ಮನೆ Latest News ಹುಬ್ಬಳ್ಳಿಯಲ್ಲಿ ನಡೆದ ಫೈರಿಂಗ್ ಬಗ್ಗೆ ಸಿಒಡಿ ತನಿಖೆ ಆದೇಶ ಮಾಡಿದ್ದೇವೆ: ಗೃಹ ಸಚಿವ ಪರಮೇಶ್ವರ್...

ಹುಬ್ಬಳ್ಳಿಯಲ್ಲಿ ನಡೆದ ಫೈರಿಂಗ್ ಬಗ್ಗೆ ಸಿಒಡಿ ತನಿಖೆ ಆದೇಶ ಮಾಡಿದ್ದೇವೆ: ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಹುಬ್ಬಳ್ಳಿಯಲ್ಲಿ ನಡೆದ ಫೈರಿಂಗ್  ಬಗ್ಗೆ ಸಿಒಡಿ ತನಿಖೆ ಆದೇಶ ಮಾಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಫೈರಿಂಗ್ ಸುಳ್ಳು ಅನ್ನೋ ವಿಚಾರದ ಬಗ್ಗೆ ಮಾತನಾಡಿದ ಅವರು ಅದಕ್ಕಾಗಿಯೇ ಸಿಒಡಿ ತನಿಖೆ ಆದೇಶ ಮಾಡಿದ್ದೇವೆ. ಆ ತನಿಖೆಯಲ್ಲಿ ಗೊತ್ತಾಗಲಿದೆ. ತನಿಖೆ ಹಿರಿಯ ಅಧಿಕಾರಿಗಳು ಮಾಡುತ್ತಾರೆ. ತನಿಖೆಯಲ್ಲಿ ಏನು ಬರುತ್ತೆ ಅಂತ ನೋಡೋಣ. ಆಕಸ್ಮಿಕನೋ ಅಥವಾ ನಿಜವಾದ ಅಟ್ಯಾಕೋ ಗೊತ್ತಾಗಲಿದೆ ಎಂದಿದ್ದಾರೆ.

ನಿನ್ನೆ ಒಕ್ಕಲಿಗರ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು  ಸಭೆ ನಡೆಸಿದ ಅಷ್ಟೆ ಗೊತ್ತು. ಚರ್ಚೆ ಏನು ಅಂತ ಗೊತ್ತಿಲ್ಲ.ಆ ಸಮುದಾಯ ನಮಗೆ ಅನ್ಯಾಯ ಆಗಬಾರದು ಅಂತ ಚರ್ಚೆ ಮಾಡಿದ್ದಾರೆ. ಅಷ್ಟು ಮಾತ್ರ ನನಗೆ ಗೊತ್ತಿರೋದು. ಒಕ್ಕಲಿಗ ಸಭೆ ಮಾಡೋದು ಸರಿ ದಲಿತ ಸಭೆ ಮಾಡೋದು ತಪ್ಪು ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ ತಪ್ಪು ಸರಿ ಅಂತ ನಾನು ಹೇಳಲು ಆಗಲ್ಲ. ಅದನ್ನ ನಾನು ಹೇಳಲು ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ.

ದಾವಣಗೆರೆಯಲ್ಲಿ ಮಹಿಳೆಗೆ ಥಳಿಸಿದ ಬಗ್ಗೆ ಮಾತನಾಡಿದ ಅವರು ಈಗಾಗಲೇ ಪೊಲೀಸ್ ಗಮನಿಸುತ್ತಾರೆ. ಕಾನೂನಿನ ಪ್ರಕಾರ ಕ್ರಮ ಆಗಲಿದೆ.ಮುಲಾಜು ಇಲ್ಲದೆ ಕ್ರಮ ಆಗುತ್ತದೆ. ಇಂಥ ಘಟನೆ ನಡದಾಗ ಸುಮ್ಮನೆ ಕೂರಲು ಆಗಲ್ಲ.ಎಲ್ಲಾ ವಿಚಾರದಲ್ಲೂ ಹೇಳಿದ್ಧೇನೆ ಕಠಿಣ ಕ್ರಮ ತೆಗದುಕೊಳ್ಳಿ ಅಂತ. ಹಾಗಾಗಿಯೇ ಪೊಲೀಸರು ಮುಲಾಜಿಲ್ಲದೆ ಕ್ರಮ ವಹಿಸುತ್ತಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರ ಆದಾಗ ಕಠಿಣ ಕ್ರಮ ತೆಗೆದುಕೊಳ್ಳಿ ಅಂತಲೇ ಹೇಳಿದ್ದೇವೆ,.ಟಾಟಾ ಟ್ರಸ್ಟ್ ಅವರು ಒಂದು ಸರ್ವೇ ಮಾಡಿದ್ದಾರೆ. ಪೊಲೀಸ್ ಯಾವ ರೀತಿ ಕೆಲಸ ಮಾಡ್ತಾ ಇದ್ದಾರೆ ಅಂತ ಸರ್ವೇ ಮಾಡಿದೆ. ಕರ್ನಾಟಕಕ್ಕೆ ೬.೮ ಮಾರ್ಕ್ಸ್ ಕೊಟ್ಟಿದ್ದಾರೆ. ಕರ್ನಾಟಕ ಮೊದಲ ಸ್ಥಾನ ದಲ್ಲಿ ಇದೆ. ನಾವು ಯಾವ ರೀತಿ ಕೆಲಸ ಮಾಡ್ತಿದೆ ಅಂತ ಪ್ರೂ ಆಗಿದೆ ಎಂದ್ರು.

ನಾಳೆ ಕ್ಯಾಬಿನೆಟ್ ವಿಚಾರದ ಬಗ್ಗೆ ಮಾತನಾಡಿದ ಅವರು ವರದಿ ಮಂಡಣೆ ಆದ ಬಳಿಕ ನಾವು ಸಮಯ ಕೇಳಿದ್ದೆವು. ಸಿಎಂ ನಮಗೆ ಒಂದು ವಾರ ಸಮಯ ಕೊಟ್ರು. ನಾಳೆ ನಾವು ನಮ್ಮ ಅಭಿಪ್ರಾಯ ಹೇಳುತ್ತೇವೆ. ಎಲ್ಲರೂ ಅವರವರ ಅಭಿಪ್ರಾಯ ಹೇಳುತ್ತಾರೆ. ಅಂತಿಮವಾಗಿ ಏನು ನಿರ್ಣಯ ಆಗುತ್ತೆ ಕಾದು ನೋಡೋಣ .ಶಾಮನೂರು ಮಾತಿಗೆ ನಾನು ಉತ್ತರ ಕೊಡಲ್ಲ.ಯಾರೇನೇ ಹೇಳಿದರೂ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ಸಂಪುಟದಲ್ಲಿ ಇರುವವರ ಅವರ ಅಭಿಪ್ರಾಯ ಹೇಳ್ತಾರೆ.ಅವರವರ ಸಮುದಾಯದ ಅಭಿಪ್ರಾಯ ಕೇಳಿರುತ್ತಾರೆ. ಅಂತಿಮವಾಗಿ ಚರ್ಚೆ ಮಾಡಿದ ಬಳಿಕವೇ ತೀರ್ಮಾನ ಮಾಡೋದು.ನಾಳೆ ನೋಡೋಣ ಅಧಿವೇಶನ ಕರೆಯುವ ವಿಚಾರವಾಗಿ ಎಂದಿದ್ದಾರೆ.