ಬೆಂಗಳೂರು; ಕಾಂಗ್ರೆಸ್ ಶಾಸಕರ ಮೇಲೆ ಇಡಿ ದಾಳಿ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ವಾಲ್ಮೀಕಿ ಹಗರಣದ ದುಡ್ಡು ವಾಪಸ್ ಬಂದಿದೆ. ಇನ್ವೆಸ್ಟಿಗೇಶನ್ ಮಾಡಲಾಗ್ತಿದೆ. ಈಗ ನಾವು ಟೀಕೆ ಮಾಡೋಕೆ ಹೋಗಲ್ಲ. ೪೦೦೦ ಇಡಿ ದಾಳಿಗಳಾಗಿವೆ. ಅದರ ಕಮ್ವಿಕ್ಷನ್ ರೇಟ್ ಕಡಿಮೆ. ತನಿಖೆ ಮುಗಿಯಲಿ ಆಮೇಲೆ ಮಾತನಾಡೋಣ ಎಂದಿದ್ದಾರೆ.
ಚುನಾವಣೆಗೆ ಹಣ ಖರ್ಚು ಆಗಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು ಹಣ ಎಲ್ಲಿ ಖರ್ಚಾಗಿದೆ ಹೇಳಲಿ. ವಾಲ್ಮೀಕಿ ಹಣ ವಾಪಸ್ ಬಂದಿದೆ. ಅದರ ಎಲ್ಲ ಮಾಹಿತಿಗಳು ಹೊರ ಬಿದ್ದಿದೆಯಲ್ಲ. ಇಡಿ ಬಗ್ಗೆ ಸುಪ್ರೀಂ ಏನು ಮಾತನಾಡಿದೆ. ರಿಪಬ್ಲಿಕ್ ಆಪ್ ಇಂಡಿಯಾ ಅಂತ ಮಾತನಾಡಿದೆ. ನಮ್ಮ ಶಾಸಕರ ಮನೆ ಮೇಲೆ ರೇಡ್ ಆಗಿದೆ. ಮಾತನಾಡಿದ್ರೆ ಬಿಜೆಪಿ ಫ್ರೆಂಡ್ಸ್ ಏನೋ ಹೇಳ್ತಾರೆ. ಮುಂದೆ ಇದರ ಬಗ್ಗೆ ಮಾತನಾಡೋಣ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ತಮಿಳನಾಡಿನಲ್ಲಿ ರೈತನ ಮೇಲೂ ಇಡಿ ರೇಡ್ ಮಾಡಿದ್ದಾರೆ. ತಮಿಳುನಾಡಿನಲ್ಲಿ ರೈತನ ಮೇಲೆ ದಾಳಿ ಆಗಿದೆ. ಇಡಿಯವರಿಗೆ ನೀವು ಪ್ರಶ್ನೆ ಕೇಳಿ, ಇಡಿ ರೇಡ್ ನಲ್ಲಿ ಸಿಕ್ಕವರು ಬಿಜೆಪಿಯಲ್ಲಿದ್ದಾರೆ. ಅಜಿತ್ ಪವಾರ್ ಬಗ್ಗೆ ಏನೇನು ಹೇಳಿದ್ರು. ಪವಾರ್ ಸಾಹೇಬ್ರು ಎಲ್ಲಿದ್ದಾರೆ ಇವತ್ತು. ಆರೋಪಿತರೆಲ್ಲರೂ ಬಿಜೆಪಿಯಲ್ಲೇ ಇದ್ದಾರೆ. ಬಿಜೆಪಿಯಲ್ಲಿ ಒಂದು ವಾಷಿಂಗ್ ಮೆಷಿನ್ ಇದೆ. ಯಾರು ಎಷ್ಟೇ ಆರೋಪ ಮಾಡಿರಲಿ. ಅವರು ಬಿಜೆಪಿಗೆ ಹೋದ್ರೆ ಸರಿಯಾಗಿ ಬಿಡ್ತಾರೆ. ಬಿಜೆಪಿಯಲ್ಲಿ ಯಾರು ಭ್ರಷ್ಟರೇ ಇಲ್ಲ. ಭ್ರಷ್ಟಾಚಾರದಲ್ಲಿ ದೇಶ ನಂಬರ್ ಒನ್ ಇದೆ. ನಾಗೇಂದ್ರ ಮತ್ತೆ ಸಂಪುಟಕ್ಕೆ ಬರ್ತಾರೋ ಇಲ್ವೋ. ಅದನ್ನ ಹೈಕಮಾಂಡ್ ನಿರ್ಧರಿಸುತ್ತೆ ಎಂದಿದ್ದಾರೆ.
