ಮನೆ Latest News ಕುಮಾರಸ್ವಾಮಿ ವಿರುದ್ಧ ಎಸ್ ‌ಐಟಿ ತನಿಖೆಗೆ ಕೇಳಿರೋ ವಿಚಾರಕ್ಕೆ ಕಾಂಗ್ರೆಸ್ ನಾಯಕರು ಹೇಳಿದ್ದೇನು?

ಕುಮಾರಸ್ವಾಮಿ ವಿರುದ್ಧ ಎಸ್ ‌ಐಟಿ ತನಿಖೆಗೆ ಕೇಳಿರೋ ವಿಚಾರಕ್ಕೆ ಕಾಂಗ್ರೆಸ್ ನಾಯಕರು ಹೇಳಿದ್ದೇನು?

0

ಬೆಂಗಳೂರು; ಕುಮಾರಸ್ವಾಮಿ ವಿರುದ್ಧ ಎಸ್ ‌ಐಟಿ ತನಿಖೆಗೆ ಕೇಳಿರೋ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಿಧ  ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ಮೇಲೆ ಆರೋಪವಿದೆ.ಸಾಯಿ ವೆಂಕಟೇಶ್ವರ ಮಿನರಲ್ಸ್ ಗೆ ಗುತ್ತಿಗೆ ಕೊಟ್ಟಿದ್ದಾರೆ.೨೩/೧೧/೨೩ ರಂದು ಪ್ರಾಸಿಕ್ಯೂಶನ್ ಗೆ ಪರ್ಮಿಶನ್ ಕೇಳಿದ್ದರು.ಲೋಕಾಯುಕ್ತರು ಪರ್ಮಿಶನ್ ಕೇಳಿದ್ದರು.ಈಗ ಮತ್ತೆ ಅನುಮತಿ ಕೇಳಿದ್ದಾರೆ.ಕಳೆದ ೨೬ ರಂದು ಅಬ್ರಹಾಂ ನನ್ನ‌ ಮೇಲೆ ಕೊಡ್ತಾರೆ.೧೧ ಗಂಟೆಗೆ ಪ್ರಾಸಿಕ್ಯೂಶನ್ ಗೆ ದೂರು ಕೊಡ್ತಾರೆ.ಅಂದೇ ೧೦ ಗಂಟೆಗೆ ನನಗೆ ಶೋಕಾಸ್ ನೋಟಿಸ್ ಕೊಡ್ತಾರೆ.ಇದು‌ ರಾಜ್ಯಪಾಲರು ಸೆಲೆಕ್ಟೀವ್ ಆಗಿ ಮಾಡಿದಂತೆ ಅಲ್ವಾ ಎಂದು ಪ್ರಶ್ನಿಸಿದ್ದಾರೆ.

ಇನ್ನುರಾಜ್ಯಪಾಲರ ಬಗ್ಗೆ ಹೀಯಾಳಿಸಿದ ವಿಚಾರಕ್ಕೆ ರಿಯಾಕ್ಟ್ ಮಾಡಿದ ಅವರು ನಾವು ಕೇಳಿದ್ರೆ ಹೀಯಾಳಿಸಿದಂತಾ.ಶಶಿಕಲಾ ಜೊಲ್ಲೆ ವಿರುದ್ಧ ದೂರಿದೆ.ನಿರಾಣಿ‌ ಮೇಲೆ ಕೊಡಲಿಲ್ಲ, ಜನಾರ್ಧನ ರೆಡ್ಡಿ‌ ಮೇಲೆ ಕೊಡಲಿಲ್ಲ.ಪ್ರಾಸಿಕ್ಯೂಷನ್‌ಗೆ ಕೇಳಿದ್ರೂ ಕೊಡಲಿಲ್ಲ.ರಾಜ್ಯಪಾಲರ ಪೋಸ್ಟ್ ಸಂವಿಧಾನದದ್ದು.ಅವರು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಕೆಲಸ ಮಾಡಲಿ.ಕೇಂದ್ರದ ಪ್ರತಿನಿಧಿಯಾಗಿ ಮಾಡಬಾರದು ಎಂದಿದ್ದಾರೆ.

