ಮನೆ Latest News ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿನ ಬಗ್ಗೆ ಸಮಗ್ರ ತನಿಖೆಯಾಗ್ಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ...

ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿನ ಬಗ್ಗೆ ಸಮಗ್ರ ತನಿಖೆಯಾಗ್ಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ನಾಯಕರು ಆಗ್ರಹ

0

ಬೆಂಗಳೂರು; ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿನ ಬಗ್ಗೆ ಸಮಗ್ರ ತನಿಖೆಯಾಗ್ಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಈ ಬಗ್ಗೆ ಎಕ್ಸ್  ನಲ್ಲಿ ಪೋಸ್ಟ್ ಮಾಡಿದ್ದು ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೂಲಂಕುಶವಾಗಿ ಪಾರದರ್ಶಕ ತನಿಖೆ ನಡೆದು ಸತ್ಯ ಹೊರಬರಬೇಕಿದೆ. ರಾಜಕೀಯ ಕಾರಣಗಳು ಹಾಗೂ ಒತ್ತಡಗಳ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಎಫ್ಐಆರ್ ನಿಂದಾಗಿ ವಿನಯ್ ಆತ್ಮಹತ್ಯೆಗೆ ಶರಣಾಗಿರಬಹುದಾದ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಅನಗತ್ಯ ಕಿರುಕುಳ, ಒತ್ತಡ, ದೌರ್ಜನ್ಯಗಳು ನಡೆಯುತ್ತಿದೆ .ಈ ನಿಟ್ಟಿನಲ್ಲಿ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯು ಅತ್ಯಂತ  ಪಾರದರ್ಶಕವಾಗಿ ನಡೆಯಬೇಕೆಂದು ಬಿಜೆಪಿ  ಆಗ್ರಹಪಡಿಸುತ್ತದೆ ಎಂದಿದ್ದಾರೆ.

ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಾನಸಿಕ ಒತ್ತಡ ಉಂಟಾಗಲು ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು  ಒತ್ತಾಯಿಸುವೆ ಎಂದಿದ್ದಾರೆ.

ಮಾಜಿ ಸಚಿವ ಮತ್ತು ಶಾಸಕ ಸುರೇಶ್ ಕುಮಾರ್ ಫೇಸ್ ಬುಕ್ ಪೋಸ್ಟ್ ಹಾಕಿದ್ದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಶಾಸಕ  ಮಂಥರ್ ಗೌಡ ರವರ ಒತ್ತಡದ ಮೇರೆಗೆ ತನ್ನ ಮೇಲೆ ಪೊಲೀಸರು ದೂರು ದಾಖಲಿಸಿ ಕೊಂಡು ಎಫ್ ಐಆರ್ ದಾಖಲಿಸಿದ್ದರಿಂದ ನೊಂದಿದ್ದ ವಿನಯ್ ಸೋಮಯ್ಯ ಈ ಕ್ರಮಕ್ಕೆ ಶರಣಾಗಿದ್ದಾರೆ.ಕೊಡಗು ಜಿಲ್ಲೆಯ ವಿವಿಧ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಈ ಕಾರ್ಯಕರ್ತ ಬೆಳಕಿಗೆ ತರುತ್ತಿದ್ದ ಕ್ರಮ, ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಅಪರಾಧವಾಗಿ ಪರಿಗಣಿಸಲ್ಪಟ್ಟಿದೆ. ಅನ್ಯಾಯದ ವಿರುದ್ಧ ಸದಾ ದನಿ ಎತ್ತಿ ಹೋರಾಡುತ್ತಿದ್ದ ದಿ. ಎ.ಕೆ. ಸುಬ್ಬಯ್ಯನವರ ಆತ್ಮ,  ತನ್ನ ಮಗನ ರಾಜಕೀಯ ಒತ್ತಡದ ಈ ಘನಂದಾರಿ ಶೌರ್ಯ  ಕಂಡು ಇವತ್ತು ವಿಲಿ ವಿಲಿ ಒದ್ದಾಡಿರಬೇಕು.ಮಾಜಿ ಸಚಿವ ಈಶ್ವರಪ್ಪನವರ ಕಣ್ಣಿಗೆ ಸುಣ್ಣ, ಕಾನೂನು ಸಲಹೆಗಾರರ ಕಣ್ಣಿಗೆ ಬೆಣ್ಣೆ,  ಇದು ಕಾಂಗ್ರೆಸ್ ನೀತಿ ಎಂದಿದ್ದಾರೆ.

ಯತ್ನಾಳ್ ಉಚ್ಛಾಟನೆ ನಮಗೆ ತುಂಬಾ ನೋವು ತಂದಿದೆ: ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿಕೆ

