ಮನೆ Latest News ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ: ಮಾಜಿ ಸಿಎಂ ಸದಾನಂದಗೌಡ ಹೇಳಿಕೆ

ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ: ಮಾಜಿ ಸಿಎಂ ಸದಾನಂದಗೌಡ ಹೇಳಿಕೆ

0

ಬೆಂಗಳೂರು: ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಯಾವುದೇ ಮೀಸಲಾತಿ ಯ ವಿರೋಧಿ ಅಲ್ಲ. ಆದ್ರೆ ತಪ್ಪು ಲೆಕ್ಕಾಚಾರ ಮಾಡೋ ಮೂಲಕವೇ ಯಾರದ್ದೋ ಶಕ್ತಿ ಕುಂದಿಸೋ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಮುದಾಯದ ಮೂಲಕ ವಿರೋಧ ಮಾಡುತ್ತಿದ್ದಾರೆ.ಯಾವುದೇ ಪ್ರತಿಷ್ಟೆಗೆ ಯಾವುದೇ ಸಮುದಾಯ ಯಾಕೆ ವಿರೋಧ ಮಾಡುತ್ತಿದೆ?.ಸಮುದಾಯದ ಲೆಕ್ಕ ಕಡಿಮೆ ಮಾಡಿ ಹಕ್ಕು ಮೊಟಕುಗೊಳಿಸೋ ಯತ್ನ ಮಾಡುತ್ತಿದ್ದಾರೆ.ಕಾಂತರಾಜು ಅವರ ವರದಿ ವೈಜ್ಞಾನಿಕ ವಾಗಿ ನಡೆದಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಯಾರೋ ಮನೆಗೆ ಹೋಗಿದ್ದಾರೆ ಅಂದ್ರೆ ಹೇಗೆ? .ನಾನು ಶ್ರೀಗಳ ಜೊತೆ ಮಾತಾಡಿಲ್ಲ, ಅವರು ಜೊತೆ ಮಾತಾಡುತ್ತೇವೆ.ಇನ್ನೂ ಚರ್ಚೆ ಆಗಬೇಕು, ನಿರ್ಧಾರ ಆಗ್ಬೇಕು. ನಾವು ಮೀಸಲಾತಿ ವಿರೋಧಿಗಳು ಅಲ್ಲ.ತಪ್ಪು ಲೆಕ್ಕ ಕೊಡಲಾಗಿದೆ, ಸಂಖ್ಯೆಗಳನ್ನು ಕಮ್ಮಿ ಮಾಡಿ ಯಾರದ್ದೋ ಶಕ್ತಿ ಕುಂದಿಸುವ ಪ್ರಯತ್ನ ನಡೀತಿದೆ. ಸಿದ್ದರಾಮಯ್ಯ ಅವರ ಈ ಪ್ರಯತ್ನಗಳನ್ನು ನಮಗಮ ಸಮಾಜ ಸಹಿಸಲ್ಲ. ವರದಿಯನ್ನು ವೈಜ್ಞಾನಿಕವಾಗಿ ಮಾಡಲಿ.ಎಲ್ರೂ ವರದಿ ವೈಜ್ಞಾನಿಕವಾಗಿ ಇಲ್ಲ ಅಂತಿದ್ರೂ ಸಿದ್ದರಾಮಯ್ಯ ಕಿವುಡರಾಗಿದ್ದಾರೆ.ಸಿದ್ದರಾಮಯ್ಯ ಹೀಗೇ ಮುಂದುವರೆದರೆ, ಅವರು ಅವರ ಕೊನೆಯ ದಿನಗಳನ್ನು ಎಣಿಸಬೇಕಾಗುತ್ತದೆ ಎಂದಿದ್ದಾರೆ.

