ಮನೆ Latest News ಕೆಲವೇ ದಿನಗಳಲ್ಲಿ ನಿಮಗೆಲ್ಲಾ ಗುಡ್ ನ್ಯೂಸ್ ಕೊಡುತ್ತೇನೆ; ಬೆಂಗಳೂರಿನಲ್ಲಿ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ...

ಕೆಲವೇ ದಿನಗಳಲ್ಲಿ ನಿಮಗೆಲ್ಲಾ ಗುಡ್ ನ್ಯೂಸ್ ಕೊಡುತ್ತೇನೆ; ಬೆಂಗಳೂರಿನಲ್ಲಿ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ.

0

ಬೆಂಗಳೂರು;ಕೆಲವೇ ದಿನಗಳಲ್ಲಿ ನಿಮಗೆಲ್ಲಾ ಗುಡ್ ನ್ಯೂಸ್ ಕೊಡುತ್ತೇನೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿಎಸ್ ಪಕ್ಷದ ಬೆಂಗಳೂರು ಘಟಕದ ಸಭೆ ನಡೆಯಿತು.ಸಭೆಯಲ್ಲಿ ಬೆಂಗಳೂರು ನಗರದ ಸದಸ್ಯತ್ವ ಅಭಿಯಾನ ಮತ್ತು ಪಕ್ಷ ಸಂಘಟನೆ ಕುರಿತು ಚರ್ಚೆಯಾಯಿತು.ಸಭೆಗೂ ಮುನ್ನ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಮೂರ್ನಾಲ್ಕು ವಾರಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ.ರಾಜ್ಯದಲ್ಲಿ ಜೆಡಿಎಸ್ ಸದಸ್ಯರ ನೊಂದಣಿ ಮಾಡಬೇಕಾಗಿದೆ.ಪಕ್ಷದ ವರಿಷ್ಠರು ದೇವಗೌಡರು ಸದಸ್ಯತ್ವ ಮಾಡಲು ಸೂಚನೆ ಕೊಟ್ಟಿದ್ದಾರೆ.ನಮ್ಮ ಪಕ್ಷದ ನಾಯಕರು ಕುಮಾರಣ್ಣ ಅವರು ಕಿವಿಮಾತು ಹೇಳಿದ್ದರು.ಹೀಗಾಗಿ ಮೂರು ಜಿಲ್ಲೆಗಳ ಪ್ರವಾಸ ಮುಗಿದಿದೆ.ಮುಂದಿನ ವಾರ ಉತ್ತರ ಕರ್ನಾಟಕ ಭಾಗದ ಎರಡು ಜಿಲ್ಲೆಗೆ ಹೋಗುತ್ತಿದ್ದೇನೆ.ಇವತ್ತು ಬೆಂಗಳೂರು ನಗರಕ್ಕೆ ಸಂಬಂಧಿಸಿದ 28 ವಿಧಾನಸಭಾ ಕ್ಷೇತ್ರದ ನಾಯಕರ ಸಭೆ ಕರೆದಿದ್ದೇವೆ ಎಂದರು.

