ಮನೆ Latest News ಸಿಎಂ ಬದಲಾವಣೆ ಆಗ್ಲಿ ಮಂತ್ರಿ ಬದಲಾವಣೆ ಆಗ್ಲಿ ಏನೇ ಆಗ್ಲಿ ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು;ಕೆ...

ಸಿಎಂ ಬದಲಾವಣೆ ಆಗ್ಲಿ ಮಂತ್ರಿ ಬದಲಾವಣೆ ಆಗ್ಲಿ ಏನೇ ಆಗ್ಲಿ ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು;ಕೆ ಎನ್ ರಾಜಣ್ಣ ಹೇಳಿಕೆ

0

ಬೆಂಗಳೂರು: ಸಿಎಂ ಬದಲಾವಣೆ ಆಗ್ಲಿ ಮಂತ್ರಿ ಬದಲಾವಣೆ ಆಗ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗ್ಲಿ ಏನೇ ಆಗ್ಲಿ ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ.

ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಜಕೀಯವಾಗಿ ಯಾವುದೇ ಚರ್ಚೆಗಳಾಗಿಲ್ಲ, ಎಲ್ಲವೂ ಮಾಧ್ಯಮಗಳ ಸೃಷ್ಟಿ. ಕ್ಯಾಬಿನೆಟ್ ಇದ್ದಾಗ ಏನ್ರಿ ಊಟ ಹಾಕಿಲ್ಲ ಅಂತ ರೇಗಿಸಿದ್ರು.ಅದಕ್ಕೆ ಸತೀಶ್ ಊಟ ಹಾಕಿಸಿದ್ರು ಎಂದಿದ್ದಾರೆ.

ಇದೇ ವೇಳೆ  ಮಾತನಾಡಿದ ಅವರು ಸಿಎಂ ಬದಲಾವಣೆ ಆಗ್ಲಿ ಮಂತ್ರಿ ಬದಲಾವಣೆ ಆಗ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗ್ಲಿ ಏನೇ ಆಗ್ಲಿ ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು. ಬದಲಾವಣೆ ಮಾಡೋದು ಬಿಡೋದು ಹೈಕಮಾಂಡ್ ತೀರ್ಮಾನ. ಅವತ್ತು ಯಾವ ರಾಜಕೀಯ ಬಗ್ಗೆಯೂ ಚರ್ಚೆಯಾಗಿಲ್ಲ. ಯಾರು ಮುಂದುವರಿತಾರೆ ಮುಂದುವರಿಯಲ್ಲ ಎನ್ನುವುದು ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು. ಮಹದೇವಪ್ಪ ಮತ್ತು ಪರಮೇಶ್ವರ್ ಅವರ ಅಭಿಪ್ರಾಯ ಅವರದ್ದು. ಸ್ಪಷ್ಟವಾಗಿ ಹೇಳುತ್ತೇವೆ ಡಿನ್ನರ್ ಸೇರಿದ್ದು ಹೊಸ ವರ್ಷಕ್ಕೆ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಒಬ್ಬರಿಗೆ ಒಂದೇ ಹುದ್ದೆ ಎಂಬ ಚರ್ಚೆ ಎಲ್ಲ ಕಾಲದಲ್ಲಿಯೂ ಇದೆ. ದೇವರಾಜ ಅರಸು ಕಾಲದಲ್ಲಿಯೂ ಕೂಡ ಒಬ್ಬರಿಗೆ ಒಂದೇ ಹುದ್ದೆ ಎಂದಿತ್ತು. ದೇವರಾಜ ಅರಸು ಎರಡರಲ್ಲೂ ಮುಂದುವರಿಯುತ್ತೇನೆ ಎಂದಾಗ ಅವರನ್ನೇ ಪಕ್ಷ ತೆಗೆದುಬಿಡ್ತು. ನಮ್ಮ ಹೈಕಮಾಂಡ್ ಗಟ್ಟಿಯಾಗಿದೆ. ಹೈಕಮಾಂಡ್ ಹೇಳಿದರೆ ಡಿಕೆಶಿವಕುಮಾರ್ ಅವರೇ ಮುಂದುವರಿಯಲಿ ಅದರಲ್ಲೇನಿದೆ ಎಂದಿದ್ದಾರೆ.

ಶಿವಕುಮಾರ್ ಅವರ ನೇತೃತ್ವದಲ್ಲೇ ಚುನಾವಣೆ ಗೆದ್ದಿಲ್ವೇನ್ರಿ?. ನನಗಂತೂ ಯಾವ ಹುದ್ದೆಯೂ ಬೇಡ, ಬೇಕಿದ್ರೆ ಮಂತ್ರಿಯೂ ಬೇಡ. ನಮ್ಮ ಪಕ್ಷದ ಹೈಕಮಾಂಡ್ ಗಟ್ಟಿಯಾಗಿದೆ. ನೀವು ಏನೇ ತಿರುಗಿಸಿ ಮರುಗಿಸಿ ಕೇಳಿದರೂ ನನ್ನ ಅಭಿಪ್ರಾಯ ಇಷ್ಟೇ. ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ.

