ಮನೆ Latest News ಸುಹಾಸ್ ಶೆಟ್ಟಿ ಪ್ರಕರಣವನ್ನು NIAಗೆ ನೀಡಬೇಕಾ ಬೇಡ್ವಾ ಎಂದು ನಿರ್ಧಾರ ಮಾಡುತ್ತೇವೆ; ಗೃಹ ಸಚಿವ ಡಾ...

ಸುಹಾಸ್ ಶೆಟ್ಟಿ ಪ್ರಕರಣವನ್ನು NIAಗೆ ನೀಡಬೇಕಾ ಬೇಡ್ವಾ ಎಂದು ನಿರ್ಧಾರ ಮಾಡುತ್ತೇವೆ; ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಸುಹಾಸ್ ಶೆಟ್ಟಿ ಪ್ರಕರಣವನ್ನು NIAಗೆ ನೀಡಬೇಕಾ ಬೇಡ್ವಾ ಎಂದು ನಿರ್ಧಾರ ಮಾಡುತ್ತೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ NIA ಗೆ ಕೊಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ ಗೃಹ ಇಲಾಖೆಯಿಂದ ಪತ್ರ ಬಂದಿದೆ. ಈ ಪತ್ರದ ಬಗ್ಗೆ ಇಂದು ಸಭೆ ನಡೆಸುತ್ತೇನೆ. NIAಗೆ ಪ್ರಕರಣ ನೀಡಬೇಕಾ ಬೇಡ್ವಾ ಎಂದು ನಿರ್ಧಾರ ಮಾಡುತ್ತೇವೆ. NIA ಗೆ ಯಾರು ರೆಫರ್ ಮಾಡಿದ್ರು ಅಂತ ಗೊತ್ತಿಲ್ಲ. ಅವರು ಪ್ರಕರಣ ವರ್ಗಾಯಿಸುವಂತೆ ಕೇಳಿದ್ದಾರೆ. ನಮ್ಮ ಪೊಲೀಸ್ ಕೂಡ ಸಮರ್ಥವಾಗಿ ತನಿಖೆ ಮಾಡುತ್ತಿದೆ.ಯಾವ ಆಧಾರದ ಮೇಲೆ ವರ್ಗಾವಣೆಗೆ ಕೇಳಿದ್ದರೆ ಅಂತ ಗೊತ್ತಿಲ್ಲ. ಇವತ್ತು ಚರ್ಚೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ. ಅದರ ಬಗ್ಗೆ ಬ್ಯಾಗ್ ಗ್ರೌಂಡ್ ಗೆ ಗೊತ್ತಿಲ್ಲ. ಯಾರಾದರೂ ರೆಪ್ರೆಸೆಂಟೇಷನ್ ಮಾಡಿದ್ದಾರೋ ಗೊತ್ತಿಲ್ಲ. ಕೆಲವು ಎನ್ ಐಎಗೆ ಕೊಡಿ ಎಂದು ಮಾತುಗಳು ಆಗ್ತಿವೆ.ಯಾರು ಮನವಿ ಮಾಡಿದ್ದಾರೋ ಗೊತ್ತಿಲ್ಲ. ಯಾರಾದರೂ ಸಂಸದರು, ಶಾಕಸರು ಮನವಿ ಮಾಡಿದ್ದಾರೋ ಗೊತ್ತಿಲ್ಲ.ಆದ್ರೆ ಗೃಹ ಸಚಿವಾಲಯದಿಂದ ಪತ್ರ ಮಾತ್ರ ಬಂದಿದೆ, ಅದನ್ನ ಇಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ರು.