ಎಲ್ಲರೂ ಒಟ್ಟಾಗಿ ಪಕ್ಷದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ.ಮುಂದೆ ಪಕ್ಷವನ್ನು ಹೇಗೆ ತೆಗೆದುಕೊಂಡು ಹೋಗಬೇಕು.ಯಾವ ರೀತಿ ಎಚ್ಚೆತ್ತುಕೊಂಡು ಮುನ್ನುಗ್ಗಬೇಕು ಅಂತ ಸಭೆ ಕರೆದಿದ್ದೇವೆ .ಮುನಿರತ್ನ ಕೇಸ್ ಎಸ್‌ಐಟಿ ಗೆ ಕೊಡಲು ಸರ್ಕಾರ ಮುಂದಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಮುನಿರತ್ನ ಕೇಸ್ ಬಗ್ಗೆ ಮಾಧ್ಯಮದಲ್ಲಿ ವರದಿ ಬರುತ್ತಿದೆ. ಬಹುಶಃ ಈ ಪ್ರಕರಣ ತನಿಖೆ ಆಗುತ್ತಿದೆ.ಇದರ ಬಗ್ಗೆ ನಾವು ಮಾತಾಡುವುದು ಸರಿಯಲ್ಲ.ತನಿಖೆ ಆಗಿ ಸತ್ಯಾಸತ್ಯತೆ ಹೊರಗೆ ಬರಲಿ.ಕಾನೂನಿಗಿಂತ ಯಾರು ದೊಡ್ಡವರಲ್ಲ, ಈ ನೆಲದ ಕಾನೂನಿಗೆ ತಲೆಬಾಗಲೇ ಬೇಕು.ಕೆಲವು ಹಿಂದಿನ ಪ್ರಕರಣಗಳಿವೆ. ಯಾದಗಿರಿ ಪಿಎಸ್‌ಐ ಪ್ರಕರಣ ಮುಚ್ಚಿಹಾಕಿರೋದು ಜಗಜ್ಜಾಹೀರಾಗಿದೆ.ನಾಗೇಂದ್ರ ಅವರ ಭ್ರಷ್ಟಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಸದನದಲ್ಲಿ ಒಪ್ಪಿದ್ದಾರೆ.187 ಕೋಟಿ ಅಲ್ಲ, 82 ಕೋಟಿ ಅಂತ ಅವರೇ ಹೇಳಿದ್ದಾರೆ.ಅದನ್ನು ತನಿಖೆ ಮಾಡುವಲ್ಲಿ ಮೀನಾಮೇಷ ಮಾಡಿದ್ದು ಜಗಜ್ಜಾಹೀರಾಗಿದೆ.ಮುನಿರತ್ನ ವಿಚಾರದಲ್ಲಿ ಎಫ್‌ಎಸ್‌ಎಲ್ ರಿಪೋರ್ಟ್ ಬರಬೇಕಿದೆ.ಅವರ ಧ್ವನಿ ಹೌದು ಅಲ್ಲ ಎನ್ನುವುದು ರಾಜ್ಯದ ಜನರಿಗೆ ಗೊತ್ತಾಗಬೇಕು.ಆದರೆ ತರಾತುರಿಯಲ್ಲಿ ಅವರನ್ನು ಬಂಧಿಸಿದ್ದಾರೆ.

 

ಇದನ್ನ ಗಮನಿಸಿದರೆ ರಾಜ್ಯ ಸರ್ಕಾರ ಟಾರ್ಗೆಟ್ ರಾಜಕಾರಣ ಮಾಡುತ್ತಿದೆ.ಅವರ ತಪ್ಪು ಮುಚ್ಚಿಕೊಳ್ಲಲು ಬೇರೆಯವರ ಮೇಲೆ ತಪ್ಪು ಹೊರಿಸುವ ಕೆಲಸ ಆಗುತ್ತಿದೆ.ಸ್ವಾತಂತ್ರ್ಯ ಬಂದ ನಂತರ ಹಲವಾರು ಸರ್ಕಾರಗಳು ಆಡಳಿತ ಮಾಡಿದ್ದಾವೆ.ಹಲವಾರು ಮುಖ್ಯಮಂತ್ರಿಗಳು ಕೆಲಸ ಮಾಡಿದ್ದಾರೆ.ಈ ರೀತಿ ಸರ್ಕಾರ ಟಾರ್ಗೆಟ್ ರಾಜಕಾರಣ ಮಾಡಿಕೊಂಡು ಹೋಗುತ್ತಿದ್ದಾರೆ.ದನ್ನು ರಾಜ್ಯದ ಜನತೆ ಮೆಚ್ಚುವಂತಹದ್ದಲ್ಲ ಎಂದಿದ್ದಾರೆ.