ಜಾತಿ ಗಣತಿ ಮರು ಸರ್ವೆ ವಿಚಾರದ ಬಗ್ಗೆ ಮಾತನಾಡಿದ ಅವರು ಕ್ಯಾಬಿನೆಟ್ ನಲ್ಲಿ ಸಾಕಷ್ಟು ಅವಕಾಶ ಕೊಟ್ಟಿದ್ದಾರೆ. ಸಚಿವರಿಗೆ ಅಭಿಪ್ರಾಯ ಕೇಳಿದ್ದಾರೆ. ಎಲ್ಲೆಲ್ಲಿ ಸಮಸ್ಯೆ ಇದೆ ಅದನ್ನ ಸರಿ ಮಾಡಲಿ. ನಾಳೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ನಾವು ಅನುಷ್ಠಾನ ಮಾಡಿಯೇ ಮಾಡ್ತೇವೆ. ಬಿಜೆಪಿಯವರು ವಿರುದ್ಧವಾಗಿ ಮಾತನಾಡ್ತಿದ್ರು. ಪಹಲ್ಗಾಮ್ ಅಟ್ಯಾಕ್ ವೇಳೆ ಯಾಕೆ ಜಾತಿ ಗಣತಿ ಘೋಷಣೆ ಮಾಡಿದ್ರು?. ಕಾಸ್ಟ್ ಸೆನ್ಸಸ್ ಮಾಡ್ತೇವೆ ಅಂತ ಯಾಕೆ ಹೇಳಿದ್ರು. ಪ್ರಕರಣ ಡೈವರ್ಟ್ ಮಾಡೋಕೆ ಹೇಳಿದ್ರಾ?. ಜಾತಿ ಜನಗಣತಿ ಯಾವಾಗಿಂದ ನಡೆದಿದೆ. ನಮ್ಮ ಸರ್ವೆ ಮೇಲೆ ಜನರಿಗೆ ಆತಂಕ ಇದೆ. ೧೬೦ ಕೋಟಿ ಖರ್ಚು ಮಾಡಿದ್ದೇವೆ. ಅದೇನೂ ವೇಸ್ಟ್ ಆಗೋದಿಲ್ವಲ್ಲಾ ?ರಾತ್ರೋರಾತ್ರಿ ಜನಗಣತಿ ಘೋಷಣೆ ಏನಿತ್ತು. ಪಹಲ್ಗಾಮ್ ಅಟ್ಯಾಕ್ ಆಗುತ್ತಲೇ ಮಾಡಿದ್ರಲ್ಲ. ಆಗ ಮಾಡುವಂತಹ ಅವಶ್ಯಕತೆ ಏನಿತ್ತು. ಮಾಡುವಂತಹ ಅವಶ್ಯಕತೆ ಇತ್ತಾ?. ಅವರು ಯಾಕೆ ಮಾಡಿದ್ರು. ನೀವು ಅವರನ್ನ ಕೇಳಬೇಕಲ್ಲ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಕಾಲ್ತುಳಿತ ಪ್ರಕರಣದ ಬಗ್ಗೆ ಮಾತನಾಡಿ ಸಸ್ಪೆಂಡ್ ಮಾಡಿದ್ರೆ ಯಾಕೆ ಮಾಡ್ಲಿಲ್ಲ ಅಂತೀರಾ. ಮಾಡಿದ್ರೆ ಯಾಕೆ ಮಾಡಿದ್ರಿ ಅಂತೀರಾ. ಕ್ರಮ ತೆಗೆದುಕೊಂಡ್ರಿ ಅವರು ಪ್ರಾಮಾಣಿಕ ಅಂತೀರಾ. ತೆಗೆದುಕೊಳ್ಳದಿದ್ರೆ ಯಾಕೆ ತೆಗೆದುಕೊಳ್ಳಲಿಲ್ಲ ಅಂತೀರಾ. ನೀವು ಮೊದಲು ಅವರನ್ನ ಪ್ರಶ್ನೆ ಮಾಡಿ. ಬಿಜೆಪಿಯವ ಎಷ್ಟು ಬ್ರಿಟ್ಜ್ ಬಿದ್ದಿಲ್ಲ.ಯಾಕೆ ಅದರ ಬಗ್ಗೆ ನೀವು ಧ್ವನಿ ಎತ್ತುತ್ತಿಲ್ಲ. ಸಿಎಂ ಬಹಳ ಕ್ಲಿಯರ್ ಆಗಿ ಹೇಳಿದ್ದಾರೆ ಎಂದಿದ್ದಾರೆ. ವಿಧಾನಸೌಧ ಮೆಟ್ಟಿಲು ನಮ್ಮ ವ್ಯಾಪ್ತಿ ಎಂಬ ವಿಚಾರದ ಬಗ್ಗೆ ಮಾತನಾಡಿ ಸಿಎಂ ಸರಿಯಾಗಿಯೇ ಹೇಳಿದ್ದಾರೆ. ಅವರು ಹೇಳಿದ್ರಲ್ಲಿ ಒಂದು ಅರ್ಥದಲ್ಲಿ ಸರಿ. ಅವತ್ತು ಚಿನ್ನಸ್ವಾಮಿ ಸ್ಟೇಡಿಯಂ ಫುಲ್ ಆಗಿತ್ತಾ?. ಇನ್ನೂ ೨೦,೩೦ ಪರ್ಸೆಂಟ್ ಖಾಲಿ ಇತ್ತು. ಮುಖ್ಯಮಂತ್ರಿಗಳಿಗೂ ಘಟನೆಯಿಂದ ನೋವಾಗಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.