ಅಹಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ. ಇದು ಅತ್ಯಂತ ದೊಡ್ಡ ದುರಂತ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಇಂತಹ ದುರಂತ ಆಗಿಲ್ಲ. ಏರ್ಪೋರ್ಟ್ ನಿಂದ ಟೇಕ್ ಆಫ್ ೬೦ ಸೆಕೆಂಡ್ ನಲ್ಲಿ ದುರಂತ ಆಗಿದೆ. ವಿಮಾನದ ಗಾಲಿಗಳು ಒಳಗೆ ಹೋಗಿಲ್ಲ, ಆಗಲೇ ದುರಂತ ಆಗಿದೆ. ಇದುವರೆಗೂ ಸಿವಿಲ್ ಎವಿಯೇಷನ್ ಮಿನಿಸ್ಟ್ರಿ ಏನು ಕಾರಣ ಅಂತ ಹೇಳಿಲ್ಲ. ಏರ್ ಟ್ರಾಫಿಕ್ ಕಂಟ್ರೋಲರ್ ಏನು ಹೇಳುತ್ತೆ. ಇದು ಭಾರತದಲ್ಲೇ ಆಗಿದೆ, ಬೇರೆ ದೇಶದಲ್ಲಿ ಏನಾದರೂ ಆಗಿದ್ರೆ ಬೇರೆ ಊಹೇ ಮಾಡಬಹುದಿತ್ತು. ಇಬ್ಬರು ಕ್ಯಾಪ್ಟನ್ ಗಳು ಸೀನಿಯರ್ ಆಗಿದ್ದರು. ಏರ್ ಕ್ರಾಫ್ಟ್ ಇಂಜಿನಿಯರ್ ಗಳು ಉತ್ತಮರು.ಹಿಂದೆ ನಾನು ಸಚಿವ ಆಗಿದ್ದಾಗ ಕ್ಲೀಯರನ್ಸ್ ಕೊಡದಿದ್ರೆ ವಿಮಾನ ಟೇಕ್ ಆಫ್ ಆಗಲ್ಲ ಎಂದಿದ್ದಾರೆ.
ಅಹಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ. ಇದು ಅತ್ಯಂತ ದೊಡ್ಡ ದುರಂತ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಇಂತಹ ದುರಂತ ಆಗಿಲ್ಲ. ಏರ್ಪೋರ್ಟ್ ನಿಂದ ಟೇಕ್ ಆಫ್ ೬೦ ಸೆಕೆಂಡ್ ನಲ್ಲಿ ದುರಂತ ಆಗಿದೆ. ವಿಮಾನದ ಗಾಲಿಗಳು ಒಳಗೆ ಹೋಗಿಲ್ಲ, ಆಗಲೇ ದುರಂತ ಆಗಿದೆ. ಇದುವರೆಗೂ ಸಿವಿಲ್ ಎವಿಯೇಷನ್ ಮಿನಿಸ್ಟ್ರಿ ಏನು ಕಾರಣ ಅಂತ ಹೇಳಿಲ್ಲ. ಏರ್ ಟ್ರಾಫಿಕ್ ಕಂಟ್ರೋಲರ್ ಏನು ಹೇಳುತ್ತೆ. ಇದು ಭಾರತದಲ್ಲೇ ಆಗಿದೆ, ಬೇರೆ ದೇಶದಲ್ಲಿ ಏನಾದರೂ ಆಗಿದ್ರೆ ಬೇರೆ ಊಹೇ ಮಾಡಬಹುದಿತ್ತು. ಇಬ್ಬರು ಕ್ಯಾಪ್ಟನ್ ಗಳು ಸೀನಿಯರ್ ಆಗಿದ್ದರು. ಏರ್ ಕ್ರಾಫ್ಟ್ ಇಂಜಿನಿಯರ್ ಗಳು ಉತ್ತಮರು.ಹಿಂದೆ ನಾನು ಸಚಿವ ಆಗಿದ್ದಾಗ ಕ್ಲೀಯರನ್ಸ್ ಕೊಡದಿದ್ರೆ ವಿಮಾನ ಟೇಕ್ ಆಫ್ ಆಗಲ್ಲ ಎಂದಿದ್ದಾರೆ.