ಬೆಂಗಳೂರು: ಯತ್ನಾಳ್ ಉಚ್ಛಾಟನೆ ನಮಗೆ ತುಂಬಾ ನೋವು ತಂದಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಸಂಸತ್ತಿನಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆ ಅಂಗೀಕಾರದ ಬಗ್ಗೆ ಮಾತನಾಡಿದ ಅವರು ವಕ್ಪ್ ಅನೇಕ ಶತಮಾನಗಳಿಂದ ಬಂದಿರುವ ವ್ಯವಸ್ಥೆ.ಅನೇಕ ರಾಷ್ಟ್ರಗಳು ಇದರ ಕಾನೂನು‌ ಬದಲಾವಣೆ ಮಾಡಿಕೊಂಡಿದ್ದರೂ‌ ಕೂಡಾ ನಮ್ಮ ದೇಶದಲ್ಲಿ ಬದಲಾವಣೆ ಮಾಡದೇ ಇರುವ ಪರಿಸ್ಥಿತಿ ಇತ್ತು. ರಾಜ್ಯದಲ್ಲಿ ಯತ್ನಾಳ್ ಅವರ ನೇತೃತ್ವದಲ್ಲಿ ಹೋರಾಟ ಮಾಡಿದ್ದೆವು. ಹೋರಾಟದ ಮುಂಚೂಣಿಯಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಕೂಡಾ ಜೊತೆ ಬಂದಿದ್ದರು. ಇಂದು ದೇಶಕ್ಕೆ ಬಹಳ ನಿರಾಳವಾಗಿದೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳು ಇದ್ದ ಸಂದರ್ಭದಲ್ಲಿ ಈಗ ನಮಗೆ ಕೂಡಾ ಶಕ್ತಿ ಬಂದಂತಾಗಿದೆ. ವಕ್ಪ್, ವಾಲ್ಮೀಕಿ ನಿಗಮ, 4% ಮೀಸಲಾತಿ ಸೇರಿ ಅನೇಕ ಹೋರಾಟ ಆಗಿದೆ. ನಮ್ಮನ್ನು ಯತ್ನಾಳ್ ಟೀಮ್ ಅಂತಾನೇ ಕರೆಯುತ್ತಿದ್ದರು. ಇಂದು ಯತ್ನಾಳ್ ಉಚ್ಛಾಟನೆ ನಮಗೆ ತುಂಬಾ ನೋವು ಇದೆ. ಬಿಜೆಪಿ ಸಂಘಟನೆ ನಮ್ಮ‌ ಉದ್ದೇಶ. ಉಳಿದಿರುವ ಮೂರು ವರ್ಷಗಳಲ್ಲಿ ಪಕ್ಷ ಸಂಘಟನೆ ಮಾಡಬೇಕು.ಕಾಂಗ್ರೆಸ್ ವಿರುದ್ಧ ಶುರುವಾಗಿರುವ ವಿರೋಧಿ ಅಲೆಯನ್ನು ನಾವು ಉಪಯೋಗಿಸಿಕೊಳ್ಳಬೇಕು ಎಂದರು.

ಆದಷ್ಟು ಬೇಗ ಯತ್ನಾಳ್ ಅವರನ್ನು ವಾಪಸ್ ಕರೆತರುವ ಬಗ್ಗೆ ನಮ್ಮ ಪಕ್ಷದ ಹಿರಿಯರು ಹೋಗಿ ಮನವರಿಕೆ ಮಾಡಿಕೊಡುತ್ತಾರೆ. ಉತ್ತರ ಕರ್ನಾಟಕ ಭಾಷೆಯ ಬಗ್ಗೆ ಕೆಲವು ತಪ್ಪು ಕಲ್ಪನೆಗಳಾಗಿವೆ. ಅದೆಲ್ಲವನ್ನೂ ನಾವು ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಸದನದಲ್ಲಿ ಬಿಜೆಪಿ ಹೋರಾಟ ಸರಿ ಆಗಲಿಲ್ಲ .ಯಾವ ವಿಚಾರ ಬಿಗಿಯಾಗಿ ಹೋರಾಟ ಮಾಡಬೇಕಿತ್ತೋ ಮಾಡಲಿಲ್ಲ. ಸದನದಲ್ಲಿ ಚೀಟಿ ಎಲ್ಲಿಂದ ಬಂತು ಅಂತಾ ತನಿಖೆ ಮಾಡಲು ಹೊರಡುತ್ತಾರೆ. ಇದುವರೆಗೆ ಆಗಿರುವ ಹೋರಾಟಗಳಲ್ಲಿ ತಾರ್ಕಿಕ ಅಂತ್ಯಕ್ಕೆ ತಲುಪಿಸಿದ್ದಾರಾ?. ಬಿಜೆಪಿ ಕಟ್ಟಿದ ಯಡಿಯೂರಪ್ಪ ಇಂದು ತಮ್ಮ ಮಗನನ್ನು ಉಳಿಸಿಕೊಳ್ಳಲು ಪ್ರತಿಭಟನೆಗೆ ಬಂದು ಕೂರಬೇಕಾಯಿತು. ಆ ಪರಿಸ್ಥಿತಿ ತಂದವರು ವಿಜಯೇಂದ್ರ‌.ವರಿಷ್ಠರು, ಸಂಘಟನೆ ಬಳಿ ಸರಿಪಡಿಸಿಕೊಳ್ಳುವ ವಿಚಾರವನ್ನು ತೆಗೆದುಕೊಂಡು ಹೋಗಿ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡುತ್ತೇವೆ ಅಂದರೆ ಹೇಗೆ?.ಅದು ಇನ್ನೊಂದು ಹಂತದ ಒಡಕಿಗೆ ಕಾರಣ ಆಗಿದೆ ಹೊರತು ಒಗ್ಗಟ್ಟು ಆಗಿಲ್ಲ. ಶೀಘ್ರದಲ್ಲೇ ವರಿಷ್ಠರಿಂದ ಒಂದು ಸ್ಪಷ್ಟ ಆದೇಶ ಬರುವ ನಿರೀಕ್ಷೆ ಇದೆ ಎಂದರು.

ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ. ಇಂತಹ ದುರಂತಗಳಿಗೆ ನಾಂದಿ ಹಾಡಲು ಅವಕಾಶ ಮಾಡಿಕೊಡಬೇಡಿ. ಪೊಲೀಸ್ ಇಲಾಖೆ ತನಿಖೆ ಮಾಡುತ್ತದೆ. ಯಾರದೇ ಹೆಸರಿನ ಉಲ್ಲೇಖ ಇದ್ದರೂ ಅದರ ಬಗ್ಗೆ ಮಾತಾಡುವುದು ಸೂಕ್ತವಲ್ಲ. ಎಂದರು.