ಬೆಂಗಳೂರು; ಸಿಎಂ ರಾಜೀನಾಮೆ ಕೇಳಲು ಏನ್ ಹಕ್ಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಸಿಎಂ ವಿರುದ್ದ ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡ್ತಿದ್ದಾರೆ.ಬಿಜೆಪಿಯವರು ವಾರ್ಮ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಯತ್ನಿಸಿದ್ರೆ ಅದು ವರ್ಕೌಟ್ ಆಗಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲು ಏನ್ ಹಕ್ಕಿದೆ?. ಇದು ಕೇಂದ್ರ ಸರ್ಕಾರದ ದುರುದ್ದೇಶ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರದ ಷಡ್ಯಂತ್ರವನ್ನ ಸಮರ್ಥವಾಗಿ ಎದುರಿಸುತ್ತೇವೆ ಎಂದಿದ್ದಾರೆ. ಬೆಳಗಾವಿ ಬಾಣಂತಿ ಸಾವು ಪ್ರಕರಣ ಸಂಬಂಧಪಟ್ಟಂತೆ ಪ್ರತಿಯೊಂದು ಪ್ರಕರಣ ತನಿಖೆ ಮಾಡ್ತಿದ್ದೇವೆ. ಲೋಪದೋಷ ಸರಿಪಡಿಸುವ ಕೆಲಸ ಆಗ್ತಿದೆ. ಯಾವ ಪ್ರಕರಣ ಸುಮ್ಮನೆ ಬಿಡ್ತಿಲ್ಲ ಎಂದರು. ಇದೇ ವೇಳೆ ಮಾತನಾಡಿದ ಅವರು ಉದ್ದೇಶಪೂರ್ವಕವಾಗಿ ಸಿಎಂ ಮೇಲೆ ಆರೋಪ ರೂಪಿಸುತ್ತಿದ್ದಾರೆ.
ಕಪ್ಪು ಚುಕ್ಕೆ ಬರುವ ಪ್ರಯತ್ನಗಳು ಮಾಡುತ್ತಿದ್ದಾರೆ.ಯಾವುದರಲ್ಲೂ ಅವರಿಗೆ ಯಶಸ್ಸು ಸಿಗಲ್ಲ.ಈಗಾಗಲೆ ಸಿಎಂ ಅವರು ಹೇಳಿದ್ದಾರೆ.ಈಗಾಗಲೇ ಇಡಿ ನೋಡಿಸ್ ಗೆ ಹೈಕೋರ್ಟ್ ಸ್ಟೇ ಕೊಟ್ಟಿದೆ. ಇದು ರಾಜಕೀಯ ದುರುದ್ದೇಶದಿಂದ ಬಳಕೆಯಾಗೋ ಸಂಸ್ಥೆ ಯಾಗಿದೆ.ಸಿಎಂ ಪತ್ನಿ, ಭೈರತಿ ಸುರೇಶ್ ಅವರನ್ನ ಬರಲು ಹೇಳೋದು. ಇದನ್ನೆಲ್ಲಾ ನೋಡುತ್ತಿದ್ದರೆ ಪೊಲಿಟಿಕಲ್ ವೆಡೆಂಟಾ ಮಾಡುತ್ತಿದ್ದಾರೆ.ಇಂತಹ ಕಾರಣದಿಂದ ಸಿಎಂ ರಾಜೀನಾಮೆ ಕೇಳೋದು ಏನ್ ಹಕ್ಕಿದೆ?.ದೇಶದಲ್ಲಿ ಯಾವುದೇ ವಿರೋಧ ಪಕ್ಷ ಇರಬಾರದು.ಯಾವ ವಿರೋಧ ಪಕ್ಷದ ನಾಯಕರು ಇರಬಾರದು ಅಂತ ಮಾಡೋಕೆ ಹೊರಟಿರೋದು.ಒಂದು ಪಕ್ಷ ಒಂದು ದೇಶ ಒಬ್ಬ ನಾಯಕನ ರೀತಿ. ಇದೊಂದು ರೀತಿ ಬಿಜೆಪಿ ಸರ್ವಾಧಿಕಾರಿ ಧೋರಣೆ.ನಾವೆಲ್ಲ ಸಿಎಂ ಜೊತೆ ಇದ್ದೇವೆ, ಯಾರೂ ಕೂಡ ರಾಜೀನಾಮೆ ಕೊಡಲ್ಲ.ಇದರಲ್ಲಿ ಮುಚ್ಚುಮರೆ ಇಲ್ಲ, ಭಯ ಇಲ್ಲ ಎಂದಿದ್ದಾರೆ.
ಇನ್ನು ಬಾಣಂತಿ ಸಾವಿನ ಬಗ್ಗೆ ಮಾತನಾಡಿದ ಸಚಿವರು ಮೂರು ತಿಂಗಳಲ್ಲಿ ಹಲವು ಕ್ರಮ ತೆಗೆದುಕೊಂಡಿದ್ದೇವೆ. ಬಾಣಂತಿ ಸಾವು ಅಗೋದಿಲ್ಲ ಅಂತ ಹೇಳಲ್ಲ. ವ್ಯವಸ್ಥೆಯಲ್ಲಿ ಕಡಿಮೆ ಮಾಡುವ ಪ್ರಯತ್ನ ಮಾಡ್ತೀವಿ ಎಂದ ಅವರು ಲೋಪದೋಷ ಸರಿಪಡಿಸುವ ಕೆಲಸ ಆಗ್ತಿದೆ.ನಮ್ಮ ಇಲಾಖೆ ಕಠಿಣ ಕೆಲಸ ಮಾಡ್ತಿದೆ ಎಂದಿದ್ದಾರೆ.ಬಾಣಂತಿ ಸಾವು ಆಗಲ್ಲ ಅಂತ ಹೇಳೋದಕ್ಕೆ ಆಗಲ್ಲ. ಸಾವಿನ ಪ್ರಮಾಣ ಇಳಿಸೋ ಪ್ರಯತ್ನ ಮಾಡಿದ್ದೇವೆ.ಈಗಾಗಲೇ ಕಡಿಮೆಯಾಗಿದೆ, ಕಳೆದಎರಡ್ಮೂರಿ ತಿಂಗಳಲ್ಲಿ ಸಾವಿನ ಪ್ರಮಾಣ ಇಳಿಕೆಯಾಗಿದೆ.ಇದರ ಮಾಹಿತಿ ಮುಂದಿನ ದಿನ ಕೊಡುತ್ತೇವೆ.ನಮ್ಮ ವ್ಯವಸ್ಥೆಯಲ್ಲಿ ಲೋಪ ದೋಷಗಳನ್ನ ಇಳಿಸುತ್ತೇವೆ ಎಂದಿದ್ದಾರೆ.