ಈ ಏರ್ ಕ್ರಾಫ್ಟ್ ಜಗತ್ತಿನ ಬೆಸ್ಟ್ ಏರ್ ಕ್ರಾಫ್ಟ್ ಅಂತಾರೆ, ಇದು ಸುಳ್ಳು. ಏರ್ ಇಂಡಿಯಾ ದವರು ಕೂಡಲೇ ಎಲ್ಲಾ ವಿಮಾನ ಗ್ರೌಂಡ್ ಮಾಡಬೇಕು. ಡಿಜಿಸಿಎ ಮಾಜಿ ಡೈರೆಕ್ಟರ್ ಕೊಲಾ ಅಂತ ಇದ್ದರು. ಗುಜರಾತ್ ನಲ್ಲಿ ಬ್ಯೂಸಿ ಏರ್ಪೋರ್ಟ್.ಅಕಾಸ್ ಅಭಿವೃದ್ಧಿ ಪಡಿಸಲಾಗಿತ್ತು. ೧೯೯೬ ನವೆಂಬರ್ ನಲ್ಲಿ ಒಂದು ವಿಮಾನ ಪತನ ಆಗಿತ್ತು. ಆಗಲೇ ಅಕಾಸ್ ಅನ್ನೋ ಡೈವಿಸ್ ಜಾರಿಗೆ ತರಲಾಗಿತ್ತು. ಬೋಯಿಂಗ್ ನಲ್ಲಿ ಆಟೋ ಲ್ಯಾಂಡಿಂಗ್ ಇರುತ್ತದೆ. ಆದ್ರೆ ಇದರಲ್ಲಿ ವಿಚಿತ್ರ ಅಂದ್ರೆ ಏನಾಗಿದೆ ಅನ್ನೋದು ವಿಸ್ಮಯ. ಎರಡೂ ಎಂಜಿನ್ ಫೇಲ್ ಆಗಿದೆ ಅಂದ್ರೆ ವಿಧ್ವಂಸಕ ಕೃತ್ಯ ನಡೆದಿದ್ಯಾ ಎಂಬ ತನಿಖೆ ಆಗಬೇಕು. ಟೇಕ್ ಆಫ್ ಆಗೋಕೆ ಕ್ಲಿಯರನ್ಸ್ ಕೊಟ್ಟಿದ್ದಾರೆ. ಇದು ಆಗಿದ್ದು ಹೇಗೆ? ಒಂದು ಲಕ್ಷ ಲೀಟರ್ ಫಿಯಲ್ ಇತ್ತು. ನಿತ್ಯ ಐದು ಲಕ್ಷ ಜನ ಪ್ರಯಾಣ ಮಾಡ್ತಾರೆ. ಎರಡೂವರೆ ಲಕ್ಷ ಜನ ಬೇರೆ ದೇಶದ ಜನ ಪ್ರಯಾಣಿಸುತ್ತಾರೆ.ಏರ್ ಟ್ರಾಫಿಕ್ ಕಂಟ್ರೋಲರ್ ಸುಧಾರಣೆ ಆಗುತ್ತದೆ. ಎಲ್ಲಾ ಭಾಷೆ ಯಲ್ಲೂ ಇದೆ. ಏರ್ ಟ್ರಾಫಿಕ್ ಕಂಟ್ರೋಲರ್ಗೆ ಎಲ್ಲಾ ಭಾಷೆ ಗೊತ್ತಿರಬಹುದು. ಸಮಸ್ಯೆ ಇದ್ರೆ ಗೊತ್ತಾಗುತ್ತದೆ.ಬೆಂಗಳೂರು, ಅಹ್ಮದಾಬಾದ್ , ಹೈದರಾಬಾದ್ ಸೇರಿ ಬ್ಯೂಸಿ ಇರುವ ಏರ್ಪೋರ್ಟ್ ಸರಿಯಾಗಿ ಕೆಲಸ ಮಾಡಬೇಕು ಎಂದರು.
ಕೇಂದ್ರ ಸಚಿವರಿಗೆ ಕೆಲಸವೇ ಇಲ್ಲ.ಸಿವಿಲ್ ಎವಿಯೇಷನ್ ಮಿನಿಸ್ಟರ್ ಅಂದ್ರೆ ಇಂಟ್ರಸ್ಟ್ ಕಳೆದುಕೊಂಡಿದ್ದಾರೆ.ಎಲ್ಲಾ ದೇಶದ ತನಿಖಾ ಸಂಸ್ಥೆಗಳು ತನಿಖೆ ಮಾಡಬೇಕು.ಏರ್ ಕ್ರಾಫ್ಟ್ ಟೆಕ್ನಿಕಲ್ ಫಿಟ್ ಇದ್ಯಾ ಅನ್ನೋದು ಗೊತ್ತಾಗಬೇಕು. ಅಲ್ಲಿಯವರೆಗೂ ಇದಕ್ಕೆ ಅನುಮತಿ ನೀಡಬಾರದು.ಬೋಯಿಂಗ್ ಕಂಪನಿಯ ಬಗ್ಗೆ ರಿಪೋರ್ಟ್ ರೆಡಿ ಮಾಡಬೇಕು.ಬ್ಲ್ಯಾಕ್ ಬಾಕ್ಸ್ ಸಿಕ್ತು ಅಂದ್ರೆ ಎಲ್ಲವೂ ಗೊತ್ತಾಗುತ್ತದೆ.ಇದು ದುರ್ದೈವ.. ಸರ್ಕಾರ ಏರ್ ಇಂಡಿಯಾ ಮಾರಿದ್ದು ತಪ್ಪು.ಏರ್ ಇಂಡಿಯಾ ಮಾರಿದ್ದು ತಪ್ಪು.ನಾನು ಇದ್ದಾಗ ಲಾಭದಲ್ಲಿ ಇತ್ತು.ಆದ್ರೆ ನಷ್ಟ ಅಂತ ಮಾರಿದರು.