ಮನೆ Latest News ವಿಜಯೇಂದ್ರರ ಮಾತನಾಡೋದನ್ನ ಮೊದಲು‌ ಕಲಿಯಬೇಕು: ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಶಾಸಕ ಯತ್ನಾಳ್ ಹೇಳಿಕೆ

ವಿಜಯೇಂದ್ರರ ಮಾತನಾಡೋದನ್ನ ಮೊದಲು‌ ಕಲಿಯಬೇಕು: ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಶಾಸಕ ಯತ್ನಾಳ್ ಹೇಳಿಕೆ

0

ಬೆಳಗಾವಿ: ವಿಜಯೇಂದ್ರ ಮಾತನಾಡೋದನ್ನ ಮೊದಲು‌ ಕಲಿಯಬೇಕು ಎಂದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ನಾವು ಸದನದಲ್ಲಿ ಒಳ್ಳೆಯ ಪರ್ಫಾಮೆನ್ಸ್ ಕೊಡ್ತಿದ್ದೀವಿ.ಇದನ್ನೆಲ್ಲ ಕೇಂದ್ರ ನೋಡಬೇಕು, ಇಂಟಲಿಜನ್ಸ್ ಇರುತ್ತೆ. ನಾವು ಏನೇನು ಚರ್ಚೆ ನಡೆಸಿದ್ದೇವೆ ಅಂತ ಗೊತ್ತಾಗುತ್ತದೆ. ಯಾರು ಯಾರಿಗೆ ಫೋನ್ ಮಾಡಿ ಏನು ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಯಾವ ಮಾಜಿ ಶಾಸಕರಿಗೆ ಫೋನ್ ಮಾಡಿದ್ದಾರೆ? ರಾತ್ರಿ 12 ಗಂಟೆಗೆ ಯಡಿಯೂರಪ್ಪ ಒಬ್ಬ ಮಾಜಿ ಎಂಎಲ್ ಎಗೆ ಫೋನ್ ಮಾಡ್ತಾರೆ. ಐದು ವರ್ಷ ಆತ ಎಂಎಲ್ ಎ ಆಗಿದ್ದಾಗ ಆತನ ಮುಖವನ್ನೇ ಯಡಿಯೂರಪ್ಪ ನೋಡಿಲ್ಲ, ಫೋನ್ ಮಾಡಿಲ್ಲ.ಈಗ ನೀವೆಲ್ಲ ವಿಜಯೇಂದ್ರ ಜೊತೆಗಿರಬೇಕು. ಮುಂದೆ ನಮ್ಮ ಸರ್ಕಾರ ಬರುತ್ತೆ ಅಂತ ಫೋನ್ ಮಾಡ್ತಿದ್ದಾರೆ. ನಿಮ್ಮನ್ನ ಮಂತ್ರಿ ಮಾಡ್ತೀವಿ ಅಂತ ಹೇಳ್ತಿದ್ದಾರಂತೆ ಎಂದು ಬಾಂಬ್ ಸಿಡಿಸಿದ್ದಾರೆ. ಮುಂದಿನ‌ ಆಪರೇಷನ್ ಈಗಲೇ ಶುರುವಾಗಿದೆ ಎಂದಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಅವರು ನಾವು ಯಾವುದೇ ಜನ್ಮದಿನ ಹುಟ್ಟು ಹಬ್ಬ, ಪುಣ್ಯ ತಿಥಿ‌ ಆಚರಣೆ ಮಾಡುವ ಕಾರ್ಯಕರ್ತರಲ್ಲ. ಹುಟ್ಟುಹಬ್ಬವನ್ನ ಅವರವರ ಮನೆಯಲ್ಲಿ ಮಾಡಿಕೊಳ್ಳಲಿ. ನಾನು ನನ್ನ ಸ್ವಂತ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳೊಲ್ಲ. ಮೊನ್ನೆ ನನ್ನ ಹುಟ್ಟುಹಬ್ಬದಂದು ಬೆಳಗ್ಗೆ 10ಕ್ಕೆ ಸದನದ ಒಳಗೆ ಹೋದ್ರೆ ರಾತ್ರಿ 10ಕ್ಕೆ ಮನೆಗೆ ಹೋಗಿದ್ದೀನಿ. ಯಾರೋ ಒಬ್ಬ ಬಂದು ಹಾರ ಹಾಕಿದ. ಹುಟ್ಟು ಹಬ್ಬ ಮಾಡಿಕೊಳ್ಳೋದು ಜಿಲ್ಲಾ ಪಂಚಾಯತ ಚುನಾವಣೆಗೆ ಅನುಕೂಲ‌ ಆಗುತ್ತೆ ಅಂತೆಲ್ಲ ಇಲ್ಲ. ನಾವು ವಕ್ಫ್ ವಿಚಾರವಾಗಿ ಹೋರಾಟ ಮಾಡ್ತೀವಿ. ವಕ್ಫ್ ನ ದೇಶದ್ಯಾಂತ ಕಿತ್ತು ಹಾಕಬೇಕು, ನಾವೂ ದಾವಣಗೆರೆಯಲ್ಲಿ ಸಮಾವೇಶ ಮಾಡ್ತೀವಿ. ಅವರ ಸಮಾವೇಶ ಮುಗಿದು ಒಂದು ವಾರದೊಳಗೆ ನಾವೂ ಸಮಾವೇಶ ಮಾಡ್ತೀವಿ ಎಂದಿದ್ದಾರೆ.

ನಮ್ಮ ಶಕ್ತಿ ಏನೂ ಎನ್ನೋದು ಅವರಿಗೆ ತೋರಿಸುತ್ತೇವೆ.ನಮ್ಮದು ಜನ ಶಕ್ತಿ, ಜನಪರ ಹೋರಾಟ. ಹುಟ್ಟುಹಬ್ಬದ ಹೋರಾಟ ಪುಣ್ಯ ತಿಥಿ ಹೋರಾಟ ಅಲ್ಲ ಎಂದಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು.ಪಕ್ಷದ ಆಂತರಿಕ ವಿಚಾರ ನಾನು ಹೇಳೊಲ್ಲ. ಆದರೆ ಯಡಿಯೂರಪ್ಪ ಏನು ನಡೆಸಿದ್ದಾರೆಂಬ ಮಾಹಿತಿ ನಿಮಗೆ ಕೊಟ್ಟಿದ್ದೇನೆ. ಯಾವುದೇ ಮಾಜಿ ಶಾಸಕನ ಬಳಿ ಮಾತುಕತೆ ನಡೆಸಿಲ್ಲ ಅಂತ ಯಡಿಯೂರಪ್ಪ ಹೇಳಿಕೆ ಕೊಡಲಿ ನೋಡೋಣ ಎಂದಿದ್ದಾರೆ.