ತುಮಕೂರು ಹೈವೇ ನಲ್ಲಿ ಆರ್ಚ್ ಹಾಕಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಇಂದು ಕೇಂದ್ರ ಸಚಿವ ವಿ ಸೋಮಣ್ಣ ಅವರನ್ನ ಭೇಟಿ ಮಾಡಿದ್ದೇವೆ. ಉದ್ದೇಶ ಅಂದ್ರೆ ತುಮಕೂರಿನ ನ್ಯಾಷನಲ್ ಹೈವೇ ನಲ್ಲಿ ತುಮಕೂರಿಗೆ ಆರ್ಚ್ ಹಾಕಬೇಕಿದೆ, ಅದಕ್ಕಾಗಿ ಹಣ ಒದಗಿಸಿದ್ದೇವೆ. ಅದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕು, ಅದು ಆಗಲ್ಲ ಅಂತ ತಿಳಿಸಿದ್ದಾರೆ. ಹಾಗಾಗಿ ವಿ ಸೋಮಣ್ಣ ಅವರನ್ನು ಭೇಟಿ ಮಾಡಿದ್ದೇವೆ.ಸೋಮಣ್ಣ ಮೂಲಕ ಗಟ್ಕರಿ ಅವರಿಗೆ ಮನವಿ ಸಲ್ಲಿಸಬೇಕು ಅಂತ ಹೋಗಿದ್ದೆ.ನಮಗೆ ಅನೇಕ ಕೇಂದ್ರದ ಯೋಜನೆ ಆಗಬೇಕಾಗಿದೆ. ಕುಡಿಯುವ ನೀರಿಗೆ ಕೇಂದ್ರಕ್ಕೆ ಹೋಗಿದೆ. ಅದನ್ನೂ ಮಂಜೂರು ಮಾಡಬೇಕು ಎಂದು ಭೇಟಿ ಮಾಡಿ ಹೇಳಿದ್ದೇವೆ. ನಾನೇ ಹೋಗಿ ಭೇಟಿ ಮಾಡಿ ಮಾತುಕತೆ ಮಾಡಿದ್ದೇವೆ. ಅನುಮತಿ ಕೊಟ್ರೆ ಒಳ್ಳೆಯದು ಆಗುತ್ತೆ. ತುಮಕೂರು ಬಂದಿದ್ದು ಯಾರಿಗೂ ಗೊತ್ತಾಗಲ್ಲ. ಅದಕ್ಕಾಗಿ ಆರ್ಚ್ ಹಾಕಿದ್ರೆ ತುಮಕೂರು ಗೊತ್ತಾಗುತ್ತೆ. ಅದಕ್ಕಾಗಿ ಐದು ಕೋಟಿ ಹಣ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ತುಮಕೂರಿಗೆ ಮೆಟ್ರೋ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು  ಕೇಂದ್ರ ಸರ್ಕಾರದ ತೀರ್ಮಾನದ ಬಳಿಕ ಅದೆ ಬಗ್ಗೆ ಮಾತನಾಡುತ್ತೇವೆ. ಈಗಾಗಲೇ ಸೋಮಣ್ಣ ಅವರು ಮೆಟ್ರೋ ಆಗಬೇಕು ಎಂದು ಹೇಳಿದ್ದಾರೆ. ಸಬರ್ಬನ್ ಆಗಲಿ, ಆದ್ರೆ ಮೆಟ್ರೋ ಆಗಬಾರದು ಅಂತೇನಿಲ್ಲ. ತುಮಕೂರು ವೇಗ ವಾಗಿ ಬೆಳೀತಿದೆ. ಇಂಡಸ್ಟ್ರೀಯಲ್ ಹಬ್ ಆಗಿದೆ, ಬೆಂಗಳೂರು ರೀತಿ ತುಮಕೂರು ವಿಸ್ತರಣೆ ಮಾಡಬೇಕು.ಗ್ರೇಟರ್ ತುಮಕೂರು ರೀತಿ ಆಗಬೇಕು. ತುಮಕೂರು ಕೂಟ ಬೆಂಗಳೂರು ಕೂಡ ಸೇರಿಸಬೇಕಾಗಿದೆ ಎಂದರು.

ಇದೇ ವೇಳೆ ಹೇಮಾವತಿ ಗಲಾಟೆ ವಿವಾದ ವಿಚಾರದ ಬಗ್ಗೆ ಮಾತನಾಡಿ ಈಗಾಗಲೇ ನಾವು ಮನವಿ ಮಾಡಿದ್ದೇವೆ. ಬೇರೆ ದಾರಿ ಹಿಡಿಯೋಕೆ ಮುಂದಾಗಿದ್ದೇವೆ. ನೀರಾವರಿ ಸಚಿವರ ಬಳಿ ಮಾತಾಡಿ ಸಭೆ ಕರೆಯೋದಕ್ಕೆ ನೋಡುತ್ತೇವೆ.ಅದರಲ್ಲಿ ಏನು ಆಗುತ್ತದೆ ನೋಡಬೇಕು ಎಂದರು. ಇದೇ ವೇಳೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಅವರು ಪ್ರಾಸಿಕ್ಯೋಷನ್ಗೆ ಪ್ರಕ್ರಿಯೆ  ನಡೀತಿದೆ.ಯಾವುದೂ ನಿಂತಿಲ್ಲ, ಅದನ್ನ ಮಾಡುತ್ತಿದ್ದಾರೆ ಎಂದರು.

