ಮನೆ Latest News ನಾವು ಯಾರೇ ನೋಟಿಸ್ ಕೊಟ್ಟರೂ ಗೌರವ ದಿಂದ ವಿಚಾರಣೆಗೆ ಹಾಜರಾಗುತ್ತೇವೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ನಾವು ಯಾರೇ ನೋಟಿಸ್ ಕೊಟ್ಟರೂ ಗೌರವ ದಿಂದ ವಿಚಾರಣೆಗೆ ಹಾಜರಾಗುತ್ತೇವೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ನಾವು ಯಾರೇ ನೋಟಿಸ್ ಕೊಟ್ಟರೂ ಗೌರವ ದಿಂದ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಡಿಕೆ ಸುರೇಶ್ ಗೆ ಇಡಿ ನೋಟಿಸ್ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಯಾರೇ ನೋಟಿಸ್ ಕೊಟ್ಟರೂ ಗೌರವ ದಿಂದ ವಿಚಾರಣೆಗೆ ಹಾಜರಾಗುತ್ತೇವೆ. ಎಲ್ಲೋ ಪಕ್ಷದ ಕೆಲಸಕ್ಕೆ ಕಾರ್ಯಕ್ರಮಕ್ಕೆ ಹೋಗಿರಬಹುದು. ಆದ್ರೆ ಇದಕ್ಕೂ ತಮಗೂ ಯಾವುದೇ ರೀತಿ ಕನೆಕ್ಟ್ ಇಲ್ಲ ಎಂದು ಡಿಕೆ ಸುರೇಶ್ ಅವರೇ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಕೆ ಸುರೇಶ್ ಅವರು ಟಿವಿ ಗೆ ಬಂದ್ಮೇಲೆ ದೂರು ಕೊಟ್ಟಿದ್ದಾರೆ. ಡಿಕೆ ಸುರೇಶ್ ಮಾತಾಡಿಸಿದಂತೆ ಯಾರೋ ಫೋನ್ ನಲ್ಲೇ ಮಾತಾಡಿದ್ದಾರೆ. ಇಡಿ ನಮಗೇನು ಹೊಸತೇನು ಅಲ್ಲ. ಅವರು ಕೂಡ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ನಾನು ರಿಸೀವ್ ಮಾಡಿಕೊಳ್ಳಲಿ ಎಂದು ಹೇಳಿದ್ದೇನೆ ಎಂದಿದ್ದಾರೆ.ಬೆಳಗ್ಗೆ ಅವರೇ ಬಂದಿದ್ದರು, ಅದೇನೋ ಅಂಟು ಹಾಕುತ್ತೇನೆ ಎಂದಿದ್ದರು. ರಿಸೀಲ್ ಮಾಡಿಕೊಳ್ಳಲಿ ಎಂದು ಸೂಚನೆ ನೀಡಿದ್ದೆ.ಸುರೇಶ್ ಅವರು ಹೋಗಿ ವಿಚಾರಣೆ ಗೆ ಹಾಜರಾಗುತ್ತಾರೆ ಎಂದು ತಿಳಿಸಿದ್ದಾರೆ.

ನಮ್ಮ ಬ್ರದರ್ಗೆ ಗೆ ಹೇಳಿದ್ದೇನೆ. ನೋಟಿಸ್ ರಿಸೀವ್ ಮಾಡೋಕೆ ಹೇಳಿದ್ದೇನೆ. ಡಿಕೆ ಸುರೇಶ್ ಅವರು ದೂರ ಕೊಟ್ಟಿದ್ದಾರೆ. ಇಡಿ ಗೆ ಹೇಳಿಕೆ ಕೊಡುತ್ತಾರೆ, ಸಹಕಾರ ನೀಡುತ್ತಾರೆ. ನನಗೂ ಮೋಸ ಆದವರು ನನ್ನ ಮುಂದೆ ಅಳಲು ತೋಡಿಕೊಂಡಿದ್ದಾರೆ. ನಿಮ್ಮ ತಂಗಿ ಅಂತೇಳಿ ಮೋಸ ಆಗಿದೆ ಅಂದಿದ್ದಾರೆ, ತನಿಖೆ ಮಾಡಿ ಎಂದು ನಾವು ಹೇಳಿದ್ದೇನೆ. ಇಡಿಗೆ ಸಹಕಾರ ನೀಡುತ್ತೇವೆ.ನಾವು ಗೌರವ ನೀಡುತ್ತೇವೆ, ವಿಚಾರಣೆಗೂ ಹೋಗುತ್ತೇವೆ. ಇಂತಹ ಮೋಸ ಮಾಡುವ ವ್ಯಕ್ತಿ ಗಳ ವಿರುದ್ದ ಕ್ರಮಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಸಮಾಜಕ್ಕೆ ಜನರಿಗೆ ನ್ಯಾಯ ಒದಗಿಸಬೇಕು. ಅದನ್ನ ನಾವು, ಡಿಕೆ ಸುರೇಶ್ ಮಾಡುತ್ತೇವೆ ಎಂದಿದ್ದಾರೆ.