ಒಕ್ಕಲಿಗ ನಾಯಕರಿಂದ ಸಿಎಂ ಭೇಟಿ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಜಾತಿ ರಾಜಕಾರಣದ ಪ್ರಯತ್ನ ಮಾಡುತ್ತಿದೆ.ಒಕ್ಕಲಿಗ, ಲಿಂಗಾಯತ, ಒಬಿಸಿ, ಮುಸ್ಲಿಂ ಟ್ಯಾಗ್ ರಾಜಕಾರಣ ಸೂಕ್ತ ಅಲ್ಲ.ಯಾವುದೋ ಒಂದು ಸಮುದಾಯದ ಒಲೈಕೆಗೆ ಈ ರೀತಿಯ ಟಾರ್ಗೆಟ್ ರಾಜಕೀಯ ಮಾಡುತ್ತಿರುವುದು ಸ್ಪಷ್ಟ.ಮೂರೂವರೆ ವರ್ಷ ಅಧಿಕಾರ ಮಾಡುವುದಕ್ಕೆ ಜನರು ಅವಕಾಶ ಕೊಟ್ಟಿದ್ದಾರೆ.ಇವೆಲ್ಲ ಬಿಟ್ಟು ಅದರ ಕಡೆ ಸ್ವಲ್ಪ ಚಿಂತನೆ ಮಾಡಲಿ.ಸರ್ಕಾರ ಬಂದು ಒಂದು ವರ್ಷ ನಾಲ್ಕು ತಿಂಗಳಾಗಿದೆ.ನಾವು ಹಲವಾರು ಜಿಲ್ಲೆಗೆ ಸಂಘಟನೆಗೆ ಹೋಗಿದ್ದೇವೆ.ಅಲ್ಲಿನ ಜನಾಭಿಪ್ರಾಯ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿದೆ.ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಶುರುವಾಗಿದೆ.ನಾಳೆ ಚುನಾವಣೆಗೆ ಹೋದರೆ ರಾಜ್ಯದ ಜನತೆ ಕಾಂಗ್ರೆಸ್ ತಿರಸ್ಕಾರ ಮಾಡುವುದರಲ್ಲಿ ಸಂಶಯವಿಲ್ಲ.ಆ ಮಟ್ಟದ ವಾತಾವರಣ ಕಾಂಗ್ರೆಸ್ ವಿರುದ್ಧದ ಸೃಷ್ಟಿ ಆಗಿದೆ.ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಹೋಗುತ್ತಿದ್ದಾರೆ ಎಂದಿದ್ದಾರೆ.

ಅವರ ಹಗರಣ, ಅಕ್ರಮವನ್ನು ಹೊರಗೆ ತರಲು ಪ್ರಜಾಪ್ರಭುತ್ವದಲ್ಲಿ ನಮಗೆ ಹಕ್ಕು ಇದೆ.ಅವರು ಮಾಡಿದ ತಪ್ಪು ಬಯಲಿಗೆ ಎಳೆಯೋದು ತಪ್ಪಾ?ನಾವು ನಮ್ಮ ಕೆಲಸ ಮಾಡಿದ್ದಕ್ಕೆ ಟಾರ್ಗೆಟ್ ರಾಜಕಾರಣ ಮಾಡುತ್ತಿದ್ದಾರೆ.ಅದರಲ್ಲೂ ಕುಮಾರಣ್ಣ ಅವರು ಕೇಂದ್ರದ ಮಂತ್ರಿಯಾದ ಮೇಲೆ ಸಹಿಸಿಕೊಳ್ಳಲು ಅಗುತ್ತಿಲ್ಲ.ಕಾಂಗ್ರೆಸ್ ನವರಿಗೆ ಕುಮಾರಸ್ವಾಮಿ ಅವರ ಭಯ ಇದೆ.ವಾಸ್ತವವಾಗಿ ಮಾತನಾಡಿ ಜನರ ಮುಂದೆ ಎಲ್ಲವನ್ನೂ ಇಡುತ್ತಾರೆ.ಹೀಗಾಗಿ ಕುಮಾರಣ್ಣನ ಭಯ ಶುರುವಾಗಿದೆ.ದಿನನಿತ್ಯ ಕುಮಾರಣ್ಣ ಅವರ ಮೇಲಿನ ಹಳೆಯ ಪ್ರಕರಣ ಹುಡುಕುತ್ತಿದ್ದಾರೆ.ಡ್ಯಾಕುಮೆಂಟ್ ಹುಡುಕಲು ಸಿಎಂ, ಡಿಸಿಎಂ, ಕ್ಯಾಬಿನೆಟ್ ಮಂತ್ರಿಗಳು  ಮುಂದಾಗಿದ್ದಾರೆ.ಕುಮಾರಣ್ಣ ಅವರ ತೆಜೋವಧೆ ಮಾಡುತ್ತಿದ್ದಾರೆ.ಕುಮಾರಣ್ಣ ತಪ್ಪಿತಸ್ಥರು ಅಂತ ಮಾಡಲು ಹೊರಟಿದ್ದಾರೆ.ಡಿನೋಟಿಫೈ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಣ್ಣ ಸ್ಪಷ್ಟೀಕರಣ ನೀಡಿದ್ದಾರೆ.2015 ರಲ್ಲಿ ಆದ ಈ ಪ್ರಕರಣಕ್ಕೂ ಕುಮಾರಣ್ಣ ಅವರಿಗೂ ಸಂಬಂಧ ಇಲ್ಲ ಎಂದಿದ್ದಾರೆ.