ಈಗ ಎಲ್ಲವೂ ಅಂಬಾನಿ ಪಾಲಾಗಿದೆ .ಎಲ್ಲಾ ದೇಶಗಳಿದ್ದು ಸ್ವಂತ ಏರ್ ಲೈನ್ಸ್ ಇದೆ, ಆದ್ರೆ ನಮ್ಮಲ್ಲಿ ಇಲ್ಲ. ಉಗ್ರರ ದಾಳಿ ಆದಾಯ ಪ್ರಯಾಣಿಕರನ್ನ ಲೂಟಿ ಮಾಡಿದೆ. ಒಂದು ಲಕ್ಷ ಟಿಕೆಟ್ ದರ ಇತ್ತಂತೆ. ಇಂಡಿಯನ್ ಏರ್ ಲೈನ್ಸ್ ಜೂಜಾಟ ಆಡುತ್ತಿದೆ. ಇದರ ಬಗ್ಗೆ ಸಿವಿಲ್ ಎವಿಯೇಷನ್ ಯಾಕೆ ಗಮನ ಹರಿಸಿಲ್ಲ.ಎಲ್ಲಾ ವ್ಯವಸ್ಥೆ ಕುಲಗೆಟ್ಟು ಹೋಗಿದೆ. ಮೋದಿ ಅವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಏರ್ ಇಂಡಿಯಾ ಎಷ್ಟೇ ಲಾಸ್ ಆದರೂ ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ನಮ್ಮ ಬಾವುಟ ನಾವೇ ಹಾರಿಸಬೇಕಾಗಿದೆ, ಇದು ನನ್ನ ವಿನಂತಿ ಎಂದರು.
ಜಾತಿಗಣತಿ ವಿಚಾರದ ಬಗ್ಗೆ ಮಾತನಾಡಿದ ಅವರು ರಿಪೋರ್ಟ್ ಬಂದಿದೆ ಕೈಗೆ, ಎರಡನೇ ಸಲ ಗಣತಿ ಮಾಡಿದ್ರೆ ತಲೆ ಜಾಸ್ತಿ ಆಗ್ತಾವಾ.ಇದು ದುರ್ದೈವ, ಹೈಕಮಾಂಡ್ ಹೇಳಿದೆ ಅಂತ ಸಿಎಂ ಹೇಳ್ತಾರೆ.ಸಿಎಂ ಅವರು ಹೇಳಬೇಕು, ಯಾರೋ ಹೇಳಿದ್ದಾರೆ ಆಂತ ಮತ್ತೊಮ್ಮೆ ಮಾಡ್ತಾರೆ ಅಂದ್ರೆ ಹೇಗೆ?. ಕೋರ್ಟ್ ನಲ್ಲೂ ಎರಡೆರಡು ವಿಚಾರಣೆ ಗೆ ಹಣ ಕೇಳ್ತಾರೆ . ಈಗ್ಲೂ ಅವಕಾಶ ಇದೆ, ಕೂಡಲೇ ಇದನ್ನ ವಾಪಸ್ ಪಡೀಬೇಕು.ರಿಪೋರ್ಟ್ ಬಂದಿದೆ, ಮತ್ತೆ ಯಾಕೆ ಮರು ಸಮೀಕ್ಷೆ ಮಾಡಬೇಕು?. ಜಾತಿ ಆಧಾರದ ಮೇಲೆ ಕೆಲಸ ಕೊಡ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ವೀಕ್ ಆಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಿದ್ದರಾಮಯ್ಯ ಅವರು ಯಾಕೆ ಹಿಂದೆ ಸರಿದಿದ್ದಾರೆ ಅನ್ನೋದು ಗೊತ್ತಿಲ್ಲ. ನಮಗೆ ತುಂಬಾ ನೋವಾಯ್ತು. ಸ್ಥಾನ ಮುಖ್ಯವಲ್ಲ, ಅಭಿಮಾನ ಮುಖ್ಯ. ಕೂಡಲೇ ಇದನ್ನ ನಿಲ್ಲಿಸಬೇಕು. ಮರು ಸಮೀಕ್ಷೆ ಯಾಕೆ ಮಾಡಬೇಕು, ಮಲಗಿದ್ದ ಸಮಾಜ ಎಬ್ಬಿಸಿದ್ದೀರಿ. ದಲಿತರು, ಎಸ್ಟಿ ಯವರಿಗೆ ಅನುಕೂಲ ಆಗುತ್ತೆ. ಸಾವರಿಗೆ, ಉಪ್ಪಾರರಿಗೆ ಏನು ಲಾಭ. ಮರು ಸಮೀಕ್ಷೆ ಮಾಡಿದ್ರೆ ಹೋರಾಟ ಶುರು ಮಾಡುತ್ತೇವೆ. ನಾವು ರೈತ ಸಂಘ ಚಳುವಳಿ ಮಾಡುತ್ತೇವೆ ಎಂದಿದ್ದಾರೆ.