ಮನೆ Latest News ನಮ್ಮ ಹೋರಾಟಕ್ಕೆ ಕಾಂಗ್ರೆಸ್ ಗೌರವ ಕೊಡಬೇಕು ಅಂತ ನಾವು ನಿರೀಕ್ಷೆ ಮಾಡಲ್ಲ : ಬೆಂಗಳೂರಿನಲ್ಲಿ ಬಿಜೆಪಿ...

ನಮ್ಮ ಹೋರಾಟಕ್ಕೆ ಕಾಂಗ್ರೆಸ್ ಗೌರವ ಕೊಡಬೇಕು ಅಂತ ನಾವು ನಿರೀಕ್ಷೆ ಮಾಡಲ್ಲ : ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ

0

ಬೆಂಗಳೂರು; ನಮ್ಮ ಹೋರಾಟಕ್ಕೆ ಕಾಂಗ್ರೆಸ್ ಗೌರವ ಕೊಡಬೇಕು ಅಂತ ನಾವು ನಿರೀಕ್ಷೆ ಮಾಡಲ್ಲ  ಎಂದು  ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಇಂದಿನಿಂದ ಬಿಜೆಪಿಯ ಜನಾಕ್ರೋಶ ಯಾತ್ರೆ ಆರಂಭವಾಗಿದೆ. ಈ ಬಗ್ಗೆ ಮಾತನಾಡಿದ ಅವರು ಭ್ರಷ್ಟ ಸರ್ಕಾರದ ವಿರುದ್ಧ ಜನಾಂದೋಲನ ಮಾಡುತ್ತೇವೆ. ನಾಲ್ಕು ಹಂತಗಳಲ್ಲಿ ಹೋರಾಟ ಮಾಡುತ್ತಿದ್ದೇವೆ. ಜನರಿಗೆ ಈ ಸರ್ಕಾರದ ಭ್ರಷ್ಟಾಚಾರ ತಿಳಿಸುತ್ತೇವೆ. ನಾವು ಪ್ರಾಮಾಣಿಕ ಹೋರಾಟ ಮಾಡುತ್ತಿದ್ದೇವೆ. ಈಗ ಯಾವುದೇ ಚುನಾವಣೆಗಳು ಇಲ್ಲದಿದ್ದರೂ ಜನರ ಪರ ದನಿ ಎತ್ತುವುದು ನಮ್ಮ ಕರ್ತವ್ಯ. ದರ ಏರಿಕೆ, ಕಾಂಗ್ರೆಸ್ ಅಟ್ಟಹಾಸ ಜನರ ಮುಂದೆ ಇಡುತ್ತೇವೆ. ಜನಾಕ್ರೋಶ ಯಾತ್ರೆಯಲ್ಲಿ ನಮ್ಮ ಪಕ್ಷದ ಎಲ್ಲ ನಾಯಕರೂ ಭಾಗವಹಿಸುತ್ತಾರೆ. ಪ್ರತೀ ಜಿಲ್ಲೆಗೂ ನಮ್ಮ ಜನಾಕ್ರೋಶ ಯಾತ್ರೆ ತಲುಪಲಿದೆ. ಅಯೋಗ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ದಲಿತರಿಗೆ ದೋಖಾ ಮಾಡುತ್ತಿದೆ. ಈ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸುತ್ತೇವೆ. ನಮ್ಮ ಹೋರಾಟಕ್ಕೆ ಕಾಂಗ್ರೆಸ್ ಗೌರವ ಕೊಡಬೇಕು ಅಂತ ನಾವು ನಿರೀಕ್ಷೆ ಮಾಡಲ್ಲ ಎಂದರು.

