ಮನೆ Latest News ನಕ್ಸಲರನ್ನು ಸಿಎಂ ಎದುರು ಶರಣಾಗತಿ ಮಾಡಬಾರದಿತ್ತು ಅಂತ ಯಾರು ಹೇಳ್ತಿರೋದು? : ಗೃಹ ಸಚಿವ ಪರಮೇಶ್ವರ್...

ನಕ್ಸಲರನ್ನು ಸಿಎಂ ಎದುರು ಶರಣಾಗತಿ ಮಾಡಬಾರದಿತ್ತು ಅಂತ ಯಾರು ಹೇಳ್ತಿರೋದು? : ಗೃಹ ಸಚಿವ ಪರಮೇಶ್ವರ್ ಪ್ರಶ್ನೆ

0

ಬೆಂಗಳೂರು; ನಕ್ಸಲರನ್ನು ಸಿಎಂ ಎದುರು ಶರಣಾಗತಿ ಮಾಡಬಾರದಿತ್ತು ಅಂತ ಯಾರು ಹೇಳ್ತಿರೋದು? ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಬೇರೆ ರಾಜ್ಯದವರೂ ಕೂಡ ನಿನ್ನೆ ಶರಣಾಗಿದ್ದಾರೆ. ಅವರ ರಾಜ್ಯದ ಸಿಎಂ ಗಳ ಜೊತೆಗೆ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಕೇರಳ ತಮಿಳುನಾಡು ಸಿಎಂ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ ಎಂದಿದ್ದಾರೆ.

ಕೃಷ್ಣಾದಲ್ಲಿ ಶರಣಾಗತಿ ಸರಿಯಲ್ಲ, ಅರ್ಬನ್ ನಕ್ಸಲ್ ಮಾಡ್ತಿದ್ದಾರೆ ಅನ್ನೋ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಸೂಕ್ತ ಅಲ್ಲ ಅಂತ ಹೇಳೋದು ಯಾರು.?. ಅದರಲ್ಲಿ ತಪ್ಪೇನಿದೆ, ಯಾಕೆ ತಪ್ಪು ಅಂತ ಹೇಳಬೇಕಲ್ವಾ.?. ಇಡೀ ದೇಶಕ್ಕೆ ಗೊತ್ತಾಗಬೇಕು ನಕ್ಸಲ್‌ಗೆ ಹೋಗಬಾರದು ಅಂತ. ಸಿಎಂ‌ ಭರವಸೆ ಕೊಟ್ಟಿದ್ದಾರೆ, ನಕ್ಸಲ್ ಮಾಡಬಾರದು ಅಂತ. ಒಂದು ಸಂದೇಶ ಕೊಡಲು ಮಾಡಿದ್ದೇವೆ. ನಕ್ಸಲೈಟ್ ಆಗಿ ಹೋರಾಟ ಮಾಡ್ತಾರೆ, ಅವರಿಗೂ ಮಾಡ್ತಾರೆ. ಸುನಿಲ್ ಕುಮಾರ್ ಕ್ಷೇತ್ರದಲ್ಲೇ ನಕ್ಸಲ್‌ ಹೆಚ್ಚಿದ್ದಾರೆ. ANF ಅವರ ಕ್ಷೇತ್ರದಲ್ಲೇ ಇದ್ದಾರೆ. ನಕ್ಸಲ್‌ ಅವರು ಬಂದಾಗ ಅವರ ಬಳಿ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ.ಅವರು ಎಲ್ಲಿ ಬಿಟ್ಟು ಬಂದಿದ್ದಾರೆ ನೋಡಬೇಕು. ಬಹುತೇಕ‌ ರಾಜ್ಯದಲ್ಲಿ ನಕ್ಸಲ್ ಅಧ್ಯಾಯ ಮುಗಿದಿದೆ. ಬೇರೆ ರಾಜ್ಯದ ವ್ಯಕ್ತಿ ಶರಣಾಗತಿ ಆಗಿದ್ದಾರೆ. ಅವರ ಮುಖ್ಯಮಂತ್ರಿ ಜೊತೆ ನಮ್ಮ ಸಿಎಂ ಮಾತಾಡ್ತಾರೆ. ಅಲ್ಲಿರೋ‌ ಕೇಸ್‌ಗಳ ಬಗ್ಗೆ ಕೂಡ ಚರ್ಚೆ ಮಾಡುತ್ತಾರೆ ಎಂದಿದ್ದಾರೆ.