ಮಲೆಯಾಲಂನಲ್ಲಿ ಎಂಟು ಎಂಟು ಅಂದ್ರೆ ಹದಿನೆಂಟು ಅನ್ನೋ ಮಾತಿದೆ.. ಅದರಂತಾಗಿದೆ ಜಾತಿ ಜನಗಣತಿ ವರದಿ.ಸಮುದಾಯಗಳ ತಪ್ಪು ಲೆಕ್ಕ ಕೊಡುವ ಸಿದ್ದರಾಮಯ್ಯ ವ್ಯವಹಾರಗಳನ್ನು ನಮ್ಮ ಸಮಾಜ ಒಪ್ಪಲ್ಲ.ಪ್ರಬಲ ಸಮುದಾಯಗಳ ವಿರೋಧ ಮೊದಲಿಂದಲೂ ಸಿದ್ದರಾಮಯ್ಯ ಮಾಡ್ತಾ ಬರ್ತಿದ್ದಾರೆ.ಈಗ ತಮ್ಮ ಪಕ್ಷದಲ್ಲಿ ತಮಗೊಬ್ಬ ಸ್ಪರ್ಧಿ ಇದ್ದಾರೆ ಅಂತ ನಿಮ್ಮ ವೈಯಕ್ತಿಕ ಪ್ರತಿಷ್ಠೆಗೆ ಇಡೀ ಸಮಾಜ ಯಾಕೆ ಬಲಿ ಕೊಡ್ತೀರಿ?.ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಮಾಡಿ, ನಿಯಂತ್ರಣದಲ್ಲಿ ಇಟ್ಕೊಳ್ಳೋ ಪ್ರಯತ್ನ ಮಾಡಲಾಗ್ತಿದೆ.ಹಕ್ಕುಗಳನ್ನು ಕಿತ್ಕೊಳ್ಳೋ ಪ್ರಯತ್ನ ಮಾಡಿದರೆ ಸಿದ್ದರಾಮಯ್ಯ ಕೊನೇ ದಿನಗಳನ್ನು ಎಣಿಸುವ ಕಾಲ ಬರುತ್ತೆ.ತಮ್ಮ ಮನೆಗಳಿಗೆ ಸಮೀಕ್ಷೆ ಮಾಡೋರು ಬಂದಿಲ್ಲ ಅಂತ ಹೇಳೋರೇ ಹೆಚ್ಚು. ಹಿಂದುಳಿದ ಆಯೋಗದವ್ರು ಮನೆಗಳ ಸಮೀಕ್ಷೆ ಮಾಡದೇ ಕೂತ್ಕೊಂಡು ಸಿನಿಮಾ ನೋಡ್ತಿದ್ರಾ?.ಸಿದ್ದರಾಮಯ್ಯ ಅಹಂಕಾರದ ತುತ್ತ ತುದಿಗೆ ತಲುಪಿದ್ದಾರೆ.ನಾನು ವರದಿ ಬಗ್ಗೆ ಶ್ರೀಗಳ ಜತೆ ಇವತ್ತು ಮಾತಾಡ್ತೇನೆ, ಪಕ್ಷದವರ ಜತೆಗೂ ಮಾತಾಡ್ತೇನೆ. ಸಿದ್ದರಾಮಯ್ಯ ಅವರ ದುರಹಂಕಾರ ಪ್ರವೃತ್ತಿ, ಒಂದು ಸಮಾಜದ ಮೇಲೆ ಗದಾಪ್ರಹಾರ ನಾವು ಯಾವತ್ತಿಗೂ ಸಹಿಸಲ್ಲ.ಇವತ್ತು ಡಿಕೆಶಿ ಅವರ ಶಾಸಕರ ಸಭೆ ಕರೆದಿದ್ದಾರೆ. ನೋಡೋಣ ಏನಾಗುತ್ತೆ ಅಂತ ತಿಳ್ಕೊಂಡು ಮುಂದುವರೆಯುತ್ತೇವೆ ಎಂದಿದ್ದಾರೆ.

 

ಜಾತಿ ಜನಗಣತಿ ಸಂಘರ್ಷದ ಕುರಿತಾಗಿ ರಾಜ್ಯ ಒಕ್ಕಲಿಗ ಸಂಘದಿಂದ ಸಭೆ

ಬೆಂಗಳೂರು; ಜಾತಿ ಜನಗಣತಿ ಸಂಘರ್ಷದ ಕುರಿತಾಗಿ ರಾಜ್ಯ ಒಕ್ಕಲಿಗ ಸಂಘದಿಂದ ಸಭೆ ನಡೆಯಿತು.ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗಿಯಾಗಿದ್ದರು. ಈಗಾಗಲೇ ಜನಗಣತಿ ವರದಿಗೆ ಒಕ್ಕಲಿಗ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಮುಂದಿನ ಹೋರಾಟ ಕುರಿತು ಸಭೆಯಲ್ಲಿ ರೂಪುರೇಷ ಹಾಕಲಾಯಿತು.ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಾಗಿ ನಿರ್ಧರಿಸಲಾಯಿತು.ಶೀಘ್ರವೇ ಪ್ರತಿಭಟನೆ ಪ್ಲಾನ್ ಮಾಡಲಾಗಿದೆ.