ಈಶ್ವರ್ ಖಂಡ್ರೆ ವಿರುದ್ದ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವ ಅಸಮಾಧಾನವೂ ಇಲ್ಲ.ಅದಕ್ಕೆ ಅವಕಾಶ ನೀಡೋದಿಲ್ಲ, ಪಾರ್ಟಿ ಯಲ್ಲಿ ಡಿಸಿಪ್ಲೀನ್ ಮುಖ್ಯ. ನೋ ಅಸಮಾಧಾನ, ಒಂದೇ ಕಾಂಗ್ರೆಸ್ ಪಾರ್ಟಿ.ಇದಕ್ಕೆ ನಾವೂ ಅಲೋ ಮಾಡೋದಿಲ್ಲ, ಯಾರೂ ಸಹ ನನ್ನ ಬಳಿ ಬಂದು ಮಾತಾಡಿಲ್ಲ. ಕೆಲಸ ಇಶ್ಯೂ ಇರಬಹುದು, ಬಂದು ಮಾತಾಡಲಿ.ಅದಕ್ಕೆ ಕಾಂಗ್ರೆಸ್ ಪಾರ್ಟಿ ಅನ್ ಕರೇಜ್ ಮಾಡೋಲ್ಲ, ಸುಳ್ಳು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.

ಮುಂದೆ ಮೈತ್ರಿ ಸರ್ಕಾರ ಬರುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಆಯ್ತಪ್ಪ, ಬಟ್ಟೆಯಲ್ಲಾ ಪ್ಯಾಕ್ ಮಾಡಿಕೊಳ್ಳಲಿ.ಅವರಿಗೆ ಯಾವ ರೀತಿ ಪಂಚೆ ಬೇಕು, ಶರ್ಟ್, ಜುಬ್ಬಾ, ಪ್ಯಾಂಟ್ ಬೇಕು ಎಂದು ಹೇಳಲಿ.ಈ ರೀತಿಯ ವಾಚ್ ಬೇಕು, ಪಂಚೆ ಬೇಕು ಎಂದು ಹೇಳಲಿ, ನಾನು ನಿಮ್ಮ ಕೈಯಲ್ಲೇ ಕಳಿಸಿಕೊಡುತ್ತೇನೆ ಎಂದರು. ಇದೇ ವೇಳೆ ಕಮಲ ಹಾಸನ್ ಕೇಸ್ ವಿಚಾರದ ಬಗ್ಗೆ ಮಾತನಾಡಿ ಕಮಲ ಹಾಸನ್ ವಿಚಾರದಲ್ಲಿ ಕೋರ್ಟ್ ಆದೇಶ ನೀಡಿದೆ. ನಾವು ಅದನ್ನು ಪಾಲನೆ ಮಾಡಬೇಕು. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಸಂಘ ಸಂಸ್ಥೆಗಳಿಗೆ ದಯವಿಟ್ಟು ಒಂದು ಲಿಮಿಟೇಷನ್ ಇಟ್ಟುಕೊಳ್ಳಬೇಕು. ಯೂ ಶೂಟ್ ಕಾಮ್, ಇರಬೇಕು. ಯಾರೂ ಸಹ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಅಭಿಪ್ರಾಯ ಹೇಳೋದು ತಪ್ಪಲ್ಲ, ಕಾನೂನು ಎಲ್ಲರಿಗೂ ಒಂದೇ. ಎಲ್ಲಾ ಭಾಷೆ ಡೈಜಿಸ್ಟ್ ಮಾಡಿಕೊಂಡಿದ್ದೇನೆ. ಕೋರ್ಟ್ ಗೆ ನಾವು ಗೌರವ ನೀಡಬೇಕು ಎಂದರು.

ಜನಗಣತಿಗೆ ಗೆಜೆಟ್ ವಿಚಾರದ ಬಗ್ಗೆ ಮಾತನಾಡಿ ಕೇಂದ್ರ ಸರ್ಕಾರ ಯಾಕೆ ವಿಳಂಬ ಮಾಡಿದೆ ಅಂತ ಗೊತ್ತಿಲ್ಲ. ರಾಜಕೀಯ ಕಾರಣದಿಂದ ತಡ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಬಳಸಿಕೊಳ್ಳಲು ಚಿಂತನೆ ಮಾಡಿದ್ದಾರೆ. ಸಮೀಕ್ಷೆ ಚುನಾವಣೆ ವೇಳೆ ಬಳಸಿಕೊಳ್ಳಲಿದ್ದಾರೆ. ೩೩% ಮಹಿಳಾ ಮೀಸಲಾತಿ ಮಾಡಲು ಅವರಿಗೆ ಇಷ್ಟವಿಲ್ಲ. ಅದಕ್ಕೆ ಈ ರೀತಿಯಲ್ಲಿ ವಿಳಂಬ ಮಡುತ್ತಿದ್ದಾರೆ. ಜನಗಣತಿ ಒಳಗೆ ಜಾತಿಗಣತಿ ಒಂದು ಪಾರ್ಟಿ ಆಗಬಹುದು. ನಮ್ಮ ಸರ್ಕಾರ ಈಗಾಗಲೇ ತೀರ್ಮಾನ ಆಗಿದೆ. ಮರು ಜಾತಿಗಣತಿ ಸಮೀಕ್ಷೆ ಆಗುತ್ತೆ. ಯಾರೆಲ್ಲ ವಿರೋಧ ಮಾಡಿದ್ರು,ಅವರಿಗೆಲ್ಲ ಅವಕಾಶ ಇದೆ.ಆರು ತಿಂಗಳ ಒಳಗೆ ಜನರಿಗೆ ಸಮೀಕ್ಷೆ ಸಿಗುತ್ತೆ. ಆದರಿಂದ ಯಾರಿಗೂ ತೊಂದರೆ ಆಗಲ್ಲ ಎಂದರು.