿಂದೂ ಕಾರ್ಯಕರ್ತರು ಅವರ ಜೊತೆ ಸೇರಿದ್ದಾರೆ. ಸ್ವಲ್ಪ ದಿನ ಆದ ಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದರು.

ಯತ್ನಾಳರನ್ನು ಪಕ್ಷಕ್ಕೆ ವಾಪಸ್ ಕರೆಸುವ ಬಗ್ಗೆ ಯತ್ನಾಳ್ ಟೀಂ ನಿಂದ ಹೈಕಮಾಂಡ್ ಗೆ ಮನವಿ ಮಾಡುವ ವಿಚಾರದ ಬಗ್ಗೆ ಮಾತನಾಡಿದ  ಮಾಧ್ಯಮಗಳ ಮುಂದೆ ಮನವಿ ಮಾಡಿದರೆ ಏನೂ ಪ್ರಯೋಜನವಿಲ್ಲ, ಸರಿ ಹೋಗಲ್ಲ. ಪಕ್ಷದ ಚೌಕಟ್ಟಿನಲ್ಲಿ ವರಿಷ್ಠರ ಜೊತೆ ಮಾತಾಡಿ, ಮನವೊಲಿಕೆ ಮಾಡಿ ಇನ್ನೊಂದು ಸಲ ಇಂತಹ ಘಟನೆ ಆಗದಂತೆ ನೋಡಿಕೊಳ್ಳುವ ಬಗ್ಗೆ ಮಾತಾಡಿದರೆ ಏನಾದರೂ ಆಗಬಹುದು. ಯಡಿಯೂರಪ್ಪ, ವಿಜಯೇಂದ್ರ ವಿರುದ್ದ ಹೋರಾಟ ಮುಂದುವರೆಯುತ್ತದೆ ಎಂಬ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಡಿಯೂರಪ್ಪ ಇಬ್ಬರು ಶಾಸಕರಿಂದ ಪಕ್ಷ ಪ್ರಾರಂಭ ಮಾಡಿದರು. ಒಬ್ಬರು ಬಿಟ್ಟು ಹೋದ ಮೇಲೆ ಅವರೊಬ್ಬರೇ ಇದ್ದು ಪಕ್ಷ ಬೆಳೆಸಿದ್ದಾರೆ. ಯತ್ನಾಳ್ ಅವರದ್ದು ಒಂದೇ ಅಜೆಂಡಾ ಇದೆ. ಅವರ ಅಜೆಂಡಾಗೋಸ್ಕರವೇ ಇಷ್ಟೆಲ್ಲಾ ಸಮಸ್ಯೆ ಆಗುತ್ತಿವೆ ಎಂದರು.

ಪಕ್ಷದ ಚೌಕಟ್ಟಿ‌ಲ್ಲಿ ನಮಗೆ ಪಕ್ಷ ಏನು ಹೇಳಿದೆಯೋ ಅದರಂತೆ ಕೆಲಸ ಮಾಡುತ್ತೇವೆ. ಕರ್ನಾಟಕದಲ್ಲಿ ಯಾರು ಯಾರು ಹೊಸ ಪಕ್ಷ ಕಟ್ಟಿದರು, ಅವೆಲ್ಲಾ ಏನಾಗಿದೆ ಅಂತ ಎಲ್ಲರೂ ನೋಡಿದ್ದಾರೆ. ಯಾರು ಎಷ್ಟು ಯಶಸ್ಸು ಆಗಿದ್ದಾರೆ ಎಲ್ಲರಿಗೂ ಗೊತ್ತಿದೆ. ನಾವು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.