ಇನ್ನು ಸಭೆ ಬಳಿಕ ರಾಜ್ಯ ಒಕ್ಕಲಿಗ ಸಂಘದಿಂದ ಸುದ್ದಿಗೋಷ್ಠಿ ನಡೆಯಿತು. ಒಕ್ಕಲಿಗ ಸಂಘದ ರಾಜ್ಯಾಧ್ಯಕ್ಷ ಕೆಂಚಪ್ಪ ಗೌಡ,ಒಕ್ಕಲಿಗ ಸಂಘದ ನಿರ್ದೇಶಕ ಉಮಾಪತಿ ಸೇರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಉದ್ದೇಶಿಸಿ ಮಾತನಾಡಿ ಒಕ್ಕಲಿಗ ಸಂಘದ ರಾಜ್ಯಾಧ್ಯಕ್ಷ ಕೆಂಚಪ್ಪಗೌಡ ಕಾಂತರಾಜು ಆಯೋಗದ ವರದಿ ಜಾರಿಗೆ ಸರ್ಕಾರ ಹೊರಟಿದೆ.ಅದರ ವಿರುದ್ಧ ಮುಂದಿನ ಹೋರಾಟದ ಬಗ್ಗೆ ನಾವು ಇಂದು ಸಭೆ ನಡೆಸಿದ್ದೇವೆ. ಆರೋಗ್ಯಕರವಾದ ವರದಿ ಅವರು ಕೊಟ್ಟಿಲ್ಲ. ಹತ್ತು ವರ್ಷಗಳ ಬಳಿಕ ವರದಿ ತಂದು ನೀವು ಒಪ್ಪಿ ಎಂದು ಹೇಳ್ತಿದ್ದಾರೆ.ಒಕ್ಕಲಿಗರ ಸಂಖ್ಯೆಯನ್ನ 61ಲಕ್ಷ ಜನ ಎಂದು ತೋರಿಸಿದ್ದಾರೆ.ಇದು ನಮಗೆ ಅನ್ಯಾಯ ಮಾಡಿದ್ದಾರೆ.224 ಎಂಎಲ್ ಎ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿದಾಗಲೇ ನಮಗೆ ಸಂಖ್ಯೆ ಸಿಗುತ್ತೆ .ಪ್ರತಿ ಕ್ಷೇತ್ರ ದಲ್ಲಿ 60ಸಾವಿರ ದಿಂದ ಒಂದು ವರೆ ಲಕ್ಷ ಜನ ಇದ್ದಾರೆ.ನಮ್ಮನ್ನ 6 ನೇ ಸ್ಥಾನಕ್ಕೆ‌ತಳ್ಳಿ ಮೀಸಲಾತಿ ಕಡಿತ ಗೊಳ್ಳುವ ಹುನ್ನಾರ ಇದು.ಅನ್ಯಾಯ ವಾಗಿರುವ ಎಲ್ಲಾ ಸಮಯದ ಒಂದಾಗಿ ಕರ್ನಾಟಕ ಬಂದ್ ಮಾಡಬೇಕು ಎಂದರು.ವೀರಶೈವ ಸಮುದಾಯದವರಿಗೂ ಮಾತಾಡುತ್ತೇವೆ.ಮತ್ತೆ ಮರುಪರಿಶೀಲನೆ ಮಾಡಿ ಮರು ವರದಿ ಸಿದ್ದಪಡಿಸಬೇಕು ಎಂದ್ರು.

ಇಡೀ ಕರ್ನಾಟಕ ಬಂದ್ ಆಗೋ ರೀತಿಯಲ್ಲಿ ಹೋರಾಟ ಮಾಡ್ತೇವೆ. ನಮ್ಮ ಜನಾಂಗ,ವೀರಶೈವ ಲಿಂಗಾಯತ ಸಭಾ ಸೇರಿದಂತೆ ಹಲವು ಸಂಘದಿಂದ ಹೋರಾಟ ಮಾಡ್ತೇವೆ ಎಂದು ಅವರು ತಿಳಿಸಿದ್ರು.

ಇನ್ನು ಜಾತಿ ಜನಗಣತಿ ವರದಿ ಬೆಂಬಲಿಸಿ ಇಂದು ಸಭೆ ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಶೋಷಿತ ಸಮುದಾಯಗಳ ಒಕ್ಕೂಟದಿಂದ ಸಭೆ ನಡೆಯಲಿದೆ. ಜಾತಿ ಜನಗಣತಿ ವರದಿ ಬಿಡುಗಡೆಗೆ ಆಗ್ರಹಿಸಿ ಸಭೆ ನಡೆಯಲಿದೆ. ಗಾಂಧಿ ನಗರದ ಕರ್ನಾಟಕ ಪ್ರದೇಶ ಕುರುಬ ಸಂಘದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಕುರುಬ ಸಮುದಾಯ, ದಲಿತ ಸಂಘಟನೆಗಳು, ಹಿಂದುಳಿದ ಜಾತಿಗಳು ಸೇರಿ ಒಟ್ಟು 50ಕ್ಕೂ ಹೆಚ್ಚು ಸಂಘಟನೆಗಳು ಸಭೆಯಲ್ಲಿ ಭಾಗಿಯಾಗಿವೆ.