ಬೆಂಗಳೂರು ; ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಸುಮೋಟೋ ಕೇಸ್ ದಾಖಲಿಸಿಕೊಳ್ಳಲು ಪೊಲೀಸರಿಗೆ ತಿಳಿಸಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಮಾತನಾಡಿದ ಅವರು ಸುಮೋಟೋ ತೆಗೆದುಕೊಳ್ಳಬೇಕು ಎಂದು ಪೊಲೀಸರಿಗೆ ತಿಳಿಸಿದ್ದೇವೆ.ನಾವು ಸುಗ್ರೀವಾಜ್ಞೆ ತರಲು ನಿರ್ಧರಿಸಿದ್ದೇವೆ.ಅದಕ್ಕೆ ಸಂಬಂಧಪಟ್ಟ ಹಾಗೆ ಇವತ್ತು ಸಭೆಯನ್ನು ಕರೆದಿದ್ದೇವೆ. ಸುಗ್ರೀವಾಜ್ಞೆಯ ಡ್ರಾಫ್ಟ್ ಬಗ್ಗೆ ಚರ್ಚೆ ಮಾಡಿ ತಕ್ಷಣ ನಾವು ಅದನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತೇವೆ.ಈ ಮಧ್ಯೆ ಎಲ್ಲಾ ಡಿಸಿ ಗಳಿಗೂ ಕೂಡ ಸೂಚನೆ ಹೋಗಿದೆ ಇದನ್ನ ಕಂಟ್ರೋಲ್ ಮಾಡುತ್ತೇವೆ ಬಿಡೋದಿಲ್ಲ.ನಮ್ಮ ಡ್ರಾಫ್ಟ್ ನಲ್ಲೂ ಕೂಡ ಡಿಸಿಪಿಗಳಿಗೆ ಹೆಚ್ಚು ಪವರ್ ಕೊಡಬೇಕು ಎಂದು ಪ್ರಸ್ತಾಪವಿದೆ. ಇದಕ್ಕೊಂದು ವಿಂಗ್ ಮಾಡಬೇಕು ಎಂಬ ಪ್ರಸ್ತಾಪವಿದೆ.ಇದೆಲ್ಲ ತೀರ್ಮಾನ ಆದ ತಕ್ಷಣವೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತೇವೆ ಎಂದಿದ್ದಾರೆ.
ಕೆಲವು ಕಡೆ ಔಟ್ ಸೋರ್ಸ್ ಮಾಡಿದ್ದಾರೆ ಗೂಂಡಾಗಳ ತರಹ ವರ್ತನೆ ಮಾಡುತ್ತಿದ್ದಾರೆ. ಅದನ್ನು ಮಾಡಿದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ . ಏಜೆನ್ಸಿ ಯಾವುದಿದೆ ಯಾವ ಮೈಕ್ರೋ ಫೈನಾನ್ಸ್ ನಿಂದ ತಪ್ಪುಗಳಾಗುತ್ತಿದೆ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಅದನ್ನು ಮಾಡಿಯೇ ಮಾಡುತ್ತಿವೆ ಬಿಡುವುದಿಲ್ಲ.ಇವತ್ತು ಎಚ್ ಕೆ ಪಾಟೀಲ್ ಕಾನೂನು ಸಚಿವರು ಕಂದಾಯ ಸಚಿವರು ಹಾಗೂ ನಾನು ಮೂರು ಜನ ಸೇರಿ ಡ್ರಾಫ್ಟ್ ಅಂತಿಮಗೊಳಿಸುತ್ತೇವೆ. ನಾಳೆಯೇ ಕ್ಯಾಬಿನೆಟ್ ಗೆ ತಂದು ಸುಗ್ರೀವಾಜ್ಞೆಗೆ ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತೇವೆ ಎಂದರು.
ನೂತನ ಏರ್ ಪೋರ್ಟ್ ತುಮಕೂರು ಭಾಗಕ್ಕೆ ಆಗಬೇಕೆಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ಅಹವಾಲು ಹೇಳಬೇಕಲ್ಲ ತುಮಕೂರು ಭಾಗದಲ್ಲಿ ಏರ್ ಪೋರ್ಟ್ ಆದ್ರೆ 20- 25 ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಕನೆಕ್ಟಿವಿಟಿ ಕೂಡ ಈಗಿನ ಏರ್ಪೋರ್ಟ್ ಸಂಪರ್ಕ ಕಲ್ಪಿಸುವುದು ಸುಲಭವಾಗುತ್ತದೆ ನೋಡಬೇಕು. ನಮ್ಮ ಮೆಟ್ರೋದ ಡಿಪಿಆರ್ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಡಿಪಿಆರ್ ಬಂದ ನಂತರ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.ಹೈವೆ ಮಧ್ಯದಲ್ಲಿ ಮೆಟ್ರೋ ಮಾಡುವುದರಿಂದ ಕೇಂದ್ರ ಸರ್ಕಾರದ ಅನುಮತಿ ಬೇಕಾಗುತ್ತದೆ ಎಂದರು.
ಶಾಸಕರ ಅಸಮಾಧಾನ ವಿಚಾರ ಗಮನಿಸಿಲ್ಲ. ಎಐಸಿಸಿ ಅಧ್ಯಕ್ಷರ ಎಚ್ಚರಿಕೆ ಶಾಸಕರಿಗೂ ಅನ್ವಯ ಆಗುತ್ತದೆ. ಶಾಸಕರಿಗೂ ಮತ್ತೆ ವಾರ್ನಿಂಗ್ ಮಾಡಬಹುದು. ಶಾಸಕರು ಹೈಕಮಾಂಡ್ ಎರಡೂ ಸೇರಿ ಸಿಎಂ ಆಯ್ಕೆ ಮಾಡುತ್ತಾರೆ. ಮೊದಲು ಶಾಸಕರ ಅಭಿಪ್ರಾಯ ಪಡೆಯುತ್ತಾರೆ, ಅದನ್ನು ಗಮನಿಸಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.