ಇದೇ ವೇಳೆ ತಿರುಪತಿ ಕಾಲ್ತುಳಿತ ಪ್ರಕರಣದ ಬಗ್ಗೆ ಮಾತನಾಡಿದ ಅವರು ಮೃತಪಟ್ಟವರ ಕುಟುಂಬಕ್ಕೆ ತಿಮ್ಮಪ್ಪನೇ ಧೈರ್ಯ ನೀಡಬೇಕು. ನಡೆಯಬಾರದ ಘಟನೆ ತಿರುಪತಿಯಲ್ಲಿ ನಡೆದಿದೆ. ಮೃತಪಟ್ಟವರ ಕುಟುಂಬಕ್ಕೆ ಧೈರ್ಯ ಭರಿಸುವ ಶಕ್ತಿ ದೇವರು ನೀಡಲಿ ಎಂದಿದ್ದಾರೆ.

ನಕ್ಸಲ್ ಸಿದ್ದಾಂತ ಪ್ರಜಾಪ್ರಭುತ್ವ ವಿರೋಧಿ ಸಿದ್ಧಾಂತ: ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ

ಬೆಂಗಳೂರು; ನಕ್ಸಲ್ ಸಿದ್ದಾಂತ ಪ್ರಜಾಪ್ರಭುತ್ವ ವಿರೋಧಿ ಸಿದ್ಧಾಂತ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ಅದು ರಾಷ್ಟ್ರ ವಿರೋಧಿ ಸಿದ್ದಾಂತ. ಅವರು ಬುಲೆಟ್ ಮೇಲೆ ಮಾತ್ರ ನಂಬಿಕೆ ಇಟ್ಟವರು. ಶರಣಾಗತಿ ಯಾವ ಕಾರಣಕ್ಕೆ?. ಅವರು ಚೀನಾದ ಸಹಕಾರ ಪಡೆದಿದ್ದಾರೆ, ಪಾಕಿಸ್ತಾನದ ಐಎಸ್ ಐ ಸಹಕಾರ ಪಡೆದಿದ್ದಾರೆ. ಅವರನ್ನು ಪೂರ್ಣ ಪ್ರಮಾಣದ ತನಿಖೆಗೆ ಒಳಪಡಿಸಬೇಕು. ಅವರು ಮೋಸ, ವಂಚನೆ ಮಾಡಲು ಬರುತ್ತಿದ್ದಾರೋ ಗೊತ್ತಾಗಬೇಕು. ನಕ್ಸಲರು ಯಾರೂ ರಾಷ್ಟ್ರದ ಹಿತ, ಸಂವಿಧಾನ ರಕ್ಷಣೆಗಾಗಿ ಕೆಲಸ ಮಾಡಿದವರಲ್ಲ. ಅವರ ಸಿದ್ದಾಂತ ತಪ್ಪು ಅಂತಾ ಮನವರಿಕೆಯಾಗಿದ್ದರೆ ಸ್ವಾಗತ. ಇದರ ಹಿಂದೆ ಯಾರ್ಯಾರು ಇದ್ದಾರೆ ಅಂತಾ ಬಹಿರಂಗಪಡಿಸಬೇಕು ಎಂದಿದ್ದಾರೆ.

ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಸಂವಿಧಾನಿಕ ಪದ ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಸಿಐಡಿಯಿಂದ ನನಗೆ ನೋಟೀಸ್ ಬಂದಿದೆ. ಸಭಾಪತಿಗಳು ತನಿಖೆ ನಡೆಸಲು ಕೆಲವು ಪ್ರಕರಣಗಳನ್ನು ಪೊಲೀಸರಿಗೆ ಸೂಚಿಸಿದ್ದರು. ಎಂಎಲ್ಸಿಗಳಾದ ಡಿ.ಎಸ್. ಅರುಣ್ ಮತ್ತು ಕಿಶೋರ್ ಕುಮಾರ್ ಕೊಟ್ಟಿದ್ದ ದೂರಿನ ಸಂಬಂಧ ನೋಟೀಸ್ ಬಂದಿದೆ. ವಿಚಾರಣೆಗೆ ಹಾಜರಾಗುತ್ತೇನೆ. ಸತ್ಯ ಏನು ಇದೆ ಅದನ್ನು ಹೇಳುತ್ತೇನೆ. ನಾನು ಊರಿನಲ್ಲಿ ಇಲ್ಲದೇ ಇದ್ದಾಗ ಮೊದಲ ನೋಟೀಸ್ ಬಂದಿತ್ತು. ಎಂದಿದ್ದಾರೆ.