ಗೃಹ ಖಾತೆ ಬೇಡ ಎಂಬ ಸುದ್ದಿ ಹರಡಿರುವ ವಿಚಾರದ ಬಗ್ಗೆ ಮಾತನಾಡಿ ನಿಮಗೆ ಏನು ಹೇಳಬೇಕು ಗೊತ್ತಿಲ್ಲ. ಯಾರು ಇದನ್ನ ಹೇಳಿದ್ದಾರೆ ಗೊತ್ತಿಲ್ಲ. ಯಾರು ಹೀಗಂತ ಹೇಳಿದ್ದಾರೆ?. ನನ್ನನ್ನೇ ನೇರವಾಗಿ ಕ್ಲಾರಿಫೈ ಮಾಡಬೇಕು ಅಲ್ಲವೇ. ನನ್ನನ್ನೇ ಕೇಳಬೇಕು ಅಲ್ಲವೇ, ನಾನು ಸಂಯಮದಿಂದಲೇ ನಡೆದುಕೊಂಡಿದ್ದೇನೆ .ಒಬ್ಬರ ವ್ಯಕ್ತಿತ್ವ ವನ್ನ ಕೊಲೆ ಮಾಡಬಾರದು, ಇದು ಸರಿ ಅನ್ಸೋದಿಲ್ಲ. ಶೋಭೆ ತರೋದಿಲ್ಲ, ನನ್ನನ್ನೇ ಕೇಳಿ, ನಾನು ಉತ್ತರ ಕೊಡುತ್ತೇನೆ. ನನ್ನ ಶ್ರೀಮತಿ ಅವರ ಬಳಿಯೂ ನಾನು ಪಾಲಿಟಿಕ್ಸ್ ಮಾತಾಡೋದಿಲ್ಲ. ಖಾತೆ ಬದಲಾಯಿಸಿ ಅಂತ ಸಿಎಂ ಅವರ ಬಳಿ ಹೇಳಿದ್ದಾರೆ ಅಂತ ಯಾರೀ ಹೇಳಿದ್ರು?. ನಾನು ಹೇಳಿದ್ದೀನಾ? ಎರಡ್ಮೂರು ದಿನ ಹಾಕಿ ಈಗ ಕ್ಲಾರಿಫೈ ಮಾಡಿದ್ರೆ ಹೇಗೆ? ಇದನ್ನ ಮಾಡಬೇಡಿ, ದಯಮಾಡಿ. ನಮ್ಮ ಅಭಿಮಾನಿಗಳು, ಮತದಾರರು ಇದ್ದಾರೆ , ಏನು ಅಂದು ಕೊಳ್ತಾರೆ ಅವರು. ಏನೇ ಇದ್ದರೂ ನನ್ನನ್ನ ಕೇಳಿ, ನಾನು ಇಂತಹ ಖಾತೆ ಬೇಕು ಎಂದು ನಾನು ಯಾವಾಗಲೂ ಕೇಳಿಲ್ಲ. ಇದು ಬೆಂಗಳೂರಲ್ಲಿ ಘಟಜೆ ನಡೆದಿದೆ, ಇದು ಆಗಬಾರದಿತ್ತು ಅಂತ ನಾನು ಹೇಳಿದ್ದೀನಿ. ಇದಕ್ಕೆ ಎಲ್ಲರೂ ಕೂಡ ನೋವು ಅನುಭವಿಸುತ್ತಿದ್ದೇವೆ.ಇದು ಸವಾಲು, ಇದನ್ನ‌ ಎದುರಿಸ್ಬೇಕು.ಹೀಗಾಗಿ ನಾನು ಖಾತೆ ಬದಲಾವಣೆ ಬಗ್ಗೆ ಸಿಎಂ ಹೇಳಿಕೊಂಡಿಲ್ಲ, ಇದು ಸತ್ಯಕ್ಕೆ ದೂರವಾದುದ್ದು, ಇದು ಸುಳ್ಳು. ಇದನ್ನ ಗಣನೆಗೆ ತೆಗೆದುಕೊಳ್ಳಬಾರದು ಎಂದರು.