ಹಿಂದೆ ರಾಜಕಾರಣಕ್ಕೆ ಡಿ.ಕೆ. ಶಿವಕುಮಾರ್ ಪಾದಯಾತ್ರೆ ಮಾಡಿದರು. ಆದರೆ ನಾವು ಈಗ ಯಾವುದೇ ಚುನಾವಣೆ ಇಲ್ಲದಿದ್ದರೂ ಹೋರಾಟ ಮಾಡುತ್ತಿದ್ದೇವೆ ಎಂದ ಅವರು ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಹೋರಾಟ ಎಂಬ ಡಿ.ಕೆ. ಶಿವಕುಮಾರ್ ಟೀಕೆ ವಿಚಾರದ ಬಗ್ಗೆ ಮಾತನಾಡಿ ಯಾವ ಅಯೋಗ್ಯ ಇದನ್ನು ಹೇಳಿರುವುದು?. ನಮಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿಲ್ಲ. ಕಾಂಗ್ರೆಸ್ ನವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ, ನಮಗಲ್ಲ. ನಮ್ಮದೇ ಆದ ಕೆಲವು ತಪ್ಪು ಗಳಿಂದ ನಾವು ಈ ಬಾರಿ ಅಧಿಕಾರಕ್ಕೆ ಬರದಿರಬಹುದು. ಆದರೆ ಕಾಂಗ್ರೆಸ್ ಅಸ್ತಿತ್ವ ಹೋಗುತ್ತಿದೆ ಎಂದ್ರು. ಹೋರಾಟಕ್ಕೆ ಜೆಡಿಎಸ್ ಜತೆಗೂಡದ ವಿಚಾರದ ಬಗ್ಗೆ ಮಾತನಾಡಿ  ನಮ್ಮ ನಡುವೆ ಗೊಂದಲ, ಭಿನ್ನಾಭಿಪ್ರಾಯ ಇಲ್ಲ. ಈ ಹೋರಾಟ ಬಗ್ಗೆ ಕುಮಾರಸ್ವಾಮಿ ಅವರಿಗೂ ಸ್ಪಷ್ಟಪಡಿಸಿದ್ದೇವೆ. ಈ ಹೋರಾಟ ಪ್ರತ್ಯೇಕವಾಗಿ ಮಾಡುತ್ತಿದ್ದೇವೆ ಅಂತ ಏನೂ ವ್ಯತ್ಯಾಸ ಉಂಟಾಗಿಲ್ಲ. ನಾವೂ ಅವರೂ ಹಲವು ಹೋರಾಟ ಒಟ್ಟಿಗೆ ಮಾಡಿದ್ದೇವೆ, ಪ್ರತ್ಯೇಕವಾಗಿಯೂ ಮಾಡಿದ್ದೇವೆ. ನಮ್ಮ ನಡುವೆ ಒಡಕು ಉಂಟಾಗಿಲ್ಲ, ಇದು ಸತ್ಯಕ್ಕೆ ದೂರವಾದ ಅಪವಾದ ಎಂದರು.

ನಿನ್ನೆ ತಾನೇ ಬಿಜೆಪಿ ಸಂಸ್ಥಾಪನಾ ದಿನ ಮಾಡಿದ್ದೇವೆ. ವಿಶ್ವದ ಅತೀ ದೊಡ್ಡ ಪಕ್ಷ ಬಿಜೆಪಿ. ಕಾಂಗ್ರೆಸ್ ಗೆ ಇವತ್ತು ಯಾವ ಪರಿಸ್ಥಿತಿ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ಬಿಜೆಪಿ ಸುಭದ್ರ ಆಗಿದೆ, ಶಕ್ತಿಯುತ ಆಗಿದೆ. ನಾವು ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿಲ್ಲ, ಜನಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದ್ರು. ವಿನಯ್ ಸೋಮಯ್ಯ ಪ್ರಕರಣದಲ್ಲಿ ಪೊಲೀಸರು ಕ್ರೂರವಾಗಿ ನಡೆದುಕೊಂಡಿದ್ದಾರೆ. ಬೇಲ್ ಸಿಕ್ಕ ಮೇಲೂ ಪೊಲೀಸರು ವಿನಯ್ ಮನೆಗೆ ಹೋಗುತ್ತಾರೆ ಅಂದರೆ ಏನು ಹೇಳುವುದು?. ಈ ಪ್ರಕರಣ ಇಲ್ಲಿಗೇ ಬಿಡುವುದಿಲ್ಲ ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯ ಬಿಜೆಪಿಯಿಂದ ಏನೆಲ್ಲಾ ಮಾಡಬೇಕೋ ಎಲ್ಲಾ ಮಾಡಿದ್ದೇವೆ. ಆದರೆ ಪೊಲೀಸರ ಕಿರುಕುಳ ಬಗ್ಗೆ ವಿನಯ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಸರ್ಕಾರದ ದಬ್ಬಾಳಿಕೆ ಸಹಿಸಲ್ಲ.ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಯಾರೇ ಹಿಂದೂ, ಬಿಜೆಪಿ ಕಾರ್ಯಕರ್ತ ಇರಬಹುದು, ಕಾಂಗ್ರೆಸ್ ಪುಢಾರಿಗಳಿಂದ ತೊಂದರೆ ಆದರೆ ನೇರವಾಗಿ ಸಂಪರ್ಕಿಸಲಿ.ನಾವು ಅವರಿಗೆ ಏನು ಕಾನೂನು ಅನುಕೂಲ ಬೇಕೋ ಅದನ್ನು ಒದಗಿಸುತ್ತೇವೆ, ಬಿಜೆಪಿ ಅವರ ಜೊತೆ ಇದೆ ಎಂದರು.