ಕ್ಯಾಬಿನೆಟ್ ವಿಸ್ತರಣೆ ಪುನರ್ರಚನೆ ವಿಚಾರ ಯಾವುದೂ ಚರ್ಚೆ ಆಗಲಿಲ್ಲ: ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಸಚಿವ ಡಾ.ಎಚ್ ಸಿ ಮಹದೇವಪ್ಪ ಹೇಳಿಕೆ

ಬೆಂಗಳೂರು; ಕ್ಯಾಬಿನೆಟ್ ವಿಸ್ತರಣೆ ಪುನರ್ರಚನೆ ವಿಚಾರ ಯಾವುದೂ ಚರ್ಚೆ ಆಗಲಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಸಚಿವ ಡಾ.ಎಚ್ ಸಿ ಮಹದೇವಪ್ಪ ಹೇಳಿಕೆ ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು ಸತೀಶ್ ಜಾರಕಿಹೊಳಿ ಊಟಕ್ಕೆ ಕರೆದಿದ್ದರು.ಯಾವ  ಪ್ಲ್ಯಾನೂ ಇರಲಿಲ್ಲ, ಅಜೆಂಡಾವೂ ಇರಲಿಲ್ಲ. ಒಬ್ಬರೇ ಒಬ್ಬ ಶಾಸಕರೂ ಕೂಡ ಇರಲಿಲ್ಲ. ನಾವೇನೂ ರಾಜಕೀಯವೇ ಮಾತಾಡಲಿಲ್ಲ. ಒಂಭತ್ತನೇ ವಿಶ್ವದ ಅದ್ಭುತವೇ ಹೌದು ಇದು. ಸರ್ಕಾರ ಪರಿಣಾಮಕಾರಿಯಾಗಿ ಉತ್ತರ ಕೊಡಬೇಕು ಎಂಬ ಬಗ್ಗೆ ಮಾತ್ರ ಮಾತಾಡಿದ್ದೇವೆ. ಕ್ಯಾಬಿನೆಟ್ ವಿಸ್ತರಣೆ ಪುನರ್ರಚನೆ ವಿಚಾರ ಯಾವುದೂ ಚರ್ಚೆ ಆಗಲಿಲ್ಲ. ಅದು ನಮ್ಮ ಕೈಯ್ಯಲ್ಲೂ ಇಲ್ಲ. ಪುಷ್ ಆ್ಯಂಡ್ ಪುಲ್ ಎಲ್ಲವೂ ಕೂಡ ಹೈಕಮಾಂಡ್ ಕೈಯಲ್ಲಿ ಇದೆ. ನೀವು ಹೇಳುತ್ತಿರುವ ಯಾವ ವಿಚಾರವೂ ಕೂಡ ಚರ್ಚೆಯಾಗಿಲ್ಲ ಎಂದು ಮಾಧ್ಯಮವರ ಪ್ರಶ್ನೆಗೆ ತಿರುಗೇಟು ಕೊಟ್ಟಿದ್ದಾರೆ.

ಐದು ವರ್ಷ ಸಿದ್ದರಾಮಯ್ಯ ಸಿಎಂ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ.ಮುಂದೆಯೂ ಅವರೇ ಮುಂದುವರಿಯುತ್ತಾರೆ. ಯಾಕೆ ಈ ವಿಚಾರದಲ್ಲಿ ಪದೇ ಪದೇ ಪ್ರಶ್ನೆ ಎಂದು ಮಹದೇವಪ್ಪ ಅವರು ಮಾಧ್ಯಮದವರಿಗೇ ಮರುಪ್ರಶ್ನೆ ಹಾಕಿದ್ದಾರೆ.ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು ಇಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಹೆಸರಿಡೋದು ಏನು ದೊಡ್ಡ ವಿಚಾರನಾ..? ಅದರಲ್ಲಿ ವಿವಾದ ಯಾಕೆ..?  ಸಿದ್ದರಾಮಯ್ಯ ಅವರೇನು ಅರ್ಜಿ ಹಾಕಿದ್ದಾರಾ ನನ್ನ ಹೆಸರು ಇಡಿ ಅಂತ..?  ಸ್ಥಳಿಯವಾಗಿ ಒತ್ತಾಯ ಮಾಡಿದ್ದಾರೆ ಸಿದ್ದರಾಮಯ್ಯ ಹೆಸರಿಡಿ ಅಂತ‌. ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರು ಹೆಸರು ಇಡದಿದ್ದರು ಜನರ ಮನಸ್ಸಿಲ್ಲಿ ಸಿದ್ದರಾಮಯ್ಯ ಇದ್ದೆ ಇದಾರೆ‌. . ರಸ್ತೆಗೆ ಹೆಸರಿಡುವ ವಿಚಾರ ಸ್ಥಳೀಯ ಆಡಳಿತ ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.