ಇದೇ ವಿಚಾರದ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ನನಗೆ ಗೊತ್ತಿಲ್ಲ ನಾನು ರಾಜ್ಯಪಾಲರಿಗೆ ಸ್ಪೋಕ್ ಪರ್ಸನ್ ಅಲ್ಲಾ .ಲೋಕಾಯುಕ್ತರಿಗೂ ಸ್ಪೋಕ್ ಪರ್ಸನ್ ಅಲ್ಲಾ.ನಾನು ಕಾಂಗ್ರೆಸ್ ಪಾರ್ಟಿ ಸ್ಪೋಕ್ ಪರ್ಸನ್ .ಏನಾದರೂ ಇದ್ರೆ ವಿಚಾರ ತಿಳಿದು ಮಾತಾಡ್ತೀನಿ.ಇನ್ನು ಗುರುವಾರ ಬಿಜೆಪಿಯ ಪ್ರತಿಭಟನೆ ವಿಚಾರಕ್ಕೆ ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿ ಅವರೇ ಸಂವಿಧಾನ ದುರುಪಯೋಗ ಮಾಡ್ಕೊಳ್ತಿದ್ದಾರೆ.ಪ್ರಜಾಪ್ರಭುತ್ವಕ್ಕೆ ಮಾರಕ ತರ್ತಿದ್ದಾರೆ.ಅವರೇ ಅವರ ಪಕ್ಷದ ಏಜೆಂಟ್ ಆಗಿ ಪರಿವರ್ತನೆ ಮಾಡ್ಕೋತ್ತಿದ್ದಾರೆ ಎನ್ನೊದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

ಇನ್ನು ಮೇಧಾವಿಗಳು ಕೆಲವರು ಸಿಎಂಗೆ ಸಲಹೆ ಕೊಡುತ್ತಾರೆ ಅಂತಾ ಕುಮಾರಸ್ವಾವಿ ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಅವರ ವಿರುದ್ಧ ಕುಮಾರಸ್ವಾಮಿ ನೀಡಿರುವ ಹೇಳಿಕೆ ರಿಯ್ಯಾಕ್ಟ್ ಮಾಡಿದ ಅವರು  ಬಹಳ ದೊಡ್ಡ ದೊಡ್ಡ ನಾಯಕರಿದ್ದಾರೆ.ದಯವಿಟ್ಟು ಕೇಂದ್ರ ಸಚಿವರಾಗಿ ಮೇಕೇದಾಟಿಗೆ ಅನುಮತಿ ಕೊಡಿಸಲಿ.ಕೆಲವೊಮ್ಮೆ ರಾಜಕೀಯದಲ್ಲಿ ಯೋಗ್ಯತೆಗಿಂತ ಹೆಚ್ಚು ಯೋಗ ಬೇಕಾಗುತ್ತದೆ.ಎರಡು ಸಂಸದರನ್ನು ಇಟ್ಟುಕೊಂಡು ಇವರು ಕೇಂದ್ರ ಸಚಿವರಾಗಿದ್ದಾರೆ ಅದು ಅವರ ಯೋಗ.ಕುಮಾರಸ್ವಾಮಿ ವಿರುದ್ದ ಗಂಭೀರ ಆರೋಪಗಳಿವೆ.ಲೋಕಾಯುಕ್ತ ತನಿಖಾ ಸಂಸ್ಥೆ ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯುಷನ್ ಕೇಳಿದೆ.ಇದನ್ನು ತಿರುಚಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ.ಲೋಕಾಯುಕ್ತ ಚಾರ್ಜ್ ಶೀಟಲ್ಲಿ ಕಾನೂನು ಬಾಹಿರ ರೆಕಮಂಡೇಷನ್ ಇದೆ ಎಂದು ಪ್ರಸ್ತಾಪ ಮಾಡಲಾಗಿದೆ.ಚಾರ್ಜ್ ಶೀಟ್ ನಲ್ಲಿ ಭ್ರಷ್ಟಾಚಾರದ ಹೆಸರು ಇರುವವರು ಕೇಂದ್ರ ಮಂತ್ರಿಯಾಗಿ ಮುಂದುವರಿಬಹುದಾ??ವಿನಯ್ ಗೋಯೆಲ್ ಫ್ರಾಡ್, ಅವನು ಗಣಿಗೆ ಅರ್ಜಿಯೇ ಹಾಕಿರಲಿಲ್ಲ.ಕುಮಾರಸ್ವಾಮಿ ಅವನಿಗೆ ಅನುಕೂಲ ಮಾಡಿಕೊಡಲು ಗಣಿ ಸಂಪತ್ತು ಅದಕ್ಕೆ ಕಾನೂನು ಬಾಹಿರ ಅನುಮತಿ ನೀಡಿದ್ದರು.ಚಾರ್ಜ್ ಶೀಟಲ್ಲಿ ಹೆಸರು ಇರುವವರು ಮಂತ್ರಿ ಆಗಬಹುದಾ? ಎಂದು ಪ್ರಶ್ನೆ ಮಾಡಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಲೋಕಾಯುಕ್ತದವರು ತನಿಖೆ ಮಾಡಿ.ಹೆಚ್ ಡಿ ಕುಮಾರಸ್ವಾಮಿ ಅವರು ತಪ್ಪು ಮಾಡಿದ್ದಾರೆ ಅಂತಾ ಪ್ರಾಸಿಕ್ಯೂಷನ್ ಅನುಮತಿ ಕೇಳಿದ್ದಾರೆ.ರಾಜ್ಯಪಾಲರು ಯಾಕೆ ಈ ಬಗ್ಗೆ ಕೊಟ್ಟಿಲ್ಲ ಗೊತ್ತಿಲ್ಲ.ಅದಕ್ಕೆ ರಾಜ್ಯಪಾಲರಿಗೆ ಎಸ್ ಐಟಿ ಅವರು ಮತ್ತೊಮ್ಮೆ ಪತ್ರ ಬರೆದಿದ್ದಾರೆ.ರಾಜ್ಯಪಾಲರು ಕಾನೂನು ರೀತಿಯಲ್ಲಿ ನಡೆದುಕೊಳ್ಳಬೇಕು. ವರ್ಷಗಟ್ಟಲೆ,ತಿಂಗಳಗಂಟಲೆ ಯಾಕೆ ಇಟ್ಟುಕೊಳ್ಳಬೇಕು .ಕೇಂದ್ರ ಬಿಜೆಪಿ ನಾಯಕರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ.ಆರೋಪ ಸರಿ ಇಲ್ಲಾ ಎಂದು ತಿರಸ್ಕಾರ ಮಾಡಲಿ.ಅದನ್ನ ಮುಂದಿಟ್ಟುಕೊಂಡು ಕೋರ್ಟ್ ಗೆ ಹೋಗಬಹುದು.ಕುಮಾರಸ್ವಾಮಿ ಹಿಡಿದಿಟ್ಟುಕೊಳ್ಳಲು ಈ ರೀತಿ ಮಾಡುತ್ತಿದ್ದಾರೋ ಗೊತ್ತಿಲ್ಲ..? ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಕಾನೂನು ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ.ಅದೇ ರೀತಿ ಬೇರೆ ವಿಚಾರದಲ್ಲಿ ಮಾಡಲಿ.ರಾಜ್ಯದ ಮುಖ್ಯಸ್ಥರೇ ರಾಜ್ಯದ ವಿರುದ್ಧ ಕೆಲಸ ಮಾಡಿದ್ರೆ ಏನ್ ಮಾಡೋದು.ರಾಜ್ಯಪಾಲರು ಸಂವಿಧಾನದ ಹುದ್ದೆಯಲ್ಲಿರುವರು .ಕಾನೂನನ್ನು ರಕ್ಷಣೆ ಮಾಡಬೇಕು ಎಂದಿದ್ದಾರೆ.